ಕೆಲವು ಹನಿಗಳು...

ಕೆಲವು ಹನಿಗಳು...

ಕವನ

ಅಪ್ಪು

ರಾತ್ರಿ ಮಡದಿಯಲ್ಲಿ ಹೇಳಿದೆ 

ನಾಳೆ ಪರಿಸರ ದಿನ 

ಮರ ಅಪ್ಪುವ ಚಳುವಳಿ ಇದೆಯೆಂದು

ಅದಕ್ಕವಳು ಹೇಳಿದಳು

ನಾಳೆಯಲ್ಲವೆ ಅಲ್ಲಿಯವರೆಗೆ

ಕಾಯುವುದು ಏಕೆಂದು ಬಿಗಿದಪ್ಪಿದಳುಯಿಂದು

***

ಮನೆ ಮತ್ತು ಮಹಲು

ಮನೆಯಲ್ಲಿ ಮಹಲಲ್ಲಿ

ಕಛೇರಿಯ ಸೌಧದಲ್ಲಿ

ಮಹಾತ್ಮರ ಚಿತ್ರಗಳನಿಟ್ಟು ಪ್ರಯೋಜನವೇನು

ನಂಬಿಕೆ ಇಲ್ಲದೊಡೆ

ಭಯವು ಎಲ್ಲಿಂದ

ಅವರ ಆದರ್ಶ ಪಾಲಿಸದೊಡೆ ಲಾಭವೇನು

***

ಮನ

ಮನ ಝರ್ಜರಿತವಾಗುವ

ಮೊದಲೆ ಬದುಕ ಪಯಣ 

ಕೊನೆಗೊಳ್ಳಬೇಕು ಯಾವಾಗಲೂ ಹೀಗೆಯೇ

ಮಲಗಿದಲ್ಲಿಯೆ ಕೆಮ್ಮು

ದಮ್ಮುಗಳ ಜೊತೆಯಿರೆ

ನೋಡುವವರಿಗೇ ಕಷ್ಟ ತಿಳಿಯೋಣ ಹೌದಲ್ಲವೇ

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್