ಸೌಭಾಗ್ಯ ಸಂಪತ್ತು

ಸೌಭಾಗ್ಯ ಸಂಪತ್ತು

ಕವನ

ಪರಶಿವನು ಪರಶಿವೆಗೆ ಪೇಳಿದ ಕಥೆಯು

ವರಮಹಾಲಕ್ಷ್ಮೀ ಮಹಾ ವ್ರತವು/

ಸೌಭಾಗ್ಯ ಸಂಪತ್ತು ಧನಧಾನ್ಯವು

ನಿಶ್ಚಿತ ಪುಣ್ಯಫಲ ಅನುಗಾಲವು//

 

ಶ್ರಾವಣ ಮಾಸದಲಿ ಕೈಗೊಂಬ ಪೂಜೆಯು

ಶುಕ್ಲಪಕ್ಷದ ಶುಕ್ರವಾರದ ಶುಭದಿನವು/

ಮಧುರ ಭಾಷಿಣಿ ಚಾರುಮತಿ ಮಹಾ ಸಾಧ್ವಿಯು

ನಿರ್ಮಲ ಮನಸ್ಸು ಹೊಂದಿದ  ಪುನೀತೆಯು//

 

ಸ್ವಪ್ನದಲಿ ಮಹಾಲಕ್ಷ್ಮೀ ದೇವಿ ಕಾಣಿಸಲು

ವ್ರತವನಾಚರಿಸು ಶ್ರೇಯಸ್ಸೆಂದು ಹರಸಿದಳು/

ಬಂಧು ಬಾಂಧವರೆಲ್ಲ ಒಂದಾಗಿ ಸೇರಿದರು

ಕಲ್ಪೋಕ್ತ ಪೂಜೆಯನು ಶ್ರದ್ಧೆಯಲಿ ಮಾಡಿದರು//

 

ನವಗ್ರಂಥಿಗಳ ಪವಿತ್ರ ದಾರವನು ಪೂಜಿಸಿ

ನೀಲಾಂಜನ ದೀಪ ಧೂಪದಾರತಿ  ಬೆಳಗಿಸಿ

ಕಡಲೆಬೇಳೆ ಹಯಗ್ರೀವ ಹೂರಣವ ಅರ್ಪಿಸಿ

ಶ್ರದ್ಧಾ ಭಕ್ತಿಯಲಿ ಮಹಾಲಕ್ಷ್ಮಿಯನು ಪೂಜಿಸಿ

 

ಕುಂಡಿನ ಪಟ್ಟಣವು ದಿನದಿನವು ನಳನಳಿಸಲು

ಜನರೆಲ್ಲ ಸಂಪನ್ನ ಭಾಗ್ಯವಂತರಾಗಲು /

ವರಮಹಾಲಕ್ಷ್ಮೀಯ ಕೃಪಾಕಟಾಕ್ಷ ದೊರೆಯಲು 

ಬೇಡುತಲಿ ಹಾಡುತಲಿ

ಸುಖದಲ್ಲಿ ಬದುಕ ಸವೆಸಿದರು//

-ರತ್ನಾ ಕೆ.ಭಟ್ ,ತಲಂಜೇರಿ ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್