ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಮೇರಿಕಾದ ಬ್ಯಾ೦ಕುಗಳು ಮಾಯ ಯಾಕ್ ಆಗ್ತಿವೇ ?

ಬ೦ಡವಾಳ ಷಾಹಿ ಪದ್ದತಿಯನ್ನೇ ತನ್ನ ಜೀವ ನಾಡಿ ಅ೦ದು ಎಲ್ಲಾ ದೇಶಗಳಿಗೂ ಈ ನೀತಿಯನ್ನು ರಫ್ತು ಮಾಡಿದ ಅಮೇರಿಕಾ ತಾನೇ ಈ ವರ್ಸ್ದಾಗೆ ಮುಳುಗಿ ಹೋಗುವ೦ತೆ ಕಾಣಿಸ್ತಿದೆ. ಅದೇನೋ ಮನೆ ಭೋಗ್ಯಕ್ಕೆ ಕೊಟ್ಟು ಯಾರು ಸಾಲ ತೀರಿಸಿಲ್ಲವ೦ತೆ. ಅದಕ್ಕೆ ಅಲ್ಲಿನ ಬ್ಯಾ೦ಕುಗಳು ನಷ್ಟ ಅನುಭವಿಸಲಾಗದೇ ಮುಚ್ಚಿ ಹೋದವ೦ತೆ. AIG ಅನ್ನೋ Insurance company ಗೆ insurance

’ಸೀಗಲ್ ’ ಗಳಿಗೂ ಮಿಚಿಗನ್ ಸರೋವರ ಅತಿ-ಪ್ರಿಯ !

ಈ ಚಿತ್ರ ತೆಗೆಯಲು ನಾನು ಸ್ವಲ್ಪ ಸರ್ಕಸ್ ಮಾಡಬೇಕಾಯಿತು. ಎಷ್ಟೇ ಆಗಲಿ ಪಕ್ಷಿಗಳು ಯಾವದೇಶದಲ್ಲಿದ್ದರೂ ಅವು ಪಕ್ಷಿಗಳೇ ! ಆದರೆ ಸೀಗಲ್ ಪಕ್ಷಿಗಳು ನಮ್ಮಲ್ಲಿ ಕಡಿಮೆಯೆಂದು ನನ್ನ ಅನಿಸಿಕೆ. ಅಥವಾ ಚೆನ್ನೈನಲ್ಲಿದ್ದರೂ ಇರಬಹುದು. ಮುಂಬೈನಲ್ಲಿ ಇದ್ದಂತಿಲ್ಲ.

ಕುಹೂ ಕುಹೂ ಕೋಗಿಲೆ ಹಾಡಿತಲ್ಲ ಈಗಲೇ

    ಮ್ಮೆ ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಪುಸ್ತಕ ಓದುತ್ತಿದ್ದಾಗ ಒಂದು ಅರ್ಧ ಪುಟದ ಸಣ್ಣ ಕಥೆ ಓದಿದೆ. ತುಂಬಾ ಚೆನ್ನಾಗಿದೆ ಎನ್ನಿಸಿತು. ಅದನ್ನು ನಾಟಕ ರೂಪಕ್ಕೆ ಇಳಿಸಿ  ಒಂದು ಮತ್ತು ಎರಡನೆಯ ತರಗತಿ ಮಕ್ಕಳಿಂದ ಮಾಡಿಸಿದಾಗ ಅವುಗಳ ಮುದ್ದು ಮಾತಿನ ನಾಟಕ ನೋಡಲು ಮೋಜೆನಿಸಿತು. ಈ ಕಥೆ ಕೋಗಿಲೆಯೊಂದು ಹಾಡು ಹೇಳುವುದನ್ನು ಕಲಿತ ಬಗೆಯದು. ಹಂಸ, ಕೊಕ್ಕರೆ, ನವಿಲು, ಗಿಣಿ ಎಲ್ಲವೂ ಅಹಂಕಾರದಲ್ಲಿ ಇದಕ್ಕೆ ಹಾಡು ಹೇಳಿಕೊಡಲು ನಿರಾಕರಿಸುತ್ತವೆ. ಆಗ ಪ್ರಕೃತಿ ಮಾತೆ ಅಳುತ್ತಾ ಕುಳಿತಿದ್ದ ಕೋಗಿಲೆಗೆ ತಾನೇ ಹಾಡು ಹೇಳಿಕೊಟ್ಟು ಸಂತಸಪಡಿಸಿದಳು ಎಂಬ ಒಂದು ಸಣ್ಣ ಕಥೆ ಅದು. ನಾನು ಸ್ವಲ್ಪ ಬದಲಾವಣೆಗಳನ್ನು ಮಾಡಿ ಹಂಸ ಹಾಗೂ ಕೊಕ್ಕರೆಯನ್ನು ಇರುವ ಸ್ವಲ್ಪ ಪ್ರತಿಭೆಗೆ, ತಮ್ಮ ರೂಪಿಗೆ ಜಂಬದಿ ಮೆರೆಯುವವರ ಪ್ರತಿನಿಧಿಗಳಾಗಿಸಿ, ನವಿಲು ಮತ್ತು ಗಿಣಿಗಳನ್ನು ತಮ್ಮ ಮಿತಿ ತಿಳಿದು ತಮ್ಮ ಪ್ರತಿಭೆಯ ಬಗ್ಗೆ ಅರಿವಿರುವ ಸ್ನೇಹಜೀವಿಗಳ ಪ್ರತಿನಿಧಿಗಳಾಗಿಸಿ ನಾಟಕ ರೂಪಿಸಿದೆ. ಕೊನೆಗೆ ಪ್ರಕೃತಿ ಮಾತೆಯ ಸನಿಹದಲ್ಲೇ ಕೋಗಿಲೆ ಸಂಗೀತ ಕಲಿತು ಕೊಳ್ಳುತ್ತದೆ. ಈ ನಾಟಕವನ್ನು ನಿಮ್ಮ ಮುಂದಿಡುವ ಮನಸ್ಸಾಯಿತು.  ಇನ್ನು ನಾಟಕ “ಕುಹೂ ಕುಹೂ ಕೋಗಿಲೆ ಹಾಡಿತಲ್ಲ ಈಗಲೇ”:

ಅಂಬಿಗರ ಚೌಡಯ್ಯನ ವಚನ

ದೊಡ್ಡ ದೊಡ್ಡ ಚಿಂದಿಶೆತ್ತಿಗಳ ಕಂಡರೆ
ಅಡ್ಡಗಟ್ಟಿ ಶರಣಾರ್ಥಿಯೆಂಬುರಯ್ಯ
ನಿಜ ಶರಣನು ಹೋಗಿ ಶರಣೆಂದರೆ
ನೊಡದವರ ಹಾಗೆ ಅಡ್ಡ ಮೋರೆಯನ್ನಿಟ್ಟುಕೊಂಡು ಹೋಗುವ
ಗೊಡ್ಡುಮೂಳರಿಗೆ ದುಡ್ಡೇ ಪ್ರಾಣವಾಯಿತಲ್ಲಪ್ಪಾ ದೇವಾ
ಇಂತಿರ್ಪ ದುಡ್ಡಿಸ್ತರ ದೊಡ್ಡಿಸ್ತಿಕಿಯ ಕುರುಹನರಿತು
ಮೊಳಪಾದ ಹೊಡೆದು ನಗುತಿದ್ದ ನಮ್ಮ ಅಂಬಿಗರ ಚೌದಯ್ಯ.

ಲೈಫ್ ಇನ್ ಮೆಟ್ರೋ…

ಚೆನ್ನೈನಲ್ಲಿ ಒಂದು ವರ್ಷ ದುಡಿದು ಇದೀಗ ಬೆಂಗಳೂರಿಗೆ ಬಂದಿದ್ದೇನೆ. ಅಲ್ಲಿನ ಉರಿಬಿಸಿಲಿಗೆ ಬೆವರು ಸುರಿಸಿ, ಸದ್ಯ ಬೆಂಗಳೂರಿನ ಚುಮು ಚುಮು ಚಳಿಗೆ ಮನಸಂತೂ ಪುಳಕಿತಗೊಂಡಿದೆ. ಆದ್ರೆ ಈ ಟ್ರಾಫಿಕ್ ಜಾಮ್ ನಲ್ಲಂತೂ ಮನಸ್ಸು ಬೇಜಾರಾಗಿ ಬಿಟ್ಟಿದೆ ಮಾರಾಯ್ರೆ. ಏನು ಮಾಡಲಿ? ಅದನ್ನಂತೂ ಯಾರಿಗೂ ತಪ್ಪಿಸಲು ಸಾಧ್ಯವಿಲ್ಲವಲ್ಲಾ …

ಈ ಟ್ರಾಫಿಕ್ ಜಾಮ್ ನಲ್ಲಿ ಒದ್ದಾಡುತ್ತಾ ಇರುವಾಗ ಚೆನ್ನೈ ಮೆಟ್ರೋ ರೈಲಿನ ಯಾತ್ರೆ ಮನಸ್ಸಲ್ಲಿ ಮೂಡಿಬರುತ್ತದೆ. ಅಲ್ಲಿ ಒಂದು ವರ್ಷ ಕಳೆದಿದ್ದರೂ ಮೆಟ್ರೋ ರೈಲಿನಲ್ಲೇ ನಾನು ಅನೇಕ ಬಾರಿ ಯಾತ್ರೆ ಮಾಡಿದ್ದು. ಅಲ್ಲಿನ ಬಸ್ ಯಾತ್ರೆ ನಂಗೆ ಇಷ್ಟವಿರಲ್ಲಿಲ್ಲ. ಯಾಕೆಂದ್ರೆ ಕಂಡಕ್ಟರ್ ಬಳಿಗೆ ನಾವೇ ಹೋಗಿ ಟಿಕೆಟ್ ಕೊಡ ಬೇಕು, ಆಮೇಲೆ ಭಾಷಾ ಸಮಸ್ಯೆ ಬೇರೆ. ಬಸ್ ನಂಬರ್ ನೋಡಿಕೊಂಡು ಹತ್ತಬೇಕು. ತಮಿಳಿನಲ್ಲಿ ಬರೆದ ಬಸ್ ಬೋರ್ಡ್ ಓದಲಿಕ್ಕಾಗುವುದಿಲ್ಲ. ಏನೆಲ್ಲಾ ಕಿರಿಕಿರಿ?. ಆದ್ರೆ ಟ್ರೈನಲ್ಲಿ ಅದರ ರಗಳೆಯೇ ಇಲ್ಲ. ಅದಕ್ಕೆ ಮೆಟ್ರೋ ಟ್ರೈನ್ ಅಂದ್ರೆ ಅಚ್ಚುಮೆಚ್ಚು.
ಆದ್ರೆ ಒಂದು ಮಾತು..ಟ್ರೈನ್ ಓಡಾಡದೇ ಇರುವ ಸ್ಥಳಕ್ಕೆ ಬಸ್ಸಲ್ಲೇ ಹೋಗಿದ್ದೆ .(ಅದು ಏನೋ ಸಾಹಸ ಮಾಡಿದಂಥ ಅನುಭವವನ್ನು ನೀಡುತ್ತಿತ್ತು). ಅದಲ್ಲಿರಲಿ, ಸದ್ಯ ನಾನು ಹೇಳ ಹೊರಟಿರುವುದು ಮೆಟ್ರೋ ಟ್ರೈನ್ ಅನುಭವದ ಬಗ್ಗೆ. ಅಲ್ಲಿನ ಮೆಟ್ರೋ ಟ್ರೈನ್ ಯಾವಾಗಲೂ ಜನರಿಂದ ತುಂಬಿ ತುಳುಕ್ಕುತ್ತಿರುತ್ತದೆ. ಐದು ನಿಮಿಷ ಅಥವಾ ಹತ್ತು ನಿಮಿಷಕ್ಕೊಮ್ಮೆ ಟ್ರೈನ್ ಇದ್ದರೂ ಜನರ ಗೌಜಿ ಇದ್ದೇ ಇರುತ್ತದೆ. ಬೆಳಗ್ಗಿನ ಹೊತ್ತು ಮತ್ತು ಸಂಜೆಯ ಸಮಯ ಜನ ಜಂಗುಳಿ ಹೇಳತೀರದು.

ಭಯೋತ್ಪಾದಕರಿಗೆ ವಿಶ್ವವಿದ್ಯಾಲಯದ ಕಾನೂನು ನೆರವು ಅಗತ್ಯವೇ?

ಜಾಮಿಯ ಮಿಲ್ಲಿಯ ಇಸ್ಲಾಮಿಯದ ವಿದ್ಯಾರ್ಥಿಗಳನ್ನು ಭಯೋತ್ಪಾದನೆ ಪ್ರಕರಣದಲ್ಲಿ ಬಂಧಿಸಲಾಗಿದೆ.ತಮ್ಮ ವಿದ್ಯಾರ್ಥಿಗಳಿಗೆ ಮಾನವೀಯ ನೆಲೆಯಿಂದ ಕಾನೂನು ನೆರವು ಒದಗಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ವಿದ್ಯಾರ್ಥಿಗೆ ಆತನ ವಿದ್ಯಾಸಂಸ್ಥೆ ಇಷ್ಟಾದರೂ ಮಾಡಬೇಕಾಗುತ್ತದೆ ಎನ್ನುವುದು ವಿವಿಯ ಉಪಕುಲಪತಿ ಹೇಳಿಕೆ.

ನಿನಗಾಗಿ ನನ್ನ ಮಾತು

ಎ0ದೂ ನೋಡಿದ ನೆನಪು ಇ0ದು ನನಗೆ ನೆನಪಾಗಿದೆ..
ನನ್ನೊಳಗಿದ್ದ ಪ್ರೇಮ ಪುಶ್ಪವ ಅರಳಿಸಿದ ಕಿರಣ ನೀಯಾರೇ...

ಕನಸಿನಲ್ಲಿ ಬ0ದು ನೀ ನನ್ನ ಕೆಣಕಿದೆ..
ನಾನಿ0ದು ನಿನಗಾಗಿ ಪರಿತಪಿಸುತಿರುವೆ ನೀ ಎಲ್ಲಿರುವೆ...

ನಿನ್ನ ನೋಡುವ ಹ0ಬಲ ನನ್ನಲ್ಲಿ ತು0ಬಿದೆ..
ನಾ ಬರುವೆ ನೀನಿರುವಲ್ಲಿಗೆ ನೀ ನನಗೆ ಮುಖತೋರೆ ಓ ಚೆಲುವೇ..

ಕಣ್ಣ ತೆರೆದರಲ್ಲಿ ನೀನೆ ಪ್ರತಿ ಬಿ0ಬಿಸಿದೆ..

ಹೇಗೆ ಹೇಳಲಿ

ಎದೆಯಲೋ0ದು ಮಾತಿದೆ ಅದ ನಾ ಹೇಗೆ ಹೇಳಲಿ....
ನೀ ತಿಳಿದಿಕೂ ನನ್ನ ಕಣ್ಣ ಸನ್ನೆಯ ಕಿರು ನೋಟದಲಿ...

ನೂರು ಮಾತಿದೆ ನಾಲಿಗೆಯ ತುದಿಯಲಿ ಅದ ನಾ ಹೇಗೆ ಹೇಳಲಿ....
ನೀ ತಿಳಿದಿಕೂ ನನ್ನ ತುಟಿಯ ಅ0ಚಿನ ಪಿಸು ಸನ್ನೆಯಲಿ....

ಕೋಟಿ ಮಾತಿದೆ ಕಣ್ಣಲಿ ನಾ ಹೇಗೆ ಹೇಳಲಿ ನಿನ್ನೆದುರಲಿ....
ದೈರ್ಯ ಇಲ್ಲ ಒಲವೆ ನನ್ನೆದೆಯಲಿ....

ಏರಿ, ಏಱಿ

ಏರಿ= ಕೆಱೆ ಇತ್ಯಾದಿಗಳ ನೀರು ಕೆೞಗಿನ ಪ್ರದೇಶಕ್ಕೆ ವೃಥಾ ಹರಿದು ಹೋಗಬಾರದೆಂದು ಕಟ್ಟಿದ ಎತ್ತರದ ಕಟ್ಟೆ. ಉದಾಹರಣೆ:-ಕೆರೆಯೇರಿಯೇಱಿ ನಾವು ಕುಳಿತೆವು. ಏರಿ ಹೊಲನುಂಬೊಡೆ ಇನ್ನಾರಿಗೆ ದೂಱುವೆನಯ್ಯಾ?

ಏಱಿ= ಏಱಲು ಸುಲಭವಾಗಿಸುವ ಸಾಧನ. ಅದು ಏಣಿ, ಮೆಟ್ಟಿಲು, elevator, lift ಇನ್ನಾವುದೇ ಏಱಲು ಸಹಾಯ ಮಾಡುವ ಸಾಧನವಾಗಿರಬಹುದು.