ನೀರು ಜೀವಜಲ, ತೀರ್ಥದಂತೆ ಬಳಸೋಣ
1 day 11 hours ago - addoorಮಂಗಳೂರಿನ ಜನರಿಗೆ ಮೇ 2023ರಿಂದ ನೀರಿನ ರೇಷನಿಂಗ್ ಶುರುವಾಗಿತ್ತು. ಅಂದರೆ, ಎರಡು ದಿನಕ್ಕೊಮ್ಮೆ ಕುಡಿನೀರು ಸರಬರಾಜು. ಎತ್ತರದ ಪ್ರದೇಶಗಳಿಗೆ ನೀರು ಹತ್ತದಿರುವ ಕಾರಣ, ಅಲ್ಲಿಗೆ ಟ್ಯಾಂಕರುಗಳಲ್ಲಿ ನೀರು ಒದಗಣೆ. ಮುಂಗಾರು ಮಳೆ ಬರುವ ತನಕ ಪರಿಸ್ಥಿತಿ ಹೀಗೆಯೇ ಮುಂದುವರಿಯಲಿದೆ. ಹಿಂದಿನ ಕೆಲವು ವರುಷಗಳಲ್ಲಿಯೂ ನೀರಿನ ಕೊರತೆ ತೀವ್ರವಾಗಿ, ನೀರಿನ ರೇಷನಿಂಗ್ ಜ್ಯಾರಿಯಾಗಿತ್ತು. ಅರುವತ್ತು ಕಿಮೀ ದೂರದ ಉಡುಪಿಯ ನೀರಿನ ಮೂಲವಾದ ಜಲಾಶಯದಲ್ಲಿಯೂ ಕೆಲವೇ ದಿನಗಳಿಗಾಗುವಷ್ಟೇ ನೀರುಳಿದಿದೆ.
2024ರ ಬೇಸಗೆಯಲ್ಲಿಯೂ ಮಂಗಳೂರು ಮತ್ತು ಉಡುಪಿಯಲ್ಲಿ ನಾಗರಿಕರಿಗೆ ನೀರಿನ ಲಭ್ಯತೆ ಆತಂಕಕಾರಿಯಾಗಿಯೇ ಮುಂದುವರಿದಿದೆ.
ಜಗತ್ತಿನ ಹಲವು ನಗರಗಳಲ್ಲಿ ಇದೇ ಪರಿಸ್ಥಿತಿ. ಉದಾಹರಣೆಗೆ ದಕ್ಷಿಣ ಆಫ್ರಿಕಾದ ದಕ್ಷಿಣದ ಮಹಾನಗರ ಕೇಪ್-ಟೌನ್. ಅಲ್ಲಿ 2015ರಿಂದ 2017 ಅವಧಿಯಲ್ಲಿ ಮೂರು ವರುಷಗಳ ಸತತ ಬರಗಾಲದಿಂದಾಗಿ ನಗರಕ್ಕೆ ನೀರು ಪೂರೈಸುವ ಜಲಾಶಯಗಳು ಬತ್ತಿ ಹೋದವು. ಅಲ್ಲಿನ ಆಡಳಿತ ನೀರಿನ ಕಠಿಣ ರೇಷನಿಂಗ್ ಜ್ಯಾರಿಗೆ ತಂದಿತು; ಅಂದರೆ ಒಬ್ಬ ವ್ಯಕ್ತಿಗೆ ದಿನಕ್ಕೆ ಕೇವಲ 50 ಲೀಟರ್ ನೀರು ಲಭ್ಯ. (ಒಬ್ಬ ವ್ಯಕ್ತಿಗೆ ದಿನಕ್ಕೆ ಕನಿಷ್ಠ 120 ಲೀಟರ್ ನೀರು ಅಗತ್ಯ.) ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ. ಕೊನೆಗೆ, ಅಲ್ಲಿನ ಆಡಳಿತ ನಗರದಲ್ಲಿ “ಡೇ ಜೀರೋ” (ಅಂದರೆ ಶೂನ್ಯಜಲ ದಿನ) ಘೋಷಿಸುವ ದಾರುಣ ಸಮಯ ಹತ್ತಿರವಾಯಿತು. ಅನಂತರ, ಬಿರುಸಿನ ಪ್ರಚಾರ ಕಾರ್ಯಕ್ರಮಗಳಿಂದ ನಾಗರಿಕರಲ್ಲಿ ಜಲಜಾಗೃತಿ ಮೂಡಿಸಿ ಪರಿಸ್ಥಿತಿಯನ್ನು ನಿಭಾಯಿಸಲಾಯಿತು.
ಇಂತಹ ಭೀಕರ ಜಲಕ್ಷಾಮದಿಂದ ಜನರು ಪಾಠ ಕಲಿತರೇ? “ಇಲ್ಲ" ಎನ್ನುತ್ತದೆ “ನೇಚರ್ ಸಸ್ಟೇನಬಿಲಿಟಿ" ಎಂಬ ಜರ್ನಲಿನಲ್ಲಿ 10 ಎಪ್ರಿಲ್ 2023ರಲ್ಲಿ ಪ್ರಕಟವಾಗಿರುವ ಅಧ್ಯಯನದ ವರದಿ.… ಮುಂದೆ ಓದಿ...