ಪುಸ್ತಕ ಸಂಪದ

  • ಉದಯೋನ್ಮುಖ ಲೇಖಕರಾದ ಮಂಜಯ್ಯ ದೇವರಮನಿ ಇವರು ತನ್ನ ನೂತನ ಕೃತಿ “ಬಿಟ್ಟು ಬಂದಳ್ಳಿಯ ನೆನಪುಗಳು” ಯಲ್ಲಿ ತಮ್ಮ ಊರಿನ ನೆನಪುಗಳನ್ನು ಕೆದಕಲು ಹೊರಟಿದ್ದಾರೆ. ಗ್ರಾಮೀಣ ಬದುಕು ಆಧುನಿಕತೆಯತ್ತ ವಾಲುತ್ತಿದೆ ಎನ್ನುವ ಲೇಖಕರು ತಮ್ಮ ಕೃತಿಗೆ ಬರೆದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು... 

    “ಚಿಕ್ಕಯ್ಯ ಊರಿನಿಂದ ಬಂದಿದ್ದರು. ತಿಂಗಳಿಗೋ ಆರು ತಿಂಗಳಿಗೋ ಏನಾದರೂ ಒಂದು ಕೆಲಸದ ನಿಮಿತ್ತ ಬೆನ್ನೂರಿಗೆ ಬರುತ್ತಿರುತ್ತಾರೆ. ಜಮೀನಿನ ಕಾಗದಪತ್ರ ಮಾಡಿಸಲೋ... ದನದ ವ್ಯಾಪಾರಕ್ಕೋ... ಇಲ್ಲವೇ ನಾನು ಚಿಕ್ಕವನಿದ್ದಾಗ ಬಗೆಹರಿಯದ ಒಂದು ವ್ಯಾಜ್ಯದ ಸಂಬಂಧ ಕೋರ್ಟಿಗೋ... ಅಪ್ಪನ ಆರೋಗ್ಯವನ್ನು ವಿಚಾರಿಸಲೋ... ಬರುತ್ತಿರುತ್ತಾರೆ. ಇದು ಅವರ ಜೀವನ ಕ್ರಮದ…

  • ಈಗಾಗಲೇ ‘ಬದುಕ ಬದಲಿಸುವ ಕತೆಗಳು' ಪುಸ್ತಕದ ಮೊದಲನೇ ಭಾಗ ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿರುವ ಕತೆಗಳು ನಮ್ಮ ಬದುಕಿನ ಕತೆಗಳಂತೆಯೇ ಇವೆ ಎಂಬ ಅಭಿಮಾನದಿಂದ ಕೊಂಡು ಓದಿದವರು ಅದರ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದರು. ಡಾ. ಶಶಿಕಿರಣ್ ಶೆಟ್ಟಿ ಅವರ ‘ಬದುಕ ಬದಲಿಸುವ ಕತೆಗಳು' ಕೃತಿಯ ಎರಡನೇ ಭಾಗ ಇತ್ತೀಚೆಗೆ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ೬೦ ಕತೆಗಳಿದ್ದರೆ, ಎರಡನೇ ಭಾಗದಲ್ಲಿ ೧೦೪ ಕತೆಗಳಿವೆ. ಭಾವನಾತ್ಮಕ ರೀತಿಯ ಕತೆಗಳನ್ನು ಓದುವವರಿಗೆ ಸುಗ್ಗಿಯೇ ಸರಿ. 

    ಹಿಂದಿನ ಪುಸ್ತಕದಲ್ಲಾಗಿರುವ ಸಣ್ಣ ಪುಟ್ಟ ತಪ್ಪುಗಳನ್ನು ಈ ಪುಸ್ತಕದಲ್ಲಿ ಸರಿಪಡಿಸಿಕೊಂಡಿದ್ದಾರೆ. ಪುಟವೊಂದಕ್ಕೆ ಒಂದು ಕತೆ ಬರುವಂತೆ ಮತ್ತು ಕತೆ ಮುಗಿದ ಬಳಿಕ, ಹೊಸ ಕತೆಯನ್ನು ಹೊಸ…

  • ‘ವೇಶ್ಯೆ’ ಎಂಬ ಪದವನ್ನು ಕೇಳಿದೊಡನೆಯೇ ಬಹಳಷ್ಟು ಮಂದಿ ಅಸಹ್ಯಕರ ಭಾವವನ್ನು ಮೂಡಿಸಿಕೊಳ್ಳುತ್ತಾರೆ. ಒಂದು ಹೆಣ್ಣು ವೇಶ್ಯೆಯಾಗಲು ನೂರಾರು ಕಾರಣಗಳು ಸಿಗುತ್ತವೆ. ಬಡತನ, ಅನಕ್ಷರತೆ, ಪ್ರೇಮ ವೈಫಲ್ಯ, ಬಲವಂತ, ಶೋಕಿ ಜೀವನದ ಆಸೆ, ಕಾಮದ ಹಂಬಲ, ಸುಲಭದಲ್ಲಿ ಸಿಗುವ ಹಣ, ದೊಡ್ದ ವ್ಯಕ್ತಿಗಳ ಸಂಪರ್ಕ ಹೀಗೆ ಹತ್ತು ಹಲವಾರು ಕಾರಣಗಳು ಸಿಕ್ಕೇ ಸಿಗುತ್ತವೆ. ನಮ್ಮ ಸಮಾಜ ವೇಶ್ಯಾವೃತ್ತಿಯನ್ನು ಅತ್ಯಂತ ಕೀಳು ಕೆಲಸವೆಂದು ಹೇಳಿಕೊಂಡರೂ, ಶತಶತಮಾನಗಳಿಂದಲೂ ಇದು ಇನ್ನೂ ನಿವಾರಣೆಯಾಗದೇ ಮುಂದುವರಿದುಕೊಂಡು ಬಂದಿದೆ. ಪುರುಷ ಪ್ರಧಾನ ಸಮಾಜವೇ ಇದಕ್ಕೆ ಮುಖ್ಯ ಕಾರಣವೆಂದು ಅನಿಸಿದರೂ ಇದರ ಹಿಂದಿನ ಕಥೆಗಳು ನೂರಾರು ಇವೆ. ಪ್ರತಿಯೊಬ್ಬ ವೇಶ್ಯೆ ತನ್ನ ಆತ್ಮಕಥೆ ಬರೆಯಲು ಹೊರಟರೆ ಹಲವಾರು ಪ್ರತಿಷ್ಟಿತರು ಎನಿಸಿಕೊಂಡಿರುವ…

  • ೭೪ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಸಪ್ನ ಬುಕ್ ಹೌಸ್ ಹೊರತಂದ ಪುಸ್ತಕಗಳಲ್ಲಿ “ಉಳ್ಳಾಲದ ವೀರರಾಣಿ ಅಬ್ಬಕ್ಕ” ಸಹ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ ಎಂಬಲ್ಲಿ ರಾಜ್ಯವಾಳುತ್ತಿದ್ದ ಅಬ್ಬಕ್ಕ ಎಂಬ ಮಹಿಳೆ ನಮ್ಮ ಸ್ವಾತಂತ್ರ್ಯದ ಇತಿಹಾಸದ ಪುಟಗಳಲ್ಲಿ ಅಮರಳಾಗಿ ಸೇರಿಹೋದ ಸಂಗತಿ ಎಲ್ಲರಿಗೂ ಗೊತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ಮಹಿಳೆಯರಲ್ಲಿ ಒಬ್ಬರಾದ ಅಬ್ಬಕ್ಕನ ಬಗ್ಗೆ ಬಹುತೇಕರಿಗೆ ತಿಳಿದಿರುವುದು ಅಲ್ಪವೇ. ಪೋರ್ಚುಗೀಸ್ ಸೈನಿಕರ ವಿರುದ್ಧ ವೀರೋಚಿತವಾಗಿ ಹೋರಾಡಿದ ಅಬ್ಬಕ್ಕನ ಬಗ್ಗೆ ತಿಳಿಯಲು ಈ ಪುಸ್ತಕ ಸ್ವಲ್ಪ ಮಟ್ಟಿಗೆ ಸಹಕಾರಿ. 

    ಪುಸ್ತಕದ ಲೇಖಕಿಯಾದ ವಿಜಯಲಕ್ಷ್ಮಿ ಇವರು ತಮ್ಮ ‘ಮನಸ್ಸಿನ ಮಾತು' ಎಂಬ…

  • ಈಗಾಗಲೇ 12 ಸಲ ಮುದ್ರಣವಾಗಿರುವ, ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕಾದ ಪುಸ್ತಕ ಇದು - ಯಾಕೆ? ಎಂಬುದನ್ನು ಲೇಖಕರ ಮಾತಿನಲ್ಲೇ ಕೇಳೋಣ: “ಡಿಪ್ರೆಷನ್, ಇನ್‌ಪೀರಿಯಾರಿಟಿ ಕಾಂಪ್ಲೆಕ್ಸ್, ಆಂಕ್ಸೈಟಿ … ಮೊದಲಾದ ಅನುಭವಗಳಿಗೆ ಅಂಟಿಕೊಂಡು, ಸಂತೋಷ ಅನುಭವಿಸಬೇಕಾದ ಹರಯವನ್ನು ಸಂತೋಷವಿಲ್ಲದೆಯೇ ಕಳೆದ ನಂತರ, ಶಾಂತಿಯಾದರೂ ಸಿಕ್ಕೀತೇ ಎಂದು (ಹಿಂದಿನ ಬಾಗಿಲಿನಿಂದಲೋ? ಮುಖಕ್ಕೆ ಮುಸುಕು ಹಾಕಿಕೊಂಡೋ?) ಸೈಕಾಲಜಿಸ್ಟ್‌-ರನ್ನು ನೋಡುವ ಜನರೇ ಹೆಚ್ಚು ಇರುವ ಈ ಸಮಾಜದಲ್ಲಿ …. ಎಳೆ ಹರೆಯ ಇನ್ನೂ ಮಿಕ್ಕಿರುವಾಗ ಸಂಕೋಚವಿಲ್ಲದೆ ಸೈಕಾಲಜಿಯ ಶಿಬಿರಗಳಲ್ಲಿ ಭಾಗವಹಿಸಿ, ಜೀವನದ ಸುಖ ಪಡೆಯುವ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾಗ್ಯವಂತರು …. ನನಗೆ ಖುಷಿ ಕೊಡುತ್ತಾರೆ.” ಅಂತಹ ಭಾಗ್ಯವಂತರಾಗಲು ಈ ಪುಸ್ತಕದ ಓದು ಮತ್ತು ಮರುಓದು ಖಂಡಿತ ಸಹಾಯ ಮಾಡುತ್ತದೆ…

  • ವೀರೇಂದ್ರ ರಾವಿಹಾಳ್ ಅವರ ನೂತನ ಕಥಾ ಸಂಕಲನ “ಡಂಕಲ್ ಪೇಟೆ" ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೫೦ ಪುಟಗಳನ್ನು ಹೊಂದಿರುವ ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಲೇಖಕರಾದ ಜಿ ಪಿ ಬಸವರಾಜು. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮಓದಿಗಾಗಿ...

    “ಡಂಕಲ್‌ಪೇಟೆ' ಒಂದು ಕಲ್ಪನಾ ವಿಲಾಸದಲ್ಲಿ ಕಟ್ಟಿದ ಪೇಟೆಯಲ್ಲ. ಅದು ಈ ನೆಲದ ಗಾಳಿ- ಮಳೆ- ದೂಳು-ಕೆಸರು- ಉಸಿರು- ಬೆವರು- ಜನ- ಭಾಷೆ- ಸಂಸ್ಕೃತಿ- ನಂಬಿಕೆ-ನಿತ್ಯದ ಗೋಳು-ನಗುವಿನ ಅಬ್ಬರ-ಎಲ್ಲವನ್ನೂ ಕಟ್ಟಿಕೊಂಡಿರುವ ನಿಜ ಪೇಟೆ. ದೇಶದ ವಿದ್ಯಮಾನಗಳೆಲ್ಲ ಈ ಪೇಟೆಯ ಕನ್ನಡಿಯಲ್ಲಿ ಬಿಂಬಿತವಾಗುತ್ತವೆ. ಜನರ ಸಿಟ್ಟು ಸೆಡವುಗಳು ಇಲ್ಲಿ ಸಿಡಿಯುತ್ತವೆ. ಕಾಲಾಂತರದ ಇತಿಹಾಸ, ವರ್ತಮಾನದ…

  • ನಾವಿಂದು ಮನೆ, ಕಚೇರಿಗಳಲ್ಲಿ ಬಳಸುತ್ತಿರುವ AC ವಿದ್ಯುತ್ ವ್ಯವಸ್ಥೆಯನ್ನು ರೂಪಿಸಿದ್ದು ನಿಕೊಲಾ ಟೆಸ್ಲಾ ಎಂಬ ವಿಜ್ಞಾನಿ. ಈತನ ಬಗ್ಗೆ ನಮಗೆ ಪಠ್ಯ ಪುಸ್ತಕಗಳಲ್ಲಾಗಲೀ, ವಿಜ್ಞಾನ ಸಂಬಂಧೀ ಪುಸ್ತಕಗಳಲ್ಲಾಗಲೀ ಮಾಹಿತಿ ದೊರೆತದ್ದು ಕಡಿಮೆ. ಈ ಕೊರತೆಯನ್ನು ನೀಗಿಸಲು ಲೇಖಕರಾದ ಡಿ ಆರ್ ಬಳೂರಗಿ ಅವರು “ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ” ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಈ ಪುಸ್ತಕದ ಲೇಖಕರ ಮಾತಿನಲ್ಲಿ ಅವರು ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ... 

    “ಕ್ರಿಸ್ತಪೂರ್ವದಲ್ಲಿಯೇ ವಿಜ್ಞಾನದ ಬೀಜಾಂಕುರವಾಗಿತ್ತು. ಆದರೆ ಹದಿನೈದನೆಯ ಶತಮಾನದವರೆಗೆ ಹೇಳಿಕೊಳ್ಳುವಂತಹ ಪ್ರಗತಿಯಾಗಲಿಲ್ಲ. ಕೋಪರ್ನಿಕಸ್, ಗೆಲಿಲಿಯೋ, ನ್ಯೂಟನ್ ಮುಂತಾದವರು ಅದರ ಪ್ರಗತಿಯ ವೇಗವನ್ನು…

  • "ಸಾಸಿವೆ ತಂದವಳು" ಓದುತ್ತಾ, ಶುರುವಿನಲ್ಲಿ ನನ್ನ ಬಗ್ಗೆನೇ ಓದಿಕೊಳ್ಳುತ್ತಾ ಇದ್ದೆನಾ ಅನ್ನಿಸಿತು. ತಕ್ಷಣವೇ ಭಾರತೀ ಅಕ್ಕನಿಗೆ ಮೆಸೇಜ್ ಕೂಡಾ ಮಾಡಿದೆ. ಓದ್ತಾ ಓದ್ತಾ, ಅವರು ಬರೆದಿದ್ದ ಒಂದೊಂದು ವಿಷಯಗಳೂ ಹಾಗೇ ಕಣ್ಣ ಮುಂದೆ ಬರಕ್ಕೆ ಶುರು ಆದ್ವು. ಹತ್ರತ್ರ 14 ವರ್ಷ ಆಗಿತ್ತು ಈ ಥರ ಕೂತು ಬುಕ್ ಓದದೇ. ಅಡುಗೆನೂ ಮಾಡದೇ ಕೂತು ಓದಿ ಮುಗಿಸಿದೆ,'' 

    ಇವರು ನನಗೆ ಪರಿಚಯ ಆಗಿ 6- 7 ವರ್ಷ ಆಗಿರಬಹುದು. 5 ವರ್ಷದ ಹಿಂದೆ, ನಾನು ಇಲ್ಲಿಗೆ ಬರುವ ಮೊದಲೂ ಈ ಬುಕ್ ತೊಗೊಬೇಕು ಅಂದುಕೊಂಡು, ಅದು ಆಗದೇ ಹಾಗೇ ಬಂದಿದ್ದೆ. 2021 ಅಲ್ಲಿ ಉದಯ್ ಇಂಡಿಯಾ ಗೆ ಬಂದಾಗ ಕೂಡಾ ತರಿಸಲು ಆಗಿರಲಿಲ್ಲ. 2022 ಅಲ್ಲಿ ನಾವೆಲ್ಲಾ ಬಂದಾಗ ಕೂಡಾ ಇವರನ್ನ ಮೀಟ್ ಮಾಡೋಕಾಗಲಿ, ಬುಕ್…

  • ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಯಶೋಧರಾ ದಾಸಪ್ಪ ಅವರು ರಾಜಕಾರಣಿಯಾಗಿ, ಶಾಸನ ಸಭೆಯ ಪ್ರತಿನಿಧಿಯಾಗಿ, ಸ್ವತಂತ್ರ ಭಾರತದಲ್ಲಿ ರಾಜ್ಯದ ಸರಕಾರದ ಮಂತ್ರಿಯಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾದವರು. ದೇಶ ಕಂಡ ಈ ಅಪರೂಪದ ರಾಜಕಾರಣಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರೂ ಆಗಿದ್ದರು. ಇವರು ನಮ್ಮ ರಾಜ್ಯದ ಪ್ರಥಮ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ. ಇವರ ನಂತರ ಈವರೆಗೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ಅಧ್ಯಕ್ಷರ ನೇಮಕ ಆಗಿಲ್ಲ. ಇಂದಿನ ಕಾಂಗ್ರೆಸ್ ಮಂದಿಗೇ ಯಶೋಧರಾ ದಾಸಪ್ಪನವರ ಬಗ್ಗೆ ತಿಳಿದಿರೋದು ಸಂಶಯ. ಯಶೋಧರಾ ಬಗ್ಗೆ, ಅವರ ರಾಜಕೀಯ ಏಳು ಬೀಳುಗಳ ಬಗ್ಗೆ ಸೊಗಸಾಗಿ ಬರೆದಿದ್ದಾರೆ ಲೇಖಕಿ ಡಾ.ಎಚ್.ಎಸ್. ಅನುಪಮಾ. ಅವರು ತಾವು ನಿರೂಪಿಸಿದ ಯಶೋಧರಾ ದಾಸಪ್ಪ ಅವರ ಜೀವನ…

  • ಭಾರತ ಕಂಡ ಶ್ರೇಷ್ಟ ವಿಜ್ಞಾನಿ ಪ್ರೊ. ಸಿ ಎನ್ ಆರ್ ರಾವ್ ಅವರು “A Life in Science” ಎಂಬ ಹೆಸರಿನಲ್ಲಿ ತಮ್ಮ ಆತ್ಮ ಕಥೆಯನ್ನು ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿರುವ ಈ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಎಂ ಎಸ್ ಎಸ್ ಮೂರ್ತಿ ಇವರು. “ವಿಜ್ಞಾನದೊಳಗೊಂದು ಜೀವನ" ಎಂಬ ಹೆಸರಿನಲ್ಲು ಪ್ರೊ. ರಾವ್ ಅವರ ಆತ್ಮಕಥೆ ಕನ್ನಡಕ್ಕೆ ಬಂದಿದೆ. ಅನುವಾದಕರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ...

    “೧೯೩೪ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸಿ. ಎನ್. ಆರ್. ರಾವ್ ಇಂದು ವಿಶ್ವವಿಖ್ಯಾತ ರಸಾಯನ ವಿಜ್ಞಾನಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಕಳೆದ ಐದು ದಶಕಗಳಲ್ಲಿ ಟ್ರ್ಯಾನ್ಸಿಶನ್ ಮೆಟಲ್ ಆಕ್ಸೆಡ್‌ಗಳು, ಇನಾರ್ಗ್ಯಾನಿಕ್-ಆರ್ಗ್ಯಾನಿಕ್…