ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇದು ಶೋಭೆ ತರುವ ಸಂಗತಿಯಲ್ಲ
ಇದೊಂದು ಚರ್ಚಾಸ್ಪದ ಸಂಗತಿ. ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಕೆಂಗೇರಿ ಪ್ರದೇಶದಲ್ಲಿ ಕಾಣಿಸಿಕೊಂಡರು. ಅದು ಅವರ ಕ್ಷೇತ್ರದ ಒಂದು ಭಾಗ. ಕಾರಿನಿಂದಿಳಿದ ಸಚಿವೆ ಬೀದಿ ವ್ಯಾಪಾರಿಗಳ ಬಳಿ ತೆರಳಿ, ’ಬಿಹಾರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಂಗ್ರಹಿಸುತ್ತಿದ್ದೇನೆ. ನಿಮ್ಮ ಕೈಲಾದಷ್ಟು ನೆರವು ನೀಡಿ’ ಎಂದು ವಿನಂತಿಸಿಕೊಂಡರು.
ಜನರಿಗೆ ಆಶ್ಚರ್ಯ. ಬಹುತೇಕ ಪತ್ರಕರ್ತರಿಗೆ ಪುಳಕ. ಸಚಿವೆಯೊಬ್ಬರಿಗೆ ಎಂಥಾ ಸಾಮಾಜಿಕ ಕಳಕಳಿ ಇದೆ ನೋಡ್ರೀ ಎಂಬಂತೆ ಮಾತಾಡಿಕೊಂಡರು. ಆಟೊದಲ್ಲಿ ಧ್ವನಿವರ್ಧಕ ಬಳಸಿ ಸಚಿವೆಯ ಉದ್ದೇಶವನ್ನು ಅವರ ಅಭಿಮಾನಿಗಳು ಸಾರುತ್ತಿದ್ದರು. ಬೀದಿ ವ್ಯಾಪಾರಿಗಳಿಂದ ಹಣ ಸಂಗ್ರಹಿಸಿದ ಸಚಿವೆ, ಅದನ್ನೆಲ್ಲ ಬಿಹಾರ ಪ್ರವಾಹ ಸಂತ್ರಸ್ತರಿಗೆ ಕಳಿಸಿಕೊಡಲಾಗುವುದು ಎಂದು ಬೀಗಿದರು.
- Read more about ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
- 5 comments
- Log in or register to post comments