“ಚಿಲ್ಲರೆ”ಜನರ ದೇಶಕಟ್ಟಾಣಿಕೆ
“ಚಿಲ್ಲರೆ ಜನರು ದೇಶ ಕಟ್ಟಲಾರರು” ಎಂದು ಹಿರಿಯ ಚಿಂತಕರೊಬ್ಬರು ಕಳಕಳಿಸಿದ್ದಾರೆ. ಈ ಅನುಭವವೇದ್ಯ ವಿಷಯ ಓದಿದಾಗ, ಅದು ಇನ್ನಷ್ಟು ಆಲೋಚಿಸುವಂತೆ ಮಾಡಿತು.
ಚಿಲ್ಲರೆ ಜನ ದೇಶ ಕಟ್ಟಲಾರರು, ನಿಜ. ಆದರೇನು ಮಾಡುವುದು, ನಮ್ಮ ಚುನಾವಣಾ ವ್ಯವಸ್ಥೆಯೇ, ಇಡೀ ದೇಶವನ್ನು ಚಿಲ್ಲರೆ ಜನರ ಕೈವಶಕ್ಕೆ ಒಪ್ಪಿಸಿಕೊಡುವಂತಿದೆಯಲ್ಲಾ?! ಈ ಜನ ದೇಶ ಕಟ್ಟುವವರಲ್ಲ್ಲ; ಕುಟ್ಟಿ ಒಡೆಯುವವರು. ಕುಟ್ಟಿ ಹುಡಿ-ಹುಡಿ ಮಾಡಿದಷ್ಟೂ, ಅಷ್ಟೂ ಇವರು ಚುನಾವಣೆಗಳಲ್ಲಿ ಯಶಸ್ವಿಯಾಗುತ್ತಾರೆ! ಮಹಾಭಾರತ, ರಾಮಾಯಣಗಳಂಥಾ ಪುರಾಣೇತಿಹಾಸಗಳಲ್ಲೂ ಛಿದ್ರಾನ್ವೇಷೀ ಪೋಲೀ ಪಟಾಲಂ ಖಳನಾಯಕರ ಚಿತ್ರಣವಿದೆ. ಆದರೆ ಕಡೆಯಲ್ಲಿ ಅವರೆಲ್ಲಾ ಹುಡಿ ಮಣ್ಣು ಮುಕ್ಕಿ ಹಾಳಾದರೆಂದೇ ಅವೆಲ್ಲಾ ನೀತಿ ಹೇಳುತ್ತವೆ. ಆದರೆ ನಮ್ಮ ಕಾಲದ ದುಷ್ಟರಾದರೋ, ನಾವೇ ನಿರ್ಮಿಸಿದ ಕಾಯ್ದೆ-ಕಾನುನು ಪ್ರಕಾರವೇ, ಛಿದ್ರಿಕರಣ ಸ್ಪರ್ಧೆಯಲ್ಲಿ ಗೆದ್ದು ಐಭೋಗದ ಮೇಲುಮೇಲಿನ ಮೆಟ್ಟಿಲೇರುತ್ತಲೇ ಹೋಗುತ್ತಾರೆ!
- Read more about “ಚಿಲ್ಲರೆ”ಜನರ ದೇಶಕಟ್ಟಾಣಿಕೆ
- Log in or register to post comments