ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

“ಚಿಲ್ಲರೆ”ಜನರ ದೇಶಕಟ್ಟಾಣಿಕೆ

“ಚಿಲ್ಲರೆ ಜನರು ದೇಶ ಕಟ್ಟಲಾರರು” ಎಂದು ಹಿರಿಯ ಚಿಂತಕರೊಬ್ಬರು ಕಳಕಳಿಸಿದ್ದಾರೆ. ಈ ಅನುಭವವೇದ್ಯ ವಿಷಯ ಓದಿದಾಗ, ಅದು ಇನ್ನಷ್ಟು ಆಲೋಚಿಸುವಂತೆ ಮಾಡಿತು.


ಚಿಲ್ಲರೆ ಜನ ದೇಶ ಕಟ್ಟಲಾರರು, ನಿಜ. ಆದರೇನು ಮಾಡುವುದು, ನಮ್ಮ ಚುನಾವಣಾ ವ್ಯವಸ್ಥೆಯೇ, ಇಡೀ ದೇಶವನ್ನು ಚಿಲ್ಲರೆ ಜನರ ಕೈವಶಕ್ಕೆ ಒಪ್ಪಿಸಿಕೊಡುವಂತಿದೆಯಲ್ಲಾ?! ಈ ಜನ ದೇಶ ಕಟ್ಟುವವರಲ್ಲ್ಲ; ಕುಟ್ಟಿ ಒಡೆಯುವವರು. ಕುಟ್ಟಿ ಹುಡಿ-ಹುಡಿ ಮಾಡಿದಷ್ಟೂ, ಅಷ್ಟೂ ಇವರು ಚುನಾವಣೆಗಳಲ್ಲಿ ಯಶಸ್ವಿಯಾಗುತ್ತಾರೆ!  ಮಹಾಭಾರತ, ರಾಮಾಯಣಗಳಂಥಾ ಪುರಾಣೇತಿಹಾಸಗಳಲ್ಲೂ ಛಿದ್ರಾನ್ವೇಷೀ ಪೋಲೀ ಪಟಾಲಂ ಖಳನಾಯಕರ ಚಿತ್ರಣವಿದೆ. ಆದರೆ ಕಡೆಯಲ್ಲಿ ಅವರೆಲ್ಲಾ ಹುಡಿ ಮಣ್ಣು ಮುಕ್ಕಿ ಹಾಳಾದರೆಂದೇ ಅವೆಲ್ಲಾ ನೀತಿ ಹೇಳುತ್ತವೆ. ಆದರೆ ನಮ್ಮ ಕಾಲದ ದುಷ್ಟರಾದರೋ, ನಾವೇ ನಿರ್ಮಿಸಿದ ಕಾಯ್ದೆ-ಕಾನುನು ಪ್ರಕಾರವೇ, ಛಿದ್ರಿಕರಣ ಸ್ಪರ್ಧೆಯಲ್ಲಿ ಗೆದ್ದು ಐಭೋಗದ ಮೇಲುಮೇಲಿನ ಮೆಟ್ಟಿಲೇರುತ್ತಲೇ ಹೋಗುತ್ತಾರೆ!

ಹೈಜಿನ್ ಇಲ್ಲ!! ಒಂದು ಯೋಚನೆ ಬಂತು...

ಹೈಜೀನ್ ಇಲ್ಲ. ಹಳ್ಳಿಗಳಲ್ಲಿ ಮದುವೆ, ನಾಮಕರಣ ಇತ್ಯಾದಿಗಳಿಗೆ ಹೋದರೆ ಸರಿ ಬರಲ್ಲ. ಅಲ್ಲಿನ ಊಟ, ತಿಂಡಿ ವಗೈರೆ ಹೈಜೀನ್ ಇರಲ್ಲ. ಹೀಗೆ ಹೇಳುವುದು ಸುಲಭ. ವಾಸ್ತವದಲ್ಲಿ ಅದೂ ನಿಜವಿರಬಹುದು ಅಥವಾ ಇಲ್ಲದಿರಲೂ ಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಹೈಜಿನ್ (ಶುಚಿತ್ವ) ಕಡಿಮೆ ಇರುತ್ತದೆ. ಹಾಗೆಂದು ನಮಗೆ ಬೇಕಾದವರ ಸಮಾರಂಭಗಳಿಗೆ ಹೋಗದಿದ್ದರೆ ಅವರಿಗೆ ಬೇಸರವಾಗುವುದಿಲ್ಲವೇ? ಹೋದರೆ, ಅಲ್ಲಿನ ವಾತಾವರಣ ನೋಡಿ ನಮಗೆ ಬೇಸರವಾಗುವುದಿಲ್ಲವೇ? ಖಂಡಿತಾ ಈ ಎರಡಕ್ಕೂ ಉತ್ತರ - ಆಗುತ್ತದೆ ಎನ್ನಬಹುದು.

ಸಂಪದ ಸಮ್ಮಿಲನ ಚಿತ್ರಗಳು

ನಿನ್ನೆ ನಡೆದ ಸಂಪದ ಸಮ್ಮಿಲನದ ಕೆಲವೊಂದಷ್ಟು ಚಿತ್ರಗಳು ಇಲ್ಲಿವೆ:

 

http://picasaweb.google.com/prasad.mahesh/immEiI?feat=directlink

 

ಸಂಪದದಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಏರಿಸಲು ಸಾಧ್ಯವಾಗದ್ದಕ್ಕೆ ಹೊರಗಿನಿಂದ ಕೊಂಡಿ ಇರಿಸಿದ್ದೇನೆ.

ಸಂಪದ ಸಮ್ಮಿಲನಕ್ಕೊಂದು ಬ್ಯಾನರ್

ಸಂಪದ ಸಮ್ಮಿಲನಕ್ಕೊಂದು ಬ್ಯಾನರ್.. ಹೇಗಿದೆ?

 

ಹಾಗೆಯೇ, ಮುಂದಿನ ತಿಂಗಳು ಐದನೆಯ ತಾರೀಖು ಅರ್ಧ ದಿನ ಸಂಪದಿಗರೊಡನೆ. ಈಗಿನಿಂದಲೇ ಬಿಡುವು ಮಾಡಿಟ್ಟುಕೊಳ್ಳುತ್ತೀರಲ್ವ?

ಒಂದಷ್ಟು ಕಾಫಿ ಜೊತೆ ನಾವೆಲ್ಲರೂ ಜೊತೆಗೂಡಿ ಸಮಯ ಕಳೆಯೋಣ, ಆಗಬಹುದೊ?

 

ಆ ದಿನದ ಕಾರ್ಯಕ್ರಮದ ಪೂರ್ಣ ವಿವರ ಮತ್ತು ಅಧಿಕೃತ ಪುಟ ಸದ್ಯದಲ್ಲೇ ಸಂಪದದಲ್ಲಿ ಹಾಕಲಾಗುವುದು.

 

ಲಯನ್ ಸಫಾರಿ ಲಯನ್ಸ್ ವರಿ

"ಅವು ಮಕ್ಕಳಾ....ಥೇಟ್ ಕೋತಿಗಳು. ಬಾಲ ಒಂದಿಲ್ಲ ಅಷ್ಟೇ.." ಅನ್ನುತ್ತಾರೆ, ಚೇಷ್ಟೆ ಮಾಡುವ ಮಕ್ಕಳಿಗೆ.

"೯ ಗಂಟೆಯವರೆಗೆ ಹಾಸಿಗೆಯಲ್ಲಿ ಹೊರಳಾಡುತ್ತಾನೆ, ಕೋಣ" ಮಗನ ಗುಣಗಾನ ತಾಯಿಯಿಂದ.

ಮಂಗನಿಂದ ಮಾನವ ಹೌದೋ ಅಲ್ಲವೋ, ಆದರೆ ಪ್ರಾಣಿಗಳ ಒಂದಿಲ್ಲೊಂದು ಗುಣವನ್ನು ಮಾನವನಿಗೆ ಹೋಲಿಸಿ ಹೊ(ತೆ)ಗಳುವರು. ನಾಯಕ ಯಾವಾಗಲೂ "ಸಿಂಹ". ಆದರೆ ಈಗಿನ ನಾಯಕರ ಬಗ್ಗೆ ಹಾಗೆ ಹೇಳಲು ಸಾಧ್ಯವಿಲ್ಲ.

"ಕುಮಾರಣ್ಣನವರಿಂದ ಸಿಂಹಘರ್ಜನೆ"

"ಕಾಂಗೈ ವರಿಷ್ಠರಿಂದ ಪಕ್ಷದ ಗೆಲುವಿನ(!) ಸಿಂಹಾವಲೋಕನ"

"ಎದುರಾಳಿಗಳಿಗೆ ಯಡ್ಡಿ ಸಿಂಹಸ್ವಪ್ನ" ಈ ತರಹ ಹೇಳಿದರೆ ಅವರವರ ಪಕ್ಷದವರೇ ಬಿದ್ದುಬಿದ್ದು ನಗುವರು.

ಮುಂಜಾನೆ ಹೋಳಿ

ಮುಂಜಾನೆ ಹೋಳಿ ಅಂಬರ ತುಂಬಿತು


ಬಣ್ಣದ ಮೆರುಗು ಸೊಬಗ ತದಿಂತು


ಮೂಡಣ ರವಿಯು ನಡುವಲಿ ನಕ್ಕಾಗ


ಚಿಲಿಪಿಲಿ ಪಕ್ಕಿ ಬಾನಿಗೆ ನೆಗೆದಾವು (ಪಲ್ಲವಿ)


 


ಅಂಗಳದಲಿ ರಂಗೋಲಿ ರಂಗು


ಗುಡ್ದದ ಗುಡಿಯಲಿ ಘಂಟೆಯ ಸದ್ದು


ಭಕ್ತಿಯ ಆರತಿ ಭಾಗ್ಯದ ತುಳಸಿಗೆ


ಲೋಕದ ಲಾಲನೆ ಉದಯದ ಉಗಮಕೆ


 


ತರುಲತೆಗಳ ಹೊಕ್ಕ ಕಿರಣವು


ಕಿಟಕಿಯ ತೂರಿ ಒಳಗಡಿ ಇಟ್ಟಿತು


ಪಸರಿತು ಗಾಳಿಗೆ ಹೂಗಳ ಕಂಪು


ಮನೆಯೊಳಗೆಲ್ಲಾ ಆನಂದ ತಂತು


 


ಹಳ್ಳಿಯ ಹೆಣ್ಣು ಸೇಬು ಹಣ್ಣು


ಬಿಂದಿಗೆ ಹಿಡಿದು ನೀರಿಗೆ ಹೊರಟಳು