ಪರಿಬ್ರಮನೆ
ಕವನ
ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ
ಬದುಕು ಭವನೆಗಳ ಮದ್ಯೆ ಹೊಡೆದಾಡಿದೆ ಜೀವನ
ಎಂದು ಕಾಣುವುದೋ ಕಾಣೆ ಬಿಡುಗಡೆಯ ಚೇತನ
ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ|
ದಿನದ ಧನಿವಿನ ಮದ್ಯೆ ಮರೆಯಾಗದಿದೆ ಗಳೆಯರ ಗುಂಜನ
ನಿಶೆಯ ನಡುವೆ ನುಸುಳಿದೆ, ನಿದಿರೆಯ ಆಲಿಂಗನ
ಕಂಡೇ ಕಾಣುವೆ ಬಿಡುಗಡೆ!, ಎಂದು ಹಂಬಲಿಸಿದೆ ಈ ಮನ.
ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ|
ಇದು ಮುಗಿಯದ ಪಯಣ, ಮುಗಿದರೆ ಇರದು ಜೀವನ
ಮುಗಿಯುವ ಮುನ್ನ, ತುಂಬಿರಲಿ ಎಂದೂ ಆನಂದದ ಔತನ
ನೇಸರನ ನಗುವಿನಲಿ ಮತ್ತೆ ಮರಳಿದೆ ಪಯಣ
ಇದು ಮುಳ್ಳಿನಹಾದಿ ಚುಚ್ಚದಿರುವುದೇ ಮನ||
- ಸಿ. ಎಸ್. ಬೊಗ್ಗವರ್ಪು