ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪು ತಿ ನ ಅವರ "ಶ್ರೀರಾಮ ಪಟ್ಟಾಭಿಷೇಕ"

ಪುತಿನ ಅವರು ಕನ್ನಡದಲ್ಲಿ ಹಲವು ಗೀತನಾಟಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಶ್ರೀರಾಮ ಪಟ್ಟಾಭಿಷೇಕ ಒಂದು.

ರೈತರೆ ಎಚ್ಚೆತ್ತುಕೊಳ್ಳಿ

ಒಂದು ಪ್ರಯೋಗ ನೀವೆ ಮಾಡಿ
ಕಟಾವಿಗೆ ತಯರಿರುವಂತ ಕಬ್ಬನ್ನು 100 ಕೆ.ಜಿ. ತೆಗೆದುಕೊಳ್ಳಿ, ಅದನ್ನು ಬಿಸಿಲಿನಲ್ಲಿ ಪೂರ್ತಿ ತೇವಾಂಶ ಹೋಗುವುವರೆಗೆ ಒಣಗಿಸಿ ನಂತರ ತೂಕ ಮಾಡಿ ಎಷ್ಟು ಬರುತ್ತೆ ಗುರುತಿಸಿಕೊಳ್ಳಿ ಆನಂತರ ಆ ಒಣಗಿದ ಕಬ್ಬಿಗೆ ಬೆಂಕಿ ಹಚ್ಚಿ ಪೂರ್ತಿಯಾಗಿ ದಹಿಸಿ ನಂತರ ಬರುವ ಅದರ ಬೂದಿಯನ್ನು ತೂಕ ಮಾಡಿ

v

vvvv vvvvvv vvvvv vvv vvvvv vvvvvv vvv vvvvv vvvvv vvvv vvv vvv v dfsd dgd sfdf sfd wdwd qdwd efgr grgr ggr grgr t3t ujuj qew etret uiui i8iu qeqe fvf yuiyurtw ww

ಸಂಬಾರ ಪದಾರ್ಥ, ದಕ್ಷಿಣ ಭಾರತದ ರಸಂ ಹಾಗೂ ಜಗತ್ತಿನ ಅತ್ಯುತ್ತಮ ನೈಜ ಟಾನಿಕ್!

ನಮ್ಮ ದಿನ ನಿತ್ಯದ ಆಹಾರದಲ್ಲಿ ಸಂಬಾರ ಪದಾರ್ಥಗಳ ಪಾತ್ರದ ಬಗ್ಗೆ ಮುಖ್ಯವಾದ ಕೆಲವು ಮಾಹಿತಿಗಳನ್ನು ಗಮನಿಸೋಣ.

ಸಂಬಾರ ಪದಾರ್ಥಗಳಿಲ್ಲದ ಭಾರತೀಯ ಅಡುಗೆ ಮನೆಯೇ ಇಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು. ನಾವು ಬಳಸುವ ಸಂಬಾರ ಪದಾರ್ಥಗಳಲ್ಲಿ ಜೀರಿಗೆ, ಮೆಣಸು, ಚಕ್ಕೆ, ಲವಂಗ, ಶುಂಠಿ, ಅರಸಿನ, ಪುದಿನ, ಆಲ್‍ಸ್ಪೈಸ್, ಸೋಂಪು, ಸಾಸಿವೆ, ಗಸಗಸೆ, ಮೆಂತ್ಯ, ಹಿಂಗು, ಓಮ, ಈರುಳ್ಳಿ, ಬೆಳ್ಳುಳ್ಳಿ, ಹುಣಸೆ, ಕರಿಬೇವಿನ ಸೊಪ್ಪು, ಏಲಕ್ಕಿ, ಕಲ್ಲು ಹೂವು ಇತ್ಯಾದಿಗಳು ಮುಖ್ಯವಾದವು.

ಸಂಬಾರ ಪದಾರ್ಥಗಳನ್ನು ಅನಾದಿ ಕಾಲದಿಂದಲೂ ನಾವು ಬಳಸುತ್ತಾ ಬಂದಿದ್ದೇವೆ. ಇವೆಲ್ಲ ಮೂಲತಃ ಸಸ್ಯೋತ್ಪನ್ನಗಳು. ಸಾಮಾನ್ಯವಾಗಿ ಎಲ್ಲಾ ಸಂಬಾರ ಪದಾರ್ಥಗಳ ಮೂಲ ಲಕ್ಷಣ ಅವುಗಳಲ್ಲಿರುವ ಎಣ್ಣೆಯ ಅಂಶ, ಖಾರದ ಗುಣ ಹಾಗೂ ನಾಲಗೆಯನ್ನು ಚುರುಗುಟ್ಟಿಸಿ ಬಾಯಲ್ಲಿ ನೀರೂರಿಸುವ ಶಕ್ತಿ.

ಯಾರು ಹಿತವರು?

ಮತಾಂತರ ವಿವಾದ ಈಗ ದೇಶದೆಲ್ಲೆಡೆ ಕೇಳಿಬರುತ್ತಿರುವ ಕೂಗು. ಇದರಿಂದ ಕೋಮಗಲಭೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಒರಿಸ್ಸಾದಲ್ಲಿ ವಿಹೆಚ್‌ಪಿ ಮುಖಂಡ ಲಕ್ಷ್ಮಣಾನಂದ ಸರಸ್ವತಿ ಕೋಮಗಲಭೆಗೆ ಜೀವತೆತ್ತರು. ಕಳಿಂಗ ರಾಜ್ಯದ ಘಟನೆ ಜನರಲ್ಲಿ ಇನ್ನು ಮಾಸಿಲ್ಲ. ಶಾಂತಿಗೆ ಹೆಸರಾದ ಕರ್ನಾಟಕದಲ್ಲಿ ಇದೀಗ ಇಂತಹ ಕೋಮುಗಲಭೆಯಿಂದ ಕರಾವಳಿ ಜಿಲ್ಲೆ ಹೊತ್ತಿ ಉರಿಯುತ್ತಿದೆ.

ವಚನ

ನಿಜಗಂಡನ ಸಂಗವನೊಲ್ಲದೆ ಭುಜಗರ ಸಂಗವ ಮಾಡುವ
ಬಾಜಾರಿ ತೊತ್ತಿಗೆಲಿದೆಯೊ ನಿಜ ಮುತ್ತೈದಿತನ
ಕರಕಮಲದಲ್ಲಿ ತ್ರಿಜಗವಂದಿತ ಲಿಂಗವಪಿಡಿದು
ಅನ್ಯ ದೈವಕ್ಕೆರಗಿದರೆ ನಾಯಿನರಕವೆಂದಾತ ನಮ್ಮ ಅಂಬಿರ ಚೌಡಯ್ಯ.

ಲ೦ಡನ್ ಪ್ರವಾಸಕಥನ ಭಾಗ ೧೬: ಲ೦ಡನ್ ಚೌರ!

ಫ್ರಾನ್ಸಿಸ್ ಬೇಕನ್ ಎ೦ಬ ಕಲಾವಿದನ ಕಲಾಕೃತಿಗಳ ವಿಷಯವು ಮನುಷ್ಯ ದೇಹದ ದ್ರವ್ಯಾ೦ಶಕ್ಕೆ ಸ೦ಬ೦ಧಿಸಿದ್ದು. ಸಿ೦ಬಳ, ರಕ್ತ, ಕೀವು, ತೈಲವರ್ಣ, ಚಿತ್ರಿಸಲು ಬಳಸುವ ಲಿನ್‍ಸೀಡ್ ಆಯಿಲ್--ಮು೦ತಾದುವೇ ಆತನ ಕೃತಿಗಳಲ್ಲಿನ ‘ವಿಷಯ’, ‘ಶೈಲಿ’ ಹಾಗೂ ‘ಸತ್ವ’. ಈ ಮೊರು ‘ಸಿ೦ಗಲ್ ಕೋಟೆಡ್’ (ಅವುಗಳಿಗೆ ಹೆಚ್ಚು ಚಳಿಯಾಗದ ಕಾರಣದಿ೦ದ ಒ೦ದೊ೦ದೇ ಸಿ೦ಗಲ್ ಕೋಟ್ಸನ್ನು ಹೊದ್ದುಕೊ೦ಡಿವೆ) ಪದಗಳನ್ನು ವಿವರಿಸುವ ಮುನ್ನ
(ಅ) ಒ೦ದು ಸುದ್ಧಿ,
(ಆ) ಒ೦ದು ಸ್ವಾರಸ್ಯಕರ ಪ್ರಶ್ನೆ ಹಾಗೂ
(ಇ) ಮತ್ತೊ೦ದು ಸ್ಪಷ್ಟೀಕರಣವನ್ನು ನಿಮಗೆ ತಿಳಿಸಿಹೇಳಬೇಕಿದೆ.

ಸುದ್ದಿಯೇನೆ೦ದರೆ ಫ್ರಾನ್ಸಿಸ್ ಬೇಕನನು ಲೂಸಿಯನ್ ಫ್ರಾಯ್ಡ್ ಎ೦ಬ ಕಲಾವಿದನ ಗೆಳೆಯ; ಮತ್ತು ಈ ಬ್ರಿಟಿಷ್ ಕಲಾವಿದ ಫ್ರಾಯ್ಡ್ ಅಸಲಿ ಜಗತ್ಪ್ರಸಿದ್ಧ ಮನ:ಶಾಸ್ತ್ರಜ್ನ ಸಿಗ್ಮ೦ಡ್ ಫ್ರಾಯ್ಡನ ಮೊಮ್ಮೊಗ. ಫ್ರಾಯ್ಡ್ ಫ್ರಾಯ್ಡನ ಮೊಮ್ಮೊಗನಾಗಿರುವುದಕ್ಕೂ ಆತ ಬೇಕಾನನ ಸ್ನೇಹಿತನಾಗಿರುವುದಕ್ಕೂ ಸ೦ಬ೦ಧವೇನೆ೦ಬ ಅಸ೦ಬದ್ಧ ಪ್ರಶ್ನೆಗೂ ಸಹ ಸೀನಿಯರ್ ಫ್ರಾಯ್ಡನು ಒ೦ದು ಊಹಾತೀತ ಉತ್ತರ ನೀಡುವಷ್ಟು ಕನಸುಗಾರನಾಗಿದ್ದ. ಇದು ಸುದ್ಧಿ.

‘ನವಿಲೂರು’ ಧಾರವಾಡದ ‘ಕೊಕ್ಕರೆ ಬೆಳ್ಳೂರು’!

ಆ ಪುಟ್ಟ ಹಕ್ಕಿ ಪಕ್ಕ ಬಿಚ್ಚಿ ಪಕ್ಕೆಂದು ನಕ್ಕಿತು!

ಮೊಣಕಾಲುಗಳವರೆಗೆ ಕೆಸರು. ಜೋಲಿ ಹಿಡಿಯಲು ಹೋಗಿ ಮೈಗೂ-ಕೈಗೂ ಕೆಸರು ಮೆತ್ತಿತ್ತು. ಆದರೆ ಬಾಯಿ ಮೊಸರಾಗಲಿಲ್ಲ. ಕಪ್ಪೆ ಚಿಪ್ಪಿನಗಲದ ದೋಣಿ ಕಣ್ಣುಗಳಿಗೆ ಸಮುದ್ರದಂಥಾ ನೋಟ ಬೆರಗುಗೊಳಿಸಿತ್ತು. ಅಂಗಿ-ಚೊಣ್ಣ ಯಾವುದೂ ಲೆಕ್ಕಿಸದೇ ಏದುಸಿರು ಬಿಡುತ್ತ ಕ್ಯಾಮೆರಾ ಝಳಪಿಸಿದ್ದಾಯಿತು. ನಮ್ಮ ಈ ಸ್ಥಿತಿ ನೋಡಿ ಆ ಪುಟ್ಟ ಹಕ್ಕಿ ನಕ್ಕಿರಬೇಕು!

ಛಳಿ ಬೇರೆ. ಚುಮುಚುಮು ಬೆಳಗು ಪಸರಿಸುವ ಹೊತ್ತು. ಆಗಲೇ ಮೀನುಗಳ ಹೆಜ್ಜೆ ಗುರುತಿಸಲು ನವಿಲೂರಿನ ಮೀನುಗಾರ ನಾಗಣ್ಣ ಬಲೆ ಬೀಸಿಟ್ಟಿದ್ದ. ನಾವು ಸ್ವೆಟರ್ ಹಾಗು ಮಫ್ಲರ್ ಸುತ್ತಿಕೊಂಡು ಗಡ-ಗಡ ನಡುಗುತ್ತಿದ್ದೆವು. ಕ್ಲಿಕ್ಕಿಸಿದ ಫೋಟೋಗಳೆಲ್ಲ ಕೈ ನಡುಗಿ ‘ಥ್ರೀ-ಡಿ’ ಚಿತ್ರದಂತಾಗಿದ್ದವು.