ನೀ ಬಾರದಿರುವೆಯಾ,ಓ ಕೋಪವೆ,?

ನೀ ಬಾರದಿರುವೆಯಾ,ಓ ಕೋಪವೆ,?

                   ನಮ್ಮ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಬಡ ಕುಟುಂಬ.ಆ ಕುಟುಂಬದಲ್ಲಿ ಒಟ್ಟು ನಾಲ್ಕು ಸದಸ್ಯರುಗಳು. ಮನೆಯ ಯಜಮಾನ ಯಲ್ಲಪ್ಪ,ಅವನ ಪತ್ನಿ ಮಲ್ಲಮ್ಮ, ಒಬ್ಬ ಮಗ ಅಜೇಯ,ಒಬ್ಬಳು ಮಗಳು ರಾಣಿ. ಕುಟುಂಬ ಮೂಲ ಕಸಬು ವ್ಯವಸಾಯವಾಗಿತ್ತು,ವರ್ಷ ಪೂರ್ತಿ ಮಳೆಯನ್ನು ನಂಬಿಕೊಂಡು ಬದುಕನ್ನು ಸಾಗಿಸುತ್ತಾಯಿದ್ದರು.ಕಡು ಬಡತನ ನಮ್ಮ ಮಕ್ಕಳಾದರು  ಚೆನ್ನಾಗಿ ಓದಿ ಒಳ್ಳೆಯ ಉದೋಗ್ಯಕ್ಕೆ ಸೇರಿ ಈ ಬಡತನದಿಂದ ಮುಕ್ತಿಯನ್ನು ನೀಡುತ್ತಾರೆ ಅಂತ ಕನಸು ಕಾಣುತ್ತಾ ಬದಕುತ್ತಾಯಿದ್ದರು.
 

              ಅಜೇಯು ಶಾಲೆಯಲ್ಲಿ ಓದಿನಲ್ಲಿ, ಆಟದಲ್ಲಿ  ಎಲ್ಲದರಲ್ಲೂ  ಮುಂದೆಯಿದ್ದನು.ಅವರ ಆಸೆ ಅಂತೆಯೇ ಅಜೇಯು  ಚೆನ್ನಾಗಿ ಓದಿ  ಮೆಟ್ರಿಕ್ ಪರೀಕ್ಷೆಯಲ್ಲಿ   ಡಿಸ್ಟಿಂಕ್ಶನ್‍ನಲ್ಲಿ  (Distinction)  ಉತ್ತಿರ್ಣವಾಗುತ್ತಾನೆ. ಮಗನ ಉತ್ತಮವಾದ ಫಲಿತಾಂಶದಿಂದ ತುಂಬಾ ಸಂತೋಷವಾದ ಪಾಲಕರು ಮುಂದಿನ ಪಿ.ಯು.ಸಿ  ವಿದ್ಯಾಭ್ಯಾಸಕ್ಕೆ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಸೇರಿಸಬೇಕಂತ ಯೋಚಿಸಿದರು. ಜಿಲ್ಲೆಯ ಪ್ರತಿಷ್ಠಿತ ಕಾಲೇಜು ಅಂದ ಮೇಲೆ  ಸಿಕ್ಕಾಪಟ್ಟೆ ಶುಲ್ಕವಿರುವದು   ಸಾಮಾನ್ಯ, ಅಷ್ಟೊಂದು ದುಡ್ಡನ್ನು ಹೇಗೆ ಹೊಂದಿಸುವದು ಅಂತ ಪಾಲಕರು ಯೋಚಿಸಲಾರಂಭಿಸಿದರು.

                ಯಲ್ಲಪ್ಪವು ಹಾಗೆ ಹೀಗೆ ಸಾಲವನ್ನು ಮಾಡಿ ಹಣವನ್ನು ಹೊಂದಿಸಿ ಆ ಕಾಲೇಜಿಗೆ ಅಜೇಯಗೆ ಸೇರಿಸಿದನ್ನು.ಹಳ್ಳಿಯಲ್ಲಿ  ಬೆಳೆದ ಅಜೇಯಗೆ ನಗರದ ವಾತಾವರಣ ಹೊಸದಾಗಿತ್ತು.ಕಾಲೇಜಿನ ಮೊದಲ ದಿನ ಅಜೇಯ ಮನಸ್ಸಿನಲ್ಲಿ  ಏನೋ ಒಂದು ತರಹದ ಕಳವಳ, ಭಯ,ನಗರದ ಕಾಲೇಜಿನ ಹುಡುಗರು, ಹುಡುಗಿಯರು ಅವರ ಜೊತೆ ಹೇಗೆ ಸ್ನೇಹ ಬೆಳೆಯಸೊದ್ದು ಅಂತ ಯೋಚಿಸುತ್ತಾ ಕಾಲೇಜಿಗೆ ಹೋದನು. ಅಲ್ಲಿಯ ಹುಡುಗರ ಜೊತೆ ಮಾತನಾಡಿಸಿದ ಮೇಲೆ ಅವನ ಭಯ,ಆತಂಕ ಎಲ್ಲಾ ಮಾಯವಾಯಿತು. ದಿನ ಕಳೆದಂತೆ ಅವನು ನಗರ ಜೀವನ ಶೈಲಿಗೆ ಹೊಂದಿಕೊಂಡನು.ನೋಡು ನೋಡುತ್ತಲೇ ಮೊದಲ ಪಿ.ಯು.ಸಿ ಪರೀಕ್ಷೆ ಬಂತು.  ಅಜೇಯು ಚೆನ್ನಾಗಿ ಓದಿ, ಉತ್ತಮವಾದ ಅಂಕಗಳಿಂದ ಉತ್ತೀರ್ಣರಾದನು. 
                 ಅಜೇಯು ಡಾಕ್ಟರ್  ಆಗಬೇಕಂತ ಆಸೆಯಿಂದ ದ್ವಿತೀಯ  ಪಿ.ಯು.ಸಿ ವರ್ಷದಲ್ಲಿ ಇನ್ನೂ ಹೆಚ್ಚು ಓದಲು ಪ್ರಾರಂಭಿಸಿದನು.ಅವನ ಆಸೆಯಂತೆ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ೯೦% ಶೇಕಡಾವಾರು ಅಂಕಗಳನ್ನು ಪಡೆದು  ಉತ್ತೀರ್ಣರಾದನು.ಸಿ.ಇ.ಟಿ ಯಲ್ಲಿ ಉತ್ತಮ ರಾಂಕ್ಯನ್ನು ಪಡೆದು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್(MBBS) ಸೀಟ್ ಕೂಡ ಪಡೆದನು. ಈ ಸುದ್ದಿ ತಿಳಿದ ತಕ್ಷಣವೆ ಅಜೇಯ ಮನೆಯಲ್ಲಿ ಹಬ್ಬದ ವಾತವರಣ,ಊರ ತುಂಬಾ ಇವನದೆ ಚರ್ಚೆ, ಪಾಲಕರ ಸಂತೋಷಕ್ಕೆ ಮಿತಿಯೆ ಇರಲಿಲ್ಲ.  ಅಜೇಯು ಸರಕಾರಿ ಸೀಟು ಪಡೆದ್ದಿದರಿಂದ ಬ್ಯಾಂಕುಗಳು ಶಿಕ್ಷಣ ಸಾಲವನ್ನು ನೀಡಲು ನಾಮುಂದು ನೀಮುಂದು ಅಂತ ಮುಂದೆಬಂದವು. ಅಜೇಯು ಬ್ಯಾಂಕಿನಿಂದ ಸಾಲವನ್ನು ಪಡೆದು,ತನ್ನ ವೈದ್ಯಕೀಯ ವಿದ್ಯಾಭ್ಯಾಸವನ್ನು ಶುರುಮಾಡಿದನು.

             ವೈದ್ಯಕೀಯ ಕಾಲೇಜಿನಲ್ಲೂ  ಉತ್ತಮ  ಓದಿನಿಂದ ಕಾಲೇಜಿನ ಪ್ರಾಧ್ಯಾಪಕರಿಗೆಲ್ಲರಿಗೂ ಮೆಚ್ಚಿನ ಶಿಷ್ಯನಾದನು. ಓದಿನಲ್ಲಿ ಕಾಲೇಜಿಗೆ ಪ್ರಥಮನಾದ್ದನು.ಎಂ.ಬಿ.ಬಿ.ಎಸ್ ಡಿಗ್ರಿಯ ನಾಲ್ಕು ವರ್ಷಗಳಲ್ಲಿಯೂ ಕಾಲೇಜಿಗೆ ಪ್ರಥಮನಾಗಿ ಉತ್ತೀರ್ಣರಾದನು.ಇನ್ನೂ ಕಡೆಯ ವರ್ಷದ ತರಬೇತಿಯನ್ನು ಕೂಡ  ಉತ್ತಮವಾದ ರೀತಿಯಲ್ಲಿ ಪೂರ್ಣಗೊಳಿಸಿ,ತಂದೆ,ತಾಯಿಯನ್ನು ಭೇಟಿ ಮಾಡಲು  ತನ್ನ ಹಳ್ಳಿಗೆ ಹೊರಟನು. ಹಾಗೆ ಹಳ್ಳಿಯಲ್ಲಿ ಕೆಲವು ದಿನಗಳನ್ನು ಕಳೆದ ನಂತರ,ಒಂದು ದಿನ ದಿನಪತ್ರಿಕೆಯನ್ನು ಓದುತ್ತಿದ್ದಾಗ ಕೇಂದ್ರ ಸರಕಾರದ   ಉದೋಗ್ಯದ ಜಾಹೀರಾತು ನೋಡಿ ಅದಕ್ಕೆ ಅರ್ಜಿಯನ್ನು ಹಾಕಿದನು. 
                    ಒಂದು ತಿಂಗಳ ನಂತರ ಸಂದರ್ಶನವು ಜರುಗಿತು, ಅದರಲ್ಲಿ ಅಜೇಯು ಚೆನ್ನಾಗಿ ಮಾಡಿದ್ದನ್ನು. ಅಜೇಯಗೆ ತುಂಬಾ ವಿಶ್ವಾಸವಿತ್ತು,ತಾನು ಆಯ್ಕೆಯಾಗಬಹವುದು ಅಂತ. ಅವನ ವಿಶ್ವಾಸದಂತೆಯೆ ಕೆಲವು ದಿನಗಳ ನಂತರ ಸರಕಾರದಿಂದ ಅಂಚೆಯ ಮುಖಾಂತರ ಅಜೇಯ ಮನೆಗೆ ನೇಮಕಾತಿ ಆದೇಶವು ಬಂತು. ಅದನ್ನು ಕೇಳಿದ ಕ್ಷಣವೇ ಅವರ ತಂದೆ ತಾಯಿಯ ಕಣ್ಣಿನಲ್ಲಿ ಸಂತೋಷದ ಹನಿಗಳು ತುಂಬಿ ಹೊರಬರಲು ತೊಡಗಿದವು.ಅಜೇಯ ಮುಖದಲ್ಲಿ ತಾನು ಅಂದು ಕೊಂಡಿದ್ದು ಸಾಧಿಸಿದ ಖುಷಿ ತುಂಬಿತ್ತು. ಊರಿನ ತುಂಬಾ ಈ ಸುದ್ದಿ ಹರಡಿದ ಕ್ಷಣವೇ ಅಜೇಯಗೆ ಹಾಗೂ ಅವನ ಪಾಲಕರಿಗೆ ಶುಭಾಶಯಗಳ ಒಂದು ಮಹಾಪೋರವೆ ಹರಿದು ಬರತೊಡಗಿದವು.

                  ತಮ್ಮ ಊರ ಹುಡುಗನ ಸಾಧನೆಯನ್ನು ಕಂಡು ಎಲ್ಲರಿಗೂ ಹೆಮ್ಮೆಯಾಯಿತ್ತು.ಅಜೇಯಗೆ ದೆಹಲಿಯ ಕೇಂದ್ರ ಸರಕಾರದ ಆಸ್ಪತ್ರೆಯಲ್ಲಿ ನೇಮಕಾತಿ ನೀಡಿದರು.  ಬೆಂಗಳೂರಿನಿಂದ ದೆಹಲಿಗೆ ಹೊರಡುವ ರೈಲ್ವಿನ ಟಿಕೆಟ್ ಯನ್ನು ತೆಗೆಸಿದನು.ಆದರೆ   ಕನರ್ಪಾಮ್ (Confirm)  ಟಿಕೆಟ್ ಸಿಗಲಿಲ್ಲ, ಆರ್.ಏ.ಸಿ (RAC) ಟಿಕೆಟ್ ಸಿಕ್ಕಿತು. ಎರಡು ದಿನಗಳ ನಂತರ ಹೊರಡಬೇಕಿತ್ತು.ಹೋರಡುವ ಮುನ್ನ  ತಮ್ಮ ಮನೆ ದೇವರ ದರ್ಶನ ತೆಗೆದುಕೊಂಡು ಬರಬೇಕಂತ ಯೋಚಿಸಿದನು. ಮರು ದಿನ ಬೆಳಗ್ಗೆ ಬೇಗನೆ   ಮನೆ ದೇವರ ದರ್ಶನಕ್ಕೆ ಹೊರಟಿದನು,ಸಾಯಂಕಾಲದ ಹೊತ್ತಿಗೆ ದರ್ಶನವನ್ನು ಪಡೆದು ಮತ್ತೆ ತಮ್ಮ ಹಳ್ಳಿಗೆ ವಾಪಸನಾದನು.ಮರು ದಿನ ರಾತ್ರಿ ೯ ಗಂಟೆಗೆ ಬೆಂಗಳೂರಿನಿಂದ ಅವನ  ರೈಲುಗಾಡಿಯಿತ್ತು.ಬೆಳಗ್ಗೆ ಬೇಗ ಎದ್ದು ಊರ ದೇವರ ದರ್ಶನವನ್ನು ಪಡೆದನು.ತನ್ನ ಬಟ್ಟೆ, ಸಾಮಾನುಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡನು.ತಂದೆ,ತಾಯಿಯ ಆರ್ಶಿವಾದವನ್ನು ಪಡೆದು,ತಂಗಿಗೆ  ನೀನು  ಚೆನ್ನಾಗಿ ಓದು ,ಅಪ್ಪ ಅಮ್ಮನಾ ಚೆನ್ನಾಗಿ ನೋಡಿಕೊಳ್ಳು, ಕೆಲವು ತಿಂಗಳ ನಂತರ  ನಾನು ದೆಹಲಿ ಅಲ್ಲಿಯೇ  ಮನೆ ಮಾಡಿ ನಿಮ್ಮಲ್ಲರನ್ನು ಕರೆಹಿಸಿ ಕೊಳ್ಳುತ್ತಿನಿ.ನಾನು ಹೋಗಿ ಬರುತ್ತಿನಿ ತಂಗಿ ರಾಣಿ ಅಂತ ಹೇಳಿ ಹೊರಟನು ಬೆಂಗಳೂರಿನ ಕಡೆಗೆ.

         

                   ಅವನ ಊರು ಬೆಂಗಳೂರಿನಿಂದ ಸುಮಾರು ೧೧೦ ಕಿಲೋಮೀಟರ್  ದೂರವಿದೆ.ರಾತ್ರಿ ಸುಮಾರು ೮.೩೦ ಘಂಟೆಗೆ ಬೆಂಗಳೂರಿನ ರೈಲ್ವೆ ನಿಲ್ದಾಣವನ್ನು ತಲುಪಿದನು.

              ಈ ಕತೆಯಲ್ಲಿ ಬರುವ ಇನೊಂದು ಪಾತ್ರ ಸುರೇಶ, ಇವರಿಗೆ ಇಬ್ಬರೂ ಮಕ್ಕಳು, ಪತ್ನಿ. ಪತ್ನಿಯ ಹೆಸರು  ಸುನೀತಾ,ಒಂದು ಆರು ವರ್ಷದ ಗಂಡು ರಾಹುಲ್, ಇನೊಂದು ನಾಲ್ಕು ವರ್ಷದ ಹೆಣ್ಣು ಮಗು ಅಂಜಲಿ.ಸುರೇಶನ್ನು ಬೆಂಗಳೂರಿನ ಖಾಸಿಗಿ ಕಂಪನಿಯೊಂದರಲ್ಲಿ  ಸಾಪ್ಟವೇರ ಇಂಜಿನಿಯರರಾಗಿ ಕೆಲಸ ಮಾಡುತ್ತಿದ್ದನು.ತನ್ನ ಕುಟುಂಬದ ಜೊತೆಯಲ್ಲಿ ಬೆಂಗಳೂರಲ್ಲಿಯೆ ವಾಸವಾಗಿದ್ದನು.ಒಳ್ಳೆಯ ಕೆಲಸ, ಕೈತುಂಬ ಸಂಬಳ, ಮಕ್ಕಳು, ಪತ್ನಿಯ ಜೊತೆ ಸುಖಕರ ಜೀವನ ನಡೆಯುತ್ತಾಯಿತ್ತು.

                ಸುರೇಶನ ಉತ್ತಮವಾದ ಕೆಲಸವನ್ನು ಕಂಡು ಕಂಪನಿಯವರು  ತಂಡದ ಮುಖ್ಯಸ್ಥನಾಗಿ (Team leader)  ಪದೋನ್ನತಿ ನೀಡಿದರು.ಪದೋನ್ನತಿ ಆದ್ದ ಮೇಲೆ ಸಂಬಳವು ಹೆಚ್ಚಾಯಿತು, ಅದರ ಜೊತೆಯಲ್ಲಿಯೆ ಒತ್ತಡವು ಹೆಚ್ಚಾಯಿತು.ಸುರೇಶನಿಗೆ ಪ್ರತಿ ತಿಂಗಳು ಮನೆಯ ಬಾಡಿಗೆ ನೀಡಿ ಸಾಕ್ಕಾಗಿತ್ತು.ತಾನು ಒಂದು ಸ್ವಂತ ಮನೆಯನ್ನು ಖರೀದಿ ಮಾಡಬೇಕು ಅಂತ ಯೋಚಿಸಿದ. ಬ್ಯಾಂಕಿನಿಂದ ಸಾಲವನ್ನು  ತೆಗೆದುಕೊಂಡು  ಬೆಂಗಳೂರಿನಲ್ಲಿ ಒಂದು ಅರ್ಪಾರಟಮೆಂಟ (Apartment) ಒಂದನ್ನು ಖರೀದಿಸಿದ್ದನು.ಮನೆಯ ಗೃಹ ಪ್ರವೇಶ ಮಾಡಲು ಒಳ್ಳೆಯ ದಿನವನ್ನು ತೆಗೆಸಿದ್ದನು.ಅಷ್ಟರಲ್ಲಿಯೇ ಕಂಪನಿಯ ಒಂದು ಮುಖ್ಯವಾದ ಕೆಲಸದ ಮೇರಿಗೆ ದೆಹಲಿಗೆ ಹೋಗಬೇಕಾಗಿ ಬಂತು.ಅನಿರ್ವಾಯ ಕಂಪನಿಯ ಮುಖ್ಯವಾದ  ಕೆಲಸ ಬೇರೆ  ಆಗೋದಿಲ್ಲ ಅಂಥ ಹೇಗೆ ಹೇಳೋದು, ಸುರೇಶನಿಗೆ ಏನು ದಾರಿ ತೋಚದಂತಾಯಿತ್ತು.ಸುರೇಶನು ಮನಸ್ಸಿನಲ್ಲಿ ಹಿಡಿ ಶಾಪವನ್ನೂ ಹಾಕುತ್ತಾ ಹೋಗಲು ಒಪ್ಪಿಕೊಂಡನು. ಮನೆಯ ಗೃಹ ಪ್ರವೇಶದ ದಿನಾಂಕವನ್ನು ಮುಂದೆ ಹಾಕಿ,ಬೆಂಗಳೂರಿನಿಂದ ದೆಹಲಿಗೆ ಹೊರಡುವ  ರೈಲಿನ ಟಿಕಟವನ್ನು ತೆಗೆಸಿ ಹೊರಡಲು ಸಿದ್ಧನಾದನು.

              ಸುರೇಶನು ಕೂಡ ಬೆಂಗಳೂರಿನ  ರೈಲು ನಿಲ್ದಾಣವನ್ನು ತಲುಪಿದನು. ಅವನು ಕೂಡ ಅದೇ ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು.ಸುಮಾರು  ರಾತ್ರಿ ೯ ಘಂಟೆಗೆ ರೈಲು ಬಂತು, ಇಬ್ಬರೂ ಹತ್ತಿ ಕೊಂಡರೂ. ವಿರ್ಪಯಾಸ ಎಂದರೆ ಇಬ್ಬರ ಸೀಟುಗಳು ಒಂದೇ ಬೋಗಿಯಲ್ಲಿ,ಎರಡೂ ಸೀಟುಗಳಿರುವ ಕಡೆ ಮೇಲೆ ಕೆಳಗೆ ಬಂದಿದವು.

                 ಸುರೇಶನದು ಮೇಲಿನ ಸೀಟುಯಿತ್ತು.ಅವನ ತೆಳಗಿನ ಸೀಟನ್ನು ಅಜೇಯು ಮತ್ತು ಇನೊಬ್ಬ ಪ್ರಯಾಣಿಕ ರಾಜುಗೆ ನೀಡಲಾಗಿತ್ತು.ಯಾಕೆಂದರೆ ಅಜೇಯ ಮತ್ತು ರಾಜು ಸೀಟುಗಳು ಕನಪರ್ಮ (Confirm)  ಆಗಿರಲಿಲ್ಲ. ಕೆಲವು ಆರ್.ಏ.ಸಿ (RAC) ಯಾಗಿದವು.ರೈಲು ಚುಕು  ಬುಕು,ಅಂತ ಪ್ರಯಾಣ ಪ್ರಾರಂಭಿಸಿತ್ತು.ಅಜೇಯ ಮತ್ತು ರಾಜು ಇಬ್ಬರೂ ತೆಳಗಡೆ ಸೀಟಿನಲ್ಲಿ ಕುಳಿತು ಕೊಂಡರು.ಸುರೇಶನಿಗೆ ಇನ್ನೂ ನಿದ್ರೆ ಬಂದಿರಿಲಿಲ್ಲ, ಅಲ್ಲಿವರೆಗೂ ತೆಳಗಡೆ ಸೀಟಿನಲ್ಲಿ  ಕುಳಿತು ಕೊಳ್ಳಬೇಕೆಂದರೆ ಅವರಿಬ್ಬರೂ ಕುಳಿತಿದ್ದರು. ಮನಸ್ಸಿನಲ್ಲಿಯೆ ಗೋಣಗುತ್ತಾ,ರಾತ್ರಿ ಯಾಗಿದೆ ಬೆಳ್ಳಗೆ ಅದರ ಬಗ್ಗೆ ಯೋಚಿಸಿದರಾಯಿತ್ತು ಅಂತ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ,  ಅನಿರ್ವಾಯವಾಗಿ ಮೇಲೆ ಹತ್ತಿ  ತನ್ನ ಮೇಲಿನ ಸೀಟಿನಲ್ಲಿ ಹಾಗೆ ಸುಮ್ಮನೆ ಮಲಗಿದ್ದನು.ಅಜೇಯು ಮತ್ತು ರಾಜು ಇಬ್ಬರೂ ತಮ್ಮ ತಮ್ಮ ಪರಿಚಯವನ್ನು ಮಾಡಿಕೊಂಡು, ಹಾಗೆ ಹರಟೆ ಪ್ರಾರಂಭಿಸಿದರು. ರಾಜು ಇಂಜಿನಿಯರಿಂಗ್ ಓದಿ,ದೆಹಲಿಯಲ್ಲಿ ಭಾ.ಆ.ಸ್ (IAS) ತರಬೇತಿ ತೆಗೆದುಕೊಳ್ಳಲು  ಹೊರಟಿದ್ದನು.

                ಬೆಂಗಳೂರಿನಿಂದ ದೆಹಲಿಗೆ ರೈಲು ಪ್ರಯಾಣ ಸುಮಾರು ೨೬ ಗಂಟೆಗಳು ಬೇಕು. ರೈಲು ಪ್ರಯಾಣ ಪ್ರಾರಂಭಿಸಿ ಸುಮಾರು ೩೦ ನಿಮಿಷಗಳಾಗಿದವು ಟಿಕೆಟ್ ನೀರಿಕ್ಷಕರು (Ticket Checker - TC)  ಟಿಕೆಟ್ ನಿರೀಕ್ಷಿಸಲು  ಬಂದರು. ಅಜೇಯು ಮತ್ತು ರಾಜು ತಮ್ಮ ಟಿಕೆಟ್ ಯನ್ನು ಪರೀಕ್ಷಿಸಿದ ಮೇಲೆ, ಯಾವುದಾದರೂ ಸೀಟು ಖಾಲಿಯಿದ್ದರೆ ,ನಮ್ಮ ಟಿಕೇಟು ಕನರ್ಪಮ್ ಮಾಡಿಕೊಡಿ ಸರ್ ಅಂತ ಟಿ.ಸಿ (TC) ಗೆ ವಿಚಾರಿಸಿದರು.ಟಿ.ಸಿ -  ಯಾವುದು ಖಾಲಿಯಿಲ್ಲ ಅಂತ ಉತ್ತರಿಸಿದನು.ಸುರೇಶನ ಟಿಕೆಟ್ ಯನ್ನು ಪರೀಕ್ಷಿಸಿ ಮುಂದೆ ಹೊರಟಿ ಹೋದನು. ರಾಜು , ಅಜೇಯ ಮತ್ತೆ ತಮ್ಮ ಹರಟೆ ಪ್ರಾರಂಭಿಸಿದರು.

              ಸುಮಾರು ರಾತ್ರಿ ೧೧ ಗಂಟೆಗೆ ಇಬ್ಬರಿಗೂ ನಿದ್ರಾ ದೇವಿಯ ಆಗಮನವಾಯಿತ್ತು.ಇಬ್ಬರೂ ಒಂದೇ ಸೀಟಿನಲ್ಲಿ  ಕುಳಿತು ಕೊಂಡು ಹಾಗೆ ನಿದ್ರೆ ಮಾಡುತ್ತಿದ್ದರು.ರೈಲಿನ ತುಂಬಾ ಕತ್ತಲು ಆವರಿಸಿತು, ಗಾಡಿಯು ಹಾಗೆ ತನ್ನ ಪ್ರಯಾಣವನ್ನು ಮುಂದೆವರಿಸಿತು.ನಡು ರಾತ್ರಿ ರಾಜುಗೆ ನಿದ್ರೆ ತಾಳಲಾಗದೆ,ಆರು ಸೀಟುಗಳಿರುವ ಕಡೆಗೆ ಮಧ್ಯದಲ್ಲಿ ದಿನ ಪತ್ರಿಕೆಯನ್ನು ಒಂದನ್ನು ಹಾಸಿ ಆರಾಮವಾಗಿ ಮಲಗಿದನು. ಅಜೇಯಗೆ ಪೂರ್ಣ ಸೀಟು ಸಿಕ್ಕಿತು,ಆರಾಮವಾಗಿ ಮಲಗಿದನು.ರೈಲು ಗಾಡಿಯು ಮಾತ್ರ ಯಾರನ್ನು ಲೆಕ್ಕಿಸದೆ ತನ್ನ  ಪ್ರಯಾಣವನ್ನು ಮುಂದುವರೆಸಿತ್ತು.ಮರು ದಿನ ಬೆಳ್ಳಗಿನ ಜಾವ  ಎಲ್ಲರೂ ಎದ್ದು ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಗಿಸಿ ಉಪಹಾರ ಮಾಡುತ್ತಿದ್ದರು. ಅಜೇಯು ,ರಾಜು,ಸುರೇಶ ಕೂಡ ತಮ್ಮ ದೈನಂದಿನ ಚಟುವಟಿಕೆಗಳು, ಉಪಹಾರವನ್ನು ಸೇವಿಸಿ ಕುಳಿತು ಕೊಂಡಿದರು.

            ಅಜೇಯು ಮತ್ತು ರಾಜು ತಮ್ಮ  ತೆಳಗಡೆ ಸೀಟಿನಲ್ಲಿ ಕುಳಿತಿದ್ದರು .ಸುರೇಶನಿಗು ತಳಗಡೆ ಸೀಟಿನಲ್ಲಿ ಕುಳಿತು ಕೊಳ್ಳಬೇಕಾಗಿತ್ತು.ಅವರನ್ನು ಕೇಳಿದನು .ಆದರೆ ಅಜೇಯು ನಮ್ಮದು ಆರ್.ಏ.ಸಿ (RAC) ಸೀಟು ಇಬ್ಬರೂ ಕುಳಿತಿದ್ದಿವಿ,ನಿಮ್ಮದು ಮೇಲಿನ ಸೀಟು ಅಲ್ಲಿಯೇ ಕುಳಿತುಕೊಳ್ಳಿ ಎಂದನು.ಸುರೇಶ - ಮೇಲಗಡೆ ಸೀಟು ಬರಿ  ಮಲಗಲು ಮಾತ್ರ,ಕುಳಿತುಕೊಳ್ಳಲು ತೆಳಗಡೆ ಸೀಟುಯಿರುತ್ತೆ ಅಂತ ಹೇಳಿದನು. ಅದಕ್ಕೆ ಅಜೇಯು - ಮತ್ತೆ ನಾವು ಎಲ್ಲಿ ಕುಳಿತು ಕೊಳ್ಳಬೇಕು, ನಮ್ಮಂದು ಆರ್.ಎ.ಸಿ ಇದೇ ಹಾಗಾಗಿಯೇ ಇಬ್ಬರೂ ಕುಳಿತಿದ್ದಿವಿ ಎಂದನು.

           ಮೊದಲೇ ಸುರೇಶ ಮುಂಗೋಪಿ, ಸೀಟಿನಲ್ಲಿ ಕೆಟ್ಟದಾಗಿ, ದಪ್ಪ ಧ್ವನಿಯಲ್ಲಿ ನಾನು ಎಲ್ಲಿ ಕುಳಿತುಕೊಳ್ಳಬೇಕು ಎಂದು ಕಿರುಚಾಡ ತೊಡಗಿದನು. ಅಪ್ಟರಲ್ಲಿಯೇ ರಾಜು ಮಧ್ಯ ಪ್ರವೇಶಿಸಿ ಸುರೇಶನಿಗೆ ತಿಳಿಹೇಳಿದನು.ಆದರೆ ಸುರೇಶ ಮಾತ್ರ ಕೇಳಲಿಲ್ಲ. ಅವನದು ಒಂದೆ ಪ್ರಶ್ನೆ ಮತ್ತೆ ನಾನು ಎಲ್ಲಿ ಕುಳಿತಿಕೊಳ್ಳಲ್ಲಿ?.
ಅಜೇಯ ಹಾಗೂ ಸುರೇಶ ಮಧ್ಯೆ ಮಾತಿನ ಚಕ್ಕಮಕ್ಕಿ ಜೋರಾಯಿತು, ಅಷ್ಟರಲ್ಲಿಯೆ ಸುರೇಶನಿಗೆ ಕೋಪ ನೆತ್ತಿಗೇರಿ  ಕೆಟ್ಟ ಶಬ್ದಗಳಿಂದ ಅಜೇಯಗೆ ಬೈಯದ್ದನು.ಅಜೇಯಗೂ ತುಂಬಾ ಕೋಪಬಂತು, ಅವನು ಕೆಟ್ಟ ಶಬ್ದಗಳಿಂದ ಅದಕ್ಕೆ ಉತ್ತರಿಸಿದನು.ಇಬ್ಬರ ಜಗಳ ಕೈ ಕೈ ಮಿಲಾಯಿಸಲು ಅಷ್ಟಕ್ಕೆ ಬಂದಿತು, ರಾಜು ಮಧ್ಯೆ ಪ್ರವೇಶಿಸಿ ಜಗಳವನ್ನು ಬಿಡಿಸಲು ಪ್ರಯತ್ನಿಸಿದನು.ಆದರೆ ಸುರೇಶನನ್ನು ಕೋಪದಲ್ಲಿ ಅಜೇಯನ್ನು ಜೋರಾಗಿ ತಳಿದ್ದನು.ಅವನು ತಳಿದ ರಭಸಕ್ಕೆ ಬೋಗಿಯಲ್ಲಿಯನ ಕನರ್ಪಾಮೆಟ ಮಾಡಲು ಉಪಯೋಗಿಸಿದ ಕಬ್ಬಿಣದ ರಾಡ್ ನ್ನ ತುದಿ ಭಾಗವು ಅಜೇಯ ತಲೆಯು  ಜೋರಾಗಿ ತಾಕಿತ್ತು. ಅಜೇಯ ತಲೆಯ ಹಿಂದಿನ ಭಾಗಕ್ಕೆ ತುಂಬಾ ಜೋರಾಗಿ ಪೆಟ್ಟು ಬಡಿಯಿತು. ಪೆಟ್ಟು ಎಷ್ಟು ಜೋರಾಗಿತು ಎಂದರೆ ಅಜೇಯು  ಅಲ್ಲಿಯೇ ಪ್ರಜ್ಞೆ ತಪ್ಪಿ  ಕುಸಿದು ಬಿದ್ದನು. ಸುರೇಶ, ರಾಜು,ಬೋಗಿಯಲ್ಲಿಯ ಜನರೆಲ್ಲರೂ ಆತಂಕಗಿಡಾದ್ದರು,ಅಲ್ಲಿಯೇ ಇದ್ದ ಒಬ್ಬರೂ ಅಜೇಯ ಮುಖಕ್ಕೆ ನೀರನ್ನು ಸಿಂಪಡಿಸಿದರು.

          ತಲೆಗೆ ತುಂಬಾ ಜೋರಾಗಿ ಬಡೆದಿರುವದರಿಂದ  ಅಜೇಯಗೆ ಪ್ರಜ್ಞೆ  ಬರಲಿಲ್ಲ, ಅಷ್ಟರಲ್ಲಿಯೇ ಒಬ್ಬ ಪ್ರಯಾಣಿಕನು ಹೋಗಿ ಟಿ.ಸಿ ಯನ್ನು ಕರೆತಂದನು, ಟಿ.ಸಿ ಯು ಅಜೇಯ ಕೈಯನ್ನು ಹಿಡಿದು  ನರಬಡಿತವನ್ನು ಪರೀಕ್ಷಿಸಿದನು.ಸ್ವಲ್ಪ ಕಡಿಮೆಯಾಗಿತ್ತು ಟಿ.ಸಿ ಗೆ ತುಂಬಾ ಭಯವಾಯಿತು, ಮುಂದಿನ ರೈಲು ನಿಲ್ದಾಣಕ್ಕೆ ಕರೆಮಾಡಿ, ಸನ್ನಿವೇಶದ ಬಗ್ಗೆ ಮಾಹಿತಿಯನ್ನು ನೀಡಿ,ವೈದ್ಯಕೀಯ ವ್ಯವಸ್ಥೆಯನ್ನು ಸಿದ್ಧಪಡಿಸಲು ಸುಚಿಸಿದನು.ರೈಲು ಹಳ್ಳಿಗಳಲ್ಲಿನ ಹೊಲಗಳಲ್ಲಿ ಪ್ರಯಾಣಿಸುತ್ತಿತ್ತು,ಸುಮಾರು ೧೦೦ ಕಿಲೋಮೀಟರ್ ದೂರದಲ್ಲಿ ಮುಂದಿನ ಕಮಲಾಪುರ ಜಂಕ್ಷನ ರೈಲು ನಿಲ್ದಾಣವಿತ್ತು.ಅಲ್ಲಿ ಎಲ್ಲಾ ರೀತಿಯ ವೈದ್ಯಕೀಯ ವ್ಯವಸ್ಥೆವುಲ್ಲ ಆಸ್ಪತ್ರೆಯಿತ್ತು,ಅಲ್ಲಿವರೆಗೂ ಅಜೇಯಗೆ ಪ್ರಾಥಮಿಕ ಚಿಕಿತ್ಸೆಯನ್ನು ರೈಲಿನಲ್ಲಿಯೆ ನೀಡಿದರು.ಇದ್ದನೆಲ್ಲಾ ಕಂಡ ಸುರೇಶನಿಗೆ ಮಾತೆ ಬರಲಿಲ್ಲ ,ಕೊನೆವಂದರಲ್ಲಿ ಗಾಬರಿಗೊಂಡು ಕುಳಿತಿದ್ದ. ಅಜೇಯಗೆ ಏನು ಆಗದೇ ಆರೋಗ್ಯವಂತನಾದರೆ ಸಾಕು ಅಂತ ಸುರೇಶನ್ನು ಮನಸ್ಸಿನಲ್ಲಿ ದೇವರ ಹತ್ತಿರ ಪ್ರಾಥಿಸಿಸುತ್ತಿದ್ದನು.

           ರೈಲು   ಗಾಡಿಯು ಕಮಲಾಪುರ ಜಂಕ್ಷನ ರೈಲು  ನಿಲ್ದಾಣವನ್ನು ತಲುಪಿತು. ಅಷ್ಷತೊಂತ್ತಿಗೆ ನಿಲ್ದಾಣದಲ್ಲಿ ಆಂಬ್ಯುಲೆನ್ಸವ್ಯವಸ್ಥೆಯನ್ನು ಮಾಡಲಾಗಿತ್ತು,ರೈಲು ಸಿಬ್ಬಂದಿಯವರು ಅಜೇಯನು ಅಮಬುಲೆನ್ಸನಲ್ಲಿ ಹತ್ತಿರ ಆಸ್ಪತ್ರೆಗೆ ಕರೆದುಕೊಂಡು ಹೊರಟರು, ಅವರ ಜೊತೆ ರಾಜು ಮತ್ತು ಸುರೇಶ ಕೂಡ ಹೊರಟರು.ಆಸ್ಪತ್ರೆಗೆ ತಲುಪಿದ ತಕ್ಷಣವೆ,ಅಲ್ಲಿಯ ಡ್ಯುಟಿ ಡಾಕ್ಟರ್ ಅಜೇಯನ್ನು ತಪಾಸಣೆ ಮಾಡಿದರು.ಆದರೆ ಯಾವದೇ ಪ್ರಯೋಜನವಾಗಲ್ಲಿಲ, ಅಷ್ಟೊತ್ತಿಗೆ ಅಜೇಯ ಪ್ರಾಣ ಪಕ್ಷಿ ಹಾರಿಹೋಗಿತ್ತು.ಇದನ್ನು ತಿಳಿದ ತಕ್ಷಣವೆ ಸುರೇಶನನ್ನು ಅಲ್ಲಿಯೇ ಕುಸಿದುಬಿದ್ದನು,ರಾಜುನ ಕಣ್ಣಿನಲ್ಲಿ ದುಖಃದ ಕಣ್ಣೀರು ಹರಿಯತೊಡಗಿದವು.ಇಬ್ಬರಿಗೂ ನಂಬುವದಕ್ಕಾಗಲ್ಲಿಲ ,ಏನಾಯಿತು ಒಂದು ಸೀಟಿನ ಜಗಳ ಎಲ್ಲಿಗೆ ಬಂದು ಕೊನೆಗೊಂಡಿತು ಅಂತ.

               ರೈಲು ಇಲಾಖೆಯವರು ಅಜೇಯ ಹತ್ತಿರ ಇದ್ದ ಐ.ಡಿ  ಕಾರ್ಡ್ ಗಳನ್ನು ತೆಗೆದುಕೊಂಡು, ಅದರಲ್ಲಿಯೂ ಮನೆಯ ವಿಳಾಸಕ್ಕೆ ಸ್ಥಳೀಯ ಪೋಲೀಸರ ಸಹಾಯದಿಂದ  ಸುದ್ದಿಯನ್ನು ತಲುಪಿಸಿದರು.ಮಗನ ಸಾವಿನ ಸುದ್ದಿಯನ್ನು ತಿಳಿದ ಹೆತ್ತವರಿಗೆ ಕಾಲಿನ ತೆಳ್ಳಗಿನ ಭೂಮಿಯೆ ಸರಿದಂತಾಯಿತ್ತು.ಹೆತ್ತ ತಾಯಿಯು ಅಲ್ಲಿಯೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಳು. ಅವರಿಗೆ ಜೀವನವೇ ಕೊನೆಗೊಂಡತೆ ಅನುಭವವಾಗುತ್ತಿತ್ತು. ತಮ್ಮ  ಜೀವನವೆ ಮೀಸಲಿಟ್ಟು ಓದಿಸಿ,ಕೊನೆಗಾಲದಲ್ಲಿ ತಮ್ಮಗೆ ಆಸರೆ ಆಗುತ್ತಾನೆ ಅಂತ ಕನಸುಗಳನ್ನು ಕಂಡಿದ್ದರು, ತಮ್ಮ ಕಷ್ಟಗಳು ಕೊನೆಗೊಂಡಿದವು ಅಂತ ಸಂತೋಷ ಪಡುತ್ತಿರುವಾಗಲ್ಲೆ ವಿಧಿಯು ಗೋರ ಆಟವನ್ನಾಡಿತ್ತು. ಪೋಲಿಸರು ಕೇಸವನ್ನು ಬುಕ್ಕ ಮಾಡಿಕೊಂಡು ಸುರೇಶನನ್ನು ಅರೇಸ್ಟ್ ಮಾಡಿದರು. ಅಜೇಯ ಪ್ರಾಥೀಮ ಶರೀರವನ್ನು ಮರಣೋತ್ತರ ಪರೀಕ್ಷೆ ನಡೆಸಿ ಅವರ ಪಾಲಕರಿಗೆ ಹಸ್ತಾಂತರಿಸಿದರು.ಒಂದು ನಿಮಿಷದ ಕೋಪ ಎರಡು ಕುಟುಂಬಗಳನ್ನು ಬೀದಿಗೆ ತಂದಿತು. ಒಂದು ಕಡೆಗೆ ಅಜೇಯು ತನ್ನ ಪ್ರಾಣವನ್ನೇ ಕಳೆದುಕೊಂಡನು, ಇನ್ನೊಂದು ಕಡೆ ಸುರೇಶನು ಜೈಲು ಸೇರಿದನು.

             ಇದ್ದಕೆ ಯಾರು ಕಾರಣರು ರೈಲು ಇಲಾಖೆಯವರ ವ್ಯವಸ್ಥೆವೊ,ಸುರೇಶನ ಕೋಪವೊ ಅಥವಾ ಅಜೇಯು ವಿರೋಧ ವ್ಯಕ್ತಪಡಿಸಿದೊ.ಉತ್ತರ ಒಂದೇ ಅವರಿಬ್ಬರ  ಕೋಪವೆ ಇದ್ದಕೆ ಕಾರಣ. ಮನುಷ್ಯನ ಒಂದು ನಿಮಿಷದ ಕೋಪ ತನ್ನ ಜೀವನವನೆ ಹಾಳು ಮಾಡುವುದರ ಜೊತೆಗೆ ಇನೊಬ್ಬರ ಜೀವನವನ್ನು ಹಾಳುಮಾಡಬಹುವುದು.ಆದ್ದರಿಂದಲೇ ಮನುಷ್ಯನು ತನ್ನ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.ಸುರೇಶನ ವಾದವು ಸರಿಯಾಗಿತ್ತು,ಮೇಲಗಡೆಯಿರುವ ಸೀಟು ಮಲಗಳು ಮಾತ್ರ ಕುಳಿತುಕೊಳ್ಳಲು ಅವನಿಗೆ ತಳಗಡೆಯಿರುವ ಸೀಟು ಬೇಕಲ್ಲ. ಇನ್ನೊಂದು ಕಡೆ ಅಜೇಯ ವಾದ ಸರಿಯಾಗಿಯೇ ಇತ್ತು,ಯಾಕೆಂದರೆ side lower breath ಅಲ್ಲಿ ಇಬ್ಬರೂ ಮಾತ್ರ ಕುಳಿತುಕೊಳ್ಳಬಹುವುದು ಅಂತ ರೈಲು ಇಲಾಖೆಯೆ ಹೇಳುತ್ತದೆ.ಆದರೆ side lower breath ಆರ್.ಏ.ಸಿ ಇದ್ದರೆ, side upper breath ಸೀಟಿನವರು ಬೆಳ್ಳಗಿನ ಜಾವದಲ್ಲಿ ಎಲ್ಲಿ ಕುಳಿತುಕೊಳ್ಳಬೇಕು ಅಂತ ರೈಲ್ವೆಇಲಾಖೆಯು ಸ್ಪಷ್ಟನೆ ನೀಡುವುದಿಲ್ಲ. ಮೊದಲೇ ತಳಗಡೆ ಇಬ್ಬರೂ RAC ಸೀಟಿನವರು ಕುಳಿತಿರುತ್ತಾರೆ.ಮೇಲಗಡೆ ಸೀಟಿನವನ್ನು ಎಲ್ಲಿ ಕುಳಿತುಕೊಳ್ಳಬೇಕು. 

                    ಮೂವರು ಒಂದೇ ಸೀಟಿನಲ್ಲಿ ಹೊಂದಾಣಿಕೆ ಮಾಡಿಕೊಂಡು ಕುಳಿತಿದ್ದಿರೆ ಈ ಜಗಳವು  ಬರುತ್ತಿರಲಿಲ್ಲ. ಭಾರತದಲ್ಲಿ ಬಡವರು, ಮಧ್ಯಮ ವರ್ಗದ ಜನರು ಬದುಕಬೇಕೆಂದರೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿತುಕೊಳ್ಳಲೆಬೇಕು, ಇಲ್ಲವೆಂದರೆ ಪ್ರತಿ ದಿನವೂ  ಜೀವನದವುದಕ್ಕೂ ಜಗಳ ಮಾಡುತ್ತಾ ಬದುಕಬೇಕಾಗುತ್ತದೆ.
ರೈಲ್ವೆ ಇಲಾಖೆಯ ಈ ದ್ವಂದ್ವ ನೀತಿಯಿಂದ ಪ್ರತಿ ದಿನವೂ ಪ್ರಯಾಣದಲ್ಲಿ ನೂರಾರು  ಜಗಳಗಳಾಗುತ್ತವೆ.ಆದರೆ ಸಣ್ಣ ಜಗಳ ಸಾವಿನಲ್ಲಿ ಅಂತ್ಯಗೊಂಡಿದು  ದುರಾದುಷ್ಠವೆ ಸರಿ.ಇನ್ನೂಮುಂದಾದರು ಪ್ರಯಾಣಿಕರು ಹೊಂದಾಣಿಕೆ ಮಾಡಿಕೊಂಡು ಪ್ರಯಾಣಿಸಲ್ಲಿ ಅಂತ ಹಾರೈಯಿಸೋಣ.ರೈಲ್ವೆ ಇಲಾಖೆಯು ಈ ಸಮಸ್ಯೆಗೆ ಆದಷ್ಟೂ ಬೇಗ ಪರಿಹಾರವನ್ನು ಕಂಡುಕೊಳ್ಳಲಿ ಅಂತ  ಆಶಿಸೋನ.

 

ನೀ ಬಾರದಿರುವೆಯಾ,ಓ ಕೋಪವೆ,

ಭೂಮಿಯ ಮೇಲಿನ ಸಕಲ  ಜೀವಾತ್ಮಗಳಲ್ಲಿಯೂ, ನಿನಿದಿಯ್ಯಾ||

ಎರಡಕ್ಶರದ  ಹೆಸರಿನಲ್ಲಿ,   ನಿನ್ನನ್ನು ವರ್ಣನಿಸಬಹುವುದೆಯಾ,||

ನಿನ್ನನು ಗೆಲ್ಲಲು ಋಷಿ ಮುನಿಗಳಾಗೆ ವರ್ಷಗಂಟಲೆ ತಪಸ್ಸು  ಮಾಡಬೇಕೆಯಾ||
ಜನರ ಎದೆಯ ಕಂಬನಿಯಗಳಿಗೆ ಕಾರಣನ್ನನಾಗಿ ಪಕ್ಕದಲ್ಲಿ ನಿಂತು ,ಮುಗುಳ್ನಗೆ ಬೀರುತ್ತಿರುವೆಯಾ,||
ನಿನ್ನ ಎದುರು ಸಂತೋಷವು ದುರ್ಬಲವಾಗುವುದೆ ಇರುವುದೆಯಾ||

ನೀ ಬಾರದಿರುವೆಯಾ,ಓ ಕೋಪವೆ,
 

Comments

Submitted by santhosha shastry Sun, 10/11/2015 - 22:52

ಭದ್ರ‌ ಸರ‌, ಕಥೆ ಬಹಳ‌ ಸೊಗಸಾಗಿದೆ. ಕೋಪದ‌ ಕೈಗೆ ಬುದ್ಧಿ ಕೊಟ್ರೆ ಇದೇ ಗತಿ. ಒಂದು ಕ್ಷಣದ‌ ಕೋಪ‌ ಎಷ್ಟೊಂದು ಅನಾಹುತ‌ ಮಾಡೀತು ಅಂತ‌ ಗೊತ್ತಿದ್ರೂ, ನಾವು ಮಾತ್ರ‌ ಕೋಪ‌ ಬಿಡಲೊಲ್ಲೆವು. ಅದಕ್ಕೇ ಹೇಳಿದ್ದು, ಮಾಡಿದ್ದುಣ್ಣೋ ಮಹರಾಯ‌ ಅಂತ‌.

Submitted by Nagaraj Bhadra Sun, 10/11/2015 - 23:44

In reply to by santhosha shastry

ಕಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಕ್ಕೆ ವಂದನೆಗಳು ಶಾಸ್ತ್ರೀ ಸರ್.ನೀವು ಹೇಳಿದ ನಿಜ ಸರ್.ಕ್ಷಣಿಕ ಕೋಪ ಇಡೀ ಜೀವನವೇ ನಾಶಮಾಡಬಹುವುದು.

Submitted by kavinagaraj Thu, 01/14/2016 - 11:46

ಕೇವಲ ಸೀಟಿಗಾಗಿ ನಡೆದ ಜಗಳದ ಸನ್ನಿವೇಶ ಬಣ್ಣಿಸಿದ್ದರೂ ಲೇಖನದ ಉದ್ದೇಶಕ್ಕೆ ಧಕ್ಕೆಯಾಗುತ್ತಿರಲಿಲ್ಲ. ಸಂಬಂಧಿಸಿದವರ ಹಿನ್ನೆಲೆಯನ್ನೂ ತಿಳಿಸಿದ್ದರಿಂದ ಅದಕ್ಕೆ ಹೆಚ್ಚು ತೂಕ ಕೊಟ್ಟಿರುವಿರಿ. ಚೆನ್ನಾಗಿದೆ. ಕೋಪ ಎಂದಿಗೂ ವಿನಾಶಕಾರಿಯೇ ಸರಿ.

Submitted by Nagaraj Bhadra Tue, 03/01/2016 - 06:35

In reply to by kavinagaraj

ಕವಿ ನಾಗರಾಜ ಸರ್ ಅವರಿಗೆ ನಮಸ್ಕಾರ.ಬರಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಕ್ರಿಯೆಗೆ ವಂದನೆಗಳು. ಕೋಪ ವಿನಾಶಕ್ಕೆ ದಾರಿ .