ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಜಾತ್ಯಾತೀತರು...

ರಾಜಕೀಯ ಸಂಪೂರ್ಣ

ಜಾತಿಮಯ...

ಓಟು-ಸ್ಥಾನ-ಹುದ್ದೆ-ಹಣ- 

ಎಲ್ಲವೂ ಜಾತಿಯೆಂಬ

ಸಮುದ್ರ ಮಥನದ

ಉತ್ಪನ್ನಗಳೇ...

 

ಆದರೆ ಗುಡಿಸಿ-ಸಾರಿಸಿ

ರಂಗೋಲಿಯನು

ಹಾಕುವುದು

ಮಾತ್ರ

ಜಾತ್ಯಾತೀತವೆಂಬ

ರಂಗೋಲಿಯೇ!

***

ಪಾರದರ್ಶಕ 

ಸಿನಿಮಾ ನಾಟಕಗಳಲಿ

ಆದರ್ಶ ಪಾತ್ರಗಳ

ಮಾಡಿ ಸೈ 

ಎನ್ನಿಸಿಕೊಂಡ

ನಟ-ನಟಿಯರು

ಬಲು ಆಕರ್ಷಕ...

 

ನಿಜ ಜೀವನದ

ಪಾತ್ರಗಳಲಿ

ಸೋಲುತಿರುವುದನು

ಕಣ್ಣಾರೆ ಕಾಣುತಿರುವೆವು...

ಜೀವನ ಯಾರನ್ನೂ 

ಬಿಡದು ಪಾರದರ್ಶಕ!

***

ಕನ್ನಡದ ದೌರ್ಭಾಗ್ಯ... 

ಓ ಅಪ್ಪಟ

ಕನ್ನಡದ 

ನಿರ್ದೇಶಕರೇ-

ನೀವು ತೆಗೆಯುವಿರಿ

ಇಂಗ್ಲೀಷ್ ಶೀರ್ಷಿಕೆ ಕೊಟ್ಟು

ಕನ್ನಡದ ಸಿನಿಮಾ...

 

ಇದೇನಿದು 

ಕನ್ನಡದ  ದೌರ್ಭಾಗ್ಯ...

ನಿಮಗದಷ್ಟು ಸಾಮರ್ಥ್ಯವಿದ್ದರೆ

ತೆಗೆದುಬಿಡಿ

ಕನ್ನಡ ಶೀರ್ಷಿಕೆಯ

ಇಂಗ್ಲೀಷ್ ಸಿನಿಮಾ!

***

ಶ್ರೇಷ್ಠ ತಂದೆ-ತಾಯಿ!

ನಿನಗಿದೋ

ಈ ಜಗದ ಶ್ರೇಷ್ಠ 

ತಂದೆ-ತಾಯಿಯರ

ಪರಿಚಯಿಸಿ

ಬಿಡುವೆ

ಓ ನನ್ನ ಗೆಳೆಯಾ....

 

ಅವರೇ- ಹೆಮ್ಮೆಯಲಿ

ಹುತಾತ್ಮ ಸೈನಿಕ ಮಗನ

ಸಂಸ್ಕಾರದಲಿ ಕಣ್ಣೀರ 

ಸುರಿಸದೆ ಸೆಲ್ಯೂಟ್ ಹೊಡೆದು

ಶ್ರೇಷ್ಠ ತಂದೆ-ತಾಯಿ ಎನ್ನಿಸಿ 

ಪಡೆದರು ಅತ್ಯುನ್ನತ ಗರಿಯಾ!

***

ಪತ್ರಿಕಾ ಮೌಲ್ಯ

ಸೆಲೆಬ್ರಿಟಿಗಳ

ವೈಭವದ ಮದುವೆ;

ರಾಜಕಾರಿಣಿಗಳ

ದೊಂಬರಾಟ

ದಿನ ಪತ್ರಿಕೆಯ

ಮುಖ ಪುಟಕೆ...

 

ಅಯ್ಯೋ.. ದೇಶಕಾಗಿ

ಪ್ರಾಣ ತೆತ್ತ

ಹುತಾತ್ಮ 

ವೀರಯೋಧನ 

ಸಂಸ್ಕಾರದ ವಿಷಯ 

ಕೊನೆ ಪುಟಕೆ!

***

ಶುದ್ಧ-ಅಶುದ್ಧ 

ನಿಮ್ಮ

ಉದ್ದೇಶ್ಯಗಳು

ಶುದ್ಧ ಹಾಗೂ

ಪರಿಪೂರ್ಣವಾಗಿದ್ದರೆ

ನೀವಾರನ್ನೂ

ಕಳೆದುಕೊಳ್ಳಲಾರಿರಿ..

 

ಅಶುದ್ಢ ಹಾಗೂ

ಪರಿಪೂರ್ಣರಲ್ಲದ

ಜನರೇ

ನಿಮ್ಮನ್ನು

ಕಳೆದುಕೊಂಡು

ಪರಿತಪಿಸುವರು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್