ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಡಿಯೂರಪ್ಪನವರು ಇರಬೇಕು!

        ಮುಖ್ಯಮಂತ್ರಿ ಯಡಿಯೂರಪ್ಪನವರು ಇರಬೇಕು. ಅವರನ್ನನುಸರಿಸಿಕೊಂಡು ಇರುವುದದರೆ ಬಿಜೆಪಿಯೂ ಇರಲಿ, ಪರವಾಗಿಲ್ಲ!


ಬಿಜೆಪಿ ಎಂಬ ಕಿರುಕುಳದ ನಡುವೆಯೂ ನಿರ್ಣಾಯಕವಾಗಿ ಗೆದ್ದ ಹೆಗ್ಗಳಿಕೆ ನರೇಂದ್ರ ಮೋದಿಯವರದಾಗಿತ್ತು. ಹಾಗೇ ಯಡಿಯೂರಪ್ಪನವರೂ ಈಗ ಸ್ವಂತಿಕೆಯಿಂದ ಸೆಟೆದುನಿಲ್ಲುತ್ತಿರುವುದು ಸಂತೋಷ.


ಕರ್ನಾಟಕದ ಮುಖ್ಯಮಂತ್ರಿಯನ್ನು ಮಣಿಸುವುದಕ್ಕೇ ಕಾದು ಕುಳಿತಿದ್ದಾರೆಂಬಂತೆ ಬಿಂಬಿತರಗಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷರು, ಯಡಿಯೂರಪ್ಪನವರು ದೆಹಲಿಗೆ ಕಾಲಿರಿಸುತ್ತಿದ್ದಂತೆಯೇ, ತಮ್ಮ ಮಗಳ ಮದುವೆ ಸಿದ್ಧತೆ ನೆನಪಿಸಿಕೊಂಡು ನಾಗಪುರಕ್ಕೆ ಕಾಲ್ಕಿತ್ತರು! ಇದಾವ ರಣತಣತ್ರವೋ, ರಣಛೋಡ್ ತಂತ್ರವೊ ಅರ್ಥವಾಗಲಿಲ್ಲ! ಇದೆಲ್ಲಾ ವೀರಶೈವ ಗುರುಸಮುದಾಯದ ಸಮೂಹಿಕ ಮಂತ್ರ-ತಂತ್ರದ ಮಹಾತ್ಮೆ ಎಂದು ಮುಖ್ಯಮಂತ್ರಿಗಳು ಭಾವಿಸಿದರೆ ಮಾತ್ರಾ, ಅದು ರಾಜ್ಯದ ಯೊಚಿಸಬಲ್ಲ ಜನತೆಯ ಕಿವಿಗೆ ಹೂ ಸಗಿಸಿದಂತಾಗುತ್ತದೆ ಎನ್ನುವುದನ್ನವರು ಮರೆಯಬಾರದು!

ಸಿಂಗಪುರ ಕರ್ನಾಟಕ ವೈಭವದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ - ಸಾಹಿತ್ಯ-ಸಂವಾದದಲಿ ಪ್ರಶ್ನೋತ್ತರ...

ನವೆಂಬರ್ ೯ ರ ಸಂಜೆ ಸಿಂಗಪುರ ಕರ್ನಾಟಕ ವೈಭವದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನಕ್ಕಾಗಿ ಆಹ್ವಾನಿತರಾಗಿದ್ದ ಪ್ರೊ. ನಿಸಾರ್ ಅಹಮದ್, ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ದಟ್ಸ್ ಕನ್ನಡ ಸಂಪಾದಕ ಎಸ್.ಕೆ.ಶ್ಯಾಮ್‍ಸುಂದರ್ ಅವರೊಡನೆ ಸಿಂಗಪುರದ ಗೋವಿಂದಸ್ವಾಮಿ ಕಲ್ಯಾಣ ಮಂಟಪದಲಿ ಸಾಹಿತ್ಯ-ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು.

ಸಾಹಿತ್ಯ-ಸಂವಾದದಲಿ ಪ್ರಶ್ನೋತ್ತರ...

 

೧>. ಪ್ರೊ. ನಿಸಾರ್ ಅವರಿಗೆ: ನಿಮ್ಮ ಕವನಗಳಲ್ಲಿ ನೋವು ಇದೆ, ಬರೆಯಲು ಪ್ರೇರಣೆ ಏನು?

ರೈಟ್ರು ಭಟ್ರು ಹೇಳಿದ “ಚೌಡಿಯ ಕಣ್ಣು ಕಟ್ಟಿದ” (ನಿಜ)ಕತೆ!!!!

                          ಮೊನ್ನೆ ಮುಸ್ಸಂಜೆಲಿ ಆಡಾಡ್ ಮಳೆ ಜೋರ್ ಬರ್ತಿದ್ದಾಗ-ಮಳೆ ನಿರೀಕ್ಷೆಯಿಲ್ಲದೆ ಮನೇಲಿ ಕೊಡೆ ಬಿಟ್ಟ್ ಬಂದಿದ್ದ ರೈಟ್ರುಭಟ್ರು-ಅದು ಇದು ಮಾತಾಡ್ತಾ-ನಂಬಿಕೆ ಆಚಾರಗಳ ವಿಚಾರ ಬಂದಾಗ-ಇತ್ತೀಚೆಗಷ್ಟೇ ನಡೆದ-ಅವರು ಬೇರೆ ಯಾರಿಗೂ ಹೇಳಬೇಡಿ ಎಂದು ಹೇಳಿ ಹೇಳಿದ-ಒಂದು ನಿಜ ಘಟನೆ ಇಗೋ ನಿಮ್ಮ ಮುಂದೆ. (ರೈಟ್ರುಭಟ್ರು –ಹಾಗೆಂದರೇನು??

ನಾಡಿಗರ ಹುಟ್ಟು ಹಬ್ಬದ ರಸ ಕ್ಷಣಗಳು

ಬೆಳಗ್ಗೆ 4ಕ್ಕೆ ಪೋನ್ ಬಂತು, ಹಲೋ ಯಾರಲಾ, ನಾನುರೀ ನಾಡಿಗರು, ಏನೀಗ, ನಾನು ಕಣ್ರೀ ಸಂಪದ ಹರಿಪ್ರಸಾದ್ ನಾಡಿಗರು, ಸರ್ ಹೇಳಿ ಸಾ. ಹೇಗಿದೀರಾ. ನಾನು ಚೆನ್ನಾಗಿದೀನಿ. ಇವತ್ತು ನನ್ನ ಹುಟ್ಟು ಹಬ್ಬ ಸಂಜೆ 6ಕ್ಕೆ, ನೀವು ಬರಲೇಬೇಕು ಕಣ್ರೀ, ಅಂಗೇ ನಿಮ್ಮ ಗೌಡಪ್ಪಂಗೆ ಸ್ನಾನ ಮಾಡಕಂಡು ಬರಕ್ಕೆ ಹೇಳ್ರೀ, ಯಾಕೇಂದ್ರೆ ನನ್ನ ಮಗೂಗೆ ಇನ್್ಫೆಕ್ಸನ್ ಆಯ್ತದೆ ಅಂದ್ರು. ಸರಿ ಸಾ ಅಂದು ಮತ್ತು ಅಂಗೇ ಪಾಚ್ಕೊಂಡೆ. ಸರಿ ಬೆಳಗಿನ ನಮ್ಮ ಕಾರ್ಯಕ್ರಮದಲ್ಲಿ ಎಲ್ಲಾರೂ ಸಿಕ್ಕರು. ನೋಡ್ರಲಾ ನಮ್ಮ ನಾಡಿಗರು ಪೋನ್ ಮಾಡವ್ರೆ ಅವರ ಹುಟ್ಟು ಹಬ್ಬವಂತೆ ನಾವೆಲ್ಲಾ ಹೋಗಬೇಕು ಕಲಾ ಅಂದೆ. ಸರಿ ಎಲ್ಲಾ ಇಸ್ಮಾಯಿಲ್ ಬಸ್್ಗೆ ಹೊಂಟ್ವಿ. ಹೊರಡಬೇಕಾದ್ರೆ ರಾಜರು ಇದ್ದಂಗೆ ಇದ್ವಿ, ಅಲ್ಲಿ ತಲಪೋ ಹೊತ್ತಿಗೆ ಎಲ್ಲಾರೂ ಕಾರ್ಪೊರೇಸನ್ ಕಸಾ ಹೊಡಿಯೋರು ತರಾ ಆಗಿದ್ವಿ.

"ಅಮ್ಮ"

 

 

ನಿನ ನೋವು ನನದಾಗಬೇಕು

ಈಡೇರುವ ಕ್ಷಣ ನಿನದಾಗಬೇಕು.

ಹೇಗೆ ಕೊಟ್ಟುಕೊಳ್ಳಲಿ ಈ

ನೀರಸ ಎನ್ನಿಸಿದ ಈ ಬಾರಿಯ ಸ೦ಪದ ಸಮ್ಮಿಲನ!!

ನವೆ೦ಬರ್ ೨೧ರ ಭಾನುವಾರ ಸೃಷ್ಟಿ ವೆ೦ಚರ್ಸಿನಲ್ಲಿ ಸ೦ಪದ ಸಮ್ಮಿಲನ ಎ೦ದು ಹರೀಶ್ ಆತ್ರೇಯರು ಸ೦ಪದದಲ್ಲಿ ಪ್ರಕಟಿಸಿದ ದಿನದಿ೦ದ ನನ್ನಲ್ಲಿ ಒ೦ದು ರೀತಿಯ ಅಗಾಧ ಕಾತುರ ಮನೆ ಮಾಡಿತ್ತು.  ಕಳೆದ ಬಾರಿ ದೊಮ್ಮಲೂರಿನಲ್ಲಿ ನಡೆದ ಸ೦ಪದ ಸಮ್ಮಿಲನದ ಸಚಿತ್ರ ವರದಿಯನ್ನು ಸ೦ಪದದಲ್ಲಿ ಪ್ರಕಟಿಸಿದ ನ೦ತರ ಬ೦ದ ಭರಪೂರ ಪ್ರತಿಕ್ರಿಯೆಗಳನ್ನು ನೋಡಿ ಮು೦ದಿನ ಸಲ ಸ೦ಪದ ಸಮ್ಮಿಲನವೇನಾದರೂ ನಡೆದಲ್ಲಿ ಕೊನೆ ಪಕ್ಷ ಬೆ೦ಗಳೂರಿನಲ್ಲಿರುವ ಅರ್ಧದಷ್ಟಾದರೂ ಸ೦ಪದಿಗರು ಬರಬಹುದೆ೦ಬ ನಿರೀಕ್ಷೆ ನನ್ನಲ್ಲಿ ಮನೆ ಮಾಡಿತ್ತು.  ಆದರೆ ೧೧-೨೦ಕ್ಕೆ ಸರಿಯಾಗಿ ಸೃಷ್ಟಿ ವೆ೦ಚರ್ಸ್ ತಲುಪಿದ ನನಗೆ ಅಲ್ಲಿ ಕ೦ಡಿದ್ದು ಸಮ್ಮಿಲನದ ರೂವಾರಿ ಹರೀಶ್ ಆತ್ರೇಯ ಮಾತ್ರ!  ಅದುವರೆಗೂ ಹಲವಾರು ಬಾರಿ ಅವರ ಮೊಬೈಲಿಗೆ ಕರೆ ಮಾಡಿ ಸೋತಿದ್ದ ನಾನು ಅವರನ್ನು ಮೊದಲು ಕೇಳಿದ ಪ್ರಶ್ನೆ "ನಿಮ್ಮ ಮೊಬೈಲ

ಯಡಿಯೂರಪ್ಪವನವರು ಪ್ರಜಾಸತ್ತೆಯ ನಿಜ ನಾಯಕರ ಪೈಕಿ ಒಬ್ಬರಾದಾರೇ?!

        ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ಸರಕಾರ ಕಕಮಕವಾಗಿದೆ. ಕಚಗುಳಿ ಸನ್ನಿವೇಶ ಬಂದಾಗಲೆಲ್ಲಾ ಅದನ್ನು ಹೈಕಮಾಂಡ್ ಮೇಲೆ ಹಾಕಿ ಪಾರಾಗುವುದು ಸಾಮಾನ್ಯವಾಗಿ ಕಾಂಗ್ರೆಸ್ ತಂತ್ರ. ಈ ತಂತ್ರಗಾರಿಕೆಯನ್ನದು, ತನ್ನ ರಾಜಕೀಯ ಸಂಸ್ಕೃತಿ ಎನ್ನುವ ಮಟ್ಟಿಗೆ ಅನುಸರಿಸುತ್ತಾ ಬಂದಿದೆ. ಸ್ಥಳೀಯ ನಾಯಕರ ಹೇಡಿತನ ಎಂದು ಇದನ್ನು ಬಿಜೆಪಿ ಹಾಗೂ ಇತರ ಪಕ್ಷಗಳು ಛೇಡಿಸಿರುವುದುಂಟು. ಆದರೆ ಆ ಪಕ್ಷದ್ದೇ ಮುಖ್ಯಮಂತ್ರಿಯೊಬ್ಬರು ಆ ಹೈಕಮಾಂಡ್‌ಗೆ ಚೆಳ್ಳೇಹಣ್ಣು ತಿನ್ನಿಸಹೋಗುತ್ತಿರುವುದು ಆಪ್ಯಾಯಮಾನ ಎನಿಸುತ್ತದೆ!