ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲಿನಕ್ಸ್ ಗೆ ೧೭ ವರ್ಷದ ಹರೆಯ

 

ಲಿನಕ್ಸ್ ಗೆ ಈಗ ೧೭ ವರ್ಷ. ಲಿನಕ್ಸ್ ಜರ್ನಲ್ ನಲ್ಲಿ ಕಂಡು ಬಂದ ಈ ಲೇಖನವನ್ನ ಒಮ್ಮೆ ಓದಿ. ೧೯೯೧ರಲ್ಲಿ ಲಿನಸ್ ಟೋರ್ವಾಲ್ಡ್ಸ್ "ನಿಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿ ಉಪಯೋಗಿಸಿಕೊಳ್ಳ ಬಲ್ಲಂತಹ ಮಿನಿಕ್ಸ ಆಪರೇಟಿಂಗ್ ಸಿಸ್ಟಂ" ನ ಬಗ್ಗೆ ಜಗತ್ತಿಗೆ ಸಾರಿ ಹೇಳಿದ. ಇದನ್ನ ನೆನಪಿಸಿಕೊಳ್ಳಲು Encyclopedia Brittanica ಮೊನ್ನೆ ತನ್ನ ಮುಖಪುಟದ ವಿಷಯವನ್ನಾಗಿ "ಲಿನಕ್ಸ್ ಹುಟ್ಟು ಹಬ್ಬವನ್ನ" ಆಯ್ದು ಕೊಂಡಿತ್ತು. ಗಣಕ ತಂತ್ರಜ್ಞಾನದಲ್ಲಿ ಹೊಸದೊಂದು ಮೈಲಿಗಲ್ಲನ್ನೇ ಹಾಕಿಕೊಟ್ಟ ಟೋರ್ವಾಲ್ಡ್ಸನ ಕೆಲಸಕ್ಕೆ ಬೆನ್ನಲುಬಾಗಿದ್ದು, ಗ್ನು ಪ್ರಾಜೆಕ್ಟನ ಮೂಲಕ ೧೯೮೩ರಲ್ಲಿ ಜನರಿಗೆ ಸ್ವತಂತ್ರ ತಂತ್ರಾಂಶವನ್ನ ಪರಿಚಯಿಸಿದ "ರಿಚರ್ಡ್ ಸ್ಟಾಲ್ಮನ್" ಮತ್ತು ಗ್ನು ಪ್ರಾಜೆಕ್ಟ್ ನ ತಂತ್ರಾಂಶಗಳು. ಮಿಲಿಯಾಂತರ ಫೀ ಮತ್ತು ಓಪನ್ ಸೋರ್ಸ್ ಪ್ರಾಜೆಕ್ಟ್ ಗಳಿಗೆ ಇದು ಮಾದರಿಯಾಯ್ತು. ಜಗತ್ತಿನ ಕಂಪ್ಯೂಟರುಗಳಿಗೆ ಸ್ವತಂತ್ರ ತಂತ್ರಾಂಶವನ್ನ ಹುಟ್ಟುಹಾಕುವುದರೊಡನೆ, ಅನೇಕ ಹೊಸ ಆವಿಷ್ಕಾರಗಳು ಸಾಧ್ಯವಾದವು. ಮೈಕ್ರೋಸಾಫ್ಟ್ ವಿಂಡೋಸ್ ನ ಅಧಿಪತ್ಯವನ್ನ ಅಲುಗಾಡಿಸಿದ ಈ ತಂತ್ರಾಂಶ ಇಂದು ಕಂಪ್ಯೂಟರ್ ಗಳಲ್ಲದೆ, ಪಿಡಿಎ, ಮೊಬೈಲ್ ಫೋನು, ಎಮ್ಬೆಡೆಡ್ ಸಿಸ್ಟಂ ಹೀಗೆ ಅನೇಕ ಹಾರ್ಡ್ವೇರ್ಗಳಲ್ಲಿ ನಿರಾಳವಾಗಿ ಕಾರ್ಯನಿರ್ವಹಿಸುತ್ತಿದೆ.

ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ

ಪ್ರಕಾಶ್ ಶೆಟ್ಟಿಯವರು ಗೊತ್ತಲ್ಲ? ಮೂವತ್ತಮೂರು ವರ್ಷಗಳಿಂದ ವ್ಯಂಗ್ಯಚಿತ್ರಗಳದ್ದೇ ಧ್ಯಾನ
ಮಾಡುತ್ತಿದ್ದಾರೆ. ಕನ್ನಡಿಗರ ಹುಬ್ಬೇರಿಸಿದ "ಸಂತೋಷ" ಮಾಸಪತ್ರಿಕೆಯೊಂದಿಗೆ ವೃತ್ತಿ ಆರಂಭ.prakash

ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...

ಇಂತಹದೊಂದು ವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ಆರ್ಥಿಕ ಅಭಿವೃದ್ಧಿ ಕೊನೆಗೂ ತಳವರ್ಗಗಳನ್ನೂ, ಗ್ರಾಮಾಂತರವನ್ನೂ ಮುಟ್ಟುತ್ತದೆ ಮತ್ತು ಅದು ಕಾಲಾಂತರದಲ್ಲಿ ಅಂತರ್ಜಾಲದಲ್ಲೂ ಪ್ರತಿಬಿಂಬಿಸುತ್ತದೆ ಎನ್ನುವುದೇ ಆ ವಿಶ್ವಾಸ.

ನಾನು ಬರೆಯಲಾರಂಭಿಸಿದ್ದು 2003 ರಲ್ಲಿ. ಆಗ ನನ್ನಂತಹ ವಿದೇಶದಲ್ಲಿದ್ದವನಿಗೆ ಕನ್ನಡದಲ್ಲಿ ಏನಾದರೂ ಬರೆದರೆ ಪ್ರಕಟಿಸುವ ಅವಕಾಶ ಇದ್ದದ್ದು ದಟ್ಸ್‌ಕನ್ನಡ ವೆಬ್‌ಸೈಟಿನಲ್ಲಿ. ಶಾಮಸುಂದರ್ ಮತ್ತವರ ಬಳಗ ನನ್ನಂತಹ ಅನೇಕ ಭಿನ್ನ ವೈಚಾರಿಕ ಹಿನ್ನೆಲೆ ಇರುವವರಿಗೆಲ್ಲ ವೇದಿಕೆ ಕೊಟ್ಟಿದ್ದರು. ಬಹುಶಃ, ಸಂವಾದಕ್ಕೆ ಆಸ್ಪದವಿದ್ದ ಮೊದಲ ಕನ್ನಡ ತಾಣ ಅದು.

ಅಷ್ಟಿದ್ದರೂ, ಕನ್ನಡ ಅಂತರ್ಜಾಲ ಪ್ರಪಂಚದಲ್ಲಿ ಮೊದಲಿನಿಂದಲೂ ಬಹುಸಂಖ್ಯಾತರಾಗಿದ್ದವರು ಕೋಮುವಾದಿಗಳು ,

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ. ದುರ್ಗಿ ಎಂದರೇನು? ಕಾಳಿ ಎಂದರೇನು? ಗೌರಿ ಎಂದರೇನು? ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎನ್ನುವ ಭಾವನೆ ನಮಗಿದ್ದರೂ ಕೂಡ ಅದೇನೋ ನವರಾತ್ರಿಯ ಏಳನೇ ದಿನ ಸರಸ್ವತಿಗೂ, ಎಂಟನೇ ದಿನ ದುರ್ಗಿಗೂ, ಒಂಬತ್ತು ಹತ್ತನೇ ದಿನಗಳು ಚಾಮುಂಡಿಗೂ ಇರುವುದು ಹಳೇ ಮೈಸೂರಿನ ಸಂಪ್ರದಾಯವಿರಬಹುದು. ದುರ್ಗಾಷ್ಟಮಿಯ ದಿನ ಮನೆ ಚಿಕ್ಕ ಹುಡುಗಿಯರನ್ನು ಕರೆದು ಅವರನ್ನಾದರಿಸುವ ಸಂಪ್ರದಾಯವೂ ಎಷ್ಟೋ ಕುಟುಂಬಗಳಲ್ಲಿದೆ.

ನೆನ್ನೆ ಶೃಂಗೇರಿ ಶಾರದೆಯ ಮೇಲೆ ಒಂದು ಕನ್ನಡದಲ್ಲಿರುವ ಹಾಡನ್ನು ಕೇಳಿಸಿದ್ದೆ. ಹೇಗಿದ್ದರೂ ಈಗ ನವರಾತ್ರಿಯಲ್ಲವೇ, ಅದಕ್ಕೆ ಇವತ್ತು ’ನವರಸ’ಕನ್ನಡದ ಒಂದು ಹಾಡನ್ನು ಕೇಳಿಸೋಣ ಎಂದುಕೊಂಡೆ :). ಹೌದು, ನವರಸ ಕನ್ನಡ ಅನ್ನುವುದೊಂದು ರಾಗದ ಹೆಸರು. 

ಈ ರಚನೆ ಮುತ್ತಯ್ಯ ಭಾಗವತರದ್ದು. ನವರಾತ್ರಿಯ ಮೊದಲ ದಿನವೇ ಇವರದೊಂದು ದರು ವರ್ಣವನ್ನು ಕೇಳಿಸಿದ್ದೆನಲ್ಲ? ನೆನಪಿರಬಹುದು.

ಕಳೆದ ನೆನೆಪುಗಳು

ನಾನು ಮೊದಲು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲುಕಿನ ಬೂದಿಕೋಟೆಯಲ್ಲಿ ನಮ್ಮಧ್ವನಿ ಸಮುದಾಯ ರೇಡಿಯೋ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಇದು ಕರ್ನಾಟಕ, ಅಂದ್ರಪ್ರದೇಶ್ ಮತ್ತು ತಮಿಳುನಾಡಿನ ಗಡಿಬಾಗದಲ್ಲಿದೆ. ಇಲ್ಲಿನ ಜನರು ಅವಿದ್ಯಾವಂತರು, ಕೂಲಿಗಾರರು. ಇಲ್ಲಿ 10 ನೇತರಗತಿಯವರೆಗೆ ಓದಲು ಸ್ಕೂಲಿದೆ.

ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!

ನಿಮಗೆ ಖ್ಯಾತ ವ್ಯಂಗ್ಯಚಿತ್ರಕಾರರಾದ ಪ್ರಕಾಶ್ ಶೆಟ್ಟಿಯವರ ಪತ್ರ

ರಾಜ್ಯೋತ್ಸವ ಓಟ ೨೦೦೮

ಕರ್ನಾಟಕ, ಒಂದೇ ರಾಜ್ಯ, ಒಂದೇ ಭಾಷೆ, ಗಂಧದ ನಾಡು ಮತ್ತು ಕಸ್ತೂರಿ ಬೀಡು. ಏಕೀಕರಣದ ಬಳಿಕ ಕರ್ನಾಟಕ ನವೆಂಬರ್ ೧ರಂದು ಉದಯಿಸಿತ್ತು. ಅಂದಿನಿಂದಲೂ ಈ ದಿನವನ್ನು ಕನ್ನಡ ರಾಜ್ಯೋತ್ಸವ ಎಂದೇ ನಾಡಿನ ಉದ್ದಗಲಕ್ಕೂ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯ ರಾಜ್ಯೋತ್ಸವವನ್ನು ೨೦೦೮ರ ನವೆಂಬರ್ ೧ರ ಶನಿವಾರದಂದು ಆಚರಿಸಲಾಗುತ್ತಿದೆ.