ಭಗ್ನ ಪ್ರೇಮಿ...
ಒಲವಿನಲಿ
ಮಿಂದು-ಬೆಂದು
ಹೊರ ಬಂದ ಜೀವಕ್ಕೆ,
ಹೊಸತೊಂದು
ಜೀವ ಬಂದು
ಒಲವ ಹೊಳೆ
ಹರಿಸಿದರೂ,
ಆ ಜೀವ
ಹಳೆಯ ಕರುಕಲ
ನೆನೆದು ಬೆದೆರುವುದೇಕೆ?
--ಶ್ರೀ
- Read more about ಭಗ್ನ ಪ್ರೇಮಿ...
- Log in or register to post comments
ಒಲವಿನಲಿ
ಮಿಂದು-ಬೆಂದು
ಹೊರ ಬಂದ ಜೀವಕ್ಕೆ,
ಹೊಸತೊಂದು
ಜೀವ ಬಂದು
ಒಲವ ಹೊಳೆ
ಹರಿಸಿದರೂ,
ಆ ಜೀವ
ಹಳೆಯ ಕರುಕಲ
ನೆನೆದು ಬೆದೆರುವುದೇಕೆ?
--ಶ್ರೀ
ಹೊರಗೆ ಲಾರಿಯವ ಹಾರ್ನ್ ಹಾಕಿದ.
’ಬಂದೆ ಮಾರಾಯಾ...’ ಎಂದು ಮನೆಯೊಳಗಿಂದ ಕೂಗು ಹಾಕಿ ಒಮ್ಮೆ ಮನೆಯನ್ನು ಸುಮ್ಮನೇ ನೋಡಿದೆ.
ಇಲ್ಲೇ ಅಲ್ಲವಾ ನಾವು, ಅಂದರೆ ರೇಖಾ ಮತ್ತು ನಾನು, ನೂರೆಂಟು ಕನಸುಗಳನ್ನು ಕಂಡಿದ್ದು. ಅದರಲ್ಲಿ ಕೆಲಸ ಬದಲಿಸುವ ಒಂದು ಕನಸು ನನಸಾಗಿತ್ತು. ಮಗಳು ಗೌರಿಗೆ ವಿಶೇಷ ಶಾಲೆ ಹುಡುಕುವ ಇನ್ನೊಂದು ಕನಸೂ ನೆರವೇರಿತ್ತು. ಉಳಿದವು ಕನಸಾಗಿಯೇ ಉಳಿದಿವೆ. ದಿನಾ ಹೊಸ ಭಾವನೆಗಳಿಗೆ ಕಾವು ಕೊಡುತ್ತಿವೆ.
ದಿಟ್ಟಿಸಿ ನೋಡಿದೆ. ಇಲ್ಲಿ ಹಾಕಿದ್ದ ದಿವಾನ್ ಮೇಲೆ ಕೂತು ಗೌರಿ ತನಗಿಷ್ಟವಾದ ಉದಯ ಟಿವಿಯವರ ಯು೨ ಟಿವಿ ನೋಡುತ್ತಿದ್ದುದು. ಇಲ್ಲೇ ಅಲ್ಲವಾ ಸಣ್ಣ ಮಗಳು ನಿಧಿ ಆಟವಾಡುತ್ತಿದ್ದುದು. ಈ ಚಿಕ್ಕ ಗೂಡಿನಲ್ಲಿ ಕೂತು ನಮ್ಮತ್ತ ನೋಡಿ ಕೇಕೆ ಹಾಕುತ್ತಿದ್ದುದು. ನಾವು ದಿನಾ ಮುಂಜಾನೆಯ ವಾಕ್ ಮುಗಿಸಿ ಇಲ್ಲೇ ಅಲ್ಲವಾ ಚಹ ಕುಡಿಯುತ್ತಿದ್ದುದು. ದೊಡ್ಡ ಬೆಡ್ ರೂಮ್ ತುಂಬ ಹುಡುಗಿಯರಿಬ್ಬರೂ ಹರವಿ ಹಾಕುತ್ತಿದ್ದ ಆಟಿಕೆ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಹಾಸಿಗೆ ಎಳೆದಾಡಿ ಅಸ್ತವ್ಯಸ್ತ ಮಾಡಿರುತ್ತಿದ್ದರು. ಛಕ್ಕನೇ ಯಾರಾದರೂ ಬೆಡ್ ರೂಮಿಗೆ ನುಗ್ಗಿದರೆ ಮುಸಿಮುಸಿ ನಗುತ್ತ ಹೊರಗೆ ಹೋಗಬೇಕು, ಹಾಗೆ ಮಾಡಿರುತ್ತಿದ್ದರು ಹಾಸಿಗೆಯನ್ನು. ಅರೆಕ್ಷಣ ಅವನ್ನೆಲ್ಲ ಮತ್ತೆ ಕಣ್ಣು ತುಂಬಿಕೊಂಡೆ.
ಹೌದಲ್ಲ! ಮನುಷ್ಯನಿಗೆ ಒಂಟಿಯಾಗಿ ಬದುಕೋದಿಕ್ಕೆ ಸಾಧ್ಯವೇ ಇಲ್ಲ. ಸಹಜವಾಗಿಯೇ ಆತ ಇನ್ನೊಂದು ಜೀವಿಯೊಂದಿಗೆ ಸ್ನೇಹ ಹಸ್ತವನ್ನು ಚಾಚುತ್ತಾನೆ. ಕೆಲವೊಮ್ಮೆ ವ್ಯಾವಹಾರಿಕವಾಗಿಯೇ ಶುರುವಾಗುವ ಸಂವಹನ ನಂತರದ ದಿನಗಳಲ್ಲಿ ಪರಿಚಯ ಹೆಚ್ಚಾಗುತ್ತಿದ್ದಂತೆ ಸಹಜವಾಗಿ ಆತ್ಮೀಯತೆಯ ಬಳ್ಳಿಯೊಂದು ಟಿಸಿಲೊಡೆದು ಇಬ್ಬರ ನಡುವೆ ಹಬ್ಬಲು ಪ್ರಾರಂಭಿಸುತ್ತದೆ.
ಇಂದು ಸಂಜೆ ಕಛೇರಿಯಿಂದ ಮನೆಗೆ ಬಂದು ಕೈ-ಕಾಲು-ಮುಖ ತೊಳೆಯಲು ಬಚ್ಚಲುಮನೆಗೆ ಹೋದಾಗ ಒಂದು ಜಿರಳೆಯು ಹಲ್ಲಿಯ ಬಾಯಿಗೆ ಸಿಕ್ಕಿಕೊಂಡಿತ್ತು.
ಹಲ್ಲಿಯು ದೊಡ್ಡ ಜಿರಳೆಯನ್ನು ನುಂಗಲಾರದೆ, ಸಿಕ್ಕ ಭೋಜನವನ್ನು ಬಿಡಲೂ ಆಗದಂಥ ಪರಿಸ್ಥಿತಿಯಲ್ಲಿತ್ತು.
ಮಿಂಚು ಬಡಿಯಿತೋ , ಇಲ್ಲ ಸಿಡಿಲು ಹೊಡೆಯಿತೋ,
ಕಣ್ಣೆವೆಗಳೇಕೆ ನೆಲ ನೋಡುತಿವೆ ಮೈ ಏಕೆ ಬಿಸಿಯಾದಂತೆ ತೋರುತಿದೆ
ಕೆನ್ನೆಗಳೇಕೆ ರಂಗೇರಿವೆ,ಎದೆಯ ಬಡಿತ ಜೋರಾಯಿತೇಕೆ
ಕಣ್ ತುಂಬಿದ ಚಂದ್ರನ ಮರಳಿ ಕಾಣುವ ಕಾತುರ ಕಿವಿ ತುಂಬಿದ ದನಿಯ ಮತ್ತೆ ಆಲಿಸುವ ಆತುರ,
ಛೇ ಹುಚ್ಚಿ ನಾನು ಸುಮ್ಮ ಸುಮ್ಮನೆ ನಗುವೆನಲ್ಲ. ನಕ್ಕಾಗಲೂ ಕಣ್ಮುಂದೆ ನಲ್ಲ ಬಂದು ನಿಂತನಲ್ಲ
ಟ್ರಿನ್ ಟ್ರಿನ್ ಟ್ರಿನ್ ರಿಂಗಣ ಮೊಳಗಲು
ಆ ಕಡೆ ಇರುವ ನೀವು ಯಾರೆಂದು ನಾ ಕೇಳಲು
ಸಿಹಿಯಾದ ದನಿಯೊಂದು ಅತ್ತಕಡೆಯಿಂದ ಬಂದಿತು
ಸೊಗಸಾದ ಕನಸಿರಬಹುದೆಂದು ಮೊದಲು ನನಗನಿಸಿತು
ನಿಮ್ಮ ಹೆಸರೇನೆಂದು ನಾ ಮತ್ತೆ ಕೇಳಲು
ಅಯ್ಯೋ ತಪ್ಪಾಗಿ ನಿಮಗೆ ಕರೆ ಮಾಡಿದೆ ಎಂದು ದನಿ ನುಡಿಯಿತು
ಆಕಸ್ಮಿಕ ಕರೆಯಿಂದ ಗೆಳತಿಯೊಬ್ಬಳು ಸಿಕ್ಕಳೆಂದು ನನಗನಿಸಿತು
(ನನ್ನ ಸ೦ಗ್ರಹದಿ೦ದ)
ಯಾರು
ಹೇಳುತ್ತಾರೆ
ಹೂಗಳಿರುವುದೇ
ಪ್ರೇಮದ ಮುಡಿಗೆ೦ದು?
ಕೆಲವು ಹೂಗಳು
ಅರಳುವುದೇ
ಸಮಾಧಿಯ ಸಿ೦ಗರಿಸಲೆ೦ದು.
***
ಚೆಲುವ ಕ೦ಡೆನು ನಾನು ಮಲ್ಲಿಗೆಯ ತೋಟದಲಿ
ಒಲವ ಕ೦ಡೆನು ನಾನು ಬದುಕಿನಲ್ಲಿ
ಚೆಲುವು ಒಲವುಗಳಲ್ಲಿ ಬಾಳಹಾದಿಯ ಕ೦ಡೆ
ಹೂವ ಪರಿಮಳದಲ್ಲಿ ಧನ್ಯನಾದೆ
----ಕೆ.ಎಸ್.ನರಸಿ೦ಹ ಸ್ವಾಮಿ
****
ಹುಟ್ಟು-ಸಾವು-ಅಸ್ತಿತ್ವ
ನಾವು ಒ೦ದೇ
ಮರದಿ೦ದ
ಶೀರ್ಷಿಕೆ ಹೇಳುವಂತೆ,ಇದು ದೊಡ್ಡವರ ಬಗೆಗಿನ ವಿಷಯವಾದ್ದರಿಂದ ಮೊದಲೇ ಒಂದು ಮಾತು ಸ್ಪಷ್ಟ ಮಾಡಿಬಿಡುತ್ತೇನೆ, ಹಿರಿಯ ನಾಗರಿಕರ ಬಗ್ಗೆ ನನಗೆ ಅತೀವ ಪ್ರೀತಿ,ಅಭಿಮಾನ,ಗೌರವವಿದೆ. ಈ ಮಾತನ್ನು ಹೇಳಿದ ಕಾರಣ ಇಷ್ಟೇ,ಈ ಬರಹವನ್ನು ಓದುವವರು ನನ್ನದು ಅಧಿಕಪ್ರಸಂಗ ಅಥವಾ ಹಿರಿಯರ ಬಗ್ಗೆ ಗೌರವ ಇಲ್ಲದವನೆಂದು ತಿಳಿಯಬಾರದು ಎಂಬ ಕಾರಣದಿಂದ ಮಾತ್ರ.
ನನ್ನ ಹೆಸರು ಮಧುಸೂದನ್ ,ಹುಟ್ಟಿದ್ಧು ಮಂಡ್ಯದಲ್ಲಿ ಆದರೆ ಕೆಲಸಕ್ಕಾಗಿ ಅವಲಂಬಿಸಿದ್ಧು ಬೆಂಗಳೂರನ್ನ ,ನನ್ನ ಕೆಲಸದ ಬಿಡುವಿನ ವೇಳೆಯಲ್ಲಿ ಅಂರ್ತಜಾಲದಲ್ಲಿ ಮಾಹಿತಿ ಶೊದೀಸುವುದು ನನ್ನ ಒಂದು ಹವ್ಯಾಸ ಅದರಲ್ಲಿ ಕನ್ನದ ದಿನ ಪತ್ರಿಕೆಗಳನ್ನು ಓದುವುದು ಮತ್ತು ಗೂಗ್ಲ್ ನಲ್ಲಿ ಕನ್ನದದ ಬಗ್ಗೆ ಹುಡುಕುತ್ತಾ ಇರಬೆಕಾದರೆ ನನಗೆ ಸಿಕ್ಕಿದ್ದು ಸಂಪದ .