ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

ನೆನ್ನೆಯ ನನ್ನ ಲೈನಿಕ್ ಬೇಕಿದೆ ಬ್ಲಾಗ್‌ನ ನಂತರ ಸಂಪದದ ಗೆಳೆತನ ನನಗೆ ನೆರವಾಯಿತು
ಬೇಕೆಂದ ಕೂಡಲೆ ಸಿ.ಡಿಸ್ ಕಳಿಸಿಕೊಟ್ಟ ಓಂ ಶಿವಪ್ರಕಾಶ್ ರವರಿಗೆ ಥ್ಯಾಂಕ್ಸ್ ಹೇಳಬೇಕಾ ಹೇಳಿದರೆ ಅದು ಕಡಿಮೆಯಾಗಬಹುದೆಂಬ ಸಂಕೋಚ.
ಅವರು ಸಿಡಿ ಕೊಟ್ಟದ್ದಕ್ಕಿಂತ ಕೇವಲ ಫೋನ್‌ನಲ್ಲಿ ವಿವರಿಸಿದ ರೀತಿ ಎಂಥವರಿಗೂ ಲೈನಿಕ್ಸ‌ನಲ್ಲಿ ಆಸಕ್ತಿ ಹುಟ್ಟಿಸುವಂತಿದೆ.

ಪರಿವರ್ತನೆಯೇ ಪ್ರಕೃತಿಯ ನಿಯಮ

"ಆದುದ್ದೆಲ್ಲಾ ಒಳ್ಳೆಯದಕ್ಕೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಇನ್ನು ಮುಂದೆ ಆಗುವುದೂ ಒಳ್ಳೆಯದಕ್ಕೆ. ಕಳೆದುಕೊಂಡಿರುವ ಬಗ್ಗೆ ಯಾಕೆ ರೋಧಿಸುತ್ತೀಯಾ? ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು? ನಾಶವಾಗಿರುವುದು ನಿನ್ನ ಸೃಷ್ಠಿಯೇ! ನೀನು ಪಡೆದದ್ದೆಲ್ಲಾ ಇಲ್ಲಿಂದಲೇ ಪಡೆದಿರುವುದು! ನಿನಗಿರುವುದೆಲ್ಲಾ ಇಲ್ಲಿಂದಲೇ ಸಂಪಾದಿಸಿರುವುದು! ಈ ದಿನ ನಿನಗಿರುವುದೆಲ್ಲಾ ನಿನ್ನೆ ಬೇರಾರದೋ ಆಗಿತ್ತು! ಅದು ನಾಳೆ ಇನ್ನರದ್ದೋ ಆಗಲಿದೆ!"

ರಿಲಯನ್ಸ್ ಪವರ್ ಘೋಶಿಸಿರುವ ಬೋನಸ್ ಶೇರುಗಳ ಇಂದಿನ ಬೆಲೆ?

ಈ ಹಿಂದೆ ನಾನು ಚರ್ಚೆಯಲ್ಲಿ ಮೇಲ್ಕಂಡ ವಿಷಯದಲ್ಲಿ ಅನುಮಾನ ವ್ಯಕ್ತ ಪಡಿಸಿದ್ದು ನಿಜವಾಗುವ ಸಮಯ ಹತ್ತಿರವಾಗುತ್ತಿದೆ ಎನ್ನಬಹುದೇನೋ. ೪ನೇ ಜೂನ್ ೨೦೦೮ರ ಪ್ರಜಾವಾಣಿಯಲ್ಲಿ ಈ ವಿಚಾರವಾಗಿ ಪ್ರಕಟವಾಗಿರುವುದೆನೆಂದರೆ:

ಲ೦ಡನ್ ಪ್ರವಾಸಕಥನ ಭಾಗ೮: ಮಾಯಾಜಾಲವೆ೦ಬ ಮಾಯೆ

www.anilkumarha.com

ಸತ್ತವರ ದೃಷ್ಟಿಯಲ್ಲಿ ಬದುಕಿರುವವರು ಭೂತ ದೈಯ್ಯಗಳೇ! ಬದುಕುಳಿದವರಿಗೆ ಸತ್ತವರ ಬಗ್ಗೆ ಎಷ್ಟು ಭಯವಿದೆಯೋ ಅದಕ್ಕಿ೦ತಲೂ ಸಾವಿರಪಟ್ಟು ಬದುಕಿರುವವರ ಬಗ್ಗೆ ಸತ್ತವರಿಗಿದೆ ಭೀತಿ. ಬೇಕಾದರೆ ಸತ್ತವರನ್ನು ಕೇಳಿ ನೋಡಿ. ಅದಕ್ಕೇ ನೋಡಿ ಬದುಕಿರುವವರು ಆಗಾಗ ಸತ್ತವರನ್ನು-- ಸತ್ತವರು ಸತ್ತಾದ ನ೦ತರ--’ನೋಡುವುದು೦ಟು’. ಆದರೆ ಸತ್ತವರು ಎಲ್ಲಾದರೂ ಬದುಕಿರುವವರನ್ನು ನೋಡಿರುವುದಕ್ಕೆ ಸಾಕ್ಷಿ ಇದೆಯೇ? ಹಾಗೆ ಬದುಕಿರುವವರನ್ನು ಸತ್ತವರು ಕ೦ಡು ಬದುಕುಳಿದಿರುವ ಉದಾಹರಣೆ ಇದೆಯೇ?! ಬೇಕಾದರೆ ಸತ್ತವರನ್ನೇ ಕೇಳಿನೋಡಿ, ಗು೦ಡಿಗೆ ಮತ್ತು ಲಕ್ ಇದ್ದರೆ.

ಸತ್ತವರು ಬದುಕಿರುವವರನ್ನು ನೋಡಿ ಬದುಕಿ ಉಳಿದದ್ದಿಲ್ಲ. ಆದರೆ ಬದುಕಿರುವವರು ಸತ್ತವರನ್ನು ಕ೦ಡು ಸತ್ತೇ ಹೋದದ್ದು೦ಟು. ತಮ್ಮ ನೆಚ್ಚಿನ ತಾರೆಯರನ್ನು ಜೀವ೦ತವಾಗಿ, ಎದಿರುಬದುರಾಗಿ ಕ೦ಡಾಗ ಅಭಿಮಾನಿಗಳಿಗೆ ಆಗುವ ಅನುಭವ ಇ೦ತಹದ್ದೇ.ಇದು ಹೇಗೆ೦ದರೆ ಪಾಶ್ಚಾತ್ಯರು ಏಷ್ಯನ್ ಕಲೆಯ ಪ್ರಭಾವದಿ೦ದ ಕಲಾಕೃತಿಗಳನ್ನು ರಚಿಸಿದರೆ ಅದನ್ನು ಜಾಣತನದ ’ಅಪ್ರೊಪ್ರಿಯೇಷನ್’ ಎನ್ನುತ್ತೇವೆ—ಸಮಕಾಲೀನ ಕಲಾವಿಮರ್ಶೆಯ ಭಾಷೆಯಲ್ಲಿ. ಈ ಪದಗಳ ಬಳಕೆಯನ್ನೂ ’ಪೋಸ್ಟ್-ಕಲೋನಿಯಲ್ ಸ್ಟಡೀಸ್’””’ ಎನ್ನುತ್ತೇವೆ, ಸಮಕಾಲೀನ ಕಲಾವಿಮರ್ಶೆಯ ಭಾಷೆಯಲ್ಲಿ! ಅದೇ ಏಷ್ಯನ್ನರು ಪಾಶ್ಚಾತ್ಯ ಕಲಾ ಪ್ರಭಾವ ಹೊ೦ದಿದಲ್ಲಿ ಒ೦ದರ್ಥದ ಮು೦ದುವರೆದ ಗುಲಾಮಗಿರಿ, ಎಗ್ಸೊಟಿಸಿಸ೦ ಎ೦ದು ಆಗಿಬಿಡುತ್ತದೆ. ಈ ಅರ್ಥದಲ್ಲಿ ಸತ್ತವರು ವಸಾಹತುಶಾಹಿಗಳು, ಬದುಕಿರುವವರು ವಸಾಹತೀಕೃತರು. ಸಾವಿನ ವಿಷಯದಲ್ಲಿ ಮಾತ್ರ ವಸಾಹತುಶಾಹಿಗಳು ಎ೦ದಿಗೂ ವಸಾಹತೀಕೃತರಾಗಲಾರರು!

“ಮಿ.ಹೋಮ್ಸ್, ದೆವ್ವಗಳನ್ನು ನ೦ಬುತ್ತೀಯ?” ಎ೦ದು ಕೇಳಿದ್ದೆ ಒಮ್ಮೆ.

“ಈ ಪ್ರಶ್ನೆಗೆ ನಾನು ಉತ್ತರಿಸುವ ಮುನ್ನ, ಇದಕ್ಕೆ ಸ೦ಬ೦ಧಿಸಿದ ಇನ್ನಿತರ ಪ್ರಶ್ನೆಗಳನ್ನು ಒಮ್ಮೆಲೆ ಕೇಳಿಬಿಡು” ಎ೦ದಿದ್ದನಾತ.

ಸಮಸ್ಯೆಗಳ ಸುಳಿಯಲ್ಲಿ

ಸಮಸ್ಯೆಗಳ ಸುಳಿಯಲ್ಲಿ

ಮಣ್ಣಾಗಿ ಬಿದ್ದಿದ್ದೆ ನಾನಾಗ ಉದ್ದೇಶರಹಿತ ಜಡವಾಗಿ,
ನಿಧಿ ತುಂಬುವಾಸೆ ಚಿಗುರಿತಾಗ, ಮಡಕೆಯಾಕಾರ ನಾತಾಳಿದಾಗ,
ಬದುಕುವಾಸೆ ಉಂಟಾಯ್ತು ನೂರಾರು ಕನಸುಗಳ ಹೊತ್ತು,
ಆದರೇನಿದು ತಲೆಯೆಲ್ಲಾ ಭಾರ ನಿಧಿಯಲ್ಲ ತುಂಬಿರುವುದೆನ್ನಲ್ಲಿ!

ವಾಸ್ತವ

ಮುಂಜಾನೆ ಮಿಂದು
ದೇವರಿಗೆ ನಮಿಸುವಾಗ
ಅಮ್ಮ ಹೇಳುತ್ತಿದ್ದಳಾಗ,
ಕೈ ಮುಗಿದು ಕಣ್ಮುಚ್ಚಿ ಬೇಡಿದರೆ
ಈಶ ಒಲಿವನೆಂದು..

ಸಂಧ್ಯಾವಂದನೆ ವೇಳೆ
ದೀಪ ಉರಿಸಿ ನನ್ನ ಅಜ್ಜಿ
ರಾಮನಾಮ ಜಪಿಸುತಿರಲು
ಕಣ್ಣೆರಡು ಮುಚ್ಚಿ ನಾನೂ
ದನಿಗೂಡಿಸುತ್ತಿದ್ದೆ..

ಇರುಳ ಬಾನಂಗಳದಲ್ಲಿ
ಕೋಟಿ ತಾರೆಗಳು ಮಿನುಗುವಾಗ
ನಿದ್ದೆ ಬರುತ್ತಿಲ್ಲ ತಾತ,
ಕತೆ ಹೇಳೆಂದು ಸತಾಯಿಸಿದಾಗ

ಸಪ್ನಾ ಆನ್‍ಲೈನ್ ನಿಂದ ಈಗ ಕನ್ನಡ ಪುಸ್ತಕಗಳು ಲಭ್ಯ

ಇದೀಗ ತಾನೇ ನನ್ನ ಇನ್-ಬಾಕ್ಸ್ ನಲ್ಲಿ ಬಂದ ಮೈಲ್ ಪ್ರಕಾರ ಕನ್ನಡ ಪುಸ್ತಕಗಳು ಇಂಟರ್‍ನೆಟ್ ಮೂಲಕ ಖರೀದಿಗೆ http://www.sapnaonline.com/KannadaBookDetails.aspx?lcPType=D ನಲ್ಲಿ ಲಭ್ಯ.
ನಾನು ಈ ಮೊದಲು ಸಪ್ನಾ ಆನ್‍ಲೈನ್ ಮೂಲಕ ಇಂಗ್ಲೀಷ್ ಪುಸ್ತಕಗಳನ್ನು ಕೊಂಡಿದ್ದೇನೆ. ಬಹಳ ಒಳ್ಳೆಯ ಸೇವೆ ಎಂದು ಅನಿಸಿದೆ.

ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....

ನೊವಿಗು ನಲಿವಿಗೂ..ನಿನ್ನ ತೊಳಿನಾಸರೆಯ ಕೋರಿಕೆ.......
ಮನಸಿನ ಶೂನ್ಯತೆಗೆ , ನಿನ್ನದೇ ನೆನಪಿನ ಮೆಲುಕು...
ಸಂಬಂಧಗಳ ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
ಹೇಳು ಎಂದು ಹನಿಸುವೆ ನಿನ್ನೊಳಗಣ ನೋವ......

ಪ್ರಶಂಸೆಯ ಪ್ರಶಂಸೆ-ಪಾ.ವೆಂ.ಆಚಾರ್ಯರ ಬರಹಗಳಿಂದ.

ಆ ದಿವಸ ನನಗಿನ್ನೂ ನೆನಪಿದೆ.ನಾನಾಗ ನಾಲ್ಕನೇ ಫಾರ್ಮಿನಲ್ಲಿದ್ದೆ.ನನ್ನ ಎಂಗ್ಲೀಷ್ ಮಾಸ್ತರರು ಕ್ಲಾಸಿಗೆ ಬಂದವರೇ ತಾವು ತಿದ್ದಲು ಒಯ್ದಿದ್ದ ಪ್ರಬಂಧ ಪುಸ್ತಕಗಳಲ್ಲಿ ಒಂದನ್ನು ಆರಿಸಿ ಅದರ ಕೆಲ ವಾಕ್ಯಗಳನ್ನು ಕ್ಲಾಸಿಗೆಲ್ಲ ಓದಿ ಹೇಳಿದರು.