ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮರೆಯದ ಹಾಡು

ನಿನ್ನೆ ಬೆಳಿಗ್ಗೆ ಆಫೀಸಿಗೆ ಕಾರಿನಲ್ಲಿ ಹೋಗುತ್ತಿರುವಾಗ ಎಫ್ ಎಮ್ ಕಾಮನಬಿಲ್ಲು ೧೦೧.೩ರಲ್ಲಿ ಬರುವ ಚಿತ್ರಗೀತೆಗಳನ್ನು ಕೇಳ್ತಿದ್ದೆ.
ಅದರಲ್ಲಿ ಒಂದು ಹಾಡು ಬರ್ತಿತ್ತು. ಈ ಹಾಡು ಕೇಳಿ ಬಹಳ ದಿನಗಳಾಗಿದ್ದವು. ಈ ಹಾಡು ಬಂದೊಡನೆಯೇ Volume ಜೋರು ಮಾಡಿದೆ.
ಈ ಹಾಡನ್ನು ಕೇಳ್ತಿದ್ರೆ ಕೇಳ್ತಾನೇ ಇರ್ಬೇಕು ಅಂತ ಅನ್ಸುತ್ತೆ. ಅಷ್ಟು ಚೆನ್ನಾಗಿದೆ ಈ ಹಾಡು. ಯಾವುದೋ ಲೋಕಕ್ಕೆ ಕರೆದೊಯ್ಯುವ ಶಕ್ತಿ ಈ ಹಾಡಿಗಿದೆ.

ಜಿ. ಕೆ. ವೆಂಕಟೇಶ್ ಅವರ ಸಂಗೀತ ತುಂಬಾ ಇಂಪಾಗಿದೆ.
ಆರ್. ಎನ್. ಜಯಗೋಪಾಲ್ ಅವರ ಸಾಹಿತ್ಯ ಕೂಡ ತುಂಬಾ ಚೆನ್ನಾಗಿದೆ.
ಎಸ್. ಜಾನಕಿ ಅವರ ಗಾಯನ ಸುಮಧುರವಾಗಿದೆ.

ನಿನ್ನೆಯಿಂದ ಈ ಹಾಡನ್ನು ಗುನುಗುತ್ತಿರುವೆ.
ಯಾವ ಹಾಡು ಅಂತ ಯೋಚನೆ ಮಾಡ್ತಿದ್ದೀರಾ?

ಧರ್ಮ-ಮತ ಬೇರೆಯೆ?

ಧರ್ಮ ಮತ್ತು ಮತದ ಅರ್ಥ ವ್ಯತ್ಯಾಸದ ಕುರಿತಾಗಿ ಸಂಪದದಲ್ಲಿ ನಡೆದ ಚರ್ಚೆಗಳನ್ನು ನೋಡಿ ನನ್ನಲ್ಲಿರುವ ಕೆಲವು ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಸಂಸ್ಕೃತ- ಕನ್ನಡ ಶಬ್ದಕೋಶದ ಪ್ರಕಾರ(ಶಬ್ದಾರ್ಥ ಕೌಸ್ತುಭ) ಧರ್ಮ- ೧. ಜಗತ್ತಿನ ಅಭ್ಯುದಯ ಮತ್ತು ನಿಃಶ್ರೇಯಸಗಳಿಗೆ ಕಾರಣಭೂತವಾದ ಗುಣವೇ ಧರ್ಮವು.

೨. ಆಚಾರ, ಸಂಪ್ರದಾಯ, ವಾಡಿಕೆಯಾಗಿ ಬಂದ ಮತಸಂಬಂಧವಾದ ಅನುಷ್ಠಾನ. ಒಟ್ಟು ೨೭ ಅರ್ಥಗಳು ಈ ನಿಘಂಟುವಿನಲ್ಲಿದ್ದು ಒಂದು ಅರ್ಥದಲ್ಲಿಯೂ ಕೂಡ ಧರ್ಮಕ್ಕೆ ಮತ ಎನ್ನುವ ಅರ್ಥ ಕೊಟ್ಟಿಲ್ಲ.

ಇನ್ನು ಮತವೆಂದರೆ-ಅಭಿಪ್ರಾಯ, ಮನೋಗತ, ಆಶಯ,ಪಕ್ಷ ಎಂಬ ಅರ್ಥ ಕೊಟ್ಟಿದ್ದಾರೆ.

ಇನ್ನು ಡಿ.ವಿ.ಜಿಯವರು ಧರ್ಮವನ್ನು ಚೆನ್ನಾಗಿ ವಿವರಿಸಿದ್ದಾರೆ, ಸಾರಾಂಶ ಬರೆಯುವೆ.

ನಾನು ಅರಿತದ್ದೇ ನಿಜವೆಂಬ ಭ್ರಮೆ!!!

ಸಖೀ,

ನಾನು ಅರಿತದ್ದೇ ನಿಜವೆಂಬ ಭ್ರಮೆ ಇಹುದೆನ್ನೊಳಗೆ
ಪರಿಪೂರ್ಣ ಅರಿವು ಎಂದಿಗಾಗುವುದು ಇಳೆಯೊಳಗೆ

ನನ್ನ ಕಿಂಚಿತ್ತರಿವಿನ ಪ್ರದರ್ಶನದ ಬಯಕೆ ಸದಾ ನನ್ನಲ್ಲಿ
ಅದನು ಮೆಚ್ಚಿ ನಡೆಯಬೇಕು ನನ್ನವರೆನ್ನ ಜೊತೆಯಲ್ಲಿ

ನನ್ನ ವಾದವನೊಪ್ಪದವರು ಪೆದ್ದರೆಂಬ ನಂಬುಗೆ ನನಗೆ
ಆ ಪೆದ್ದರನು ಜರೆದು ವಿಜಯಿಯಾಗುವ ಹಂಬಲವೆನಗೆ

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು: ಕುಂಭಾಸಿ

ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿ ಗಣಪತಿ ದೇವಸ್ಥಾನವು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿದೆ. ಇದು ಕರಾವಳಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಉಡುಪಿಯಿಂದ ಸುಮಾರು ೩೦ ಕಿ.ಮೀ ಮತ್ತು ಕುಂದಾಪುರದಿಂದ ಸುಮಾರು ೭ ಕಿ.ಮೀ ದೂರದಲ್ಲಿರುವ ನಿಸರ್ಗ ರಮಣೀಯ ಕ್ಷೇತ್ರವಿದು. ಈ ಕ್ಷೇತ್ರ ರಾಹೆ-೧೭ರ ಬಳಿಯಿದೆ. ದೇವಸ್ಥಾನದ ಬಳಿ ಇರುವ ಮೆಟ್ಟಿಲುಗಳಲ್ಲಿ ಇಳಿದು ಹೋದರೆ ಶಿವನ ದೇವಸ್ಥಾನವೂ ಇದೆ. ಈ ದೇವಸ್ಥಾನದಲ್ಲಿ ಪುಷ್ಕರಿಣಿ ಕೂಡ ಇದೆ. ಕರಾವಳಿಯ ಅನೇಕ ದೇವಸ್ಥಾನಗಳು ಒಂದೋ ನದಿಯ ಬಳಿ ಇರುತ್ತವೆ ಇಲ್ಲವಾದಲ್ಲಿ ಪುಷ್ಕರಿಣಿ ಇರುತ್ತದೆ. ಪರಶುರಾಮ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ಕರಾವಳಿಯ ಕನ್ನಡ ಜಿಲ್ಲೆಗಳಿರುವ ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣ, ಕೊಲ್ಲೂರು- ಹೀಗೆ ಸಪ್ತಕ್ಷೇತ್ರಗಳು ಪವಿತ್ರ ಸ್ಥಳಗಳಾಗಿವೆ. ಕುಂಭಾಸಿ ಪೇಟೆಯ ಬೆಟ್ಟದ ಮೇಲೆ (ಆನೆಗುಡ್ಡೆಯಲ್ಲಿ) ಶ್ರೀ ವಿನಾಯಕ ವಿರಾಜಿಸುತ್ತಿರುವನು. ಆನೆಗುಡ್ಡೆಗೆ ವೇಲಾವನದ ಭಾಗವಾದ ಮಧುವನವೆಂದೂ, ನಾಗಾಚಲವೆಂದೂ ಹೆಸರು ಪಡೆದಿದೆ. ದೇವಸ್ಥಾನ ಬಹಳ ಪುರಾತನವಾಗಿದ್ದು, ಜೀರ್ಣಾವಸ್ಥೆಯಲ್ಲಿದ್ದ ದೇವಳವನ್ನು ೧೯೮೫ರಲ್ಲಿ ಉದ್ದಾರ ಮಾಡಲಾಗಿದೆ.

ನೀವೂ ಪ್ರಯತ್ನಿಸಿ...

ಮೌಸ್ ಜಾಸ್ತಿ ಉಪಯೋಗಿಸಿದಕ್ಕಿಂತ, ಕೀ ಬೋರ್ಡ್ ಶಾರ್ಟ್ ಕಟ್ ಕೀ ಉಪಯೋಗಿಸಿದರೆ ಕೈ ನೋವು ಕಡಿಮೆ ಆಗುವ‌ ಸ‌ಂಭ‌ವ‌ ಜಾಸ್ತಿಯ‌ಂತೆ.

ನೀವೂ ಪ್ರಯತ್ನಿಸಿ.

ಲಿನಕ್ಸಾಯಣ - ೫೧ - ನೆಟ್ವರ್ಕ್ ತೊಂದರೆಗಳನ್ನು ಸರಿ ಪಡಿಸೋದು ಹೇಗೆ?

ಲಿನಕ್ಸಾಯಣದಲ್ಲಿ ಈಗಾಗ್ಲೇ ಕೆಲವೊಂದು ಲೇಖನಗಳು ನಿಮಗೆ ಗ್ನು/ಲಿನಕ್ಸ್ ನಲ್ಲಿ ನೆಟ್ವರ್ಕಿಂಗ್ ನ ಬಗ್ಗೆ ಕೆಲವು ವಿಷಯಗಳನ್ನು  ತಿಳಿಸಿವೆ.