ವಿಧ: ಪುಸ್ತಕ ವಿಮರ್ಶೆ
August 05, 2023
ಕರ್ನಾಟಕದಲ್ಲಿ ಸಾವಿರಾರು ಬಗೆಯ ಜನಪದ ಆಟಗಳು ಇರಬಹುದು. ಕಾಲಕ್ರಮೇಣ ಹಲವು ಆಟಗಳು ಆಡುವವರಿಲ್ಲದೇ, ಅದನ್ನು ಮುಂದುವರೆಸಲು ಗೊತ್ತಿಲ್ಲದೆಯೇ ಇತಿಹಾಸದ ಪುಟಗಳನ್ನು ಸೇರಿಕೊಂಡಿರಬಹುದು. ಇಂತಹ ಹಲವಾರು ಆಟ ವೈವಿಧ್ಯವನ್ನು ಹುಡುಕಾಡಿ ಸಂಪಾದಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ರೇಣುಕಾ ಕೋಡಗುಂಟಿ ಇವರು. ಕರ್ನಾಟಕದ ಜನಪದ ಆಟಗಳು ಪುಸ್ತಕಕ್ಕೆ ಅವರು ಬರೆದ ಸಂಪಾದಕರ ನುಡಿಯಲ್ಲಿ ವ್ಯಕ್ತವಾದ ಭಾವಗಳು ಅಕ್ಷರರೂಪದಲ್ಲಿ ಇಲ್ಲಿ ನೀಡಲಾಗಿದೆ...
“ಕರ್ನಾಟಕದ ವೈವಿಧ್ಯತೆಯನ್ನು ಸಮಾಜದ ಎಲ್ಲ…
ವಿಧ: ಪುಸ್ತಕ ವಿಮರ್ಶೆ
August 03, 2023
ಡಾ. ಎಂ ಎಸ್ ಮಣಿ ಇವರು ಬರೆದ ‘ಗವಿ ಮಾರ್ಗ' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ‘ಕತ್ತಲ ಹಾದಿಯ ಪಯಣ' ಎಂದು ಮುಖಪುಟದಲ್ಲೇ ಮುದ್ರಿಸಿ ಕೃತಿಯನ್ನು ಓದುವಂತೆ ಕುತೂಹಲ ಮೂಡಿಸಿದ್ದಾರೆ. ಈ ಕೃತಿಗೆ ಭಾರತದ ಸುಪ್ರೀಂ ಪೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ನ್ಯಾ. ವಿ.ಗೋಪಾಲ ಗೌಡ ಇವರು ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಕೃತಿಗೆ ಪತ್ರಕರ್ತರಾದ ಬನ್ಸಿ ಕಾಳಪ್ಪ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿವೆ...
“…
ವಿಧ: ರುಚಿ
August 03, 2023
ಕಾದ ತವಾಗೆ ಒಂದು ಚಮಚ ಎಣ್ಣೆಯನ್ನು ಹಾಕಿ. ಅದಕ್ಕೆ ರವೆ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ರಾಗಿ ಹುಡಿಯನ್ನು ಸೇರಿಸಿ ಐದು ನಿಮಿಷ ಕಾಲ ಚೆನ್ನಾಗಿ ಹುರಿಯಿರಿ. ಅದನ್ನು ಒಲೆಯಿಂದ ತೆಗೆದು ಪಕ್ಕಕ್ಕೆ ಇಡಿ. ಕಾದ ತವಾಗೆ ಮತ್ತೆ ಎರಡು ಚಮಚ ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ, ಕಡಲೇ ಬೇಳೆ, ಗೋಡಂಬಿ ಹಾಕಿ ಚೆನ್ನಾಗಿ ಒಗ್ಗರಣೆ ತಯಾರಿಸಿ.
ಇದಕ್ಕೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕರಿಬೇವು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಎರಡೂವರೆ ಕಪ್ ನೀರನ್ನು ಸೇರಿಸಿ ರುಚಿಗೆ…
ವಿಧ: ಪುಸ್ತಕ ವಿಮರ್ಶೆ
August 01, 2023
“ಮಲ್ಲಿಗೆ ಹೂವಿನ ಸಖ" ಕಥಾ ಸಂಕಲನವನ್ನು ಬರೆದವರು ಕಥೆಗಾರರಾದ ಟಿ ಎಸ್ ಗೊರವರ ಇವರು. ೬೩ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮೊದಲ ಮಾತು, ಟಿಪ್ಪಣಿ ಬರೆದಿದ್ದಾರೆ ಮತ್ತೊರ್ವ ಕಥೆಗಾರ ಜಯರಾಮಾಚಾರಿ. ಇವರು ತಮ್ಮ ಟಿಪ್ಪಣಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ...
“ಟಿ.ಎಸ್. ಗೊರವರ ಅವರ ಕತೆಗಳನ್ನ ಅಲ್ಲಲ್ಲಿ ಪೇಪರ್ ಮತ್ತು ಮ್ಯಾಗಜೀನುಗಲ್ಲಿ ಬಿಡಿಬಿಡಿಯಾಗಿ ಓದಿದ್ದೆ. ಒಟ್ಟಿಗೆ ಅವರ ಕತೆಗಳನ್ನು ಪುಸ್ತಕ ರೂಪದಲ್ಲಿ ಓದಿದ್ದು 'ಮಲ್ಲಿಗೆ ಹೂವಿನ ಸಖ' ಪುಸ್ತಕದಿಂದ, ತರಿಸಿಕೊಂಡು ಇನ್ನೂ…
ವಿಧ: ಬ್ಲಾಗ್ ಬರಹ
August 01, 2023
ಈ ಪುಟ್ಟ ಪುಸ್ತಕವು ವಿಜಯನಗರದ ಕಾಲದಲ್ಲಿ ಇದ್ದ , ಶ್ರೀವೈಷ್ಣವ (ವಿಶಿಷ್ಟಾದ್ವೈತ ) ಮತ್ತು ಶೈವ (ಅದ್ವೈತ /ಸ್ಮಾರ್ತ ) ಮತಾನುಯಾಯಿಗಳ ನಡುವಿನ ಸಂಘರ್ಷದ ಕತೆ. ಜಗತ್ತು ದೈವತಂತ್ರ ದಿಂದ ನಡೆದಿರುವದೇ ಹೊರತು ಮನುಷ್ಯರ ತಂತ್ರಗಳಿಂದ ಅಲ್ಲ ಎಂಬ ನೀತಿಯನ್ನು ನಿರೂಪಿಸುತ್ತದೆ.
ಅಲ್ಲಿನ ಕೆಲವು ವಾಕ್ಯಗಳು ಇಲ್ಲಿವೆ :-
ಸ್ವಮತವು ಶ್ರೇಷ್ಠ ಎಂದು ತಿಳಿಯುವುದು ಪ್ರತಿಯೊಬ್ಬರಿಗೂ ಅಗತ್ಯವಾದರೂ ಅನ್ಯಮತದ ದೂಷಣೆ ಕೂಡದು.
ಬೇಕೆಂದರೆ ಬುದ್ಧಿಯಿಂದ ಅನ್ಯಮತದ ಖಂಡನೆ ಮಾಡಬಹುದು. ಆದರೆ ವ್ಯಕ್ತಿದ್ವೇಷ…
ವಿಧ: ಬ್ಲಾಗ್ ಬರಹ
July 31, 2023
(ಈ ಪುಸ್ತಕವನ್ನು ಓದಲು /ಇಳಿಸಿಕೊಳ್ಳಲು pustaka.sanchaya.net ತಾಣದಲ್ಲಿ 'ಕೃಷ್ಣಾನಂದ ಕಾಮತ್' ಎಂದು ಬರೆದು ಹುಡುಕಿ.
ಈ ಪುಸ್ತಕವನ್ನು ಓದುವಾಗ ನಮ್ಮ ಬದುಕಿಗೆ ಮಾರ್ಗದರ್ಶಕವಾಗಬಹುದಾದ ಅನೇಕ ವಿಚಾರಗಳು ದೊರೆತವು . ಅವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಕೃಷ್ಣಾನಂದ ಲಕ್ಷ್ಮಣ ಕಾಮತ್ ಅವರು ತಮಗೆ ಇಷ್ಟವಾದದ್ದನ್ನು ಮಾಡಿದರು, ಓದಿದರು, ಬರೆದರು, ಬದುಕಿದರು.ಬಯಸಿದಂತೆ ಬದುಕಿದ ಅವಧೂತರು. ನಿಜವಾದ ಅರ್ಥದಲ್ಲಿ ಜೀವಿಸಿದರು.
... ಗೌರವಕ್ಕೆ ಅರ್ಹರಾಗಿದ್ದರೂ ಅದನ್ನು ಪಡೆಯದೇ…
ವಿಧ: ಬ್ಲಾಗ್ ಬರಹ
July 30, 2023
'ಕಲ್ಕತ್ತದ ನ್ಯೂ ಥಿಯೇಟರ್ಸ್' ಪ್ರಸಿದ್ಧಿಯ ಹಿಮಾಂಶು ರಾಯ್,(1892, 1922), ದೇವಿಕಾರಾಣಿ, (1908, 1933), ವಿ. ಶಾಂತಾ ರಾಮ್, (1901-1927) ಅಲಬೇಲ ಚಿತ್ರನಿರ್ಮಾಣದ ಯಶಸ್ಸಿನಲ್ಲಿ ಮಿಂದು ಎಲ್ಲರ ಕಣ್ಮಣಿಯಾಗಿದ್ದ ಭಗವಾನ್, (1913, 1951) ಅತ್ಯಂತ ಹಿರಿಯ ನಿರ್ಮಾಪಕ ನಟ, ಮೋತಿಲಾಲ್ ರಾಜವಂಶ್ ** ( 1910, 1934) ನಟ, ಗಾಯಕ, ಕುಂದನ್ ಲಾಲ್ ಸೈಗಾಲ್ (1904, 1937) ಭರತ್ ಭೂಷಣ್ (1920-1941), ನಿರ್ಮಾಪಕ, ಯಶಸ್ವಿ ನಟ, ಸೊಹ್ರಾಬ್ ಮೋದಿ, (1897,1936) ಮೊದಲಾದವರು ಆಗಲೇ ತಮ್ಮ…
ವಿಧ: ಬ್ಲಾಗ್ ಬರಹ
July 29, 2023
ಈ ಐತಿಹಾಸಿಕ ಕಾದಂಬರಿಯನ್ನು ಬರೆದವರು - ರಾಮಚಂದ್ರ. ತ್ರ್ಯಯಂಬಕ. ಕರ್ಪೂರ. ಈ ಕಾದಂಬರಿಯು ವಾಚಕರ ಪುಣ್ಯದಿಂದ ಪೂರ್ಣವಾಯಿತು ಎಂದು ಲೇಖಕರು ಬರೆಯುತ್ತಾರೆ! ಭೂವಡ ಎಂಬ ಚಾಲುಕ್ಯಸಾಮ್ರಾಟನು ಗುರ್ಜರ (ಗುಜರಾತ್) ಪ್ರಾಂತವನ್ನು ಮೇಲಾದ ಧರ್ಮ-ನೀತಿಗಳ ಬೆಂಬಲದಿಂದಲೇ ಗೆದ್ದುದನ್ನು ಈ ಕಾದಂಬರಿ ಹೇಳುತ್ತದೆ. ಇದರ ವಾಚನದಿಂದ ಕನ್ನಡಿಗರಲ್ಲಿ ಸ್ವಾಭಿಮಾನವು ಜಾಗೃತವಾದರೆ ತಾವು ಕೃತಾರ್ಥರಾಗುವುದಾಗಿ ಲೇಖಕರು ಹೇಳುತ್ತಾರೆ.
ಆರಂಭಿಕ ಪುಟಗಳಲ್ಲಿ ಸುಂದರ ಯುವತಿ ಯೊಬ್ಬಳ ಅಪಹರಣ, ರಕ್ಷಣೆಯ ಸಂಗತಿಯಿದೆ…
ವಿಧ: ಪುಸ್ತಕ ವಿಮರ್ಶೆ
July 29, 2023
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಬಗ್ಗೆ ನಿವೃತ್ತ ಡಿ ಜಿ ಪಿ ಡಾ. ಡಿ.ವಿ.ಗುರುಪ್ರಸಾದ್ ಅವರು ಬರೆದ ಪುಸ್ತಕವೇ “ಧರ್ಮಾತ್ಮ". ಸಜ್ಜನ ರಾಜಕಾರಣಿ ಎಂದು ಹೆಸರುವಾಸಿಯಾಗಿದ್ದ ಧರಂಸಿಂಗ್ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸಿದ್ದರು. ಅಧಿಕ ಸಮಯ ಮುಖ್ಯಮಂತ್ರಿಯಾಗಿರಲು ಸಾಧ್ಯವಾಗದೇ ಹೋದರೂ ಹಲವಾರು ವರ್ಷ ಶಾಸಕರಾಗಿ, ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ ಕರ್ನಾಟಕ ರಾಜ್ಯಕ್ಕೆ ಸಲ್ಲಿಸಿದ ಸೇವೆ ಮರೆಯಲು ಸಾಧ್ಯವಿಲ್ಲ. ಧರಂಸಿಂಗ್ ಅವರ ಊರಿನವರೇ ಆದ ಸಾಹಿತಿ ದೇವು ಪತ್ತಾರ ಇವರು ಪುಸ್ತಕಕ್ಕೆ…
ವಿಧ: ಪುಸ್ತಕ ವಿಮರ್ಶೆ
July 27, 2023
ಯುವ ಕವಿ ರಾಜಾ ಎಂ ಬಿ ಇವರು ಮಕ್ಕಳಿಗಾಗಿ ಶಿಶು ಗೀತೆಗಳ ಸಂಕಲನ “ಕೋತಿ ಮತ್ತು ಗೋಧಿ ಹುಗ್ಗಿ" ಯನ್ನು ಹೊರತಂದಿದ್ದಾರೆ. ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಕವಿತೆಗಳನ್ನು ಬರೆಯುವುದು ಒಂದು ಸವಾಲಿನ ಕೆಲಸ. ಏಕೆಂದರೆ ಅವರಿಗೆ ಅರ್ಥವಾಗುವ ಪದಗಳನ್ನೇ ಬಳಸಿ ಕವಿತೆಯನ್ನು ಹೆಣೆಯುವುದು ಬಹಳ ಕಷ್ಟ. ಆದರೆ ರಾಜಾ ಎಂ ಬಿ ಇವರು ಬರೆದ ಕವಿತೆಗಳು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತಿದೆ. ಈ ಕವಿತಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ಎಚ್ ಎಸ್ ಸತ್ಯನಾರಾಯಣ. ಇವರು ಮುನ್ನುಡಿಯಲ್ಲಿ…