ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕತೆಗಳ ಕುರಿತು ಜೋಗಿ

'ಕಾಡು ಹಾದಿಯ ಕತೆಗಳು' ಸಂಕಲನದಲ್ಲಿ ಎಲ್ಲೋ ಜೋಗಿ ಈ ಮಾತನ್ನ ಹೇಳುತ್ತಾರೆ -
ಯಾರದ್ದೋ ಕತೆಯನ್ನು ಹೇಳುವ ಕತೆಗಾರ ನಿಜಕ್ಕೂ ತನ್ನ ಕತೆಯನ್ನ ಹೇಳುತ್ತಿರುತ್ತಾನೆ . ಯಾರದ್ದೋ ಕತೆಯನ್ನು ಕೇಳುತ್ತಿರುವ ಓದುಗ ತನ್ನದೇ ಕತೆಯನ್ನ ಕೇಳುತ್ತಿರುತ್ತಾನೆ.
ಹೌದೆ ?

ಪವಿತ್ರ ನೀರು: ಇನ್ನು ಮೇಲೆ ಬಾಟಲಿಗಳಲ್ಲಿ ಲಭ್ಯ

ಹಿಂದೂಗಳಿಗೆ ಗಂಗಾಜಲವಿದೆ, ಮುಸ್ಲಿಮರಿಗೆ ಜಮ್ ಜಮ್ ಜಲವಿದೆ. ಅದೇ ಕ್ರಿಶ್ಚಿಯನರಿಗೆ?

ಏನೂ ಇಲ್ಲವೆಂದು ಇನ್ನು ಕೊರಗಬೇಕಾಗಿಲ್ಲ. ಕ್ಯಾಲಿಫೋರ್ನಿಯಾದ ಸಂಸ್ಥೆಯೊಂದು ಈ ಕೊರಗನ್ನು ನೀಗಿಸಿದೆ. ಮಿನರಲ್ ನೀರು ಅಥವಾ ವಿಟಾಮಿನ್ ನೀರನನ್ನು ಇನ್ನು ಮೇಲೆ ಮರೆತುಬಿಡಿ, -ಪವಿತ್ರ ನೀರು - (Holy Water) ಮಾತ್ರ ಕುಡಿಯಿರಿ ಎಂದು ತನ್ನ ಜಾಹೀರಾತುಗಳಲ್ಲಿ ಪ್ರಚಾರ ನೀಡುತ್ತಿದೆ.

ನೀ ಹೀಂಗ ನೋಡಬ್ಯಾಡ ನನ್ನ... (ಬೇಂದ್ರೆ-೨)

ಮೂಕ ವೇದನೆ ಎಂಬ ಒಂದು ನುಡಿಗಟ್ಟಿದೆ. ಹೇಳಲಾರದ ನೋವದು. ಹೇಳಿಕೊಂಡರೂ ವ್ಯಕ್ತವಾಗದ ಭಾವವದು. ಒಳಗೇ ಇಟ್ಟುಕೊಂಡಿದ್ದರೂ, ಉಕ್ಕಿ ಹೊರಗೂ ಕಾಣಿಸುವಂಥ ನೋವದು.

ಬೇಂದ್ರೆಯಂಥ ವ್ಯಕ್ತಿ ಅದನ್ನು ಕಣ್ಣಾರೆ ಕಂಡು, ಸ್ವತಃ ಅನುಭವಿಸಿದಾಗ ಉದ್ಭವವಾದದ್ದು ’ನಾದಲೀಲೆ’ ಸಂಕಲನದ ’ನೀ ಹೀಂಗ ನೋಡಬ್ಯಾಡ ನನ್ನ’ ಕವಿತೆ.

ಎಂಟೇ ದಿನಗಳಲ್ಲಿ ಅವರ ಇಬ್ಬರು ಎಳೆಯ ಮಕ್ಕಳು ತೀರಿಕೊಳ್ಳುತ್ತಾರೆ. ಬೇಂದ್ರೆಯವರಿಗೆ ಆಘಾತವಾಗುತ್ತದೆ. ಅವರಿಗಿಂತ ಹೆಚ್ಚಿನ ಶೋಕ ಅವರ ಮಡದಿಯದು. ಯಾರು ಯಾರಿಗೆ ಸಮಾಧಾನ ಹೇಳಬೇಕು? ತಾನತ್ತರೆ ಕವಿಹೃದಯದ ಗಂಡ ಇನ್ನಷ್ಟು ಶೋಕಪಡುತ್ತಾರೆ ಎಂದುಕೊಂಡು ಅವರ ಮಡದಿ ಸುಮ್ಮನಿದ್ದಾರೆ. ಆದರೆ, ಮಕ್ಕಳನ್ನು ಕಳೆದುಕೊಂಡ ಶೋಕ ಉಕ್ಕುಕ್ಕಿ ಬರುತ್ತಿದೆ. ಅದನ್ನು ಅದುಮಿಟ್ಟುಕೊಂಡು ಆಕೆ ಸುಮ್ಮನೇ ಕೂತಿದ್ದಾರೆ.

ಬೆಂಗಳೂರು ಬಸ್ ಸ್ಟ್ಯಾಂಡುಗಳ ಹೊಸ ಮುಖಗಳು


ಬೆಂಗಳೂರಿನ ಸಾರ್ವಜನಿಕ ಬಸ್ ನಿಲ್ದಾಣಗಳ make-over ನಡೆಯುತ್ತಿದೆ ಗಮನಿಸಿದಿರಾ?.
 
ತಲೆಯೊಳಗೆ ವ್ಯಾಪಾರೀ ಮನೋಭಾವ ಬಿಟ್ಟು ಬೇರೇನೂ ಇಲ್ಲದ ಮೂರ್ಖರು ಯಾರೋ ಹೊಸ ವಿನ್ಯಾಸ ಮಾಡಿದ್ದಾರೆ.

ವ್ಯವಸ್ಥೆ

ಸಭೆ ಸೇರಿದವು ನಾಯಿ ಬೆಕ್ಕುಗಳೊಮ್ಮೆ
ತಮ್ಮ ಹಿರಿಮೆಗಳ ಹೇಳಿಕೊಳಲೆಂದೇ
ಬೆಕ್ಕು ನಾಯಿಯ ಜರೆಯಿತು:

ಎಂಜಲು ತಿನ್ನುವ ಕೊಳಕ
ಮಾಡಿರುವೆಯಾ ಒಮ್ಮೆಯಾದರೂ ಜಳಕ?
ನನ್ನ ಮೈಬಣ್ಣ ನೋಡು ಎಷ್ಟು ಬಿಳಿ?
ನಾಡಿನ ನೇತಾರರೆಲ್ಲ ನನ್ನಂತೆಯೇ ತಿಳಿ

ನಾಯಿ ನಗುತ್ತ ಹೇಳಿತು:
ಹೆಂಡದ ಮಡಕೆಯ ಹೊರಗೆ ತೊಳೆದರೆ ಸಾಕೆ?
ಒಳಗಿನ ದುರ್ಗುಣಗಳ ತೊಳೆದಿರುವೆಯಾ ಸೊಕ್ಕೆ?

ಅಪರೂಪದ ಶಿವಪಾರ್ವತಿ ವಿಗ್ರಹ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಅನೇಕ ಪಾಳೇಗಾರರು ಆಳಿರುವ ಪ್ರದೇಶವಾಗಿದೆ. ತಾಲೂಕಿನಲ್ಲಿರುವ ಗುಡೇಕೋಟೆ ಗ್ರಾಮ ಪಾಳೆಗಾರರ ಕೋಟೆ-ಕೊತ್ತಲಗಳಿಂದ ಕಂಗೊಳಿಸುತ್ತದೆ. ಇಲ್ಲಿಯೇ ದಕ್ಷಿಣ ಭಾರತದಲ್ಲಿಯೇ ಅಪರೂಪದ್ದೆನಿಸುವ ಸುಂದರ ಶಿವಪಾರ್ವತಿಯ ವಿಗ್ರಹವಿದೆ. ಶಿವಪಾರ್ವತಿಯ ವಿಗ್ರಹವಿರುವ ದೇವಸ್ಥಾನವಿರುವುದೂ ವಿಶೇಷವೇ! ವಿಗ್ರಹವು ಏಕಶಿಲಾ ವಿಗ್ರಹವಾಗಿದ್ದು, ಕಪ್ಪುಶಿಲೆಯಿಂದ ಕಂಡರಿಸಲ್ಪಟ್ಟಿದೆ. ಹೊರಗಡೆ ಸಾಮಾನ್ಯ ದೇವಸ್ಥಾನದಂತೆ ಕಂಡರೂ ಗರ್ಭಗುಡಿಯಲ್ಲಿನ ಶಿವಪಾರ್ವತಿ ವಿಗ್ರಹದಿಂದ ಈ ದೇವಸ್ಥಾನಕ್ಕೆ ಮಹತ್ವ ಬಂದಿದೆ. ಇಲ್ಲಿ ಶಿವನು ಪಾರ್ವತಿಯನ್ನು ತೊಡೆಯ ಮೇಲೆ ಕೂಡಿಸಿಕೊಂಡಿರುವುದು ಅಪರೂಪದ್ದಾಗಿದೆ. ಶಿವನು ಎಡಕೈಯಲ್ಲಿ ತ್ರಿಶೂಲವನ್ನು ಹಿಡಿದಿದ್ದು, ತ್ರಿಶೂಲದ ಮೇಲ್ಭಾಗದಲ್ಲಿ ಮಾನವನ ರುಂಡವನ್ನು ಕೆತ್ತನೆ ಮಾಡಲಾಗಿದೆ. ಶಿವನು ಬಲಗೈಯಲ್ಲಿ ಡಮರುಗವನ್ನು ಹಿಡಿದಿದ್ದಾನೆ. ಪಾರ್ವತಿಯ ತೋಳು ಶಿವನನ್ನು ಬಳಸಿದೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಶಿವನ ತಲೆಯಲ್ಲಿ ಜಟೆಯಿಲ್ಲ, ಗಂಗೆಯಿಲ್ಲ, ಅರ್ಧಚಂದಿರನೂ ಇಲ್ಲ. ಶಿವಪಾರ್ವತಿಯರಿಬ್ಬರೂ ಕಿರೀಟವನ್ನು ಧರಿಸಿರುವುದು ಈ ಮೂರ್ತಿಯ ಮತ್ತೊಂದು ವಿಶೇಷವಾಗಿದೆ. ಈ ರೀತಿಯ ಶಿವಪಾರ್ವತಿಯ ಮೂರ್ತಿ ಎಲ್ಲಿಯೂ ನೋಡಸಿಗುವುದಿಲ್ಲವೆಂಬುದು ಗ್ರಾಮಸ್ಥರ ಹೇಳಿಕೆ. ಶಿವನ ಹಣೆಗಣ್ಣನ್ನು ವಿಶೇಷವಾಗಿ ಕೆತ್ತನೆ ಮಾಡಲಾಗಿದೆ. ಕಿರೀಟ, ಮೂರ್ತಿಯ ಮುಖ, ತಲೆಕೂದಲು, ಒಟ್ಟಾರೆ ಇಡೀ ಆಕೃತಿ ಹೊಯ್ಸಳರ ಕಾಲದ ಕೆತ್ತನೆಯ ಶೈಲಿಯನ್ನು ನೆನಪಿಸುತ್ತದೆ. ಗರ್ಭಗುಡಿಯ ಹೊರಭಾಗದಲ್ಲಿ ಎಡಗಡೆ ಗಣಪನ ವಿಗ್ರಹ, ಬಲಗಡೆ ದುರ್ಗೆಯ ವಿಗ್ರಹಗಳಿವೆ. ಎದುರಿಗೆ ನಂದಿಯ ವಿಗ್ರಹವಿದೆ.

"ಸೈಕಲ್ ಗೆ ಸೈ ಮಹಾದೇವ೦ಗೆ ಜೈ " ಸೈಕಲ್ - ಶಿವ ಕ್ಷೇತ್ರ ಯಾತ್ರೆ .

ನಮ್ಮ ಬೆ೦ಗಳೂರಿನಲ್ಲಿ ಅತ್ಯ೦ತ ವಿಶಿಷ್ಟವಾದ ಶಿವಾಲಯಗಳಿವೆ. ಒ೦ದೊ೦ದು ಶಿವಾಲಯಕ್ಕೆ

ನಮ್ಮ ಕುಮಾರ ಪರ್ವತ ಚಾರಣ

ಈ ಚಾರಣಗಳೆಂದರೆ ವೈಷ್ಣೋದೇವಿ ಮಂದಿರಕ್ಕೆ ಹೋದ ಹಾಗೆ. ಯೋಗ ಬರದೆ ಅವು ಮೆಟೀರಿಯಲಾಯಿಸ್ ಆಗುವುದೇ ಇಲ್ಲ. ಕುಮಾರ ಪರ್ವತಕ್ಕೆ ಚಾರಣ ಮಾಡುವ ನಮ್ಮ ಕನಸು ಹಲವಾರು ವರ್ಷಗಳ ಭಗ್ನತೆಯ ಬಳಿಕ ಚಿಗುರೊಡೆದು ಕೊನೆಗೂ ಈಡೇರಿದೆ!.

ಮೂರು ಪ್ರತ್ಯೇಕ ಸ್ಥಳಗಳಿಂದ ಹೊರಟು ನಾವೆಲ್ಲ ಉಪ್ಪಿನಂಗಡಿಯ ಸಂಬಂಧಿಕರ ಮನೆಯಲ್ಲಿ ಒಂದಾದೆವು. ಚಾರಣ ಹೊರಡುವವರು ನಾವು ೬ ಮಂದಿ ದೊಡ್ಡವರು ಮತ್ತು ಇಬ್ಬರು ಮಕ್ಕಳು. ನನ್ನ ಚಿಕ್ಕಮ್ಮ ಸರಭರನೆ ಓಡಾಡಿ ನಮಗಾಗಿ industrial scale ನಲ್ಲಿ ಮಧ್ಯಾಹ್ನದ ಊಟಕ್ಕೆ ಅನ್ನ, ಸಾಂಬಾರು, ರಾತ್ರಿಗೆ  ಚಪಾತಿ, ಪಲ್ಯ, ಫ್ಲಾಸ್ಕಿನಲ್ಲಿ ಬಿಸಿಹಾಲು (ಕಾಫಿಗಾಗಿ!) ತಯಾರು ಮಾಡಿಕೊಟ್ಟರು.

ಕೊನೆಗೂ ನಾವು ಎರಡು ಕಾರಿನಲ್ಲಿ ಹೊರಟೆವು. ಹತ್ತಿರದ ಸುಬ್ರಮಣ್ಯದ ದಾರಿಗೆ ಬದಲಾಗಿ ಬಿಸಿಲೆ ಘಾಟಿ ದಾಟಿ ಹತ್ತುವ ಮಾರ್ಗ ವನ್ನು ಆಯ್ದುಕೊಂಡಿದ್ದೆವು. ಬುದ್ಧಿ ಇದ್ದವರು ಆಯ್ಕೆಮಾಡಿಕೊಳ್ಳದ ಅಸಾಧ್ಯವಾದ ಮಾರ್ಗದಲ್ಲಿ ನಮಗೆ ೬೦ ಕಿಮೀ ಕ್ರಮಿಸಲು ೪ ಘಂಟೆ ಬೇಕಾಯಿತು. (ನಮಗೆ ಬುದ್ಧಿ ಇರಲಿಲ್ಲವೆಂದಲ್ಲ. ಮಾರ್ಗ ಸರಿ ಇಲ್ಲ ಎಂದು ಗೊತ್ತಿರಲಿಲ್ಲ ಅಷ್ಟೆ). ಕಾರುಗಳು ಎಲ್ಲ ಕೀಲುಗಳಿಂದ ಕಿರ್ರ್ ಎಂದು ಶಬ್ದ ಮಾಡಲು ಶುರುಮಾಡಿದ್ದವು.

ಉಬುಂಟು ನಲ್ಲಿ ನನ್ನ ಮೊದಲ ಬ್ಲಾಗು!

ಇದು ಲಿನಕ್ಸ್ (ಉಬುಂಟು)  ಉಪಯೋಗಿಸಿ ಬರೆದ ಮೊದಲ ಬ್ಲಾಗು. :)

ಇನ್ಸ್ಟಾಲ್ ಮಾಡೋದು , ಬಳಸೋದಂತೂ ತುಂಬ ಸರಳ.

>ವಿಸ್ಟಾದಲ್ಲಿ ಲಾಗಿನ್ ಆದೆ
>ಉಬುಂಟು CD ಹಾಕಿದೆ.
>೩ ಆಯ್ಕೆಗಳು ಬಂದವು
>ವಿಂಡೋಸ್ ಒಳಗೆನೆ ಉಬುಂಟು ಇನ್ಸ್ಟಾಲ್ ಮಾಡೋ (೨ ನೆ) ಆಯ್ಕೆ ಯನ್ನು ತೆಗೆದುಕೊಂಡೆ

ಮರೆತೇನೆಂದರೆ ಮರೆಯಲಿ ಹ್ಯಾಂಗ...?

’ಬಿಸಿಲು ಬಲಿಯುತ್ತಿದೆ’

ಹಾಗಂದುಕೊಂಡೇ ಪ್ರತಿ ದಿನ ಮಧ್ಯಾಹ್ನದ ಹೊತ್ತು ಸ್ಕೂಟಿ ಏರುತ್ತೇನೆ. ಮಗಳನ್ನು ಶಾಲೆಯಿಂದ ಕರೆ ತಂದಾಗಿರುತ್ತದೆ. ಲಘು ಊಟವೂ ಮುಗಿದಿರುತ್ತದೆ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಅಂತಹ ಬೆಳವಣಿಗೆಗಳೇನೂ ಆಗಿಲ್ಲ ಅಂತ ಅಂದುಕೊಳ್ಳುತ್ತ ಸ್ಕೂಟಿ ಚಲಿಸುವಾಗ, ಬಿಸಿ ಗಾಳಿ ಮುಖಕ್ಕೆ ರಾಚುತ್ತದೆ.