ಭಾರತೀಯ ಚಿತ್ರಕಲೆ - ಭಾಗ 2

ನೆರಳು - ಗೊಂಬೆಯಾಟದ ಚಿತ್ರಕಲೆ
ಆಂಧ್ರಪ್ರದೇಶ ನೆರಳು - ಗೊಂಬೆಯಾಟಕ್ಕೆ ಹೆಸರುವಾಸಿ. ಈ ಗೊಂಬೆಗಳನ್ನು ಚರ್ಮದಿಂದ ಮಾಡುತ್ತಾರೆ. ಗೊಂಬೆಗಳ ವಿವಿಧ ಭಾಗಗಳನ್ನು ಜೋಡಿಸಿ, ಚಲನೆಗೆ ಅವಕಾಶ ಮಾಡುತ್ತಾರೆ. ಗೊಂಬೆಯಾಟಗಾರರು ಬಿದಿರಿನ ಕಡ್ಡಿಗಳಿಂದ ಗೊಂಬೆಗಳನ್ನು ಎತ್ತಿ ಹಿಡಿದು ಆಡಿಸುತ್ತಾರೆ.

ಬಣ್ಣದ ಪಟ್ಟಿಗಳ ಮೂಲಕ ಗೊಂಬೆಗಳ ಉಡುಪು ಮತ್ತು ಆಭರಣಗಳನ್ನು ಚಿತ್ರಿಸುತ್ತಾರೆ. ಇಲ್ಲಿನ ಚಿತ್ರದಲ್ಲಿರುವ ಜಿಂಕೆ ರಾಮಾಯಣದ ಕತೆಗೆ ಸಂಬಂಧಿಸಿದ್ದು.

ಕಾಳಿಘಾಟ್ ಚಿತ್ರಕಲೆ
ಕೊಲ್ಕತಾದಲ್ಲಿ ೧೮೧೯ರಲ್ಲಿ ನಿರ್ಮಿಸಲಾದ ಕಾಳಿ ದೇವಸ್ಥಾನದಲ್ಲಿ ರಚಿಸಿರುವ ಚಿತ್ರಗಳ ಶೈಲಿಗೆ ಈ ಹೆಸರು. ದೇವಸ್ಥಾನಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅಲ್ಲಿನ ಪೇಟೆಯ ಅಂಗಡಿಗಳಲ್ಲಿ ಈ ಚಿತ್ರಪಟಗಳನ್ನು ಮಾರುತ್ತಾರೆ.

Image

ಹಣ್ಣು ತಿಂದ ಮಂಗ

ಒಂದು ಮಂಗ ಕಲ್ಲಂಗಡಿ ಹೊಲಕ್ಕೆ ಬಂತು. ಅಲ್ಲಿನ ಕಲ್ಲಂಗಡಿ ಹಣ್ಣುಗಳು ಆಕರ್ಷಕವಾಗಿದ್ದವು. ಹಾಗಾಗಿ, ತಿನ್ನಲಿಕ್ಕಾಗಿ ಒಂದು ಕಲ್ಲಂಗಡಿ ಹಣ್ಣನ್ನು ಎತ್ತಿಕೊಂಡಿತು ಮಂಗ.

ಹತ್ತಿರದಲ್ಲಿದ್ದ ಎತ್ತು ಇದನ್ನು ಕಂಡು ಹೇಳಿತು, “ಕಲ್ಲಂಗಡಿ ಹಣ್ಣು ಹೇಗೆ ತಿನ್ನಬೇಕೆಂದು ನಿನಗೆ ಗೊತ್ತಿರಲಿಕ್ಕಿಲ್ಲ. ನಾನು ಹೇಳುತ್ತೇನೆ.”  

“ನೀನು ಸುಮ್ಮನಿರು! ನಿನಗ್ಯಾಕೆ ಬೇಡದ ಉಸಾಬರಿ?’ ಎನ್ನುತ್ತಾ ಮಂಗ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಕಚ್ಚಿತು. ತಕ್ಷಣವೇ ಅದು ಹಣ್ಣನ್ನು ನೆಲಕ್ಕೆ ಬಿಸಾಡಿತು. "ಛೇ, ಇದಕ್ಕೆ ರುಚಿಯೇ ಇಲ್ಲ” ಎಂದಿತು ಮಂಗ.

Image

ಗಾಂಧೀ ಹತ್ಯೆ ಮತ್ತು ನಾನು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಗೋಪಾಲ ಗೋಡ್ಸೆ ಕನ್ನಡಕ್ಕೆ: ಮಾರ್ತಾಂಡ ಲಿಂಗೋ ಕುಲಕರ್ಣಿ
ಪ್ರಕಾಶಕರು
ಗೋಪಾಲ ಗೋಡ್ಸೆ, ೭೫೪/ ಸದಾಶಿವ ಪೇಠ, ಕುಮಠೇಕರ ಮಾರ್ಗ, ಪುಣೆ-೪೧೧ ೦೩೦
ಪುಸ್ತಕದ ಬೆಲೆ
ರೂ. ೯೦

ಭಾರತದ ಸ್ವಾತಂತ್ರ್ಯದ ನಂತರ ನಡೆದ ಅತ್ಯಂತ ದೊಡ್ಡ ದುರ್ಘಟನೆಯೆಂದರೆ ಮಹಾತ್ಮಾ ಗಾಂಧೀಜಿಯವರ ಹತ್ಯೆ. ಈ ಹತ್ಯೆಯನ್ನು ಮಾಡಿದರು ನಾಥೂರಾಮ ಗೋಡ್ಸೆ ಮತ್ತು ಅವರ ಸಂಗಡಿಗರು. ೧೯೪೮ರ ಜನವರಿ ೩೦ರಂದು ನಾಥೂರಾಮ ಗೋಡ್ಸೆ ಮಹಾತ್ಮರ ಹತ್ಯೆ ಮಾಡಿದ ನಂತರ ೧೫ ನವೆಂಬರ್ ೧೯೪೯ರಂದು ನ್ಯಾಯಾಲಯವು ಲಭ್ಯ ಸಾಕ್ಷ್ಯಾಧಾರಗಳ ಅಡಿಯಲ್ಲಿ ನಾಥೂರಾಮ ಗೋಡ್ಸೆ ಮತ್ತು ನಾರಾಯಣ ಆಪ್ಟೆಯವರನ್ನು ಅಂಬಾಲ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಒಳಪಡಿಸಲಾಗುತ್ತೆ, ಈ ಹತ್ಯಾ ಕಾಂಡದಲ್ಲಿ ನಾಥೂರಾಮ ಗೋಡ್ಸೆಯ ಕಿರಿಯ ಸಹೋದರ ಗೋಪಾಲ ಗೋಡ್ಸೆಯೂ ಅಪರಾಧಿ ಎಂದು ನ್ಯಾಯಾಲಯವು ತೀರ್ಮಾನಿಸಿ ಅಜನ್ಮ ಗಡಿಪಾರಿನ ಶಿಕ್ಷೆಗೆ ಗುರಿ ಮಾಡುತ್ತದೆ.

ಸ್ವಪ್ನ ಸಾರಸ್ವತ

ಪುಸ್ತಕದ ಲೇಖಕ/ಕವಿಯ ಹೆಸರು
ಗೋಪಾಲಕೃಷ್ಣ ಪೈ
ಪ್ರಕಾಶಕರು
ಹೇಮಂತ ಸಾಹಿತ್ಯ, ೫೩/೧, ಕಾಟನ್ ಪೇಟೆ ಮುಖ್ಯ ರಸ್ತೆ, ಬೆಂಗಳೂರು ೫೬೦೦೫೩
ಪುಸ್ತಕದ ಬೆಲೆ
ರೂ.400.00

'ಸ್ವಪ್ನ ಸಾರಸ್ವತ' ಹೆಸರೇ ಹೇಳುವಂತೆ ಸಾರಸ್ವತ ಸಮುದಾಯದವರ ಅನುಭವ ಕಥಾನಕದ ಸಾರ. ಇದರ ಲೇಖಕರಾದ ಗೋಪಾಲಕೃಷ್ಣ ಪೈ ಇವರು ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ನಿಕಟವರ್ತಿಗಳು. ಆಳವಾದ ಶೋಧನೆಯನ್ನು ಮಾಡಿ ಈ ಕಾದಂಬರಿಯನ್ನು ಬರೆದಿದ್ದಾರೆ. ಮೂಲ ವ್ಯಕ್ತಿ, ಸ್ಥಳಗಳ ಆಶಯಗಳಿಗೆ ಧಕ್ಕೆ ಬಾರದಂತೆ ಈ ಕಾದಂಬರಿಯ ಪಾತ್ರಗಳನ್ನು ನಿರೂಪಿಸಿದ್ದಾರೆ. ಈ ನಿರಂತರ ಶೋಧದ ಫಲವೇ ಕಳೆದ ನಾಲ್ಕು ನೂರು ವರುಷಗಳಲ್ಲಿ ಹಾದು ಬಂದ ಸಾರಸ್ವತ ಸಮುದಾಯದ ಅನುಭವಗಳ ಮೂಲಕ ಚರಿತ್ರೆ ಹಾಗೂ ವರ್ತಮಾನ ಜೀವನದ ಪರಸ್ಪರ ಮುಖಾಮುಖಿಗಳನ್ನೂ ಸಂಬಂಧಗಳನ್ನೂ ವೈಯಕ್ತಿಕ ಅನುಭವದ ನೆಲೆಗಳಲ್ಲಿ ಕೌಟುಂಬಿಕ ಸಂದರ್ಭಗಳಲ್ಲಿಟ್ಟು ಪರೀಕ್ಷಿಸುತ್ತದೆ ಈ ಕಾದಂಬರಿ.

ವಲಸೆ ಹಕ್ಕಿಗಳ ಪವಾಡ ಪ್ರಪಂಚ!!

ಕೊರೋನಾ ಮಹಾಮಾರಿ ನಮ್ಮ ದೇಶಕ್ಕೆ ಅಪ್ಪಳಿಸಿದ ಬಳಿಕ ನಾವು ವಲಸೆ ಪದವನ್ನು ಸಾವಿರಾರು ಬಾರಿ ಟಿವಿಯ ವಾರ್ತೆ, ಕಾರ್ಯಕ್ರಮಗಳಲ್ಲಿ ಕೇಳಿಯೇ ಇರುತ್ತೇವೆ. ವಲಸೆ ಕಾರ್ಮಿಕರು ಎಂಬ ಪದವನ್ನು ನಾವು ಕೇಳುವುದಕ್ಕೂ ಮೊದಲು ವಲಸೆ ಹಕ್ಕಿಗಳು ಎಂಬ ಪದವನ್ನು ಶಾಲಾ ಪಾಠ ಪುಸ್ತಕಗಳಿಂದ ತಿಳಿದು ಕೊಂಡಿರುತ್ತೇವೆ.

Image

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

ಪುಸ್ತಕದ ಲೇಖಕ/ಕವಿಯ ಹೆಸರು
ವಿನಾಯಕ ಭಟ್ಟ/ರೋಹಿತ್ ಚಕ್ರತೀರ್ಥ/ಗೀರ್ವಾಣಿ/ವೃಷಾಂಕ ಭಟ್
ಪ್ರಕಾಶಕರು
ಅಯೋಧ್ಯಾ ನಂ ೮೭೭, ೩ನೇ ಮಹಡಿ, ೧ನೇ ಇ ಮುಖ್ಯ ರಸ್ತೆ, ಗಿರಿ ನಗರ, ಬೆಂಗಳೂರು ೫೬೦೦೮೫
ಪುಸ್ತಕದ ಬೆಲೆ
ರೂ.100.00

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು ಪುಸ್ತಕವು ಬಾಂಗ್ಲಾ ಹಿಂದುಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳನ್ನು ಹೇಳುತ್ತದೆ. ಬೆನ್ನುಡಿಯಲ್ಲಿ ಭಾರತದ ಗೃಹ ಮಂತ್ರಿ ಅಮಿತ್ ಶಾ ಬರೆಯುತ್ತಾರೆ ೧೯೪೭ರಲ್ಲಿ ಭಾರತದ ವಿಭಜನೆ ಆಗದೇ ಇರುತ್ತಿದ್ದರೆ ಇಂದು ಸಿಎಎ ಅಗತ್ಯ ಇರುತ್ತಿರಲಿಲ್ಲ. ಅದರಲ್ಲೂ ಜಾತಿಯ ಆಧಾರದಲ್ಲಿ ದೇಶವನ್ನು ವಿಭಜಿಸಿದ್ದು ದೊಡ್ಡ ತಪ್ಪು. 

ಭಾರತೀಯ ಮುಸಲ್ಮಾನರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಪತಿ, ಚುನಾವಣಾ ಆಯುಕ್ತರಾದರು. ಆದರೆ ಪಾಕ್-ಬಾಂಗ್ಲಾ-ಅಫ್ಘಾನಿಸ್ಥಾನದ ಅಲ್ಪಸಂಖ್ಯಾತರು ತಮ್ಮ ಧರ್ಮ, ಜೀವ ಮತ್ತು ಮಹಿಳೆಯರ ಗೌರವದ ರಕ್ಷಣೆಗಾಗಿ ಭಾರತಕ್ಕೆ ಶರಣಾರ್ಥಿಗಳಾಗಿ ಬಂದಿದ್ದಾರೆ. ಅವರ ರಕ್ಷಣೆ ನಮ್ಮ ಜವಾಬ್ದಾರಿ. 

ಮೃತ ಸಮುದ್ರದ ಬಗ್ಗೆ ಒಂದಿಷ್ಟು…

ಏನಿದು ಮೃತ ಸಮುದ್ರ ಅಥವಾ ಡೆಡ್ ಸೀ ಎಂದು ಕೊಂಡಿರಾ? ಬಹುತೇಕ ಮಂದಿ ಈ ಸಮುದ್ರದ ಬಗ್ಗೆ ಕೇಳಿ ಇರುವಿರಿ. ಆದರೆ ಇದಕ್ಕೆ ಆ ಹೆಸರು ಹೇಗೆ ಬಂತು ಮತ್ತು ಅದರ ವಿಶೇಷತೆಗಳು ಏನೇನು ಎಂಬುದನ್ನು ತಿಳಿದುಕೊಳ್ಳೋಣ. ನಿಜಕ್ಕೂ ನೋಡಲು ಹೋದರೆ ಇದೊಂದು ಸಮುದ್ರವೇ ಅಲ್ಲ. ಇದು ಇಸ್ರೇಲ್ ಮತ್ತು ಜೋರ್ಡಾನ್ ದೇಶಗಳ ಭೂಪ್ರದೇಶಗಳಿಂದ ಆವೃತ್ತವಾದ ಒಂದು ಕೊಳ ಅಷ್ಟೇ.

Image

ಭಾರತೀಯ ಚಿತ್ರಕಲೆ - ಭಾಗ ೧

ಮಧುಬನಿ ಚಿತ್ರಕಲೆ
ಈ ಪಾರಂಪರಿಕ ಚಿತ್ರಕಲೆಯ ಮೂಲ ಬಿಹಾರದ ಮಿಥಿಲಾ ಪ್ರದೇಶ. ಮಧುಬನಿ ಜಿಲ್ಲೆಯಲ್ಲಿ ಈ ಶೈಲಿಯ ಚಿತ್ರಗಳನ್ನು ರಚಿಸುವ ಕಾರಣ ಅದೇ ಹೆಸರು ಬಂದಿದೆ.

ಪುರಾತನ ಕಾಲದಿಂದಲೂ ತಮ್ಮ ಮನೆಯ ಗೋಡೆ ಮತ್ತು ನೆಲದಲ್ಲಿ ಈ ಶೈಲಿಯ ಚಿತ್ರಗಳನ್ನು ಅಲ್ಲಿನ ಮಹಿಳೆಯರು ರಚಿಸುತ್ತಿದ್ದರು. ಅದಕ್ಕಾಗಿ ಅವರು ಬಳಸುವುದು ಅರೆದ ಅಕ್ಕಿ ಮತ್ತು ಬಣ್ಣಗಳ ಮಿಶ್ರಣದ ಅಂಟು (ಪೇಸ್ಟ್). ಅಲ್ಲಿ ಮಗುವಿನ ಜನ್ಮ, ಚೌರ (ತಲೆಗೂದಲು ಕತ್ತರಿಸುವ) ಸಮಾರಂಭ, ಹಬ್ಬಗಳು, ಉಪವಾಸ - ಈ ಸಂದರ್ಭಗಳಲ್ಲಿ ಮತ್ತು ದೇವರನ್ನು ಪೂಜಿಸಲಿಕ್ಕಾಗಿ ಮಧುಬನಿ ಚಿತ್ರಗಳನ್ನು ಬಿಡಿಸುವ ವಾಡಿಕೆ.

ಇಲ್ಲಿರುವ ಮೀನುಗಳ ಚಿತ್ರದಲ್ಲಿ ಪಾರಂಪರಿಕ ಗಾಢ ಬಣ್ಣಗಳಲ್ಲಿ ಕಪ್ಪು ಮತ್ತು ಬಿಳುಪಿನ ರೇಖೆಗಳ ವಿನ್ಯಾಸವಿದೆ.

Image

ಕ್ಷಣ ಹೊತ್ತು ಅಣಿ ಮುತ್ತು (ಭಾಗ ೭)

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್. ಷಡಾಕ್ಷರಿ
ಪ್ರಕಾಶಕರು
ರಮಣಶ್ರೀ ಪ್ರಕಾಶನ, ನಂ ೧೬, ರಾಜಾ ರಾಮ ಮೋಹನ ರಾಯ್ ರಸ್ತೆ, ಬೆಂಗಳೂರು ೫೬೦೦೨೫
ಪುಸ್ತಕದ ಬೆಲೆ
ರೂ 100.00

ಕ್ಷಣ ಹೊತ್ತು ಅಣಿ ಮುತ್ತು (ಭಾಗ ೭) ಇದು ಎಸ್ ಷಡಾಕ್ಷರಿಯವರ ಮುಂದುವರೆದ ಅಂಕಣ ಸರಣಿಯ ಪುಸ್ತಕ. ಮೊದಲು ಪ್ರಕಟವಾದ ಪುಸ್ತಕಗಳು ಜನ ಪ್ರಿಯವಾಗಿದೆ. ಈ ಪುಸ್ತಕದಲ್ಲಿನ ಬರಹಗಳು ಲೇಖಕರು ಕನ್ನಡ ಪ್ರಭ ಪತ್ರಿಕೆಯಲ್ಲಿ ದಿನಂಪ್ರತಿ ಬರೆದ ಲೇಖನಗಳ ಸಂಗ್ರಹ. ೭೫ ಸಣ್ಣ ಸಣ್ಣ ಬರಹಗಳು ಓದಿಸಿಕೊಂಡು ಹೋಗುತ್ತವೆ. ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬಲ್ಲ ಅನೇಕ ವಿಷಯಗಳನ್ನು ಲೇಖಕರು ಸಣ್ಣ ಸಣ್ಣ ಕಥೆ, ದೃಷ್ಟಾಂತಗಳ ಮುಖಾಂತರ ತಿಳಿಸಿಕೊಟ್ಟಿದ್ದಾರೆ. ಸರಾಗವಾಗಿ ಓದಿಸಿಕೊಂಡು ಹೋಗುವ ಈ ಬರಹಗಳು ನಮ್ಮ ಜೀವನಕ್ಕೆ ಮಾರ್ಗದರ್ಶಕವಾಗುವಲ್ಲಿ ಸಂಶಯವಿಲ್ಲ.

ಕೋಲಾರ: ನೀರಿಗಾಗಿ ಹಾಹಾಕಾರ

ಮಾರ್ಚ್ ೩, ೨೦೧೬ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ರೈತ ಪ್ರತಿಭಟನಾಕಾರರ ಟ್ರಾಕ್ಟರುಗಳಿಂದ ತುಂಬಿ ಹೋಯಿತು. ವಾಹನ ಸಂಚಾರ ಸ್ಥಗಿತವಾಗಿ, ಪೊಲೀಸರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ೧೦,೦೦೦ ರೈತ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದರು.

ಆ ಪ್ರತಿಭಟನೆಯ ಮುಂದುವರಿದ ಭಾಗವಾಗಿ ೧೬ ಜೂನ್ ೨೦೧೬ರಿಂದ ನಾಗರಿಕರ ನಿರಂತರ ಧರಣಿ ಆರಂಭ - ಕೋಲಾರ ನಗರದ ಕಾಲೇಜ್ ವೃತ್ತದಲ್ಲಿ - ತಮ್ಮ ಜಿಲ್ಲೆಯ ನೀರಿನ ಕೊರತೆಗೆ ಸರಕಾರ ಶಾಶ್ವತ ಪರಿಹಾರ ಒದಗಿಸಬೇಕೆಂಬ ಬೇಡಿಕೆ. ಯಾಕೆಂದರೆ, ೨೦೧೬ರಲ್ಲಿಯೂ ಕೋಲಾರದಲ್ಲಿ ಅತ್ಯಲ್ಪ ಮಳೆ. ಶೇಕಡಾ ೫೦ರಷ್ಟು ಬೆಳೆ ನಷ್ಟವಾಗಿ ರೈತರು ಕಂಗಾಲು.

Image