ಭ್ರಷ್ಟಾಚಾರ ವಿಮುಕ್ತಿ ಅನುಮಾನ
ಬರಹ
ಜನಸಾಮಾನ್ಯರು ತಮ್ಮ ಕಣ್ಮಣಿ ಎಂದು ನಂಬಿಕೊಂಡಿರುವ ಅಣ್ಣಾ ಹೊಸತೊಂದು ರಾಜಕಿಯ ಪಕ್ಷ ಕಟ್ಟುತ್ತಾರಂತೆ! ಸುದ್ದಿ ನಿಜವೇ ಆಗಿದಿದ್ದರೆ, ಜನತೆಯ ಭ್ರಷ್ಟಾಚಾರಮುಕ್ತ ಭಾರತದ ಕನಸು, ಬಾಬ್ರಿ ಮಸೀದಿಯಂತೆಯೇ ನೆಲಸಮವಾಗುವುದು ಖಂಡಿತ!
ಭ್ರಷ್ಟಾಚಾರ ನಿವಾರಣೆ ಎನ್ನುವುದೇ ಹುಸಿನಾಮ - ಮಿಸ್ನೋಮರ್. ರಾಜಕೀಯದ ಬಕಾಸುರರೇ ನಿಜವಾಗಿ ದೇಶವನ್ನು, ದೇಶದ ಸಂಪನ್ಮೂಲವನ್ನು ತಿಂದುಹಾಕುತ್ತಿರುವುದು. ಆ ರಾಜಕೀಯಕ್ಕೇ ಇನ್ನೊಂದು ಹೊಟ್ಟ ಸೇರ್ಪಪಡೆಯೇ? ಅದಕ್ಕಾಗಿ ನಡೆದಿದ್ದೇ, ರಾಷ್ಟ್ರಮಟ್ಟದ ಈ ಜಾಗೃತಿ ಆಂದೋಲನ?! ಪಾರ್ಲಿ್ಲಿಮೆಂಟ್ ಮತ್ತು ರಾಜ್ಯ ಶಾಸಕಾಂಗಗಳು ನಿಜವಾಗಿ ಸತ್ಪ್ರಜೆಗಳ ಸದಾಕಾಂಕ್ಷೆಯನ್ನು ಪ್ರತಿನಿಧಿಸುವಂತೆ ಚುನಾವಣೆ ಸುಧಾರಣೆ ಆಗಬೇಕು. ಅದಕ್ಕಾಗಿ ಒತ್ತಾಯ, ಉಪವಾಸ, ನೈತಿಕ ಒತ್ತಡಗಳನ್ನು, ರಾಜಕಿಯದಿಂದ ಹೊರಗುಳಿದವರು ತರಬಹುದೇ ಹೊರತು ರಾಜಕೀಯದ ಕಳ್ಳ-ಕಳ್ಳರ ಸಂತೆಯ ಸದಸ್ಯರಲ್ಲ!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ