ಕಾಗೆಯ ನೀತಿ ಪಾಠ
- Read more about ಕಾಗೆಯ ನೀತಿ ಪಾಠ
- Log in or register to post comments
ಕರ್ನಾಟಕದಲ್ಲಿ ನಕ್ಸಲೀಯರ ಸಮಸ್ಯೆ ಆರಂಭವಾಗಿ ಆಗಲೇ ಒಂದು ವರ್ಷ ಕಳೆಯಿತು. ಈ ಹೊತ್ತಿನವರೆಗೂ ಇದರ ಮೂಲ ಕಾರಣಗಳನ್ನು ಶೋಧಿಸುವ ಪ್ರಯತ್ನಗಳು ಮಾತ್ರ ನಡೆದಿಲ್ಲ. ಯಾವುದೇ ಸಮಸ್ಯೆಯ ಮೂಲ ಕಾರಣವನ್ನು ಶೋಧಿಸುವ ‘ಬುದ್ಧಿ’ ನಮ್ಮ ರಾಜಕಾರಣಿಗಳಿಗಂತೂ ಇಲ್ಲ. ಅದಕ್ಕಿಂತ ದೊಡ್ಡ ದುರಂತವೆಂದರೆ ಪ್ರಜಾಪ್ರಭುತ್ವದ ಕಾವಲುಗಾರರಂತೆ ವರ್ತಿಸಬೇಕಾದ ಪತ್ರಿಕೆಗಳು ಮತ್ತು ನಾಗರಿಕ ಸಮಾಜ (civil society)ಕೂಡಾ ‘ಸಿದ್ಧ ಮಾದರಿ’ಗಳ (stereo types) ಮೂಲಕ ಸಮಸ್ಯೆಯನ್ನು ಗ್ರಹಿಸುತ್ತಿರುವುದು. ಇದರಿಂದಾಗಿ ನಕ್ಸಲೀಯರ ಚಟುವಟಿಕೆಗಳಿರುವ ಪ್ರದೇಶದ ಸಾಮಾನ್ಯ ಜನರ ಸ್ಥಿತಿ ಎಲ್ಲಿಯೂ ಬೆಳಕು ಕಾಣುತ್ತಿಲ್ಲ. ಈ ಜನರು ಒಂದೋ ನಕ್ಸಲೀಯರ ಬೆಂಬಲಿಗರಾಗಿ ಪೊಲೀಸರ ಹಿಂಸೆಗೆ ಗುರಿಯಾಗುವುದು ಇಲ್ಲವೇ ನಕ್ಸಲೀಯರ ವಿರೋಧಿಗಳಾಗಿ ನಕ್ಸಲೀಯರಿಂದ ಹತರಾಗುವುದರಲ್ಲಿ ಒಂದನ್ನು ಆರಿಸಿಕೊಳ್ಳುವ ಅನಿವಾರ್ಯವನ್ನು ಎದುರಿಸುತ್ತಿದ್ದಾರೆ.
ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು
ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂದರ್ಯ ಸಾಧನಂ ಎಂಬ ಉಕ್ತಿಯೊಂದಿದೆ. ಅದರ ಬಗ್ಗೆ ನನ್ನ ಚಿಂತನೆ ನಿಮ್ಮ ಮುಂದಿಡುತ್ತಿರುವೆ.
ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ.