ನಿಘಂಟು ಬಿಡುಗಡೆ

ನಿಘಂಟು ಬಿಡುಗಡೆ

ಜಿ.ವೆಂಕಟಸುಬ್ಬಯ್ಯನವರ 'ಇಗೋ ಕನ್ನಡ' ನಿಘಂಟು ಮತ್ತು ಟಿ.ಆರ್.ಅನಂತರಾಮು ಮತ್ತು ಸಿ.ಆರ್.ಕೃಷ್ಣರಾವ್‍ ಸಂಪಾದಿಸಿರುವ ವಿಜ್ಞಾನ-ತಂತ್ರಜ್ಞಾನ ನಿಘಂಟು ಜುಲೈ 13ರ ಸಂಜೆ ನಯನ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಡಾ.ಚಂದ್ರಶೇಖರ ಕಂಬಾರರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಎಂ.ಹೆಚ್‍.ಕೃಷ್ಣಯ್ಯನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಕನ್ನಡದ ಅಪರೂಪದ ಈ ನಿಘಂಟು ಬಿಡುಗಡೆ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಿ.