ಝಾಗಟೆ....

ಝಾಗಟೆ....

ಬರಹ

ನಿನ್ನೆ ದಿನ ಎರಡು ಘಟನೆಗಳು ನಮ್ಮಲ್ಲೂ ಹಾಗೂ ನಮ್ಮ ನೆರೆಮನೆಯಲ್ಲೂ ನಡೆದಿವೆ ಪರಿಣಾಮ ಅಮಾಯಕರ
ಸಾವು . ಈ ಎರಡೂ ಘಟನೆಗಳಿಗೆ ಕಾರಣರಾದವರು ನಾವು ಹಾಗೂ ನಮ್ಮ ನೆರೆಯವರು ..ಒಂದು ವಿಷಸರ್ಪ ಸಾಕಿ ಅದಕ್ಕೆ
ಹಾಲೂಡಿಸಿ ಪೋಶಿಸುತ್ತ ಬಂದು ಈಗ ನಮ್ಮ ತಲೆಮೇಲೆ  ಏರಿ ಹೆಡೆಯಾಡಿಸಿ ನಲಿವಾಗ ವಿಹ್ವಲವಾಗಿದ್ದೇವೆ.
ಈ ವಿಷಬಳ್ಳಿಗಳನ್ನು ಬೇರಿನಲ್ಲಿಯೇ ಚಿವುಟಿದ್ದರೆ ನಮಗೆ ಈ ಗತಿ ಬರುತ್ತಿರಲಿಲ್ಲ  ನಮ್ಮ  ಮನೆಬಂಧು ಅಥವಾ ನೆರೆಮನೆಯವರು
ಈ ರೀತಿ ನಿರ್ದಯವಾಗಿ ಸಾಯುತ್ತಿರಲಿಲ್ಲ..!

ಈಗ ಪಾಕಿಸ್ತಾನಕ್ಕೆ ಬೊಟ್ಟುಮಾಡಿ ತಕ್ಕ ಶಾಸ್ತಿ ಅನುಭವಿಸಿತು ಎಂದು ಹಿಗ್ಗುವಂತಿಲ್ಲ  ನಮ್ಮ ಬುಡಕ್ಕೂ ವಿಷಬಳ್ಳಿ ನಕ್ಸಲಿಸಂ
ರೂಪದಲ್ಲಿ ಸುತ್ತಿಕೊಂಡಿದೆ ಈಗ ಚಿವುಟಿ ತೆಗೆಯದಷ್ಟು ಬಲವಾಗಿದೆ ತೆಗೆದುಹಾಕುವ ಮಂದಿ ರಾಜ್ಯದ ಜವಾಬ್ದಾರಿ ಕೇಂದ್ರದ
ತಲೆನೋವು ಎಂದು ಬೊಟ್ಟು ಮಾಡಿ ತೋರಿಸುತ್ತ ಮಲಗಿದ್ದಾರೆ. ರಾತ್ರಿ ಸಂಚರಿಸುವ ಗಾಡಿನೇ ರದ್ದು ಮಾಡುವಷ್ಟು ಅವರು
ಬೆಳೆದಿದ್ದಾರೆ ..ನೋಡೋಣ ಸರ್ಕಾರ ಎಲ್ಲಿಯವರೆಗೆ ತೂಕಡಿಸುತ್ತದೆ..ಎಬ್ಬಿಸಲು ಝಾಗಟೆ ಬಾರಿಸುತ್ತಲೇ  ಇರೋಣ.....!