ಭಗವದ್ಗೀತೆಯಲ್ಲೇನಿದೆ !!!!
ಒಬ್ಬ ವಯಸ್ಸಾದ ರೈತ ಬೆಟ್ಟದ ತಪ್ಪಲಿನಲ್ಲಿ ಜಮೀನು ನೋಡಿಕೊಂಡು ತನ್ನ ಮೊಮ್ಮಗನ ಜೊತೆ ವಾಸವಾಗಿದ್ದನು. ದಿನ ಬೆಳಗ್ಗೆ ಮುದುಕ ಬೇಗ ಎದ್ದು ಅಡಿಗೆ ಕೋಣೆಯಲ್ಲಿ ಭಗವದ್ಗೀತೆ ಓದುತ್ತಿದ್ದನು. ಒಂದು ದಿನ ಮೊಮ್ಮಗ ಮುದುಕನನ್ನು ಕುರಿತು ಈ ರೀತಿ ಕೇಳಿದನು. "ಅಜ್ಜ ನಾನು ನಿನ್ನ ಹಾಗೆ ಭಗವದ್ಗೀತೆಯನ್ನು ಓದಲು ಪ್ರಯತ್ನಿಸುತ್ತೇನೆ ಆದರೆ ನನಗೆ ಅದು ಅರ್ಥ ಆಗುವುದಿಲ್ಲ, ಸ್ವಲ್ಪ ಅರ್ಥ ಆಗಿರುವುದು ಸಹ ಪುಸ್ತಕ ಮುಚ್ಚಿದೊಡನೆಯೆ ಮರೆತು ಹೋಗುವುದು. ಭಗವದ್ಗೀತೆಯನ್ನು ಓದುವುದರಿಂದ ಆಗುವ ಪ್ರಯೋಜನವಾದರು ಏನು?
ಮುದುಕ ಕೆಂಡವನ್ನು ಒಲೆಗೆ ಹಾಕುತ್ತಿದ್ದವನು ಹಿಂತಿರುಗಿ ಮೊಮ್ಮಗನಿಗೆ ಹೀಗೆ ಹೇಳಿದನು "ಈ ಇದ್ದಿಲನ್ನು ತೊಡುವ ಬೆತ್ತದ ಬುಟ್ಟಿಯತ್ತ ಕೈ ತೋರಿಸಿ ಮಗೂ ನದಿಗೆ ಹೋಗು, ಬರುವಾಗ ಬುಟ್ಟಿಯ ತುಂಬಾ ನೀರು ತುಂಬಿಸಿಕೊಂಡು ಬಾ, ನೀನು ಬಂದನಂತರ ಹೇಳುವೆ" ಎಂದನು.
ಹುಡುಗನು ಅಜ್ಜ ಹೇಳಿದ ಹಾಗೆ ಮಾಡಿದನು ಆದರೆ ಅವನು ಮನೆಗೆ ಬರುವುದರಲ್ಲಿ ನೀರು ಎಲ್ಲಾ ಬುಟ್ಟಿಯಿಂದ ಸೋರಿಹೋಗಿತ್ತು. ಮುದುಕನು ನಕ್ಕು "ನೀನು ಮುಂದಿನ ಸಲ ಇನ್ನೂ ವೇಗವಾಗಿ ಬರಬೇಕು" ಅಂತ ಹೇಳಿ ಮತ್ತೆ ಹುಡುಗನನ್ನು ನದಿಗೆ ಬುಟ್ಟಿಯೊಂದಿಗೆ ಕಳಿಸಿಕೊಟ್ಟನು. ಈ ಬಾರಿ ಹುಡುಗ ವೇಗವಾಗಿ ಮನೆಗೆ ಓಡಿ ಬಂದನು, ಅದರೆ ಪುನಃ ಬುಟ್ಟಿ ಕಾಲಿಯಾಗಿತ್ತು.
- Read more about ಭಗವದ್ಗೀತೆಯಲ್ಲೇನಿದೆ !!!!
- 14 comments
- Log in or register to post comments