ಹೀಗೊಂದು ಅಳಲು...(ಹರಿ ಪ್ರಸಾದ್ ತೆಗೆದ ಕಾರ್ಕಳ ಚಿತ್ರಕ್ಕಾಗಿ ಬರೆದದ್ದು)
ಇಲ್ಲದಿದ್ದರೂ ಪಟದಲಿ
ಎಲ್ಲರಾ ಕವನದಲಿ
ಬೆತ್ತಲ ಮೂರುತಿಗೇ ಮನ್ನಣೆ...
ಅನಂತಾನಂತ ದೂರ
ಬಾನಲಿ ಬತ್ತಿಯಂತುರಿವ
ಕತ್ತಲ ಮೂರುತಿಗೇ ಮನ್ನಣೆ...
ಸನಿಹದಲ್ಲೇ ಇರುವೆ ನಾನು,
ಅನತಿ ದೂರದಲ್ಲೇ...
ಎತ್ತರ ತೆಂಗಿನ ಮರದಷ್ಟಾದರೂ...
ಕವಿಗಳ ನೋಟಕೆ ಬಾರದೇನು ನನ್ನ ಇರವು?
ಕವಿತೆಗೇಕಾಗಲಾರೆ ನಾ ಸ್ಫೂರ್ತಿಯ ಸೆಲೆಯು?
--ಶ್ರೀ
Rating