ರಜನಿಕಾಂತ್
ಕುಚೇಲನ್ .
- Read more about ರಜನಿಕಾಂತ್
- 2 comments
- Log in or register to post comments
ಕುಚೇಲನ್ .
ನನ್ನ ಆ 'ಸ್ಕೂಲ್ ಮಾಸ್ಟರ್'!
ಗೆಳೆಯ ಕೆ.ಪುಟ್ಟಸ್ವಾಮಿಯವರು 'ಕನ್ನಡ ಚಿತ್ರರಂಗ-75' ಮಾಲಿಕೆಯಲ್ಲಿ ಬರೆಯುತ್ತಿರುವ ('ವಿಕ್ರಾಂತ ಕರ್ನಾಟಕ' ವಾರಪತ್ರಿಕೆಯಲ್ಲಿ) ಲೇಖನಗಳನ್ನು ಓದುತ್ತಿದ್ದಂತೆ, ನನ್ನ ಬಾಲ್ಯದ ದಟ್ಟ ನೆನಪುಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತಿವೆ.
ನನ್ನ ಬಾಲ್ಯದ ಎರಡು ವಿಶೇಷ ಆಕರ್ಷಣೆಗಳೆಂದರೆ ಶಾಲಾ ಪರೀಕ್ಷೆಗಳು ಮತ್ತು ಕನ್ನಡ ಚಲನ ಚಿತ್ರಗಳು! ಏಕೋ ಏನೋ, ಪರೀಕ್ಷೆಗಳು ಎಂದರೆ ನನ್ನೆಲ್ಲ ಸ್ನೇಹಿತರು ಹೆದರಿದಂತೆ ತೋರುತ್ತಿದ್ದರೆ, ನಾನು ಅವುಗಳನ್ನು-ಆಗ ವರ್ಷಕ್ಕೆರಡೇ ಪರೀಕ್ಷೆಗಳು: ಮಧ್ಯವಾರ್ಷಿಕ ಚಿಕ್ಕ ಪರೀಕ್ಷೆ ಮತ್ತು ವರ್ಷಾಂತ್ಯದ ದೊಡ್ಡ ಪರೀಕ್ಷೆ-ಆಕರ್ಷಕ ಸವಾಲುಗಳಂತೆ ಎದುರು ನೋಡುತ್ತಿದ್ದೆ! ಸಂಕ್ರಾಂತಿ ಹಬ್ಬಕ್ಕೆ ರೈತರು ತಮ್ಮ ದನಕರುಗಳನ್ನು ಸಿಂಗರಿಸುವಂತೆ, ನಾನು ವಾರದ ಮೊದಲೇ ನನ್ನ ಪರೀಕ್ಷೆ ರಟ್ಟನ್ನು ಬಣ್ಣದ ಕಾಗದದ ಚೂರುಗಳಿಂದ ಮತ್ತು ನನ್ನದೇ ಕೈಯ್ಯಿನ ಚಿತ್ತಾರಗಳಿಂದ ಸಿಂಗರಿಸುತ್ತಿದ್ದೆ. ನನ್ನ ತಂದೆ ಆಗ ನಮಗೆ ಹಾಗೂ ಮನೆಗೆ ಬರುತ್ತಿದ್ದ ನೆಂಟರಿಷ್ಟರ ಮತ್ತು ಸಹೋದ್ಯೋಗಿಗಳ ಮಕ್ಕಳಿಗೆ ವಿದ್ಯೆಯೊಂದೇ ಬಡತನಕ್ಕೆ ಉತ್ತರ ಎಂದು ಪದೇ ಪದೇ ಹೇಳುತ್ತಿದ್ದುದು, ನಾನು ವಿದ್ಯೆಯನ್ನು-ಪರೀಕ್ಷೆಗಳ ರೂಪದಲ್ಲಿಯೇ ಆದರೂ-ಸವಾಲಾಗಿ ಸ್ವೀಕರಿಸಲು ಪ್ರಚೋದಿಸಿತ್ತೆಂದು ಕಾಣುತ್ತದೆ. ಅವರನ್ನು ವಿದ್ಯೆಯೆಡೆಗೆ ಪ್ರಚೋದಿಸಿದ್ದುದು, ತಮ್ಮ ತಾರುಣ್ಯದಲ್ಲಿ ಕೇಳಿದ್ದ ಗಾಂಧಿ ಭಾಷಣವಂತೆ-ವಿಶೇಷವಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಮಹತ್ವದ ಬಗ್ಗೆ. ಅದನ್ನವರು ತಮಗೂ ಅನ್ವಯಿಸಿಕೊಂಡು ತಮ್ಮ ತಂದೆಯ ವಿರುದ್ಧ ಬಂಡೆದ್ದು, ಕುಲ ಕಸಬು ಬಿಟ್ಟು ಕೂಲಿ ನಾಲಿಯ ಮೂಲಕ ನಾಲ್ಕಕ್ಷರ ಕಲಿಯುವ ಸಾಹಸ ಮಾಡಿ, ಪ್ರಾಥಮಿಕ ಶಾಲಾ ಮಾಸ್ತರಾಗಿದ್ದರು.
ರೈತರಿಗೆ ಉಚಿತ ವಿದ್ಯುತ್, ಗುಜರಾತ್ ಮಾದರಿಯಲ್ಲಿ ಕೈಗಾರಿಕೆ ಅಭಿವೃದ್ಧಿ, ಎನ್ಆರ್ಐ ಹೂಡಿಕೆಗೆ ಪೂರಕವಾಗಿ ವಿಶೇಷ ಎನ್ಆರ್ಐ ಘಟಕ... ಇದೆಲ್ಲವೂ ಕರ್ನಾಟಕದಲ್ಲಿ ಬಿಜೆಪಿ ಸರಕಾರ "ಅನುಷ್ಠಾನ"ಕ್ಕೆ ತಂದಿರುವ ವಿಶೇಷ ನಿರ್ಣಯಗಳು...!
ಇವೆಲ್ಲ ರಾಜಕೀಯ ವರಸೆಗಳೇ... ಇಲ್ಲಾ ವಾಸ್ತವಾಂಶವೇ ? ಗೊತ್ತಾಗದ ಪರಿಸ್ಥಿತಿಯಲ್ಲಿ ರಾಜ್ಯದ ಜನರಿದ್ದಾರೆ. ಒಂದು ರೀತಿಯ ಭ್ರಾಮಕ ಜಗತ್ತನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದರೆ ತಪ್ಪಲ್ಲ. ಬಿ.ಎಸ್.ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದೆ. ಅಷ್ಟರಲ್ಲಾಗಲೇ ಅನೇಕ ಎಡರು ತೊಡರುಗಳು ಬಂದು ಹೋಗಿವೆ. ಈಗ ಮತ್ತೆ ಶಾಕ್ ಟ್ರೀಟ್ಮೆಂಟ್ ವಿದ್ಯುತ್ ಕ್ಷೇತ್ರದಿಂದಾಗುತ್ತಿದೆ...!
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸದೇ ಹೋದರೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಬೇಕಾದೀತು ಎಂಬ ಭೀತಿ..! ಹೀಗಾಗಿ ರೈತರಿಗೆ ಉಚಿತ ವಿದ್ಯುತ್ ಆಗಸ್ಟ್ ಒಂದರಿಂದಲೇ ಜಾರಿ ಎಂಬ ಘೋಷಣೆಯೂ ಹೊರಬಿತ್ತು. ಆದರೆ ಅದು ಜಾರಿಗೊಂಡಿದೆಯೇ ಎಂದರೆ ಹೌದು ಎಂಬ ಉತ್ತರ ಬಂದೀತು. ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ರೈತರಿಗೆ ಉಚಿತ ವಿದ್ಯುತ್ ಎಂಬುದು "ಕನಸು" ಆಗಿದೆ.
ಕಳೆದ ವರ್ಷ ನನ್ನ ನಾದಿನಿಯ (ನನ್ನ ಮನೆಯವರ ಮಾವನ ಮಗಳು) ಗಂಡ ರಸ್ತೆಯಲ್ಲಿ ನಡೆಯುತ್ತಿರುವಾಗಲೇ ತಲೆಸುತ್ತು ಬಿದ್ದರು, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಡಾಕ್ಟರ್ ಹೇಳಿದ್ದು ಕೇಳಿ ತಲೆಸುತ್ತು ಬರುವ ಸರದಿ ನಮ್ಮದಾಗಿತ್ತು. ಅವರ ಮೆದುಳಿನಲ್ಲಿ ಸಣ್ಣ ಬ್ಲಡ್ ಕ್ಲಾಟ್ ಬಂದಿತ್ತು.
ಸುವರ್ಣ ವಿಧಾನ ಸೌಧದ ಗತಿ ಏನು? ಕರ್ನಾಟಕದಲ್ಲೇ ಕನ್ನಡಿಗರಿಗೆ ಏಕೆ ಅನ್ಯಾಯ? ಈಗ ಬೆಳಗಾವಿಯ ಜನರನ್ನು ಕಾಡುತ್ತಿರುವ ಪ್ರಶ್ನೆಗಳು! ಕರ್ನಾಟಕದ ನೆಲವಾದ ಬೆಳಗಾವಿಯಲ್ಲಿ ಸರ್ಕಾರ ಸೌಧ ನಿರ್ಮಿಸಲು ಏಕೆ ಹಿಂಜರಿಯುತ್ತಿದೆ? ಈ ಚರ್ಚೆಗೆ ನಿಮ್ಮ ಪ್ರತಿಕ್ರಿಯೆಯನ್ನು ದಯವಿಟ್ಟು ತಿಳಿಸಿ.
ಮುಂದಂದಾಪುದನಿಂದೇ
ಪಿಂದಂದಾದವೋಲ್ ನೋಡಬರ್ಪೊಡೆ
ಮುಂದಂದಾಪ ಸಾವು ನೋವುಗ-
ಳ್ಗಿಂದೇ ತಲ್ಲೞಿಸವೇೞ್ಕುಮಕ್ಕುಂ ||
(ಶಶಿಕುಮಾರ್ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/article/10660 ದಲ್ಲಿ ನೋಡಬಹುದು )
(ಶಶಿಕುಮಾರ್ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/article/10660 ದಲ್ಲಿ ನೋಡಬಹುದು )
ಶಶಿಕುಮಾರ್ ಅವರು ’ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು’ (ಭಾಗ-೧)ರಲ್ಲಿ ಸಾಕಷ್ಟು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮಾಧ್ಯಮ ಹೇಗೆ ಮಧ್ಯಮ ಹಂತದಲ್ಲೇ ಉಳಿದುಬಿಟ್ಟಿದೆ ಎಂಬುದನ್ನು ವಿವರವಾಗಿಯೇ ಬರೆದಿದ್ದಾರೆ. ಅವರು ಬರೆದಿದ್ದು ಒಂದೇ ಕಂತು ಹಾಗೂ ಇತರ ಕಂತುಗಳು ಇನ್ನೂ ಬರಬೇಕಿವೆ. ಆದರೆ, ಮೊದಲನೇ ಕಂತಿನಲ್ಲಿ ಪ್ರಸ್ತಾಪವಾಗಿರುವ ವಿಷಯಗಳು ಹಾಗೂ ಧೋರಣೆ ನೋಡಿದರೆ, ಇತರ ಕಂತುಗಳು ಬರಬಹುದಾದ ರೀತಿಯನ್ನು ತಕ್ಕಮಟ್ಟಿಗೆ ಊಹಿಸಬಹುದು.
ನಾನೂ ಪತ್ರಕರ್ತ. ವೃತ್ತಿಗಷ್ಟೇ ಅಲ್ಲ, ಪ್ರವೃತ್ತಿಗೂ ಅದನ್ನೇ ನೆಚ್ಚಿಕೊಂಡವನು. ಮಾಡುತ್ತಿದ್ದ ಸರ್ಕಾರಿ ಕೆಲಸ ಬಿಟ್ಟು ಪತ್ರಕರ್ತನಾದವನು. ಆದ್ದರಿಂದ, ವೃತ್ತಿಯ ಬಗ್ಗೆ ನನಗೆ ಸಾಕಷ್ಟು ಬದ್ಧತೆ, ಆಸಕ್ತಿ ಹಾಗೂ ಪ್ರೀತಿ ಇದೆ. ಹಾಗಂತ ಅದರ ದೋಷಗಳನ್ನು ಸಮರ್ಥಿಸುವುದಿಲ್ಲ. ಸಂಸ್ಥೆಯೊಂದರಲ್ಲಿ ಕೆಲಸ ಮಾಡುವಾಗ, ತೋರಲೇಬೇಕಾದ ಅನಿವಾರ್ಯತೆಗಳನ್ನು ಹೊರತುಪಡಿಸಿ, ಅದನ್ನು ಕಟುವಾಗಿ ಟೀಕಿಸುತ್ತಲೇ ಬಂದಿದ್ದೇನೆ. ಹೀಗಾಗಿ, ಶಶಿಕುಮಾರ ಹೇಳಲು ಹೊರಟಿರುವ ವಿಷಯಗಳ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ಬರೆಯುವ ಅಧಿಕಾರ ನನಗಿದೆ. ಅದಕ್ಕಿಂತ ಹೆಚ್ಚಾಗಿ, ಬರೆಯಲೇಬೇಕಾದ ಜವಾಬ್ದಾರಿಯೂ ಇದೆ.
"ಧಾರವಾಡದ ಬೀದಿಯಲ್ಲಿ, ಒಂದು ಕೈಯಲ್ಲಿ ಚೀಲ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದು, ಗಿರಾಕಿಗಾಗಿ ಕಾಯುತ್ತ ನಿಂತ ದೇವತೆ; ಬದಲಾದ ಆರ್ಥಿಕ ಸ್ಥಿತಿಯಲ್ಲಿ ಬದುಕಿನ ಹೋರಾಟ ನಡೆಸುವ ಕುಟುಂಬ; ದಟ್ಟ ಅಡವಿಯನ್ನು ಬರಿದಾಗಿಸುತ್ತಿರುವ ಲಾರಿಗಳು; ಬಾರ್ನಲ್ಲಿ, ಡ್ಯಾನ್ಸ್ ಮಾಡುತ್ತ ಸಹಜ ಬದುಕಿಗೆ ಹಂಬಲಿಸುವ ಹುಡುಗಿಯರು; ಇವರೆಲ್ಲರ ಮಧ್ಯವೇ ಒಂದು ಕೈಯಲ್ಲಿ ತಂಗಿಯನ್ನು, ಮತ್ತೊಂದು ಕೈಯಲ್ಲಿ ತಮ್ಮನನ್ನು ಹಿಡಿದುಕೊಂಡು, ಧೀರೋದಾತ್ತ ಹೆಜ್ಜೆ ಇಟ್ಟು ನಡೆದುಹೋದ ಬಾಲಕ; ಪಕ್ಕದಲ್ಲಿಯೆ ಹಾಲಿಲ್ಲದೆ ಮಲಗಿರುವ ಪುಟ್ಟ ಮಗು, ಅದನ್ನ ಕಂಡರೂ ಕಾಣದಂತೆ ಸರಿದು ಹೋದ ನನ್ನ ಸಣ್ಣತನ; ಪತ್ರಗಳಲ್ಲಿಯೂ ದೂರವಾಗಿಯೆ ಉಳಿಯುವ ಸಂಬಂಧದ ನಂಟು; ಪ್ರತಿಯೊಂದರಲ್ಲಿಯೂ ಸಾಕ್ಷಿಗಾಗಿ ಹುಡುಕುವ ವ್ಯವಸ್ಥೆ; ತಲೆತಲಾಂತರದಿಂದ ಬಂದ ಅಪ್ಪ ಮಗನ ನಡುವಿನ ಬಿರುಕು; ಎಲ್ಲರ ನೋವು, ನಲಿವು, ಸಡಗರ ಮತ್ತು ಇದೆಲ್ಲದರ ಮಧ್ಯವೂ ಅರಳುವ ಬದುಕಿನ ಮಳೆಯ ಹಾತೆಯ ಒಂದು ಕ್ಷಣವನ್ನ ಹಿಡಿದಿಡಲು ಮೀಸಲಿಟ್ಟ ಈ ಕ್ಷಣವೊಂದು ನಿನ್ನನ್ನು ತಲುಪುವಲ್ಲಿ ಮಾತ್ರ ಧನ್ಯವಾಗಬಲ್ಲದು"
"ಧಾರವಾಡದ ಬೀದಿಯಲ್ಲಿ, ಒಂದು ಕೈಯಲ್ಲಿ ಚೀಲ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದು, ಗಿರಾಕಿಗಾಗಿ ಕಾಯುತ್ತ ನಿಂತ ದೇವತೆ; ಬದಲಾದ ಆರ್ಥಿಕ ಸ್ಥಿತಿಯಲ್ಲಿ ಬದುಕಿನ ಹೋರಾಟ ನಡೆಸುವ ಕುಟುಂಬ; ದಟ್ಟ ಅಡವಿಯನ್ನು ಬರಿದಾಗಿಸುತ್ತಿರುವ ಲಾರಿಗಳು; ಬಾರ್ನಲ್ಲಿ, ಡ್ಯಾನ್ಸ್ ಮಾಡುತ್ತ ಸಹಜ ಬದುಕಿಗೆ ಹಂಬಲಿಸುವ ಹುಡುಗಿಯರು; ಇವರೆಲ್ಲರ ಮಧ್ಯವೇ ಒಂದು ಕೈಯಲ್ಲಿ ತಂಗಿಯನ್ನು, ಮತ್ತೊಂದು ಕೈಯಲ್ಲಿ ತಮ್ಮನನ್ನು ಹಿಡಿದುಕೊಂಡು, ಧೀರೋದಾತ್ತ ಹೆಜ್ಜೆ ಇಟ್ಟು ನಡೆದುಹೋದ ಬಾಲಕ; ಪಕ್ಕದಲ್ಲಿಯೆ ಹಾಲಿಲ್ಲದೆ ಮಲಗಿರುವ ಪುಟ್ಟ ಮಗು, ಅದನ್ನ ಕಂಡರೂ ಕಾಣದಂತೆ ಸರಿದು ಹೋದ ನನ್ನ ಸಣ್ಣತನ; ಪತ್ರಗಳಲ್ಲಿಯೂ ದೂರವಾಗಿಯೆ ಉಳಿಯುವ ಸಂಬಂಧದ ನಂಟು; ಪ್ರತಿಯೊಂದರಲ್ಲಿಯೂ ಸಾಕ್ಷಿಗಾಗಿ ಹುಡುಕುವ ವ್ಯವಸ್ಥೆ; ತಲೆತಲಾಂತರದಿಂದ ಬಂದ ಅಪ್ಪ ಮಗನ ನಡುವಿನ ಬಿರುಕು;