ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಗೆಯ ನೀತಿ ಪಾಠ

ನಾನೊಂದು ಸೊಲ್ಲಾಪುರದ ಕಾಗೆ ಹೊರಟಿಹೆನು ಮಗಳ ಬೆಂಗಳೂರಿಗೆ ನನಗೆ ಬೇಕಿಲ್ಲ ಟ್ರೈನಿಗೆ ತಿಕೀಟು ಎಲ್ಲರೂ ಹೊಡೆಯುವರು ನನಗೆ ಸಲಾಮು ಇವರಂತೆ ಎನಗಿಲ್ಲ ನೀರಿನ ಸಮಸ್ಯೆ ಹೂಜಿಯ ತಳದಿಹ ಕೊಂಚ ನೀರನೂ ಕುಡಿಯಬಲ್ಲೆ ಕೆರೆ ಕಟ್ಟೆಗಳು ತುಂಬಿದರೂ ಕುಡಿಯದವರು ಇಲ್ಲದಾಗ ಕೊಡರೆಂದು ಹಾಹಾಕರಿಸುವರು ಎನಗಿಲ್ಲ ಇವರಂತೆ ಗಡಿಯ ಸಮಸ್ಯೆ ನನ್ನೂರಿಹದು ಮರಾಠಿಗರ ಕೈಯಲ್ಲಿ ನಮ್ಮೋರಿಹರು ಜಗದೊಳಗೆ ಅಲ್ಲಿ ಇಲ್ಲಿ

Fat is 'Felt' not FAT

a review of Joseph Beuys' show at Tate Modern, London called “Actions, Vitrines, Environments” AT: TATE Modern Gallery, London Between: 4th February -- 2nd May 2005 Introduction: I am an art critic from Bangalore writing about art in Kannada for two decades. I had to wait precisely for 'two decades' to get a scholarship based on my writings in Kannada! So, I was in London for about 7 months. One of the reason for writing the review below, of an European ICON in visual culture is the severe London cold. It always drove me 'into' the galleries. The second reason is that those works are ROLE MODELS for contemporary Indian artist. However, as a Kannadiga, proud of understanding the world through 'Kannada experience', this review is my reaction to an European master, seen live. Earlier, 90 percent of the artworks I had seen and taught about was through 'reproductions' of the original. So the review, the 'Object' of the review and the European masters belong to Kannada as much as Shakespere is!

ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ನಲುಗುತ್ತಿರುವ ಮಲೆನಾಡು

ರ್ನಾಟಕದಲ್ಲಿ ನಕ್ಸಲೀಯರ ಸಮಸ್ಯೆ ಆರಂಭವಾಗಿ ಆಗಲೇ ಒಂದು ವರ್ಷ ಕಳೆಯಿತು. ಈ ಹೊತ್ತಿನವರೆಗೂ ಇದರ ಮೂಲ ಕಾರಣಗಳನ್ನು ಶೋಧಿಸುವ ಪ್ರಯತ್ನಗಳು ಮಾತ್ರ ನಡೆದಿಲ್ಲ. ಯಾವುದೇ ಸಮಸ್ಯೆಯ ಮೂಲ ಕಾರಣವನ್ನು ಶೋಧಿಸುವ ‘ಬುದ್ಧಿ’ ನಮ್ಮ ರಾಜಕಾರಣಿಗಳಿಗಂತೂ ಇಲ್ಲ. ಅದಕ್ಕಿಂತ ದೊಡ್ಡ ದುರಂತವೆಂದರೆ ಪ್ರಜಾಪ್ರಭುತ್ವದ ಕಾವಲುಗಾರರಂತೆ ವರ್ತಿಸಬೇಕಾದ ಪತ್ರಿಕೆಗಳು ಮತ್ತು ನಾಗರಿಕ ಸಮಾಜ (civil society)ಕೂಡಾ ‘ಸಿದ್ಧ ಮಾದರಿ’ಗಳ (stereo types) ಮೂಲಕ ಸಮಸ್ಯೆಯನ್ನು ಗ್ರಹಿಸುತ್ತಿರುವುದು. ಇದರಿಂದಾಗಿ ನಕ್ಸಲೀಯರ ಚಟುವಟಿಕೆಗಳಿರುವ ಪ್ರದೇಶದ ಸಾಮಾನ್ಯ ಜನರ ಸ್ಥಿತಿ ಎಲ್ಲಿಯೂ ಬೆಳಕು ಕಾಣುತ್ತಿಲ್ಲ. ಈ ಜನರು ಒಂದೋ ನಕ್ಸಲೀಯರ ಬೆಂಬಲಿಗರಾಗಿ ಪೊಲೀಸರ ಹಿಂಸೆಗೆ ಗುರಿಯಾಗುವುದು ಇಲ್ಲವೇ ನಕ್ಸಲೀಯರ ವಿರೋಧಿಗಳಾಗಿ ನಕ್ಸಲೀಯರಿಂದ ಹತರಾಗುವುದರಲ್ಲಿ ಒಂದನ್ನು ಆರಿಸಿಕೊಳ್ಳುವ ಅನಿವಾರ್ಯವನ್ನು ಎದುರಿಸುತ್ತಿದ್ದಾರೆ.

ನಿಮಗ್ಯಾವ ಚಿಂತೆ

ನಿಮಗ್ಯಾವ ಚಿಂತೆ ಜೀವನದುದ್ದಕ್ಕೂ ಹತ್ತು ಹಲವಾರು ಚಿಂತೆ ಈ ಸಂತೆಯಲಿ ನಿಮ್ಮ ಸರಕ್ಯಾವದೆಂದು ಹೇಳುವಿರಂತೆ ಕೂಸಿಗೆ ಅಮ್ಮ, ಹಾಲಿನದೇ ಚಿಂತೆ ಅದರಮ್ಮನಿಗೆ ಮಗುವಿನಳುವುದೇ ಚಿಂತೆ ಮಗುವಿಗೆ ಮಿಠಾಯಿ ಆಟಿಕೆಗಳದೇ ಚಿಂತೆ ಪೋಷಕರಿಗೆ ಅದನು ಶಾಲೆಗೆ ಸೇರಿಸುವುದೇ ಚಿಂತೆ ಶಾಲೆಯಲಿ ಮಕ್ಕಳಿಗೆ ಮಾಸ್ತರರ ಕಣ್ತಪ್ಪಿಸುವುದೇ ಚಿಂತೆ ಮನೆಗೆ ಬಂದೊಡನೆ ಆಟಕೆ ಓಡುವುದೇ ಚಿಂತೆ

ಪಿಸುಮಾತು

ಹಿಡಿವೆ ನಿನ್ನ ನಾ ನಿದಿರೆಯಲಿ ಮರೆಯಲಾರೆ ನನ್ನನ್ನೀಗ ಬೇಡುವೆ ನೀನು ಭಯದಲಿ ಕಪಿಮುಷ್ಟಿಯಿದು ಸರಳವಲ್ಲ ಎಲುಬುಗಳು ನಿನ್ನವು ಚೂರಾಗುವುದು ಎನಗೆ ಚಿಂತೆಯಿಲ್ಲ ಉರಿಯುವುದೀಗ ನಿನ್ನಾತ್ಮ ನನ್ನ ರೋಷದ ಬೆಂಕಿಯಲಿ ಮೋಕ್ಷ ದೊರಕಬಹುದು ನಿನಗೂ ಪಿಸುಗುಟ್ಟಿದಾಗ ನಾ ನಿನ್ನ ಕಿವಿಯಲಿ ಇದ್ದಾಗ ಕೇಳಲಿಲ್ಲ... ಈಗ ಆಲಿಸು ನೀ ಹುಲುಮಾನವ

ಆತ್ಮಹತ್ಯೆಯ ಸುತ್ತಮುತ್ತ

ಪೋಲು ಮಾಡಲು ಇರುವುದಿಷ್ಟು ಗಳಿಗೆ ಮುಚ್ಚುತಿಹುದು ನನ್ನ ಯೋಚನೆಗಳ ಮಳಿಗೆ ಕೆಲಸಕ್ಕೆ ಬಾರದ ಕಸ, ಆಚೆ ಹಾಕಿದ್ದಷ್ಟೇ ಏಳಿಗೆ ಸಾಧನೆಗಳು ಸಾಧನೆಗಳೋ ಆಕಸ್ಮ್ಕಿಕ ಘಟನೆಗಳೋ ? ವೀರ, ಈಗ್ಯಾಕೆ ಈ ಯೋಚನೆ, ನನ್ನ ಅಹಮ್ಮಿಗೂ ಬೇಕು ಸಾಧನೆಗಳ ಸೇವನೆ ಹೊರಗೆ ತೊಡಲು ಖಾದಿ ಒಳಗೆ ಹುಳುಕು ದೇಹ, ಕೊಳೆತ ಮನಸ್ಸು ಸಾಯಲು ಇದು ಒಳ್ಳೆಯ ವಯಸ್ಸು

ನಗುತಿಹ ಕುಂಕುಮ

ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು
ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂದರ್ಯ ಸಾಧನಂ ಎಂಬ ಉಕ್ತಿಯೊಂದಿದೆ. ಅದರ ಬಗ್ಗೆ ನನ್ನ ಚಿಂತನೆ ನಿಮ್ಮ ಮುಂದಿಡುತ್ತಿರುವೆ.

ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ.