ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಉಬುಂಟು ಬ್ರೀಝಿ ಸಿಡಿಗಳು ಬೇಕೆ?

ನಿಮ್ಮಲ್ಲಿ ಯಾರಿಗಾದರೂ ಉಬುಂಟು ಬಳಸುವ ಆಸಕ್ತಿ ಇದ್ದು ಉಬುಂಟು ಬ್ರೀಝಿ ಸಿ.ಡಿ.ಗಳು ಬೇಕಾದಲ್ಲಿ ನನ್ನನ್ನು ಸಂಪರ್ಕಿಸಿ.

'ಗೂಗಲ್ ರೀಡರ್'ನಲ್ಲಿ 'ಸಂಪದ'

[:http://www.google.com/reader/lens/|ಗೂಗಲ್ ರೀಡರ್] ಸಾಂಪ್ರದಾಯಿಕ RSS ರೀಡರುಗಳನ್ನು ಸಡ್ಡುಹೊಡೆಯುವ ತಂತ್ರಜ್ಞಾನ. ಇನ್ನೂ ಬೀಟ (ಅಂದರೆ ಪ್ರಾಯೋಗಿಕ) ತಂತ್ರಾಂಶವಾಗಿರುವುದಾದರೂ ನಿಮಗೆ ನಿಮ್ಮ ನೆಚ್ಚಿನ ತಾಣಗಳಿಂದ ಇತ್ತೀಚಿನದ್ದನ್ನು RSS ಮೂಲಕ ಒಂದು ವಿಭಿನ್ನ ರೀತಿಯಲ್ಲಿ ಪಡೆಯುವಂತೆ ಸಾಧ್ಯಮಾಡುತ್ತದೆ. ತುಂಬಾ  ಚೆನ್ನಾಗಿರುವ ಅಂಶವೆಂದರೆ ಈಗೀಗ ಅತ್ಯಂತ ಜನಪ್ರಿಯವಾಗುತ್ತಿರುವ "AJAX" ತಂತ್ರಜ್ಞಾನವನ್ನು seemlessly ಬಳಕೆ ಮಾಡಿರುವುದು.

ಪುಸ್ತಕ ಸಂತೆ

ಇದು ನನ್ನ ಪ್ರಥಮ ಪ್ರಯತ್ನ.

ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ಶನಿವಾರ ತನ್ನ ಆವರಣದಲ್ಲಿ ಪುಸ್ತಕ ಸಂತೆ ಏರ್ಪಡಿಸುತ್ತದೆ. ಅಲ್ಲಿ ಪರಿಷತ್ತಿನ ಪ್ರಕಟಣೆಗಳ ಜೊತೆಗೆ ಖ್ಯಾತ ಪ್ರದರ್ಶಕರ ಮಳಿಗೆಗಳು ಇರುತ್ತವೆ ಅಂತ ಕೇಳ್ಪಟ್ಟಿದ್ದೆ. ಆದರೆ ಹೋದ ಶನಿವಾರ ಅಲ್ಲಿ ಹೋದಾಗ ನಿರಾಶೆ ಕಾದಿತ್ತು. ಆಲ್ಲಿ ಕೆಲವೆ ಕೆಲವು ಮಳಿಗೆಗಳಿದ್ದವು. ಪುಸ್ತಕಗಳೂ ಸಹ ತುಂಬ ಇರಲಿಲ್ಲ. ಹೆಚ್ಚಾಗಿ ಅಡುಗೆ ಪುಸ್ತಕಗಳು, ದೇವರ ನಾಮದ ಪುಸ್ತಕಗಳೆ ಇದ್ದವು.

೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...

ಬೆಳಗಾವಿ ಮತ್ತು ಗಡಿಯಲ್ಲಿರುವ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ನಿರ್ಣಯವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಿತ್ತು. ಇದಕ್ಕೆ ಕರ್ನಾಟಕಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ.(ಈಗ ಕರ್ನಾಟಕ ಸರಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ರದ್ದು ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿದೆ.) ಇತ್ತೀಚೆಗೆ ಬೆಳಗಾವಿ ನಗರ ಪಾಲಿಕೆಯ ಮೇಯರ್ ವಿಜಯ್ ಪಾಂಡುರಂಗ ಮೋರೆ ಬೆಂಗಳೂರಿಗೆ ಬಂದು ಶಾಸಕರ ಭವನದಲ್ಲಿ ಇಳಿದುಕೊಂಡಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು 'ಮಿಂಚಿನ ದಾಳಿ' ನಡೆಸಿ ವಿಜಯ್ ಮೋರೆಯವರ ಮುಖಕ್ಕೆ ಮಸಿ ಬಳಿದು ಹಲ್ಲೆ ನಡೆಸಿ ತಮ್ಮ ಕನ್ನಡಾಭಿಮಾನವನ್ನು ತೋರಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಹಿಂಸಾತ್ಮಕ ಪ್ರತಿಭಟನೆ ಈಗ ಬಿಸಿಯೇರಿದ ಚರ್ಚೆಗಳಿಗೆ ಕಾರಣವಾಗಿದೆ.