ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾರತ ಮಾತೆಗೆ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ - ಭಾಗ 2

ಅಸ್ಸಾ೦ನಲ್ಲಿ ಕಳೆದ 4 ದಿನಗಳಲ್ಲಿ ಶ೦ಕರ ಬಹಳಷ್ಟು ಜನರನ್ನು ಭೇಟಿಯಾದ. ವಿಚಿತ್ರವೆನಿಸಿದ್ದು ಎಲ್ಲರೂ ಆತನ ಸಾಹಸವನ್ನು ಮೆಚ್ಚಿದರೂ, ಆತನ ಮು೦ದಿನ ಪಯಣದ ಬಗ್ಗೆ ಆತ೦ಕ ವ್ಯಕ್ತ ಪಡಿಸುತ್ತಿದ್ದರು. ನೀನು ಮು೦ದೆ ಹೋಗುವ ರಾಜ್ಯಗಳು ಪ್ರವಾಸಿಗರಿಗೆ ಕ್ಷೇಮವಲ್ಲ ಮಣಿಪುರ, ನ್ಯಾಗಲ್ಯಾ೦ಡ್ ಗಳ ರಸ್ತೆಗಳಲ್ಲಿ ಹಾಡುಹಗಲೇ ದರೋಡೆ ಸುಲಿಗೆಗಳಾಗುತ್ತವೆ. ಅದೂ ಎಲ್ಲಾದರೂ ಪಡ್ಡೆಗಳ, ಲೂಟಿಕೋರರ ಕೈಗೆ ಸಿಕ್ಕಿ ಹಾಕಿಕೊ೦ಡರೆ ಜೀವ ಉಳಿಯುವ ಗ್ಯಾರ೦ಟಿ ಇಲ್ಲ!! ಎ೦ದು... ಈ ಎಲ್ಲ ಅನಿಸಿಕೆಗಳಿಗೆ ಒಮ್ಮೆ ಗ೦ಟಲಿನ ಪಸೆ ಆರಿದ್ದು ಸತ್ಯ, ಆದರೂ ಮುಕ್ಕಾಲು ಪಯಣ ಮುಗಿಸಿರುವೆ, ಆಗೋದಾಗಲಿ ಎ೦ದು ಧೈರ್ಯದಿ೦ದ ಹೊರಟೇ ಬಿಟ್ಟ.

ಅಂದು - ಇಂದು

 

1810ರ ಡಿಸೆಂಬರ್ ತಿಂಗಳಿನಲ್ಲಿ ಬೊಕ್ಕಸದಿಂದ ದಿವಾನ್ ಪೂರ್ಣಯ್ಯ ಖರ್ಚು ಮಾಡಿದ 9,031,380 ಕಂಠೀರಾಯ ವರಹಗಳಿಗೆ ಲೆಕ್ಕ ಸಿಗದಿದ್ದಾಗ, ರೆಸಿಡೆಂಟ್ ಕೋಲ್ ಮಹಾರಾಜರ ಸಲಹೆ ಮೇರೆಗೆ ಪೂರ್ಣಯ್ಯರನ್ನು ಬಲವಂತ ನಿವೃತ್ತಿಗೊಳಿಸಿದರು. ಇಂಥ ಸಂದರ್ಭದಲ್ಲೂ ಮಾನವತೆಯ ಔದಾರ್ಯ ತೋರಿದ ಒಡೆಯರ್ ಜೋಡು ಶಾಲುಗಳನ್ನು ಹೊದಿಸಿ ಪೂರ್ಣಯ್ಯರನ್ನು ಸನ್ಮಾನ ಮಾಡಿ ಬೀಳ್ಕೊಡುಗೆ ನೀಡಿದರಲ್ಲದೆ, ನಿವೃತ್ತಿ ವೇತನವಾಗಿ ಮಾಸಿಕ 500 ವರಹಗಳನ್ನು ಪ್ರಕಟಿಸಿದರು.

ತಪ್ಪು ಯಾರದು..

ಮಿಂಚಂಚೆಯಲ್ಲಿ ಬಂದದ್ದು..ಕನ್ನಡಕ್ಕೆ ಅನುವಾದಿಸಿದ್ದೇನೆ.


ಹತ್ತನೇ ತರಗತಿಯಲ್ಲಿ..


ನಾನು ತರಗತಿಯಲ್ಲಿ ಕುಳಿತಿದ್ದಾಗ ಅವಳನ್ನೇ ಎವೆಯಿಕ್ಕದೆ ನೋಡುತ್ತಿದ್ದೆ. ಅವಳು ನನ್ನ ಆತ್ಮೀಯ ಗೆಳತಿ. ನಾನು ಅವಳ ನೀಳವಾದ ಕಪ್ಪು ಜಡೆಯನ್ನೇ ನೋಡುತ್ತಾ ಅವಳು ನನ್ನವಳಾಗಬೇಕೆಂದು ಹಂಬಲಿಸುತ್ತಿದ್ದೆ. ಆದರೆ ಅವಳಲ್ಲಿ ಆ ಭಾವನೆ ಇರಲಿಲ್ಲ ಅದು ನನಗೆ ಗೊತ್ತು. ತರಗತಿಯ ನಂತರ ಅವಳು ನನ್ನ ಹತ್ತಿರ ಬಂದು ಹಿಂದಿನ ದಿನ ತಾನು ಬರದಿದ್ದ ಕಾರಣ ಹಿಂದಿನ ದಿನದ ನೋಟ್ಸ್ ಕೇಳಿ ಪಡೆದುಕೊಂಡು ಥ್ಯಾಂಕ್ಸ್ ಎಂದು ಹೇಳಿ ನನ್ನ ಕೆನ್ನೆಗೆ ಒಂದು ಮುತ್ತಿಟ್ಟಳು..ನಾನು ಅವಳಿಗೆ ಹೇಳಬಯಸಿದೆ. ನಾವಿಬ್ಬರು ಕೇವಲ ಗೆಳೆಯರಾಗಿರಬಯಸಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳೋಣ ಅನಿಸಿತು. ಆದರೆ ನನಗೆ ತುಂಬಾ ನಾಚಿಕೆ...ಏಕೆ ಎಂದು ತಿಳಿಯುತ್ತಿಲ್ಲ...

ಅರಬ್ಬರ ನಾಡಿನಲ್ಲಿ....೧೧....ಕಾಮಿನಿ ಕಮಲಳ ಕರುಣಾಜನಕ ಕಥೆ!

ಕಾಫಿ ಶಾಪಿನಲ್ಲಿ ವೈಯ್ಯಾರದಿ೦ದ ಬಳುಕುತ್ತಾ ಬ೦ದು ನನ್ನ ಮು೦ದೆ ಕುಳಿತ ಚೆಲುವೆ ಕಮಲ "ನನ್ನ ಕಥೆಯನ್ನೊಮ್ಮೆ ಕೇಳಿ ಸಾರ್" ಅ೦ದಾಗ ಪ್ರಶ್ನಾರ್ಥಕವಾಗಿ ಅವಳತ್ತ ದಿಟ್ಟಿಸಿದೆ.  "ನೀನು ಯಾರೋ, ನಾನು ಯಾರೋ, ಇಲ್ಲಿ ಅಚಾನಕ್ಕಾಗಿ ಭೇಟಿಯಾಗಿದ್ದೇವೆ, ನೀನು ಬಾರಿನಲ್ಲಿ ಕುಣಿಯುವ ನರ್ತಕಿ, ನಿನ್ನ ಕಥೆ ನಾನೇಕೆ ಕೇಳಬೇಕು?" ಎ೦ದವನ ಮುಖವನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದ ಕಮಲ, "ನಮಗೂ ಒ೦ದು ಮನಸ್ಸಿದೆ ಸಾರ್, ಅದರಲ್ಲೂ ಸಾಕಷ್ಟು ತುಡಿತಗಳಿವೆ, ಯಾರು ಒಳ್ಳೆಯವರು, ಯಾರು ಕೆಟ್ಟವರು ಎ೦ದು ನಮಗೂ ಅರ್ಥವಾಗುತ್ತದೆ ಸಾರ್, ನೀವು ಆಗಾಗ ಬರುವುದು, ಮೂಲೆಯಲ್ಲಿ ಕುಳಿತು ಬಿಯರ್ ಹೀರುತ್ತಾ ಹಾಡುಗಳನ್ನು ಕೇಳುತ್ತಾ, ನಮ್ಮ ನಾಟ್ಯವನ್ನು ನೋಡುತ್ತಾ ಮೈಮರೆಯುವುದು, ಬಾರಿನ ಸಮಯ ಮುಗಿದ ನ೦ತರ ಸದ್ದಿಲ್ಲದ೦ತೆ ಎದ್ದು ಹೋಗುವುದನ್ನು ನಾನು ನೋಡುತ್ತಾ ಬ೦ದಿದ್ದ

ಬಾಳ ಪಯಣ....

ಬಾಳ ನೌಕೆಯ ಈ ಪಯಣ,

ನಾವಿಕ ಯಾರೋ? ದಾರಿ ಯಾವುದೋ?

ಆದರೂ ಪಯಣಿಗರು ನಾವು,

ಕಾಣದ ದಾರಿಯ, ಗುರಿಯ ಸೇರಲು ತವಕಿಸುವವರು,

 

ಜೀವನ ಸಾಗರದ ಮದ್ಯದಲ್ಲೆಲ್ಲೋ ತೇಲುತಿರುವ,

ಗುರಿ ಸೇರಿದೆವೆಂದು ಭಾವಿಸುವವರು,

ಆದರೂ, ಒಂದು ದಿನ ಮುಗಿಯಲೇ ಬೇಕು ಈ ಪಯಣ,

ಆಗಲಿ ಬದುಕಿನ ಪಯಣ ಆನಂದಮಯ.... 

 

 

-ಸಾಕ್ಷಾತ್ಕಾರ-

ಮದುವೆಯೆಂದರೆ ಸ್ವಾತಂತ್ರದ ಹರಣ
ನಮ್ಮತನವ ವಿಮರ್ಶೆಗೊಳಪಡಿಸಿ ತೋರುವ ಮರಣ

ತನ್ನ ಮನೆಯಲ್ಲೇ ಆಗುವನು ಪರಕೀಯ
ಸುಖ-ಸಂತೋಷದ ತೋರುವಿಕೆಯ ರಾಜಕೀಯ
ಮಾತಿಗೆ ಬೆಲೆಯಿಲ್ಲ ,ತನ್ನವರ ನಡುವೆಯೇ ಅಸ್ಪೃಶ್ಯ
ನೋಡುಗರಿಗೆ ಮನರಂಜನೆಯ ದೃಶ್ಯಕಾವ್ಯ

ಎಲ್ಲೇ ಹೋದರೂ, ತಡವಾಗಿ ಬಂದರೂ
ಮೈಮೇಲೆ ಬೀಳುವುದು ಪ್ರಶ್ನೆಗಳ ಬಾಣ
ಮನೆಯಲ್ಲಿ ತನ್ನ ಪಾಡಿಗೆ ತಾನು ಸುಮ್ಮನಿದ್ದರೂ
ಠೀಕೆ-ಟಿಪ್ಪಣಿ ಮೊನಚು ಮಾತಿನ ಭಾಷಣ

ಹೆಚ್ಚು ಮಾತನಾಡಿದರೂ ಕಷ್ಟ
ಮೌನಿಯಾದರಂತೂ ತೀರ ನಿಕೃಷ್ಟ
ಬೆಂಕಿಯಿಲ್ಲದೆ ಬೇಯುವುದೇ ಸಂಸಾರ
ಇದುವೇ ಸತ್ಯ ದರುಶನದ ಸಾಕ್ಷಾತ್ಕಾರ

ರಾಜಕೀಯ... ನನಗನಿಸಿದ್ದು...

ಯಡ್ಡಿಯೂರಪ್ಪ ಕನ್ನಡ ನಾಡಿನಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದವರು. ಇವತ್ತು ಯಡೆಯೂರಪ್ಪ ಇರಲಿಲ್ಲ ಅಂದ್ರೆ ಕರ್ನತಾಕದಲ್ಲಿ bjp ಇರ್ತಾನೆ ಇರಲಿಲ್ಲ. ಈ ವ್ಯಕ್ತಿ ತಳಮಟ್ಟದಿಂದ ತಾನು ಎದ್ದು ಬಂದಿದ್ದೆ ಅಲ್ಲದೆ ತನ್ನ ಪಕ್ಷಕ್ಕೂ ಒಂದು ನೆಲೆ ಕಟ್ಟಿ ಕೊಟ್ಟವರು.

ವೈಯಕ್ತಿಕವಾಗಿ ಯಡೆಯೂರಪ್ಪನವರ ಅತಿ ಅನ್ನಿಸುವಷ್ಟು ಮುಗ್ದ ನಂಬಿಕೆ/ಭಕ್ತಿ ಅತ್ವ ಸುತ್ತ ಅಂಟಿಕೊಂಡಿರುವ ಆರೋಪಗಳೇನೆ ಇರಲಿ....

ಇವರನ್ನು ಕುಮಾರಸ್ವಾಮಿ, ಸಿದ್ದರಾಮಯ್ಯ ಆಟ ಆಡಿಸುತ್ತದ್ದಾಗ ಇದು ಅವರ ರಾಜಕೀಯ ಅಂತ ಸುಮ್ನೆ ಇದ್ವಿ.

ಆದ್ರೆ ಇವತ್ತು ಕರ್ನಾಟಕಕ್ಕೆ ಸಂಬಂಧನೆ ಇಲ್ಲದೆ ಇರೋ ಗಡ್ಕರಿ ನಾಯ್ಡು ಸಿಂಗಗಳು ಒಬ್ಬ ಪ್ರಬುದ್ದ ಕನ್ನಡ ನಾಯಕನ ಬಗ್ಗೆ ತೀರ್ಮಾನ ತೆಗೆಡುಕೊಳ್ತೀವಿ ಅಂತ ಅನ್ನೋದು ನೋಡಿ ಯಾಕೆ ಸಹಿಸಕ್ಕೆ ಆಗ್ತಾ ಇಲ್ಲ.

bjp ನ so called core committee ನವರಿಗೆ ಕನ್ನಡ ದ ಬಗ್ಗೆ ಕನ್ನಡ ನಾಡಿ ಬಗ್ಗೆ ಏನು ಗೊತ್ತು. ಅವರು ಕರ್ನತಾಕದಲ್ಲಿ ಬಿಜೆಪ ಬೆಳೆಯಲು ಅವರ ಕೊಡುಗೆ ಏನು?. ಮೊದಲು ಇದನ್ನು ನಾವು ತಿಳಿಯ ಬೇಕಿದೆ.

ನಾನೊ೦ದು ಹಿಮಬಿ೦ದು

(ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)

ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!

ನದಿ ಸಾಗರಗಳ ಎಲ್ಲೆ ದಾಟಿ
ದೇಶ ಭಾಷೆಗಳ ಗಡಿಯ ಮೀರಿ
ನೂರಾರು ಜನರೊಡನೆ ಒಡನಾಡಿ
ಹತ್ತಾರು ಕಥೆಗಳ ಕಣ್ಣಾರೆ ಕ೦ಡು

ಅಲ್ಲಿಲ್ಲಿ ಅಲೆದಾದಿ ಬ೦ದು ನಿ೦ದಿಹೆನಿ೦ದು
ನಾನೊ೦ದು ಹಿಮಬಿ೦ದು!

ಕರಗುವಾ ಭಯವಿದೆ ಸುಡು ಬಿಸಿಲಿನಲ್ಲಿ
ಹೆಪ್ಪುಗಟ್ಟುವ ಆತ೦ಕವಿದೆ ಕೊರೆವ ಛಳಿಯಲ್ಲಿ
ಕಣ್ಮರೆಯಾಗುವ ತವಕವಿದೆ ಬಿರುಗಾಳಿಯಲ್ಲಿ
ಆದರೂ ಹೊಳೆದು ತೊನೆಯುವ ಕಾತುರವಿದೆ ಮನದಲ್ಲಿ

ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!