ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2
ಅಸ್ಸಾ೦ನಲ್ಲಿ ಕಳೆದ 4 ದಿನಗಳಲ್ಲಿ ಶ೦ಕರ ಬಹಳಷ್ಟು ಜನರನ್ನು ಭೇಟಿಯಾದ. ವಿಚಿತ್ರವೆನಿಸಿದ್ದು ಎಲ್ಲರೂ ಆತನ ಸಾಹಸವನ್ನು ಮೆಚ್ಚಿದರೂ, ಆತನ ಮು೦ದಿನ ಪಯಣದ ಬಗ್ಗೆ ಆತ೦ಕ ವ್ಯಕ್ತ ಪಡಿಸುತ್ತಿದ್ದರು. ನೀನು ಮು೦ದೆ ಹೋಗುವ ರಾಜ್ಯಗಳು ಪ್ರವಾಸಿಗರಿಗೆ ಕ್ಷೇಮವಲ್ಲ ಮಣಿಪುರ, ನ್ಯಾಗಲ್ಯಾ೦ಡ್ ಗಳ ರಸ್ತೆಗಳಲ್ಲಿ ಹಾಡುಹಗಲೇ ದರೋಡೆ ಸುಲಿಗೆಗಳಾಗುತ್ತವೆ. ಅದೂ ಎಲ್ಲಾದರೂ ಪಡ್ಡೆಗಳ, ಲೂಟಿಕೋರರ ಕೈಗೆ ಸಿಕ್ಕಿ ಹಾಕಿಕೊ೦ಡರೆ ಜೀವ ಉಳಿಯುವ ಗ್ಯಾರ೦ಟಿ ಇಲ್ಲ!! ಎ೦ದು... ಈ ಎಲ್ಲ ಅನಿಸಿಕೆಗಳಿಗೆ ಒಮ್ಮೆ ಗ೦ಟಲಿನ ಪಸೆ ಆರಿದ್ದು ಸತ್ಯ, ಆದರೂ ಮುಕ್ಕಾಲು ಪಯಣ ಮುಗಿಸಿರುವೆ, ಆಗೋದಾಗಲಿ ಎ೦ದು ಧೈರ್ಯದಿ೦ದ ಹೊರಟೇ ಬಿಟ್ಟ.