ಶ್ರದ್ಧಾಂಜಲಿ

ಶ್ರದ್ಧಾಂಜಲಿ

ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದೂಷಿ ಶ್ರೀಮತಿ ರಂಜನಿ ಹೆಬ್ಬಾರರು ಜೂನ್‍ 9ರಂದು ದೈವಾಧೀನರಾದರು. ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಅನನ್ಯದವರು ವಿಶೇಷ ಕಾರ್ಯಕ್ರಮವನ್ನು ಜುಲೈ 13 ಶನಿವಾರದಂದು ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮವು ಮಲ್ಲೇಶ್ವರಂನಲ್ಲಿರುವ ಅನನ್ಯ ಸಭಾಂಗಣದಲ್ಲಿ ಸಂಜೆ 6ಕ್ಕೆ ಆರಂಭವಾಗಲಿದೆ. ಕಲಾವಿದರಾದ ಅಮೃತ ವೆಂಕಟೇಶ್‍, ಪ್ರಿಯಾಂಕ ಸಿ.ಪ್ರಕಾಶ್, ಮೇಘನ ಮೂರ್ತಿ, ಪವನ್‍, ಪವನ್‍ದೀಪ್‍ ಸಿ.ಕೆ, ಕೀರ್ತನ ಭಟ್‍ ಮತ್ತು ಕೃತಿ ಭಟ್‍ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.