ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

ಕನ್ನಡಕ್ಕೆ ಕೆಲಸ ಮಾಡಿರುವವರಲ್ಲಿ, ಕನ್ನಡ ಮನೆ ಮಾತಲ್ಲದವರು ಹಲವರು ಸೇರಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ ಮತ್ತೆ ದ.ರಾ.ಬೇಂದ್ರೆಯಂತಹವರ ಮನೆಮಾತು ಕನ್ನಡವಾಗಿರಲಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಹಾಗೇ, ಹೊರನಾಡಿನಿಂದ ವಲಸೆ ಬಂದು, ಕನ್ನಡದ ನೆಲದಲ್ಲಿ ನೆಲೆ ನಿಂತು, ಕನ್ನಡಿಗರೇ ಆಗಿಹೋಗಿರುವ ಗುಂಪುಗಳಲ್ಲಿ, ಸಂಕೇತಿಗಳನ್ನು ಎಣಿಸಬೇಕಾಗುತ್ತೆ. ಹೆಚ್ಚಿಗೆ ದಕ್ಷಿಣ ಕರ್ನಾಟಕದ ಹಾಸನ, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಊರಿದ ಸಂಕೇತಿಗಳು, ಈಗ ಎಲ್ಲ ಕನ್ನಡಿಗರಂತೆ, ಸರ್ವವ್ಯಾಪಿಗಳಾಗಿದ್ದಾರೆ!

ಪ್ರಖ್ಯಾತ ಸಂಕೇತಿ-ಕನ್ನಡಿಗರ ಸಾಲಿನಲ್ಲಿ, ಸಂಗೀತ ಕಲಾನಿಧಿ ಆರ್.ಕೆ.ಶ್ರೀಕಂಠನ್, ವೈಣಿಕ ಆರ್.ಕೆ.ಸೂರ್ಯನಾರಾಯಣ, ಹಾಡುಗಾರ ಆರ್.ಕೆ. ಪದ್ಮನಾಭ, ಕೊಳಲಿನ ಮಾಂತ್ರಿಕ ಎಸ್.ಶಶಾಂಕ್, ಇಂದಿನ ಯಶಸ್ವಿ ಚಲನಚಿತ್ರ ಸಂಗೀತ ನಿರ್ದೇಶಕ ಮನೋಮೂರ್ತಿ ಮೊದಲಾದವರನ್ನು ಗುರುತಿಸಬಹುದು.

ಸಂಕೇತಿಗಳು ಎಂಬ ಗುಂಪು ತನ್ನ ಮೂಲ ಸ್ಥಾನವನ್ನು ತೊರೆದು, ಕರ್ನಾಟಕಕ್ಕೆ ಬಂದು ನೆಲೆ ನಿಂತಿದ್ದರ ಹಿಂದೆ ಪರಂಪರೆಯಿಂದ ಬಂದ ಕಥೆಯೊಂದಿದೆ.

ತಿಳಿಯುವ ಕುತೂಹಲವಿದೆಯೇ?

ಹಾಗಿದ್ದರೆ ಈ  ಕೊಂಡಿಯಲ್ಲಿ ಅದನ್ನು ಕಥೆಯೊಂದರ ರೂಪದಲ್ಲಿ ಓದಬಹುದು : ಹೀಗೊಬ್ಬಳು ಹೆಂಗಸು

ಓದಿ. ಏನನ್ನಿಸಿತು ಎಂದು ಬರೆಯುವುದನ್ನು ಮರೆಯಬೇಡಿ.

-ಹಂಸಾನಂದಿ

Rating
No votes yet

Comments