ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ಸಾಹಿತ್ಯ ಚರಿತ್ರೆ -ಮುಗಳಿ

ಪುಸ್ತಕದ ಲೇಖಕ/ಕವಿಯ ಹೆಸರು
ಮುಗಳಿ

ಚರಿತ್ರೆಯೆ೦ದರೆ ರಾಜರ ಕತೆ, ಯುದ್ದ್ಧಗಳ ಮಾಹಿತಿ ಎ೦ದು ತಿಳಿದಿದ್ದ ನನಗೆ ಚರಿತ್ರೆಯೆ೦ದರೆ ಅಷ್ಟು ಆಸಕ್ತಿಯಿರಲಿಲ್ಲಾ. ಆದರೆ ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದ ನ೦ತರ ಚರಿತ್ರೆಯ ಬಗ್ಗೆಯಿದ್ದ ಕಲ್ಪನೆ, ಮತ್ತು ತಿರಸ್ಕಾರವೆರಡು ಬದಲಾವಣೆಗೊ೦ಡಿದೆ. ವರ್ತಮಾನದಲ್ಲಿ ಆಶಾವದಿಯಾಗಿರದ ಮನಸ್ಸು ಚರಿತ್ರೆಯಲ್ಲಿ ಬೆಳಕನ್ನು ಕಾಣುವುದ್ದಕ್ಕೆ ಪರಿತಪಿಸುತ್ತದೆ. ಅದಕ್ಕಾಗಿ ಬಹುಶ: ನಾವು ಚರಿತ್ರೆಯನ್ನು ಓದುವುದು. ಚರಿತ್ರೆಯನ್ನು ಕೇಳುವುದು ಇನ್ನೂ ಅನುಭವಕಾರಿ.

ಹಾಗಿದ್ದರೆ ನಮ್ಮ ಕನ್ನಡ ಸಾಹಿತ್ಯ ಚರಿತ್ರೆ ಏನು ?? ಎ೦ಬ ಪ್ರಶ್ನೆ ನನ್ನ ಮು೦ದೆ
ಇತ್ತು. ಓದುತ್ತಾ ಓದುತ್ತಾ ರಾತ್ರಿ ಎರಡು ಮೂರೊ ಘ೦ಟೆಯಗಿರ ಬಹುದು.
ಮನೆಯಲ್ಲಿ ತ೦ದೆಯವರು Light off ಮಾಡು ಅ೦ತಾ ಒ೦ದು ಹತ್ತು ಸರಿ

ಅಹಾ! ಎಂತಹ ಹೊಂದಾಣಿಕೆ!!!!!!!!

ಕುಮಾರಿ ಜಯಲಲಿತಗೆ `ಕರುಣಾ'ಜನಕ ಸೋಲು, ಕರುಣಾನಿಧಿಗೆ `ಜಯ'ಮಾಲೆ. ಒಂದು ಅವಧಿಗೆ ಜಯಲಲಿತಾ, ಇನ್ನೊಂದು ಅವಧಿಗೆ ಕರುಣಾನಿಧಿ. ಇದು ಹಿಂದಿನಿಂದಲೂ ನಡೆದು ಬಂದ `ಸಂಪ್ರದಾಯ'. ಇದು ಯಾರ ಗೆಲವೂ ಅಲ್ಲ ಸೋಲೂ ಅಲ್ಲ; ಅದ್ಭುತ ಹೊಂದಾಣಿಕೆಯಷ್ಟೆ!!!!
ಒಂದು ಅವಧಿಗೆ ಇವರು ಆಡಳಿತ ನಡೆಸಿ ಬಾಚಿಕೊಳ್ಳುವುದು, ಇನ್ನೊಂದು ಅವಧಿಗೆ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡುವುದು. ಈ ಹಿಂದಿನ ಐದು ವರ್ಷದಲ್ಲಿ `ಬಾಚಿ'ರುವುದನ್ನು ಸರಿಯಾಗಿ ಜೋಡಿಸಿ ಕೊಳ್ಳಬೇಕಲ್ಲ, ಅದಕ್ಕೆ ಈಗ ಜಯಲಲಿತಾಗೆ ಐದು ವರ್ಷ ಕಾಲಾವಕಾಶ ನೀಡಿರುವುದು. ಈಗ ಕರುಣಾನಿಧಿ ಬಾಚಿಕೊಳ್ಳುತ್ತಾರೆ. ಆಮೇಲೆ ಅವರಿಗೆ ಐದು ವರ್ಷ ರೆಸ್ಟ್. ಹೇಗಿದೆ ಭಲೇ ಜೋಡಿ?

ಅಧೀನ - ಅಧೀರ

ಮಾಮೂಲಿನಂತೆ ಇಂದು ಬ್ಯಾಂಕಿಗೆ ೮.೩೦ ಕ್ಕೆ ಹೋದೆ. ಯಾಕೋ ಒಳಗೆಲ್ಲ ಕಡೆಯೂ ಕತ್ತಲೆ ತುಂಬಿತ್ತು. ಬಾಗಿಲ ಒಳಗೆ ಕಾಲಿಡುತ್ತಿದ್ದಂತೆ ಉಸಿರು ಕಟ್ಟಿಸುವಂತಹ ಹೊಗೆಯ ವಾಸನೆ ಮೂಗಿಗೆ ಬಡಿದಿತ್ತು. ಇನ್ನೊಂದು ಹೆಜ್ಜೆ ಮುಂದಿಡಲು ನೆಲದ ಮೇಲೆಲ್ಲಾ ನೀರು ಚೆಲ್ಲಿದ್ದು ಜಾರುವಂತಾಯಿತು. ನೆಲ ಒರೆಸಲು ಯಾರೂ ಕಾಣಿಸಲಿಲ್ಲ. ಎಲ್ಲೆಡೆ ಗಲೀಜು ಹರಡಿದ್ದು, ಕೆಲಸಗಾರರು ಯಾರೂ ಬಂದಂತೆ ಕಾಣಲಿಲ್ಲ. ಅದೂ ಅಲ್ಲದೇ ಎಲ್ಲಿಯೂ ದೀಪಗಳು ಕಾಣದೆ, ತಡಕಾಡಿಕೊಂಡು ಮುಂದೆ ಹೋದೆನು. ನಾನು ಕುಳಿತುಕೊಳ್ಳುವ ಸ್ಥಾನದಲ್ಲಿ ಬ್ಯಾಗನ್ನಿಟ್ಟು ಏನಾಗಿದೆ ಎಂದು ನೋಡಲು ಆಚೆಗೆ ಬಂದೆನು. ಅಷ್ಟು ಹೊತ್ತಿಗೆ, ಸೆಕ್ಯುರಿಟಿ ಮನುಷ್ಯ ಬಂದು, 'ಮೇಲೆ ಮೂರನೆಯ ಮಾಳಿಗೆಯಲ್ಲಿ (ನಾವಿರುವುದು ಎರಡನೆಯ ಮಾಳಿಗೆ) ರಾತ್ರಿ ಒಂದು ಘಂಟೆಗೆ ಬೆಂಕಿ ಹತ್ತಿಕೊಂಡು ಆಕಸ್ಮಿಕ ಸಂಭವಿಸಿದೆ. ಆದ್ದರಿಂದ ಎಂಟನೆಯ ಮಾಳಿಗೆಯವರೆವಿಗೆ ಎಲ್ಲ ಕಡೆ ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ. ಎರಡನೆಯ ಮಾಳಿಗೆಯಲ್ಲಿ ಹವಾನಿಯಂತ್ರಿತದ ಕಿಂಡಿಗಳಿಂದ, ವಿದ್ಯುತ್ ದೀಪಗಳಿರುವ ಬುರುಡೆಗಳಿಂದ ಮತ್ತು ಮೇಲೆ ಎಲ್ಲೆಲ್ಲಿ ಖಾಲಿ ಜಾಗವಿರುವುದೋ ಅಲ್ಲೆಲ್ಲಾ ಕಡೆಗಳಿಂದ ನೀರು ತೊಟ್ಟಿಕ್ಕುತ್ತಿತ್ತು. ಒಂದೆಡೆ ನೆಲವನ್ನು ಎಡಬಿಡದಂತೆ ಸಾರಿಸುತ್ತಿದ್ದರೆ ಇನ್ನೊಂದೆಡೆ ತೊಟ್ಟಿಕ್ಕುತ್ತಿರುವ ನೀರ ಹನಿಗಳನ್ನು ತುಂಬಿಡಲು ಕಸದ ಡಬ್ಬಗಳು, ಬಕೆಟ್‍ಗಳನ್ನು ಇಟ್ಟಿದ್ದರು. ಮೇಲಿನಿಂದ ನಿರಂತರವಾಗಿ ನೀರು ತೊಟ್ಟಿಕ್ಕುತ್ತಿತ್ತು.

ದಿ. ರಾಜ್‍ ಸಮಾಧಿಗೆ ಹತ್ತು ಲಕ್ಷ ಜನರ ಭೇಟಿ

ಇತ್ತೀಚಿನ ಓದು , ಸುದ್ದಿ , ಇತ್ಯಾದಿ ಯ ಕಂತನ್ನು ಬಹಳ ದಿನಗಳ ಬಳಿಕ ಕೊಡುತ್ತಿದ್ದೇನೆ.

ದಿ. ರಾಜ್‍ಕುಮಾರ್ ಅವರ ಸಮಾಧಿಗೆ ಒಂದು ತಿಂಗಳಲ್ಲಿ ಹತ್ತು ಲಕ್ಷ ಜನ ಭೇಟಿ ಕೊಟ್ಟಿದ್ದಾರೆ . ಹೆಚ್ಚಿನ ಮಾಹಿತಿಗೆ . ಮೇ ೧೧ ರ ಪ್ರಜಾವಾಣಿ ಯ ಕರ್ನಾಟಕದರ್ಶನ ಪುರವಣಿ ನೋಡಿರಿ . ( ಅಂತರ್ಜಾಲದಲ್ಲೂ ಲಭ್ಯ)

'ಕನ್ನಡ'ದ ಟ್ರೆಂಡು

[:http://google.com/trends|ಗೂಗಲ್ ಟ್ರೆಂಡ್ಸ್] ಇವತ್ತು ರಿಲೀಸ್ ಮಾಡಿದ್ದಾರೆ. 'ಕನ್ನಡ' ಎಂದು ಸರ್ಚ್ ಮಾಡುವವರ ಟ್ರೆಂಡು ಅದರಲ್ಲಿ ನೋಡಿದಾಗ ಈ ಅಂಶಗಳನ್ನು ಗಮನಿಸಿ:

ರಾಜ್ಕುಮಾರ!

ಐದು ವರ್ಷಗಳ ಹಿಂದಿನ ಮಾತು. ವೀರಪ್ಪನಿಂದ ಬಿಡಿಸಿಕೊಂದು ಜಕ್ಕೂರಿನ ಏರ್‌ಪೋರ್ಟಿನಲ್ಲಿ ಕಾಲಿರಿಸಿದ ಕೂಡಲೇ ರಾಜ್‌ಕುಮಾರ್‌ ಮಾಡಿದ ಮೊದಲ ಕೆಲಸವೆಂದರೆ ಮಂಡಿಯೂರಿ, ನೆಲಕ್ಕೆ ಬಾಗಿ, ಈ ಮಣ್ಣಿಗೆ ಮುತ್ತಿಟ್ಟಿದ್ದು! ಸಂಕೋಚ ಸ್ವಭಾವದ ಕನ್ನಡಿಗರಿಗೆ ಇದೊಂದು ಅದ್ಭುತ ಸಂಕೇತವಾಗಿ ಹೋಗಬೇಕಾಗಿತ್ತು.

ಎಲ್ಲ ಟಿಪ್ಪಣಿಗಳು ಮೊದಲಿನಂತೆ ಮೂಲ ಲೇಖನದ ಜತೆಗೇ ಕಾಣಲಿ

ಮಾನ್ಯರೇ

ಸಂಪದದ ಸದ್ಯದ ಬದಲಾವಣೆಗಳಿಗೆ ಮೊದಲು ಟಿಪ್ಪಣಿಗಳು ಮೂಲ ಲೇಖನದ ಜತೆಗೆ ಕಾಣುತ್ತಿದವು . ಹೀಗಾಗಿ ಎಲ್ಲ ಟಿಪ್ಪಣಿಗಳನ್ನು ಒಟ್ಟಿಗೇ ಓದಬಹುದಿತ್ತು .

ಮನಸ್ಸು

... ಇದು ನನಗೆ ತಿಳಿಯದು.. ತಿಳಿಯುವ ಕುತೂಹಲವಿದೆ.. ನಮ್ಮ ದೇಹವನ್ನು ಸಂಪೂರ್ಣ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ಅದಕ್ಕಿದೆ... "ಹೇಗಿರುತ್ತದೆ ಮನಸ್ಸು?" ಇದು ನನ್ನ ಮನಸ್ಸಿನಂತರಾಳದಲ್ಲಿ ಉತ್ತರಕ್ಕಾಗಿ ಕಾಯುತ್ತಿರುವ ಒಂದು ಪ್ರಶ್ನೆ. ಅದಕ್ಕೆ ನನ್ನದೆ ರೀತಿಯಲ್ಲಿ ಉತ್ತರ ಹುಡುಕಿಕೊಂಡಿದ್ದೆನೆ.. ನನಗೆ ಮನಸ್ಸಿನ ಬಗ್ಗೆ ಇರುವ ಕಲ್ಪನೆಯನ್ನು ಈ ಲೇಖನದಲ್ಲಿ ವ್ಯಕ್ತಪಡಿಸುತ್ತಿದ್ದೇನೆ...

ಸಿರಿಗನ್ನಡಮ್ ಗೆಲ್ಗೆ !

ಮಾನ್ಯರೆ,
ಸಿರಿಗನ್ನಡಮ್ ಗೆಲ್ಗೆ !
ನಾನು ವ್ರುತ್ತಿಯಲ್ಲಿ ಟೆಕ್ಸ್ಟೈಲ್ ಇಂಜಿನಿಯರು. ಓದಲು ಬರೆಯಲು ನನಗೆ ಬಹಳ ಆಸಕ್ತಿ. ಬಹುಶಃ ನಮ್ಮ ಮನೆಯಲ್ಲಿದ್ದ ವಿಶಾಲ ಪುಸ್ತಕ ಭಂಡಾರ ಒಂದು ಕಾರಣವಾದರೆ, ಇನ್ನೊಂದು ನಮ್ಮ ತಂದೆ, ಅಣ್ಣತಮ್ಮಂದಿರ 'ಬೌಧ್ಧಿಕ ಹಿನ್ನೆಲೆ' ಎಂದರೆ ತಪ್ಪಾಗಲಾರದು. ಎಲ್ಲಾ ಸಾಂಸ್ಕ್ರುತಿಕ ಸಮಾರಂಭಗಳಲ್ಲೂ ಪ್ರೇಕ್ಷಕನಾಗಿ ಪಾಲ್ಗೊಂಡಿದ್ದೇನೆ. ಮುಂಬೈ ಒಂದು ವಿಶಾಲವಾದ ಮಂಚ. ಬೆಂಗಳೂರಿನಲ್ಲಿ ಕೇಳಿರದಿದ್ದ ಮಹಾ ವ್ಯಕ್ತಿಗಳ ಮಾತುಗಳನ್ನು ಇಲ್ಲಿ- ನನ್ನ 40 ವರ್ಷಗಳ ಜೀವನದಲ್ಲಿ ಕೇಳಿದ್ದೇನೆಂದು ಹೇಳಲು ಹೆಮ್ಮೆಯೆನ್ನಿಸುತ್ತಿದೆ ! ಇಂಗ್ಲೀಶಿನಲ್ಲಿ ಒಂದು ಪುಸ್ತಕ, ಬೇರೆ ಬೇರೆ ಲೇಖನಗಳು ನನ್ನ ಸರಿಕಿನಲ್ಲಿವೆ. ಸಂಪದ ಬಳಗಕ್ಕೆ ಬಂದಮೇಲೆ ನನ್ನ ಬರವಣಿಗೆ ಹೆಚ್ಚಾಯಿತೇನೋ. ನಿವ್ರುತ್ತ ನಾಗಿರುವುದೂ ಇದಕ್ಕೆ ಪೂರಕವಾಗಿರಬಹುದು !