ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕರ್ನಾಟಕದ ಗದ್ದರ್ ಪಿಚ್ಚಳ್ಳಿ ಶ್ರೀನಿವಾಸ್

ಭಾನುವಾರ ನೀರನಿಶ್ಚಿಂತೆ ಕಾರ್ಯಕ್ರಮಕ್ಕೆ ಕೋಲಾರಕ್ಕೆ ಹೋದಾಗ ಸುಂದರವಾದ ಅಂತರಗಂಗೆಯ ಬೆಟ್ಟದ ತಪ್ಪಲಿನಲ್ಲಿರುವ ಶಿವಗಂಗೆಗೆ ಬೇಟಿ ನೀಡಿದ್ದೆವು. ಶಿವಗಂಗೆಯಲ್ಲಿ "ಆದಿಮ" ಸಂಸ್ಥೆ ನೆಲೆಯೂರಿದೆ. 

ಆದಿಮವನ್ನು ಮತ್ತು ಅಲ್ಲಿನ ಸೊಬಗನ್ನು ನೋಡಿದ ಕೋಲಾರಕ್ಕೆ ಬೇಟಿ ನೀಡಿದ ನಮ್ಮಸಂಪದ ಬಳಗ ಪೋಟೋಗಳನ್ನು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಜೊತೆಗೆ ಗೋಡಂಬಿ, ದ್ರಾಕ್ಷಿ ಮಿಶ್ರಿತ ಪಾಯಸ ಕುಡಿಯುತ್ತಾ ಸ್ವಲ್ಪ ಸ್ವಲ್ಪವೇ ಹೊಟ್ಟೆಯೊಳಗೆ ಇಳಿಸುತ್ತಾ ಫೋಟೋ ಕ್ಲಿಕ್ಕಿಸುತ್ತಿರಬೇಕಾದ್ರೆ ಅಲ್ಲಿಗೆ ಆದಿಮ ಸಂಸ್ಥೆಯ ಸಂಸ್ಥಾಪಕ 'ಕೋಟಗಾನಹಳ್ಳಿ ರಾಮಯ್ಯ' ಮತ್ತು 'ಪಿಚ್ಚಳ್ಳಿ ಶ್ರೀನಿವಾಸ್' ಬಂದರು. ಅವರನ್ನೂ ಸಹ ಕ್ಯಾಮರಾಗಳು ಸೆರೆ ಹಿಡಿದವು. ಇದಾದ ನಂತರ ಸ್ವಲ್ಪ ಮಾತುಕಥೆ, ಕಪ್ಪು ಟೀ - ಹೀಗೆ ನಡೆಯಿತು. ನಂತರ ಬೆಟ್ಟಿಂದ ಕೆಳಗೆ ಇಳಿಯಬೇಕಾದ್ರೆ ನಾನಿದ್ದ ಕಾರಿನೊಳೆಗೆ ಪಿಚ್ಚಳ್ಳಿ ಶ್ರೀನಿವಾಸ್ ಬೆಟ್ಟದಿಂದ ಕೆಳಗಿನವರೆಗೆ ಡ್ರಾಪ್ಗೆ ಅಂತ ಬಂದ್ರು, ಪಕ್ಕದಲ್ಲಿದ್ದ ಶ್ರೀನಿವಾಸ್ ರವರೊಟ್ಟಿಗೆ ನಾನು ಮಾತಿಗಿಳಿದೆ. ಇದ್ಯಾಕೆ ಇದೆಲ್ಲಾ ಅಂತೀರಾ ಸುಮ್ಮನೇ ಬರೆದೆ ಅಷ್ಟೆ.

ಬೇಡುವಿರಾ, buy ಮಾಡುವಿರಾ?

ಒಹ್ ೮೦೦ ರೂಪಾಯಿ ಕೊಟ್ ತೊಗೊಂಡ್ಯಾ ಈ ಪುಸ್ತ್ಕಾನ? ನಾನ್ ಅಷ್ಟೊಂದು ಕೊಟ್ಟು ಬುಕ್ಸ್ ತೊಗೊಳಲ್ಲ ಕಣಪ್ಪ. ನನ್ನ ಮಿತ್ರ ಅಚ್ಚರಿ ಅಸೂಯೆ ತುಂಬಿದ ಧ್ವನಿಯಲ್ಲಿ ಹೇಳಿದ. ಇದನ್ನು ಕೇಳಿ ನನಗೇನೂ ಅಚ್ಚರಿ ಆಗಲಿಲ್ಲ ಅನ್ನಿ. ಸಾವಿರ ರೂಪಾಯಿ ಕೊಟ್ಟು ಬೂಟು ಕೊಳ್ಳುತ್ತಾರೆ, ನೂರಾರು ಕೊಟ್ಟು T ಶರ್ಟ್ ಕೊಳ್ತಾರೆ ಓದುವ ದಿನ ಪತ್ರಿಕೆ ಮಾತ್ರ ಎರವಲು ಪಡೆದೇ ಆಗಬೇಕು.

ಮನೆ ಹತ್ತಿ ಉರಿವಾಗ...

ಕುತ್ತೊದಗಿದರೆ ಮಾಡುವುದೇನೆಂದು ಎಣಿಸಿರಬೇಕು ಮೊದಲೆ 
ಹತ್ತಿ ಉರಿವಾಗ ಮನೆ ಬಾವಿಯ ತೋಡುವುದು ತರವೆ? 

ಸಂಸ್ಕೃತ ಮೂಲ:

ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ ||

-ಹಂಸಾನಂದಿ

ನಾ ಬರೆದ ಮೊದಲ ಪ್ರೇಮಪತ್ರಕ್ಕೆ ಬಂದಿತ್ತು ಬಹುಮಾನ!

ಎರಡು ವರ್ಷಗಳ ಹಿಂದೆ ನಮ್ಮ ಕಾಲೇಜಿನಲ್ಲಿ ನಡೆದ ಘಟನೆಯಿದು. ನನ್ನ ಆಪ್ತ ಸ್ನೇಹಿತನೊಬ್ಬ ನನ್ನ ಗೆಳತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಆಕೆ ಕನ್ನಡದ ಹುಡುಗಿ ಮತ್ತು ಇವ ಮಲಯಾಳಿ. ಅವರಿಬ್ಬರು ಮನಸ್ಸಲ್ಲೇ ಪ್ರೀತಿಸುತ್ತಿರುವುದು ನಮ್ಮ ಗುಂಪಿನ ಎಲ್ಲಾ ಸ್ನೇಹಿತರಿಗೆ ಗೊತ್ತು.

ಯಾಣ - ಕೆಲವು ಸಮಝಾಯಿಶಿಗಳು

ವಾರದ ಕಾಲ ಊರಲ್ಲಿಲ್ಲದ ಕಾರಣ ಸಂಪದವನ್ನು ನೋಡಲಾಗಿರಲಿಲ್ಲ. ಮೊನ್ನೆ ಬಂದು ಅನಿವಾಸಿ ಎಂದು ಅಂಕಿತವನ್ನು ಇಟ್ಟುಕೊಂಡಿರುವವರ ಈ ಲೇಖನವನ್ನು (http://www.sampada.net/article/20676) ಓದುತ್ತಿದ್ದಂತೆ ದಿಗ್ಭ್ರಾಂತನಾದೆ! ಏಂಜೆಲ್ ಜಲಪಾತದದಿಂದ ನೀರಾವಿ ಘನೀಭವಿಸಿ ನೀರು ಬೀಳುವ ತತ್ವವನ್ನು ನಾನು ಓದಿದ್ದು ಪೂರ್ಣಚಂದ್ರ ತೇಜಸ್ವಿಯವರ ಮಿಲೆನಿಯಂ ಸಿರೀಸ್ ಪುಸ್ತಕವೊಂದರಲ್ಲಿ.

ಕಮಲಾ ದಾಸ್ ಮತ್ತು ಸಿಂಹ

Kamala Dasಹುಡುಗಿ ಒಬ್ಬಳು ತನ್ನ ನಲ್ಲನಿಗೆ ಕಾಯ್ತಾ ಇದ್ದಾಳೆ. ಅವಳ ನಲ್ಲ ಒಬ್ಬ ರಾಜಕಾರಣಿ. ಅವನನ್ನು ಭೇಟಿ ಮಾಡಲು ಕಾತರಿಸ್ತಾ ಇದ್ದಾಳೆ… ಕಾಯ್ತಾ ನಲ್ಲನ್ನ ಬಣ್ಣಿಸ್ತಾಳೆ. ಅವನ ಇಷ್ಟ, ಕಷ್ಟ, ಪ್ರೀತಿ ದ್ವೇಷ ಎಲ್ಲಾ ವರ್ಣಿಸ್ತಾ ತನ್ನನ್ನೇ ತೆರೆದಿಟ್ಟುಕೊಳ್ಳುತ್ತಾಳೆ. ಸಿಂಹದ ರಾಶಿಯ ಅವನ ಜತೆಗೆ ತನ್ನ ಸಂಗವನ್ನು ಕೆಲವೊಮ್ಮೆ ಮಧುರವಾಗಿ, ಕೆಲವೊಮ್ಮೆ ಅಸಹನೆಯಿಂದ, ಕೆಲವೊಮ್ಮೆ ಸಿಟ್ಟಿನಿಂದ ನೆನಪಿಸಿಕೋತಾಳೆ. ಅವನ ದರ್ಪ ಮೋಸ ಅರ್ಥವಾಗಿಯೂ ಕಾತರ ನಿಲ್ಲುವುದಿಲ್ಲ. ಅಸಹಾಯಕತೆಯನ್ನು ಮೀರಿದ ಮತ್ತೇನೋ ಅಲ್ಲಿ ಕೆಲಸಮಾಡುತ್ತಿರುತ್ತದೆ. ಆದರೆ ಕಡೆಗೂ ಆ ನಲ್ಲ ಬರುವುದೇ ಇಲ್ಲ.

ಈ ಕತೇನ ನೆನಪಿಂದ ಹೇಳ್ತಾ ಇದ್ದೀನಿ. ಯಾಕೆಂದರೆ ಕಮಲಾ ದಾಸ್ ಬರೆದ ‘ದ ಸೈನ್ ಆಫ್ ಎ ಲಯನ್’ ಎಂಬ ಕತೆಯನ್ನು ಯಥಾವತ್ತಾಗಿ “ಸಿಂಹ” ಅಂತ ಕನ್ನಡಿಸಿ ೧೯೮೮ರಲ್ಲಿ ನಾಟಕ ಮಾಡಿದ್ದೆವು. “ಬೆನಕ”ದ “ಮಂಡೇ ಥೇಟರ್‍” ಅನ್ನೋ ಇಂಟಿಮೇಟ್ ಸಭಾಂಗಣದಲ್ಲಿ. ಬೆನಕದ ನಟಿ ವೀಣಾ ಒಬ್ಬಾಕೆಯೇ ಪ್ರಭಾವಶಾಲಿಯಾಗಿ ನಟಿಸಿದ್ದ ಪ್ರಯೋಗ ಅದು. ಇಪ್ಪತ್ತೈದು ಜನರಷ್ಟೇ ಸುತ್ತ ಕೂತು ನೋಡಬಹುದಾದ ಆ ಪ್ರಯೋಗ ಹಲವರನ್ನು ದಿಗ್ಭ್ರಮೆಗೊಳಿಸಿತು. ಆ ಹೆಣ್ಣಿನ ಒಳಪಾತಳಿಯನ್ನು ಪಕ್ಕದಲ್ಲೇ ಕೂತು ಅನುಭವಿಸಿದ ಹಾಗೆ ನಾಟಕ ನೋಡಿದವರಿಗೆ ಅನಿಸಿತ್ತು. ಹಾಗೆ ಅನಿಸುವುದರಲ್ಲಿ ಕಮಲಾ ದಾಸ್ ಕತೆಯದು ಹಾಗು ಮಾತುಗಳದು ದೊಡ್ಡ ಪಾತ್ರ. ಆ ಹೆಣ್ಣಿನ ಅಂತರಾಳದ ಮಾತುಗಳು ಹರಿದಾಡುವುದೇ ಸಭ್ಯತೆ ಅಂಚಿನಲ್ಲಿ, ಸಮಾಜ ಒಪ್ಪದ ಅಂತರಂಗದ ತುಡಿತದಲ್ಲಿ.

ಕೆಣಕು ನೋಟ!

* ಆರು ತಿಂಗಳು ಮಾತ್ರ ವಿಪಕ್ಷ ನಾಯಕನಾಗಿರಲು ಒಪ್ಪಿದ್ದಾರೆ ಆಡ್ವಾಣಿ.
- ಸಿದ್ರಾಮಯ್ಯ ಈ ಸುದ್ದಿ ಓದಬೇಕು!
***
* ಪ್ರತಿಪಕ್ಷದಲ್ಲಿ ಕೂರಲು ಮುಲಾಯಂ ಸಿದ್ಧ.
- ದ್ರಾಕ್ಷಿ ಹಿಡಿಯಲು ಹೋಗಿ ಹೊತಗೊಂಡು ಬಿದ್ದ!
***
* ಲಾಲೂ ಲೆಕ್ಕಾಚಾರ ಯಾಕೆ ತಲೆಕೆಳಗಾಯಿತು?
- ಮಾಜಿ ಮುಖ್ಯಮಂತ್ರಿಯಾದ ರಾಬ್ಡಿದೇವಿಯ ಮಾತು ಕೇಳಿರಬೇಕು!
***