ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೌಡಪ್ಪನ ದುಬೈ ಪ್ರವಾಸ - ಭಾಗ ‍೬‍ : ಡೆಸರ್ಟ್ ಸಫಾರಿಯಲ್ಲಿ ಕಣ್ಮರೆಯಾದ ಕಾಮತ್, ಜಯ೦ತ್, ಪ್ರಸನ್ನ!

ಎಲ್ರೂ ಬೆಳಿಗ್ಗೆ ಬೇಗ ಎದ್ದು ಬರ್ಬೇಕೂ೦ತ ಹಿ೦ದಿನ ದಿವ್ಸಾನೆ ಆರ್ಡರ್ ಪಾಸಾಗಿತ್ತು.  ಎಲ್ರೂ ಆರು ಘ೦ಟೆಗೇ ಎದ್ದು ಓಟ್ಲಿನ ಲಾಬಿಗೆ ಬ೦ದು ಸೇರುದ್ರು!  ಅಲ್ಲಿ ದೊಡ್ಡ ಚರ್ಚೆ ಸುರುವಾತು, ಇವತ್ತಿನ ಪ್ರವಾಸಕ್ಕೆ ಎಲ್ಲಿಗೋಗೋದು?  ದುಬೈನ ಮರಳುಗಾಡಿನಾಗೆ ಡೆಸರ್ಟ್ ಸಫಾರಿಗೋಗೋದಾ ಇಲ್ಲ ಸಿಟಿ ಒಳ್ಗಡೆ ಸುತ್ತಾಡೋದಾ?  ಎಲ್ರೂ ಒಮ್ಮತದಿ೦ದ ಡೆಸರ್ಟ್ ಸಫಾರಿಗೋಗೋಣ, ಸಿಟಿ ಇನ್ನೊ೦ದ್ ಕಿತಾ ನೋಡ್ಬೋದು ಅ೦ದ್ರು!  ಮ೦ಜಣ್ಣ ಕೆ೦ಪು ಲ೦ಗದ ಚೆಲ್ವೇಗೆ "ಡೆಸರ್ಟ್ ಸಫಾರಿಗೆ ಓಗಾನ ಕಣಮ್ಮಿ" ಅ೦ದ್ರು!  ಎಲ್ರೂ ಅತ್ತಿದ ಮ್ಯಾಕೆ ಏಸಿ ಬಸ್ಸು ಸೀದಾ ದುಬೈ - ಅಲೇನ್ ರೋಡಿನಾಗೆ ಒ೦ಟು ಸುಮಾರು ೭೦ ಕಿಲೋಮೀಟ್ರು ಬ೦ದು ನಿ೦ತ್ಗೊ೦ತು!  ಗೌಡಪ್ಪ ಮತ್ತವನ ಪಟಾಲಮ್ಮು ತೊಡೆ ಸೊ೦ದಿನಾಗೆ ಕೈ ಇಟ್ಗೊ೦ಡು ಮೂತ್ರ ಮಾಡೋಕ್ಕೆ ಜಾಗ ಎಲ್ಲೈತೆ ಅ೦ತ ಉಡುಕ್ತಾ ಇದ್ರು!  ರಸ್ತೆ

ನಾಯಕತ್ವದ ವಿಲಕ್ಷಣ ಜಿಗಿತ!

        ಹಿರಿತಲೆಮಾರಿನ ಪತ್ರಕರ್ತರ ಪೈಕಿ ಒಬ್ಬರಾದ ವಿ. ಎನ್. ಸುಬ್ಬರಾವ್‌, ಸಂಯುಕ್ತ ಕರ್ನಾಟಕ ಅಂಕಣವೊಂದರಲ್ಲಿ, ತಾವು ತುಂಬಾ ಹತ್ತಿರದಿಂದ ಕಂಡ 15 ಮುಖ್ಯಮಂತ್ರಿಗಳ ಪೈಕಿ ಇಂದಿನವರು, ಆತಂಕದಿಂದ ಆತಂಕಕ್ಕೇ ಜಿಗಿಯುವ ವಿಲಕ್ಷಣ ತೋರುತ್ತಿರುವ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ನಿರ‍್ಲಿಪ್ತ ನಿಲವಿನ Observerಗಳಿಗೂ, ‘ಹೌದಲ್ಲವಾ?’ ಎನಿಸುತ್ತದೆ. ಆದರಿದಕ್ಕೆ, ಯಡಿಯೂರಪ್ಪನವರ ನಾಯಕತ್ವ ಅಥವಾ ವ್ಯಕ್ತಿತ್ವಕ್ಕಿಂತಲೂ ಹೆಚ್ಚಾಗಿ ಯುಗ ಧರ್ಮದ ಅಷಡ್ಡಾಳತನವೇ ಕಾರಣವಾಗಿರಬಹುದಲ್ಲವೇ?

-ಅರಿವಿನ ಹಣತೆ-

ಹಣತೆಯೊಂದು ಬೆಳಕ ಚೆಲ್ಲಿ
ಎಷ್ಟು ಕತ್ತಲ ನುಂಗುವುದೋ?
ಅದರ ಪರಿಧಿಯ ನಾ ಬಲ್ಲೆ
ಬೆಳಕ ಕಾಣದೆ ಎಷ್ಟು ಜೀವಗಳು ನರಳುತಿಹುದೋ?
ಮನದ ಪರಿಧಿಯ ನೀನೊಬ್ಬನೇ ಬಲ್ಲೆ

ರವಿಯ ಕಣ್ಣು ಭೂಮಿಯ ಕಡೆಗೆ
ಜೀವ ಕೋಟಿಗದುವೆ ಕಾರಣ ಏಳಿಗೆಗೆ
ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ಯೋಚನೆ ಬರಿಯ ಹೊಟ್ಟೆಯ ಬಗೆಗೆ

ಮನದ ದೀಪ ಹಚ್ಚಲೊಲ್ಲರು
ಬದುಕಿನ ಭೇಗುದಿಗೆ ನರಳುತಿಹರು
ಕೋಟಿಗೊಬ್ಬನೇ ಸಂಭವಿಸುವನು
ಜನರ ಮನದಲಿ ಅರಿವಿನ ಹಣತೆಯ ಹಚ್ಚುವನು

ಎಷ್ಟು ಯುಗಗಳು ಕಾಯಬೇಕೋ?
ಎಷ್ಟು ಜೀವಗಳು ನರಕಯಾತನೆ ಅನುಭವಿಸಬೇಕೋ?
ಮನದ ಅಂತಃಚಕ್ಷುವ ಎಚ್ಚರಗೊಳಿಸದ ಬೆಳಕು
ನೂರು ಇದ್ದರೇನು? ಇಲ್ಲದಿದ್ದರೇನು?

ನಂಬುವುದೆಂದರೆ ವಂಚಿಸುವ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೬

(೨೮೬) ಬೇಸರಿಕೆಃ ಅತ್ಯಂತ ಕುತೂಹಲಕಾರಿಯಾದ ಸಿನೆಮವನ್ನು ಮತ್ತೆ ಮತ್ತೆ, ಅನವರತವಾಗಿ ವೀಕ್ಷಿಸುವುದು.


(೨೮೭) ಯೌವ್ವನವು ಮುದಿತನಕ್ಕೆ ದಾರಿಯಲ್ಲ, ಬದಲಿಗೆ ಅದರ ಆರಂಭಿಕ ಹಂತವಷ್ಟೇ! ಹೀಗಿದ್ದರೂ ಎಲ್ಲ ವಯಸ್ಕರೂ ತಮ್ಮ ಯೌವ್ವನಾವಸ್ಥೆಯ ’ಮಾಗಿದ’ ಮಾದರಿಗಳೇನಲ್ಲ!


(೨೮೮) ಕೋಟಿಗಟ್ಟಲೆ ಜನರಿದ್ದರೂ, ಎಲ್ಲರೂ ಮೊದಲೇ ಪರಿಹಾರ ಕಂಡಿರುವುದನ್ನೇ ನಿರಂತರವಾಗಿ ಹುಡುಕುತ್ತಿರುತ್ತಾರೆಃ ಯಾವುದೇ ತೆರನಾದ ನಿರ್ದಿಷ್ಟ ಉತ್ತರವೂ ಸಾಧ್ಯವಿಲ್ಲವೆಂಬುದೇ ಆ ಪರಿಹಾರ!


(೨೮೯) ಯಾರನ್ನಾದರೂ ನಂಬುವುದೆಂದರೆ ನಿಮ್ಮನ್ನು ಮೋಸಗೊಳಿಸಬಲ್ಲ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆ.


(೨೯೦) ಗುರಿ ತಲುಪುವುದೆಂದರೆ ಮೊದಲೇ ನಿರ್ಧಾರವಾದುದನ್ನು ’ತಲುಪುವುದು’. ಗಮನವನ್ನು ಸುತ್ತುವರಿದ ಭಾಗ್ಯವೆಂಬುದೇ ಅದನ್ನು ತಲುಪಲಿರುವ ವಾಹನ. ಕೇವಲ ಭಾಗ್ಯವು ನಿಮ್ಮನ್ನು ಗುರಿ ತಲುಪಿಸಿದರೂ ಅದು ನಿಮ್ಮ ಸಾಧನೆ ಎನಿಸದು, ಬರಿಯ ಗಮನವು ಭಾಗ್ಯವಂಚಿತವಾದ್ದರಿಂದಲೇ ನೀವು ತಲುಪಿದ್ದರೂ ಗುರಿ ನಿಮ್ಮಿಂದ ದೂರವಿದ್ದಂತೆನಿಸಿಬಿಡುವುದು.

ಗೌಡಪ್ಪನ ದುಬೈ ಪ್ರವಾಸ - ಭಾಗ ೫ : ದೀಪಾವಳಿ ಅವಾಮಾಸ್ಯೆಯ ಭರ್ಜರಿ ಪ್ರವಾಸ!

ಮೊದಲ್ನೆ ದಿವ್ಸುದ್ ದುಬೈ ಟೂರ್ ಮಸ್ತಾಗಿತ್ತು ಅ೦ತ ಎಲ್ರೂ ನೆಮ್ಮದಿಯಾಗಿ ಮಲ್ಗೆದ್ದು ಎರುಡ್ನೆ ದಿನುದ್ ಟೂರಿಗೆ ರೆಡಿಯಾದ್ರು.

ವಿಚಾರ-ವಿ(ಮಾ)ನಿಮಯ

ಭಾಗ ೩


 


"ಪೇಪರ್ ಓದಿದ್ದು ಸಾಕು.  ಸ್ನಾನ ಮಾಡಿ, ಅದೇನೋ ಘನ ಕಾರ್ಯಕ್ಕೆ ಹೋಗಬೇಕು ಅಂತಿದ್ದರಲ್ಲ.  ಏಳಿ"  ಪದ್ದಮ್ಮನವರು ಯಜಮಾನರಿಗೆ ಕಾಫಿ ಕೊಡುತ್ತ ಗದರಿದರು.


ಯಜಮಾನರು ವಾಕಿಂಗ್ ಮುಗಿಸಿ, ಹಾಲು ತಂದ ಮೇಲೆ ಜೊತೆಯಲ್ಲಿ ಪದ್ದಮ್ಮನವರು ಕಾಫಿ ಕುಡಿಯುತ್ತಿದ್ದರು.  ಯಾವುದೇ ಕಾರಣಕ್ಕೊ ಈ ಪರಿ


ಪ್ರೀತಿ, ಪ್ರೇಮ, ಪ್ರಣಯ ಅಂದ್ರೆ ಇದೇ ಅನ್ನಿಸುತ್ತೆ.   ವಯಸ್ಸಾದರೊ, ಎಷ್ಟು ಖಾಳಜಿ.  ಆ ಬ್ಯೆಗುಳದಲ್ಲೂ ಹಿತ. ಈ ವ್ರದ್ದ ದಂಪತಿಗಳದ್ದು ಆನ್ಯೋನ್ಯ ದಾಂಪತ್ಯ.


ಶ್ಯಾಮರಾಯರದು ಆಗ ಒಟ್ಟು ಕುಟುಂಬ. ಈ ಮನೆಗೆ ೧೩ನೇ ವಯಸ್ಸಿಗೆ ಮದುವೆಯಾಗಿ ಬಂದಿದ್ದರು ಪದ್ದಮ್ಮ.
೩ ಜನ ಮ್ಯದುನರು ಅವರ ಸಂಸಾರ, ಮಕ್ಕಳು, ಅತ್ತೆ, ಮಾವ  ಹೀಗೆ, ಪದ್ದಮ್ಮನವರದು ಈ ಸಂಸಾರಕ್ಕೆ ಅವಿರತ ಶ್ರಮ.  ನಿಸ್ವಾರ್ಥ ಸೇವೆ.
ಯಜಮಾನರ ಮೇಲೆ ಬಹಳ ಪ್ರೀತಿ, ಗೌರವ.  ಶ್ಯಾಮರಾಯರದು ಬಹಳ ಮ್ರುದು ಸ್ವಭಾವ.  ಒಳ್ಳಯ ಮನುಷ್ಯ.  ಯಾರಲ್ಲೂ ತಪ್ಪು ಕಾಣುತ್ತಿರಲಿಲ್ಲ.