ಭ್ರಷ್ಟಾಚಾರ ವಿಮುಕ್ತಿ ಅನುಮಾನ

ಭ್ರಷ್ಟಾಚಾರ ವಿಮುಕ್ತಿ ಅನುಮಾನ

ಬರಹ

 ಜನಸಾಮಾನ್ಯರು ತಮ್ಮ ಕಣ್ಮಣಿ ಎಂದು ನಂಬಿಕೊಂಡಿರುವ ಅಣ್ಣಾ ಹೊಸತೊಂದು ರಾಜಕಿಯ ಪಕ್ಷ ಕಟ್ಟುತ್ತಾರಂತೆ!  ಸುದ್ದಿ ನಿಜವೇ ಆಗಿದಿದ್ದರೆ, ಜನತೆಯ ಭ್ರಷ್ಟಾಚಾರಮುಕ್ತ ಭಾರತದ ಕನಸು, ಬಾಬ್ರಿ ಮಸೀದಿಯಂತೆಯೇ ನೆಲಸಮವಾಗುವುದು ಖಂಡಿತ!
 ಭ್ರಷ್ಟಾಚಾರ ನಿವಾರಣೆ ಎನ್ನುವುದೇ ಹುಸಿನಾಮ - ಮಿಸ್‌ನೋಮರ್. ರಾಜಕೀಯದ ಬಕಾಸುರರೇ ನಿಜವಾಗಿ ದೇಶವನ್ನು, ದೇಶದ ಸಂಪನ್ಮೂಲವನ್ನು  ತಿಂದುಹಾಕುತ್ತಿರುವುದು. ಆ ರಾಜಕೀಯಕ್ಕೇ ಇನ್ನೊಂದು ಹೊಟ್ಟ ಸೇರ್ಪಪಡೆಯೇ? ಅದಕ್ಕಾಗಿ ನಡೆದಿದ್ದೇ, ರಾಷ್ಟ್ರಮಟ್ಟದ ಈ ಜಾಗೃತಿ ಆಂದೋಲನ?!  ಪಾರ್ಲಿ್ಲಿಮೆಂಟ್ ಮತ್ತು ರಾಜ್ಯ ಶಾಸಕಾಂಗಗಳು ನಿಜವಾಗಿ ಸತ್ಪ್ರಜೆಗಳ ಸದಾಕಾಂಕ್ಷೆಯನ್ನು ಪ್ರತಿನಿಧಿಸುವಂತೆ ಚುನಾವಣೆ ಸುಧಾರಣೆ ಆಗಬೇಕು. ಅದಕ್ಕಾಗಿ ಒತ್ತಾಯ, ಉಪವಾಸ, ನೈತಿಕ ಒತ್ತಡಗಳನ್ನು, ರಾಜಕಿಯದಿಂದ ಹೊರಗುಳಿದವರು ತರಬಹುದೇ ಹೊರತು ರಾಜಕೀಯದ ಕಳ್ಳ-ಕಳ್ಳರ ಸಂತೆಯ ಸದಸ್ಯರಲ್ಲ!
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet