ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಂದುವರಿವ ಗುಣ(ಪ್ರೇರಕ ಪ್ರಸಂಗಗಳು)

ದಿನದಂತೆ ಅಂದೂ ಆ ಬಾಲಕನು ಶಾಲೆಗೆ ಹೊರಡಲು ಸಿದ್ಧನಾದ.ಪಾಟಿ ಚೀಲ ಹೆಗಲಿಗೇರಿಸಿ ಹೊರಟ.
ನಾಲ್ಕು ಹೆಜ್ಜೆ ನಡೆದು ಒಮ್ಮೆಲೇ ನಿಂತ.ಹೊರಳಿ ಬಂದು 'ಅಪ್ಪಾ,ನಾನು ಶಾಲೆಗೆ ಹೋಗುವದಿಲ್ಲ' ಎಂದ.

'ಯಾಕೆ ಮಗು! ನೀನು ಜಾಣ ಬಾಲಕ.ಶಾಲೆಗೇಕೆ ಒಲ್ಲೆ?' ತಂದೆಯು ಗಾಬರಿಯಾಗಿ ಕೇಳಿದ.
ಶಾಲೆಯಲ್ಲಿ ಬಾಲಕರೆಲ್ಲ ನನಗೆ 'ಹಳ್ಳಿ ಗುಗ್ಗು' ಎಂದು ಗೇಲಿ ಮಾಡುತ್ತಾರೆ.

ಮಂಜುಗುಣಿಪುರವಾಸ ಯಾರು?

ವಾದಿರಾಜರ ಒಂದು ದೇವರನಾಮದಲ್ಲಿ ಹೀಗೆ ಬರುತ್ತೆ:

ಮನ್ನಿಸೋ  ಶ್ರೀ ವೆಂಕಟೇಶ ಮಂಜುಗುಣಿಪುರವಾಸ ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ

ಇಲ್ಲಿ ಶ್ರೀ ವೆಂಕಟೇಶನು ಮಂಜುಗುಣಿಪುರವಾಸನಾದ ಇನ್ನಾರೋ ದೇವರಿಂದಲೂ (ಶಿವನಿರಬಹುದು ಅನ್ನುವುದು ನನ್ನ ಊಹೆ ಸ್ತುತಿಸಲ್ಪಟ್ಟವನು ಎಂದು ವರ್ಣಿಸಲಾಗಿದೆ.

ಶುಕ್ರವಾರ, ಹದಿಮೂರನೇ ತೇದಿ...

ಇವತ್ತು ಬೆಳಗ್ಗೆ ಕೆಲಸಕ್ಕೆ ಬರ್ತಾ ರೇಡಿಯೋ ಕೇಳೋ ತನಕ ನನಗೆ ಇದು ನೆನಪಾಗಿರಲಿಲ್ಲ. ಇವತ್ತು ಹದಿಮೂರನೇ ತಾರೀಕು, ಶುಕ್ರವಾರ! ಪಶ್ಚಿಮಾರ್ಧ ಗೋಳದಲ್ಲಿ ಶುಕ್ರವಾರ ಒಳ್ಳೆಯದಿನವಲ್ಲವೆಂದೂ (ಯೇಸುವನ್ನು ಶಿಲುಬೆಗೇರಿಸಿದ್ದು ಶುಕ್ರವಾರವೇ) ಮತ್ತು ಹದಿಮೂರು ಅನ್ನೋದು ಒಳ್ಳೇ ಸಂಖ್ಯೆ ಅಲ್ಲ ( ಯಾಕಂದ್ರೆ, ಯೇಸು ಕೊನೆಯ ಸಲ ಊಟ ಮಾಡ್ದಾಗ ಅವನ ಜೊತೆ ಹನ್ನೆರಡು ಜನ ಶಿಷ್ಯರಿದ್ದರು - ಅಂದ್ರೆ, ಊಟಕ್ಕೆ ಕೂತವರು ಹದಿಮೂರು ಮಂದಿ) ಅನ್ನೋ ನಂಬಿಕೆ ಇದೆ. ಇನ್ನು ಎರಡೂ ಒಟ್ಟಿಗೆ ಸೇರಿದ್ರೆ ಕೇಳ್ಬೇಕಾ? ಡಬಲ್ ಟ್ರಬಲ್ ಅಲ್ವೇ?

ಇವತ್ತು ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿ ಇರುವ ಎ಼ಕ಼್ಪ್ಲೊರೆಟೋರಿಯಮ್ ನಲ್ಲಿ ಇದರ ಮೇಲೆ ಒಂದು ಹೊಸ ಎಕ್ಸಿಬಿಟ್ ಶುರುವಾಗ್ತಿದೆಯಂತೆ. ನೋಡಲು ಹೋದವರು ಅಲ್ಲಿ ಏಣಿ ಅಡಿಯಲ್ಲಿ ನಡೀಬೇಕಾಗ್ಬಹುದಂತೆ, ಕನ್ನಡಿ ಒಡೀಬಹುದಂತೆ - ಒಟ್ಟ್ಟಿನಲ್ಲ್ಲಿ ಕೆಟ್ಟ ಅದೃಷ್ಟ ತರತ್ತೆ ಅಂತ ನಂಬಿಕೆ ಇರೋ ಒಟ್ಟು ಹದಿಮೂರು (!)ಕೆಲಸಗಳನ್ನ ಅಲ್ಲಿ ಮಾಡ್ಬೋದಂತೆ. ಈ ನಂಬಿಕೆಗಳಿಗೆ ಸರಿಯಾದ ಕಾರಣಗಳು ಇಲ್ಲ ಅನ್ನೋದನ್ನ ಮನದಟ್ಟು ಮಾಡೋಕ್ಕೇ ಇದನ್ನ ಮಾಡಿದಾರಂತೆ. ಇನ್ನು ಅದರ ಶುಭಾರಂಭ :) ಮಾಡೋದಕ್ಕೆ, ಹದಿಮೂರನೇ ತಾರೀಖು, ಶುಕ್ರವಾರವನ್ನ ಆಯ್ಕೆ ಮಾಡ್ಕೊಂಡಿರೋದು ತಕ್ದಾಗೇ ಇದೆ ಅನ್ನಿಸ್ತು ನಂಗೆ.

ಹೇಳಿ, ಇವರು ಜಾತಿವಾದಿಗಳೇ ?

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಮಯ ವಾತಾವರಣವಿರಬೇಕು, ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ೩೦೦೦ ಬಡ ರೈತರ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಕಲ್ಪಿಸಬೇಕು, ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು ಎಂದು ಕ.ರ.ವೇ ಹೋರಾಟ ನಡೆಸುತ್ತಲೇ ಬಂದಿದೆ.

ಬರಹ IME ಮತ್ತು MS Word

ಬರಹ IME ಬಳಸುವ ಹಲವರಿಗೆ MS Word 2003 ಆವೃತ್ತಿಯಲ್ಲಿ ಕೆಲವು ತೊಂದರೆಗಳಾಗುತ್ತಿದ್ದುದರ ಬಗ್ಗೆ ಪತ್ರಗಳು ಬಂದಿದ್ದವು. ಬರಹ ವಾಸು ಈ ಬಗ್ಗೆ ಒಂದು ಸಹಾಯ ಪುಟ ಬರೆದಿದ್ದಾರೆ. ನೋಡಿ:

http://baraha.com/web_docs/barahaime_msoffice.htm

ಐ ಟಿ (IT)

ಕಂಬನಿಯ ಕಂಗಳಲಿ
ಸವಿಯಾದ ನೆನಪಲ್ಲಿ
ಆ ಜಾರಿ ಹೋದ
ನೆಮ್ಮದಿಯ ಬಾಳಲ್ಲಿ...

ಪ್ರಗತಿಯೇ ಜೀವನ
ಜೀವನವೆ ಪ್ರಗತಿ
ಹುಚ್ಚಾದ ಈ ಮಾತು
ತಲೆತುಂಬಿ ಕಿಚ್ಚೆದ್ದು...

ಸೊಗಸಾದ ಬಾಳಿಂದ
ಕೇಳ ಬಿದ್ದೆ ಕಲ್ಲಲ್ಲಿ
ಆ ಕಣ್ಣ ನೀರಲ್ಲಿ
ನಾ ಆಯ್ ಟಿ ಸಿಲುಕಲ್ಲಿ..

ಈ ಯಂತ್ರ ಜನರಲ್ಲಿ
ಗುರಿಯೆಂಬ ಗುಂಗಲ್ಲಿ
ನಾ ಕಳೆದುಕೊಂಡೆ
ಮನ:ಶಾಂತಿ ನನ್ನಲ್ಲಿ..

ಸಂಸಾರ ಜೋತೆಯಲ್ಲಿ

ನಿನಗೇಕೆ ಅನಂದ?

ಏಕಾಂಗಿ ನಾನು ಎದೆ ತುಂಬ ನೀನು
ನಿನ್ನೆದೆಯ ಗೂಡಿನಲಿ ನಾನೀರುವೆನೇನು?

ಸಾಹಿತ್ಯವಿರದ ಹಾಡೇನು ಚಂದ?
ನೀನಿರದೆ ಇ ಜೀವ ಬರಿ ಮಸುಕು ಮಂದ

ಬಾನೇರಿ ಹಕ್ಕಿಗಳ ಅ ಸಾಲು ಚಂದ
ಕಣ್ಣೀರ ಹನಿಯಲ್ಲೂ ತುಂಬಿರಲು ನಿನ್ನಂದ

ತವರೂರು ನೀನಗೆ ಬಲು ಅಂದ ಚಂದ
ನನ್ನಿಂದ ದುರಿರಲು ನಿನಗೇಕೆ ಅನಂದ?

ಹಾವೇರಿಯಲ್ಲಿ ನಡೆದಿದ್ದು ಏನು?

ಮುಂಗಾರು ಮಳೆ ಬರುವುದಕ್ಕೆ ಮುನ್ನವೇ ಹಾವೇರಿ ಹಾಗೂ ಅದಕ್ಕೂ ಮುನ್ನ ಧಾರವಾಡದಲ್ಲಿ ರಸಗೊಬ್ಬರದ ಹೆಸರಿನಲ್ಲಿ ದೊಂಬಿ ಮತ್ತು ಹಿಂಸಾಕೃತ್ಯಗಳು ನಡೆದವು. ಆದರೆ, ರಾಜ್ಯದ ಯಾವುದೇ ಭಾಗದಲ್ಲಿ, ಅದರಲ್ಲೂ ಕೃಷಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತೊಡಗಿಕೊಂಡಿರುವ ಜಿಲ್ಲೆಗಳಲ್ಲಿ ಇಂತಹ ಘಟನೆಗಳು ನಡೆಯದಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಲ್ಲಿ ಕೊಂಚ ವಿಶ್ಲೇಷಣೆ ಅಗತ್ಯ.

ಮೊದಲನೆಯದು ಬದಲಾದ ರಾಜ್ಯ ರಾಜಕಾರಣ. ರಾಷ್ಟ್ರಪತಿ ಆಡಳಿತ ಜಾರಿಯಾಗುವುದಕ್ಕೆ ಕಾರಣವಾದ ಘಟನೆಗಳೇ ಇವತ್ತಿನ ದೊಂಬಿ ಪರಿಸ್ಥಿತಿಯಲ್ಲೂ ಮುಂದುವರೆದಿವೆ. ಯಾರಿಗೂ ಬಿಜೆಪಿ ಸರಳ ಬಹುಮತಕ್ಕೆ ಹತ್ತಿರ ಬರುತ್ತದೆ ಎಂಬ ನಂಬಿಕೆ ಇರಲಿಲ್ಲ. ಹೆಚ್ಚೆಂದರೆ, ಅದು ಕಳೆದ ಚುನಾವಣೆಗಿಂತ ಒಂದ್ಹತ್ತು ಹೆಚ್ಚು ಸ್ಥಾನಗಳನ್ನು ಪಡೆಯಬಹುದು ಎಂದು ಮಾತ್ರ ಊಹಿಸಿದ್ದರು. ರಾಷ್ಟ್ರಪತಿ ಆಡಳಿತಕ್ಕೂ ಪೂರ್ವದಲ್ಲಿ, ವಿಶ್ವಾಸಮತ ಸಾಬೀತು ಮಾಡಲು ಕರೆಯಲಾಗಿದ್ದ ಅಧಿವೇಶನದಲ್ಲಿ ದಿಢೀರ್‌ ಮುಖಭಂಗ ಅನುಭವಿಸಿದ ಬಿ.ಎಸ್‌. ಯಡಿಯೂರಪ್ಪನವರು ಅಸಹಾಯಕ ಸ್ಥಿತಿಯಲ್ಲಿ ರಾಜೀನಾಮೆ ನೀಡಬೇಕಾಗಿ ಬಂದುದು ಜನರಲ್ಲಿ ಅನುಕಂಪ ಮೂಡಿಸಿತು. ಊಟಕ್ಕೆ ಮನೆಯವರೆಗೆ ಕರೆದು, ಎಲೆ ಮುಂದೆ ಕೂತವರನ್ನು ಎಬ್ಬಿಸಿ ಕಳಿಸಿದರೆ ನೋಡಿದವರಿಗೆ ಏನನ್ನಿಸುತ್ತದೋ, ಅಂಥದೇ ಭಾವನೆ ಮತದಾರರಲ್ಲಿ ಉಂಟಾಯಿತು.

ರೈತರ ಮೇಲೆ ಗೋಲಿಬಾರಿಗೆ ಅದೇಶಿಸಿದ್ದು ಸರಿಯೇ?

ಅನ್ನಕೊಡುವ ರೈತನಿಗೆ ಭದ್ರತೆ ಕೊಡದೆ ಅವನ ಅಸಹಾಯಕತೆಯನ್ನೆ ಮುಂದಿಟ್ಟುಕೊಂಡು, ನ್ಯಾಯ ಕೇಳಲು ಬಂದವರಿಗೆ ಗೋಲಿಬಾರಿಗೆ ಅದೇಶಿಸಿದ್ದು ಸರಿಯಾದ ಕ್ರಮವೇ? ರೈತ ತನ್ನ ಸ್ವಾರ್ಥಕೋಸ್ಕರ ಬೆಳೆ ಬೆಳೆಯುತ್ತಿಲ್ಲ, ದೇಶದ ಆಹಾರ ಭದ್ರತೆ ಅವನ ಜವಬ್ದಾರಿ. ಅವನ ಜವಬ್ದಾರಿಯನ್ನು ಪೂರೈಸಿಕೊಳ್ಳಲು ಬಿಡದೆ ಅವನ ಮೇಲೆಯೆ ಎರಗುವುದು ಸರಿಯೇ?