ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ
ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ
ನರನವೊಲೆ ತರುಗಳಂ ಸುಖದುಃಖಗಳನರಿವ
ಪರಿಯ ತೋರುವ ಯಂತ್ರಚಯವ ರಚಿಸಿ
ಅಣುರೇಣತೃಣಗಳೋಳಮಲ ಚೈತನ್ಯಮಿಹ
ಮರ್ಮವಂ ಲೋಚನಕೆ ಮಿಷಯಮೆನಿಸಿ||
ಭೌತತಾತ್ವಿಕಶಾಸ್ತ್ರ ಸಾಮ್ರಾಜ್ಯ ರಾಜನೆನಿಸಿ
ವಿಶ್ವಸೃಷ್ಟಿಯ ಚತುರತೆಯ ವಿಶದಗೊಳಿಸಿ
ಕಣ್ಗೆ ಕಾಣದ ತತ್ವಮಂ ಶ್ರಮಿಸುತರಸಿ
ಮೆರೆವನೀ ಜಗದೀಶನಾರ್ಯಕುಲತೋಷಂ||
ಹೀಗೆ ಕನ್ನಡ ಸಾರಸ್ವತ ಲೋಕದ ಮೇರುಗಳಲಿ ಒಬ್ಬರಾದ ಹಿರಿಯ ಸಾಹಿತಿ ಡಿ.ವಿ.ಜಿ.ಯವರು ಅದೇ ಸಾರಸ್ವತ ಲೋಕದ ಮೇರು ಎನಿಸಿಕೊಳ್ಳುವ ಮಹಾನ್ ವಿಜ್ಞಾನಿಯೋರ್ವರ ಬಗ್ಗೆ ಬರೆದ ಕವನವಿದು. “ಕಪಿಲ ಕಣಾದಾದಿ ಸದಸದ್ವಿಚಾರಕರ ಕುಲದ ಕೀರ್ತಿಗೆ ರನ್ನಗಲಶ” ಎಂದು ಮಹಾನ್ ಸಾಹಿತಿ ಡಿ.ವಿ.ಜಿ.ಯವರ ಮೆಚ್ಚುಗೆಗೆ ಪಾತ್ರರಾದ ಮೇರು ವಿಜ್ಞಾನಿ ಯಾರು ಗೊತ್ತೆ? ಸಸ್ಯಗಳಿಗೂ ಜೀವವಿದೆ, ಅವು ನಮ್ಮ ಹಾಗೆ ಉಸಿರಾಡುತ್ತವೆ ಎಂದು ಈ ಲೋಕಕ್ಕೆ ತೋರಿಸಿಕೊಟ್ಟ ಮಹಾನ್ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರು.
- Read more about ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ
- 7 comments
- Log in or register to post comments