ಜಮಾನಾದ ಜೋಕುಗಳು -೨೩: ಯಾರದು ಶ್ರೇಷ್ಠ ತಾಂತ್ರಿಕತೆ?

ಜಮಾನಾದ ಜೋಕುಗಳು -೨೩: ಯಾರದು ಶ್ರೇಷ್ಠ ತಾಂತ್ರಿಕತೆ?

ಒಂದು ಜಾಗತಿಕ ಕೂಟದಲ್ಲಿ, ಜರ್ಮನಿ, ಜಪಾನ್ ಹಾಗೂ ಭಾರತೀಯ ತಂತ್ರಜ್ಞರು ಭಾಗವಹಿಸಿದ್ದರು. ಅವರೊಳಗೆ ತಮ್ಮ ತಮ್ಮಲ್ಲೆ ಯಾರು ಹೆಚ್ಚು ಎಂಬ ಚರ್ಚೆ ಪ್ರಾರಂಭವಾಯಿತು. ಆಗ ಜರ್ಮನಿಯವನು ಹೇಳೋದಕ್ಕೆ ಷುರು ಮಾಡಿದ; ನಮ್ಮ ದೇಶದಲ್ಲಿ ತಂತ್ರಜ್ಞಾನ ಎಷ್ಟು ಅಭಿವೃದ್ಧಿಯಾಗಿದೆಯೆಂದರೆ, ಅಪಘಾತವೊಂದರಲ್ಲಿ ವ್ಯಕ್ತಿಯೊಬ್ಬ ಕಾಲು ಕಳೆದುಕೊಂಡ. ಅವನಿಗೆ ಕೃತಕ ಕಾಲು ಜೋಡಿಸಲಾಯಿತು, ಈಗ ಅವನೊಬ್ಬ ಪ್ರಖ್ಯಾತ ಫುಟ್ಬಾಲ್ ಆಟಗಾರನಾಗಿದ್ದಾನೆ! ಆಗ ಜಪಾನಿನವನೆಂದ, “ಅದೇನು ಮಹಾ! ನಮ್ಮಲ್ಲಿ ಒಬ್ಬಾತ ಯಂತ್ರದೊಂದಿಗೆ ಕೆಲಸ ಮಾಡುತ್ತಿದ್ದಾಗ ಅವನ ಒಂದು ಕೈ ಕತ್ತರಿಸಿ ಹೋಯಿತು, ಅವನಿಗೆ ಒಂದು ಕೃತಕ ಕೈ ಹಾಕಲಾಯಿತು, ಈಗ ಅವನು ಆಪರೇಷನ್‍ಗಳನ್ನು ಮಾಡುವ ಸರ್ಜನ್ ಆಗಿ ನಮ್ಮ ದೇಶದಲ್ಲಿಯೇ ನಂ. ೧ ಸ್ಥಾನದಲ್ಲಿ ಇದ್ದಾನೆ”. ಈಗ ಮಾತನಾಡುವ ಪಾಳಿ ನಮ್ಮ ಭಾರತೀಯನದಾಗಿತ್ತು, ಆಗ ಅವನೆಂದ, “ಓ ಅಷ್ಟೇನಾ...!ನಮ್ಮ ದೇಶದಲ್ಲಿ ಒಬ್ಬನಿಗೆ ಅಕ್ಸಿಡೆಂಟಿನಲ್ಲಿ ತಲೆಚಿಪ್ಪು ಒಡೆದು, ಮೆದಳು ಹೊರಗೆ ಬಂದು ಹಾಳಾಗಿತ್ತು, ಅವನಿಗೆ ಮೆದುಳಿಲ್ಲದಯೆ ತಲೆಸರಿಮಾಡಿದ್ರು, ಈಗ ಅವನು ನಮ್ಮ ದೇಶದ ವಿದ್ಯಾಮಂತ್ರಿ ಆಗಿದ್ದಾನೆ.” "ಆ...ಹ್ಞ್! ಹೌ...ದಾ..!" ಎಂದು ಇತರ ದೇಶದ ತಂತ್ರಜ್ಞರು ತೆರೆದ ಬಾಯಿ ಮುಚ್ಚಲಿಲ್ಲ. 

 
Rating
No votes yet

Comments

Submitted by sathishnasa Tue, 02/26/2013 - 11:20

ಹಾಸ್ಯವಾದರೂ ಭಾರತದ ಮಟ್ಟಿಗೆ ಇದು ಸತ್ಯವೇ....!! ನಿಮ್ಮ ಜೋಕ್ ಓದಿದ ಮೇಲೆ ಇನ್ನೊಂದು ಇದೇ ತರಹದ ಜೋಕ್ ಜ್ಞಾಪಕಕ್ಕೆ ಬಂತು ಅಮೇರಿಕ, ಜಪಾನ್ ಮತ್ತು ಭಾರತದ ಮೂವರು ಒಂದು ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ಹೀಗೆ ಯಾರು ಬುದ್ದಿವಂತರು ಎಂಬ ಬಗ್ಗೆ ಚರ್ಚೆ ಶುರುವಾಯಿತು ಆಗ ಅಮೇರಿಕದವನು ಜೇಬಿನಿಂದ ಒಂದು ಕಬ್ಬಿಣದ ತುಂಡೊಂದನ್ನು ತೆಗೆದು ಅದರಲ್ಲಿ ಕೂದಲೆಳೆಯ ಒಂದು ತುಂಡು ಮಾಡಿ ತೋರಿಸುತ್ತ ಇದಕ್ಕೆ ಏನಾದರೂ ಮಾಡಲು ಸಾಧ್ಯವೇ ಎಂದ ಜಪಾನ್ ನವನು ಅದನ್ನು ಪಡೆದು ಅದಕ್ಕೆ ಒಂದು ರಂದ್ರ ಮಾಡಿದ ಅಲ್ಲಿಯವರೆಗೆ ನೋಡುತ್ತ ಸುಮ್ಮನೆ ಕುಳಿತಿದ್ದ ಭಾರತದವನು ಆ ತುಂಡನ್ನು ಪಡೆದು ಜೇಬಿನಿಂದ ಒಂದು ಸೀಲ್ ತೆಗೆದು ಅದರ ಮೇಲೆ ಮೇಡ್ ಇನ್ ಇಂಡಿಯಾ ಅಂತ ಸೀಲ್ ಹಾಕಿ ಕೊಟ್ಟ. ಧನ್ಯವಾದಗಳೊಂದಿಗೆ ......ಸತೀಶ್

Submitted by makara Tue, 02/26/2013 - 14:15

In reply to by sathishnasa

ಸತೀಶ್ ಅವರೇ,
ನಿಮ್ಮ ಜೋಕೂ ಚೆನ್ನಾಗಿದೆ. ರಂದ್ರ ಮಾಡುವುದೇ ಕಷ್ಟವಾದಾಗ ಅದರ ಮೇಲೆ ’ಮೇಡ್ ಇನ್ ಇಂಡಿಯಾ’ ಅಂತಾ ಅಚ್ಚು ಹಾಕಬೇಕಾದರೆ ನಾವು ಭಾರತೀಯರು ನಿಜಕ್ಕೂ ಶ್ರೇಷ್ಠರಲ್ಲವೇ?

Submitted by kavinagaraj Tue, 02/26/2013 - 11:35

:))
ಇದನ್ನು ಓದಿ ನೆನಪಾದ ಜೋಕು:
ಗುಂಡ: ನಮ್ಮಪ್ಪ ಸಾಯುವಾಗ 10 ಮನೆ, 50 ಎಕರೆ ತೋಟ ಬಿಟ್ಟುಹೋಗಿದ್ದಾನೆ.
ಭಂಡ: ಅಷ್ಟೇನಾ? ನಮ್ಮಪ್ಪ ಪ್ರಪಂಚಾನೇ ಬಿಟ್ಟುಹೋಗಿದಾನೆ! :)

Submitted by makara Tue, 02/26/2013 - 14:17

In reply to by kavinagaraj

ಭಂಢನ ಅಪ್ಪ ನಿಜಕ್ಕೂ ಮಹಾನ್ ಶ್ರೀಮಂತ ಬಿಡಿ :)) ಒಳ್ಳೆಯ ಜೋಕ್ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಕವಿಗಳೆ.

Submitted by swara kamath Tue, 02/26/2013 - 12:45

ಶ್ರೀಧರ್ ಬಂಡ್ರಿ ಅವರೆ, ತಮ್ಮ ಜಮಾನದ ಜೋಕುಗಳ ಸರಣಿ ಮುಂದುವರೆಸಿದ್ದಕ್ಕೆ ಧನ್ಯವಾದಗಳು. ಕೊಂಚ ಮನಸ್ಸನ್ನು ಮುದಗೊಳಿಸಿ ಕೊಂಡು ಇತರ ಸಂಪದ ಲೇಖನಗಳನ್ನು ಓದುತ್ತಾ ಹೋಗಬಹುದು. ವಂದನೆಗಳು.

Submitted by hariharapurasridhar Tue, 02/26/2013 - 14:59

In reply to by makara

ನಮ್ಮಂತ ನಿಮ್ಮಂತ ಜನ ಇದ್ದೀವಿ. ಆದರೆ ನಮ್ಮನ್ನಾಳುವವರು? ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಾರದಿದ್ದಿದ್ದರೆ ಏನಾಗುತ್ತಿತ್ತು? ಅಂತಾ ಹಲವು ಭಾರಿ ಯೋಚಿಸಿದ್ದಿದೆ. ಮಹಾರಾಜರ ಕಾಲದಲ್ಲಿ ರಾಜ್ಯಕ್ಕೆ ಒಬ್ಬ ರಾಜ. ಈಗ ಒಂದು ರಾಜ್ಯದಲ್ಲಿ ನೂರಾರು ಮಹಾರಾಜರು[ಅವರನ್ನೂ ಮೀರಿಸಿದವರು] ದೇಶವನ್ನು ಹರಿದು ಹಂಚಿಕೊಂಡು ಬಿಟ್ಟಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಸಂಪತ್ತನ್ನು ಒಬ್ಬ ರಾಜಕಾರಣಿ ಹೇಗೆ ಮಾಡಿದ? ಅಂತಾ ಕೇಳೋಕೇ ಯಾರೂ ಇಲ್ಲ. ಐವತ್ತು ರೂಪಾಯಿ ಲಂಚ ತೆಗೆದುಕೊಳ್ಳುತ್ತಿದ್ದನೆಂದು ಲೋಕಾಯುಕ್ತರು ಹಿಡಿದು ಪೇಪರ್ ನಲ್ಲಿ ಪೋಸ್ ಕೊಡುತ್ತಾರೆ!! ನಾಚಿಕೆ ಪಡಬೇಕೋ, ,ಸಂಕಟ ಪಡಬೇಕೋ,ಅರ್ಥವಾಗುತ್ತಿಲ್ಲ. ಇಲ್ಲೆಲ್ಲಾ ನಾವು ಬರೆದದ್ದೇ ಬರೆದದ್ದು!!

Submitted by makara Wed, 02/27/2013 - 08:03

In reply to by hariharapurasridhar

ನಮ್ಮ ವ್ಯವಸ್ಥೆ ಸಣ್ಣ ಪುಟ್ಟ ಮೀನುಗಳನ್ನು ಬಲೆ ಬೀಸಿ ಹಿಡಿಯುವುದಕ್ಕೆ ಸಮರ್ಥವಾಗಿದೆ ಆದರೆ ದೊಡ್ಡ ದೊಡ್ಡ ತಿಮಿಂಗಲಗಳನ್ನಲ್ಲ. ತಿಮಿಂಗಲಗಳನ್ನು ಹಿಡಿಯುವ ಆಲೋಚನೆಯನ್ನು ನಾವು-ನೀವೆಲ್ಲಾ ಖಂಡಿತವಾಗಿ ಆಲೋಚಿಸಬೇಕು ಮತ್ತು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕು; ಅಲ್ಲಿಯವರೆಗೆ ಈ ವ್ಯವಸ್ಥೆ ತಪ್ಪಿದ್ದಲ್ಲ. ಮರು ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಧರ್ ಸರ್.

Submitted by makara Wed, 02/27/2013 - 08:06

In reply to by Shobha Kaduvalli

ಶೋಭಾ ಅವರೆ,
ಬಹುಶಃ ಕವಿ ನಾಗರಾಜ್ ಅವರ ಜೋಕಿಗೆ ನೀವು ಪ್ರತಿಕ್ರಿಯಿಸಿರಬಹುದೆನಿಸುತ್ತದೆ. ಖಂಡಿತವಾಗಿಯೂ ಪ್ರಪಂಚವನ್ನೇ ಬಿಟ್ಟು ಹೋಗುವುದು ಅದ್ಭುತ ಕಲ್ಪನೆ.

Submitted by swara kamath Wed, 02/27/2013 - 11:54

In reply to by Shobha Kaduvalli

ಶೋಭಾ ಮೆಡಂ ಅವರೆ, ನಾನು ಸಹಜ ಮನೋಭಾವದಿಂದ ಪ್ರತಿಕ್ರಿಯಿಸಿದ್ದೇನೆ .ಯಾವ ವ್ಯಂಗ್ಯತೆಯಿಂದ ಪ್ರತಿಕ್ರಿಯಿಸಿದ್ದಲ್ಲಾ.ತಮಗೆ ನನ್ನ ಪ್ರತಿಕ್ರಿಯೆ ಜೋಕಾಗಿ ಕಂಡದ್ದರ ಕುರಿತು ಆಶ್ಚರ್ಯ ವಾಗುತ್ತದೆ. ಶ್ರೀಯುತ ಬಂಡ್ರಿ ಅವರ ಜಮಾನಾದ ಜೋಕುಗಳ ಸರಣಿ , ಕವಿನಾಗರಾಜರ ಮಂಕ ಮೂಢ,ಮುಠ್ಠಾಳರ ಸರಣಿ, ಇನ್ನೂ ಕೆಲವು ಸಂಪದಿಗರ ಲಘು ಹಾಸ್ಯದಿಂದ ಕೂಡಿದ ಲೇಖನ ಗಳು ಮನಸ್ಸಿಗೆ ಸಾಕಷ್ಟು ಸಂತೋಷ ಕೊಡುತ್ತವೆ. ಮುಂಜಾನೆ ದಿನ ಪತ್ರಿಕೆ ಓದುವ ಮುನ್ನ ಒಂದು ಗುಟುಕು ಚಹ ಸವಿದ ಹಾಗೆ ಸಂಪದದ ಕೆಲವು ವಿಚಾರ ಭರಿತ ಲೇಖನ ಗಳನ್ನು ಓದುವ ಮುನ್ನ ಇಂಥಹ ಕೆಲವು ಕೆಲ ಲೇಖನಗಳನ್ನೋದುವುದು ನನ್ನ ಹವ್ಯಾಸ......ವಂದನೆಗಳು

Submitted by Shobha Kaduvalli Wed, 02/27/2013 - 21:57

In reply to by swara kamath

ಕಾಮತ್ ರವರೇ, ನೀವು ವ್ಯಂಗ್ಯವಾಡಿದ್ದೀರಿ ಎಂಬುದು ನನ್ನ ಅಭಿಪ್ರಾಯವಲ್ಲ. ನನ್ನಲ್ಲೂ ಹಾಸ್ಯವನ್ನು ಸವಿಯುವ ಮನಸ್ಸು ಇದೆ ಮತ್ತು ನಾನೂ ಸಹ ಸಹಜವಾಗಿ ಪ್ರತಿಕ್ರಿಯಿಸಿದ್ದೇನೆ. ನನ್ನ ಪ್ರತಿಕ್ರಿಯೆ ನಿಮ್ಮ ಮನಸ್ಸನ್ನು ನೋಯಿಸಿದ್ದರೆ ಕ್ಷಮೆ ಇರಲಿ.

Submitted by swara kamath Thu, 02/28/2013 - 13:35

In reply to by Shobha Kaduvalli

ಶೋಭಾ ಅವರೆ, ಕ್ಷಮೆಯ ಮಾತೇಕೆ? ನಮ್ಮ ನಮ್ಮಲ್ಲಿ ಉಂಟಾದ ಗ್ರಹಿಕೆ ದೋಷವಷ್ಟೆ . ಮೆಡಂ, ಎಂದಿನಂತೆ ತಮ್ಮ ಲೇಖನಗಳ ನಿರೀಕ್ಷೆಯಲ್ಲಿ......ವಂದನೆಗಳು.......ರಮೇಶ ಕಾಮತ್

Submitted by makara Wed, 02/27/2013 - 20:54

In reply to by Shobha Kaduvalli

ಹೋಗಲಿ ಬಿಡಿ ಶೋಭಾ ಅವರೆ,
ಎಲ್ಲರಿಗೆ ಎಲ್ಲವೂ ಇಷ್ಟವಾಗುವುದಿಲ್ಲ ಆದರೆ ಸಂಪದದಲ್ಲಿನ ಅನೇಕ ಹಿರಿಯ ಮತ್ತು ನಮ್ಮ ಜಮಾನಾಸ ಜನಗಳಿಗೆ ಒಂದು ನಿಮಿಷ ಮನಸ್ಸಿಗೆ ಈ ಸರಣಿ ಮುದ ನೀಡುತ್ತಿದೆ ಎನ್ನುವುದೇ ಸಂತಸದ ಸಂಗತಿ. ಇದಕ್ಕೆ ಕಾಮತ್ ಸರ್ ಅವರು ಕೊಟ್ಟಿರುವ ಪೂರಕ ಪ್ರತಿಕ್ರಿಯೆ ಸಾಕು. :)