ಪ್ರಶ್ನೆ

ಪ್ರಶ್ನೆ

ಮಗುವಾಗಿ ಮೊಲೆಯುಂಡು

ಪೂತನಿಯ ಕೊಂದೆ,

ಉಗ್ರರೂಪಿನ ಚಂಡಕೋಪದಿ

ಹಿರಣ್ಯನ ಉದರ ಬಗಿದೆ,

ರಕ್ತಪೀಪಾಸಿಯು ಕ್ರೂರಿಯು

ನೀನೆನಲು, ಲೋಕ ಕಂಟಕರವರು

ದೈವದ್ರೋಹಿಗಳೆಂದೆ.

 

ವಿಗ್ನೇಶ ಜೊತೆ ಮಿತ್ರ ಸುಧೀಂದ್ರ,

ತಮ್ಮಂತೆ ತಾವಿರುಲು ಪಾಡಿನಲಿ,

ಅಪಹರಿಸಿ ಕರೆದೊಯ್ದು, ಅರಿವಿಳಿಸಿ

ಕೊರೊಳೊತ್ತಿ, ಕ್ರೂರತನದಿ ಅವರ

ಎದೆ ಬಗೆದು ಕೊಂದೆ.

ದೈವ ದ್ರೋಹಿಗಳಾ ಅವರು

ಲೋಕ ಕಂಟಕರಾ ?

 

ವಿನಾಕಾರಣ, ಓದುವ ವಿದ್ಯಾರ್ಥಿಗಳನ್ನು ಎಳೆದೊಯ್ದು ಅತ್ಯಂತ ಹೇಯವಾಗಿ ಕೊಂದ ವಿಷಯವನ್ನು ನೆನಪಿಸಿ ಕೊಂಡಾಗಲೆಲ್ಲಾ ಮನಸ್ಸಿಗೆ ನೋವಾಗುತ್ತದೆ. ದೈವ ನಿರ್ಣಯ ಏನೆಂಬುದೆ ತಿಳಿಯುವುದಿಲ್ಲ.

 

Rating
No votes yet

Comments