ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇದನ್ನು ತಿಂದರೆ ನಂಬರ್‌ ೨ ಸಮಸ್ಯೆ ಮಾಯ!

ಬೆಳಿಗ್ಗೆ ಉಲ್ಲಸಿತರಾಗಿ ಏಳಬೇಕೆಂದರೆ, ರಾತ್ರಿ ಊಟದಲ್ಲಿ ಈ ಸೊಪ್ಪನ್ನು ತಿಂದರೆ ಬೆಸ್ಟು ಅಂತಾರೆ ಹಳ್ಳಿ ಜನ.

ಈ ಸೊಪ್ಪಿಗೆ ದಕ್ಷಿಣ ಕರ್ನಾಟಕದ ಕಡೆ ಏನು ಹೇಳುತ್ತಾರೋ ತಿಳಿಯದು. ಉತ್ತರ ಕರ್ನಾಟಕದ ಕಡೆ ಹಕ್ಕರಕಿ ಅಂತಾರೆ. ಚೂಪು ತುದಿಯುಳ್ಳ ಉದ್ದನೆಯ ಎಲೆಗಳು ಹೂವಿನ ದಳಗಳಂತೆ ಹರಡಿಕೊಂಡಿರುವ ಮಬ್ಬು ಹಸಿರಿನ ಸೊಪ್ಪಿದು.

ಕಪ್ಪು ಮತ್ತು ಕೆಂಪು ಮಣ್ಣಿನ ಭೂಮಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಸ್ಯ ಹಕ್ಕರಕಿ. ತಿಳಿ ಹಸಿರು ಬಣ್ಣದ ಉದ್ದನೆಯ ಎಲೆಗಳು ಒತ್ತೊತ್ತಾಗಿ ನಕ್ಷತ್ರಾಕಾರವಾಗಿ ಹರಡಿಕೊಂಡು ಬೆಳೆಯುತ್ತವೆ. ಭೂಮಿಯನ್ನು ಆವರಿಸಿಕೊಂಡು ಬೆಳೆಯುವ ಹಾಗೂ ವರ್ಷದ ಎಲ್ಲಾ ಕಾಲಗಳಲ್ಲಿ ಕಂಡುಬರುವ ಸಸ್ಯ ಇದು.

ಅಪರೂಪದ ಔಷಧೀಯ ಗುಣಗಳಿವೆಯೆಂದು ಹೇಳಲಾಗುವ ಹಕ್ಕರಕಿಯನ್ನು ಯಾರೂ ನೆಟ್ಟು ಬೆಳೆಸುವುದಿಲ್ಲ. ಇದು ತಾನೆ ತಾನಾಗಿ ಕಂಡುಬರುವ ಒಂದು ರೀತಿಯ ಕಳೆ. ಡಯಾಬಿಟೀಸ್, ಮಲಬದ್ಧತೆ, ಪಿತ್ತ, ಕಣ್ಣು ನೋವು ಮುಂತಾದ ರೋಗಗಳಿಗೆ ಇದರ ಎಲೆ ಉತ್ತಮ ಔಷಧಿ ಎಂದು ಹೇಳುವವರಿದ್ದಾರೆ.

ಕೆಸರಿನಲ್ಲಿ ಮುಳುಗೆದ್ದ ರಾಯ್ದು

ಒಂದು ದಿನ ಮದ್ಯಾಹ್ನ ನಾನು ಮನೆಗೆ ಬರುತ್ತಿದ್ದಾಗ ನಮ್ಮ ಬಿ. ಹೆಚ್. ರೋಡ್ ನಲ್ಲಿರುವ ವಿನಾಯಕ ಟಾಕಿಸ್ ಪಕ್ಕದಲ್ಲಿರುವ ಲಾರಿ ಸ್ಟ್ಯಾಂಡ್ ಹತ್ತಿರ ದೊಡ್ಡ ಜನ ಸಮೂಹ ಆಚೆ ಈಚೆ ಓಡುತ್ತಿದ್ದರು.

ಚಾರ್ ಧಾಮ್ ಪ್ರವಾಸ- ಕೇದಾರನಾಥ್ - ೨

ಕೇದಾರೇಶ್ವರನ ದೇವಸ್ಥಾನ ಹಿಮಾಲಯದಲ್ಲೇ ಅತಿ ಪ್ರಾಚೀನವಾದ ಮತ್ತು ಅತಿ ದೊಡ್ಡದಾದ, ಹಾಗೂ ಸುಂದರವಾದದ್ದು. ಇದನ್ನು ಒಂದೇ ಸಮನಾಗಿ ಕತ್ತರಿಸಿದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಕಟ್ಟಡದ ಮೇಲ್ಛಾವಣಿಯಾಗಿ ಹಾಕಿರುವ ಕಲ್ಲಿನ ದೊಡ್ಡ ದೊಡ್ಡ ಚಪ್ಪಡಿಗಳು ದೇವಸ್ಥಾನದ ಹೊರಗಿನ ಚಾವಡಿಯನ್ನು ಪೂರ್ತಿಯಾಗಿ ಮುಚ್ಚುತ್ತದೆ. ದೇವಸ್ಥಾನದ ಒಳಹೊಕ್ಕ ಒಡನೆ, ನಾವು ಪ್ರದಕ್ಷಿಣೆಯಂತೆ ಎಡಪಕ್ಕದಿಂದ ನಡೆದಾಗ, ಆಯುಧದಾರಿಗಳಾಗಿರುವ, ಪಾಂಡವರ ವಿಗ್ರಹಗಳನ್ನು ಒಂದೊಂದಾಗಿ ನೋಡುತ್ತೇವೆ. ಕುಂತಿಯ ವಿಗ್ರಹ ಕೂಡ ಇದೆ. ನಡುವೆ ಈಶ್ವರನ ಎದುರಿಗೆ ನಂದಿ ಇದ್ದಾನೆ. ಈಶ್ವರನಿಗಾಗಿ ಮಂಟಪ, ಗರ್ಭಗುಡಿಯಲ್ಲಿದೆ, ಇದರ ಮಧ್ಯದಲ್ಲಿ ದೊಡ್ಡದಾದ ಗ್ರಾನೈಟ್ ಕಲ್ಲು, ಎತ್ತಿನ ಹಿಂಭಾಗ ಎಂದು ನಂಬಲಾಗುವ, ಭೀಮ ಹಿಡಿದಿಟ್ಟನೆಂದು ಹೇಳಲ್ಪಡುವ ಮತ್ತು ಕೇದಾರೇಶ್ವರನೆಂದು ಪೂಜಿಸಲ್ಪಡುವ ಬಂಡೆ.

ಮಾನವ ನಿರ್ಮಿತ ಅದ್ಭುತಗಳು - ೧

ಮಾನವ ನಿರ್ಮಿತ ಅದ್ಭುತಗಳು

ಸುಮಾರು ನೂರು ಮೈಲು ದೂರದ ಭೂಮಿ ಅಗೆದು ಸೂಯೆಜ್ ಕಾಲುವೆ ನಿರ್ಮಿಸುವ ಪ್ರಸ್ತಾಪ ಬಂದಾಗ, ಅದನ್ನು ಕೇಳಿದವರು "ಏನು? ಹಾರೆ ಗುದ್ದಲಿಗಳಿಂದ ನೂರು ಮೈಲು ಕಾಲುವೆ ಅಗೆಯಲು ಸಾಧ್ಯವೇ?" ಎಂದು ಪ್ರತಿಕ್ರಿಯೆ ಸೂಚಿಸಿದರಂತೆ. ಆದರೆ ಇಂದು ಸೂಯೆಜ್ ಕಾಲುವೆಯಲ್ಲಿ ಹಡಗುಗಳು ಸಂಚರಿಸುತ್ತಿವೆ ಎಂದರೆ ಮಾನವ ತನ್ನ ಶ್ರಮದಿಂದ ಕಷ್ಟಸಾಧ್ಯವೆನಿಸುವುದನ್ನೂ ಸಾಧಿಸಬಹುದು ಎಂದು ಸಾಬೀತು ಪಡಿಸಿದ್ದಾನೆ ಎಂದಾಗುತ್ತದೆ ಅಲ್ಲವೇ?

ಹಿಂದಿನದಕ್ಕಿಂತ  ದೊಡ್ಡದಾದ ಮತ್ತೊಂದನ್ನು ತಮ್ಮ ಕಾಲದಲ್ಲಿ ನಿರ್ಮಿಸಬೇಕು ಎಂಬ ಮಹತ್ವಾಕಾಂಕ್ಷೆ ಪ್ರಾಯಶಃ ಎಲ್ಲ ಕಾಲದ ಜನರಲ್ಲೂ ಇತ್ತೆಂದು ಹೇಳಬಹುದು. ಹಲವು ಸಾವಿರ ವರ್ಷಗಳ ನಂತರವೂ ನಮ್ಮ ಮಧ್ಯೆ ಉಳಿದಿರುವ, ನಮ್ಮ ಕುತೂಹಲಕ್ಕೂ,, ಅಚ್ಚರಿಗೂ ಕಾರಣವಾಗಿರುವ ಹಲವು ಅದ್ಭುತ ರಚನೆಗಳು ಇದಕ್ಕೆ ಹೇಳಿ ಮಾಡಿಸಿದಂತಿವೆ.

ಅವರಿವರ ಭಯಾಗ್ರಫಿ -2

ಕ್ರಿಕೆಟ್ ಕಲಿಸಿದ ಪಾಠ

ಗ್ರೀಸ್ ದೊರೆ ಎರಡನೆಯ ಜಾರ್ಜ್ ಶಾಲೆಯಲ್ಲಿ ಕ್ರಿಕೆಟ್ ಆಡುವಾಗ ಒಮ್ಮೆ ಮೊದಲ ಎಸೆತಕ್ಕೆ ಬೌಲ್ಡ್ ಆಗಿದ್ದರು. ಆ ಘಟನೆಯನ್ನು ಆತ ಎಂದಿಗೂ ಮರೆಯಲಿಲ್ಲ. ಅದು ಆತನಿಗೆ ಜರ್ಮನ್ ಸೇನೆಯ ಅತಿಕ್ರಮಣದ ದಿನಗಳಲ್ಲಿನ ಬಡತನದ ಅಜ್ಞಾತವಾಸದ ಜೀವನವನ್ನು ಸಹನೀಯವಾಗಿಸಿತ್ತು ಎಂದು ಆತ ನೆನಪಿಸಿಕೊಳ್ಳುತ್ತಾನೆ.

ಬರೀ ಪ್ರೇಮ

ಹೃದಯ ದನಿಗೂಡಿದಾಗ ಮಿದುಳು ಮೌನಿ
ಪ್ರೇಮ ಚಿಗುರಿದಾಗ ಕೂದಲು ನರೆತಿದ್ದೋ, ಕಪ್ಪೋ
ಮನಸ್ಸು ಅ೦ಧ.
ಭಾವನೆಗಳ ಬುಗ್ಗೆ ಚಿಮ್ಮಿದಾಗ
ಜನಿವಾರವೋ, ಲಿ೦ಗವೋ
ಮ೦ದಿರವೋ, ಮಸೀದಿಯೋ
ಅಸ್ತಿತ್ವ ಅರಿಯದ ಅಜ್ಞಾನಿ
ದೇಹಾತ್ಮಗಳು ಬೆಸೆತಾಗ
ನಿಜಕ್ಕೂ ಈ ಜಗತ್ತೇ ಮಾಯೆ (ಮಾಯ)
ನಾನು ನೀನು
ಏನೂ ಇಲ್ಲ ಇಲ್ಲಿ.
ಉಳಿಯುವುದು ಬರೀ
ಪ್ರೇಮ ಮಾತ್ರ...

*****

ಕ್ರಾಪಿಂಗ್ - ಒಂದು ಉದಾಹರಣೆ

ಛಾಯಾಗ್ರಹಣದಲ್ಲಿ ಬೆಳಕಿನ ಉಪಯೋಗ ಹೇಗೆ ಪ್ರಮುಖವೋ ಅಂತೆಯೇ ಸಂಯೋಜನೆಯೂ ಕೂಡ. ಈ ಹಿಂದೆ ಚಿತ್ರ ಸಂಯೋಜನೆಯ ಬಗ್ಗೆ ಇಲ್ಲಿ ಬರೆದಿದ್ದೇನೆ. ಇದೇ ನಿಯಮಗಳನ್ನು ಮನದಲ್ಲಿರಿಸಿ ನಾವು ತೆಗೆಯ ಹೊರಟ ಚಿತ್ರದ ಪರಿಣಾಮ ನೋಡುಗರ ಮನದಲ್ಲಿ ಹೇಗೆ ಪರಿಣಾಮಕಾರಿಯಾಗಿ ಚಿತ್ರಿಸಬಹುದು ಎಂದು ಉದಾಹರಣೆಯ ಮೂಲಕ ನೋಡೋಣ.

ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು?!

ಮಗಳನ್ನು ಹಾಸ್ಟೆಲಿಗೆ ಕಳುಹಿಸಿ ನಾವಿಲ್ಲಿ ಹೇಗೆ ಇರುವುದು
ಈ ಪ್ರಶ್ನೆ ಈ ಮುಂಜಾನೆ ನನ್ನ ಮಗಳಬ್ಬೆ ನನ್ನ ಕೇಳಿದ್ದು

ಮಗಳ ಜೊತೆಗೆ ನೀನೂ ಹೋಗಿರು ಮತ್ತೇನು ಮಾಡಲಾದೀತು
ನೀವು ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು

ಮಗಳ ಮೇಲೆ ಮಮತೆ ನಿನಗೆ ನನ್ನ ಮೇಲೆ ಪ್ರೀತಿ ಇಹುದು
ಎಲ್ಲರೂ ಜೊತೆಗಿರಲೆಮ್ಮ ಮೇಲೆ ದೇವರ ದಯೆ ಎಲ್ಲಿಹುದು