ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಿಸ್.ಸದಾರಮೆ

ಇಂದು ಸಂಜೆ ರವಿಂದ್ರ ಕಲಾ ಕ್ಷೇತ್ರದಲ್ಲಿ ನಮ್ಮ ಸ್ನೇಹಿತರ ಅಹ್ವಾನದಿಂದ ನಾಟಕ ನೋಡಲು ಹೋದೆ ಅಲ್ಲಿ ನಾಟಕ ಬೆಂಗ್ಳೂರು 2008 ರಂಗಭೂಮಿ ಸಂಭ್ರಮ ನಡಿತಾ ಇತ್ತು.

ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ

ಕನಕದಾಸರು ಇಂದಿನವರಲ್ಲ. ಅವರು ವಿಜಯನಗರ ಸಾಮ್ರಾಜ್ಯದ ಪತನವನ್ನು ಕಂಡವರು. ಸ್ವತಹ ಅಧಿಕಾರಿಯಾಗಿ, ಪಾಳೆಯಗಾರರಾಗಿ ಧನಸಂಪತ್ತು ಗಳಿಸಿ ಅನುಭವಿಸಿದವರು, ವೈರಾಗ್ಯಬಂದು ಎಲ್ಲವನ್ನು ತ್ಯಜಿಸಿ ತಿಮ್ಮಪ್ಪ ಕನಕನಾಯಕರಾಗಿದ್ದವರು, ಹರಿದಾಸರಾಗಿ, ಕನಕದಾಸರಾದರು.

ಉಚ್ಛಾರದಲ್ಲಿ ಮತ್ತು ಬಳಕೆಯಲ್ಲಿ ವ್ಯತ್ಯಾಸವೇಕೇ?

ನಮ್ಮ ಕಡೆಯಲ್ಲಿ ಕೃಷಿ, ಕೃತಿ, ಕೃಷ್ಣ, ಇವುಗಳನ್ನು ಕ್ರಷಿ, ಕ್ರತಿ, ಕ್ರಷ್ಣ ಎಂದು ಉಚ್ಚಾರಿಸುತ್ತಾರೆ.
ಉಳಿದ ಕಡೆ ಇದನ್ನೇ ಕ್ರುಷಿ, ಕ್ರುತಿ, ಕ್ರುಷ್ಣ ವೆನ್ನುತ್ತಾರೆ.
ನಮ್ಮ ಕಡೆಯಲ್ಲಿ ಮನೆ + ಅಲ್ಲಿ = ಮನೆಯಲ್ಲಿ, ಉಳಿದೆಡೆ = ಮನೆನಲ್ಲಿ
ಕನ್ನಡ ಕಲಿಸುವುದರಲ್ಲಿ ಬೇಧವೇಕೇ?

ಬದುಕು ನಲುಗಿದೆ ದೇಹವು ನಡುಗಿದೆ

ಬದುಕು ನಲುಗಿದೆ ದೇಹವು ನಡುಗಿದೆ

ಜಗವು ತುಂಬಿದೆ ನೀರಿನಿಂದ ಮನವು ತುಂಬಿದೆ ಕಣ್ಣೀರಿನಿಂದ
ಕನಸು ಕೊನರಿದೆ ಮನಸು ಮುದುಡಿದೆ

ಸುತ್ತಲು ನೀರುಂಟು ಕುಡಿಯಲು ವಿಷವುಂಟು
ಆದರೆ ನನ್ನೇ ನಂಬಿದ ಜೀವಗಳಿವೆ
ನಂಬಿದ ಜೀವಗಳಿಗೆ ದೇಹದ ನಂಟಿದೆ

ಹಸಿದ ಹೊಟ್ಟೆಯು ಹಸಿವಿನಿಂದ ತುಂಬಿದೆ
ಉಟ್ಟ ಬಟ್ಟೆಯು ನೀರಲ್ಲೇ ಕೊಳೆತಿದೆ
ಇರಲು ಸೂರಿಲ್ಲ ಕೈಯಲ್ಲಿ ಕಾಸಿಲ್ಲ

ದಯವಿಟ್ಟು ನಗಬೇಡಿ!!!!!

ಒಮ್ಮೆ ಅಮೆರಿಕಾದವರು ಕಳ್ಳರನ್ನು ಹಿಡಿಯೋ ಯಂತ್ರದ ಸಂಶೋದನೆಯನ್ನು ಮಾಡಿದರು. ಅದನ್ನು ಪರೀಕ್ಷಿಸಲು ಬೇರೆ ಬೇರೆ ದೇಶಗಳಿಗೆ ತೆಗೆದುಕೊಂಡು ಹೋದರು.

ಅಮೆರಿಕಾದಲ್ಲಿ, ಅದು ಕೇವಲ 30 ನಿಮಿಷದಲ್ಲಿ, 20 ಕಳ್ಳರನ್ನು ಹಿಡಿಯಿತು;

ಲಂಡನ್ನಿನಲ್ಲಿ, 30 ನಿಮಿಷದಲ್ಲಿ, 50 ಕಳ್ಳರನ್ನು ಹಿಡಿಯಿತು;
ಸ್ಪೇನ್ ನಲ್ಲಿ, 30 ನಿಮಿಷದಲ್ಲಿ, 65 ಕಳ್ಳರನ್ನು ಹಿಡಿಯಿತು;

"ಕೆಲಸ ಮಾಡ್ಲಾಕ ಹತ್ಯಾನ ಮತ್ತು ಇವತ್ತುನಾಳೆ" ಈ ಪ್ರಯೋಗದಲ್ಲಿ ಹಿಂದಿ ಅಥವಾ ಉತ್ತರಭಾರತದ ಭಾಷೆಯ ಪ್ರಭಾವ

ಕರ್ಣಾಟಕದ ದಕ್ಷಿಣ ಭಾಗದವರು "ಅವನು ಕೆಲಸ ಮಾಡುತ್ತಿದ್ದಾನೆ" ಎಂಬುದನ್ನು ಧಾರವಾಡ (ಅದು ಅಚ್ಚಗನ್ನಡದ ಭಾಗವಾಗಿದ್ದರೂ) ಮತ್ತು ಅದಕ್ಕಿಂತ ಉತ್ತರದ ಕರ್ಣಾಟಕದವರು ಹೇೞುವುದು ಹೀಗೆ "ಅವಂ ಕೆಲಸ ಮಾಡಾಕ (ಮಾಡ್ಲಾಕ) ಹತ್ಯಾನ" ಮತ್ತು ಹಾಗೆಯೇ ಇತ್ತೀಚಿಗೆ(nowadays) ಅನ್ನುವುದಕ್ಕೆ ಕಲ್ಬುರ್ಗಿ ಮತ್ತು ಬೀದರದವರು ಹೇೞುವ "ಇವತ್ತುನಾಳೆ" ಹಿಂದಿಯ(ಮರಾಠಿ) "ವಹ್ ಕಾಮ್ ಕರನೇ ಲಗಾ ಹೈ"

ಸಚಿನ್ ತೆಂಡೂಲ್ಕರ್...

ಸಚಿನ್ ತೆಂಡೂಲ್ಕರ್...

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳ ಸರದಾರ ಸಚಿನ್ ತೆಂಡೂಲ್ಕರ್...

ಬ್ರಯಾನ್ ಲಾರ (೧೧೯೫೩) ದಾಖಲೆಯನ್ನು ಮುರಿದ ಸಚಿನ್ ತೆಂಡೂಲ್ಕರ್...

ಪ್ರವಾಹ: ನಲುಗಿದ ಬದುಕು... ಮಂಕಾದ ಅರಿವಿನ ಮುಗಿಲು

ಪ್ರವಾಹಗಳು ಬಂದು ಹೋದವು, ಜನಜೀವನ ನಲುಗಿತು. ಮಾಧ್ಯಮಗಳು ಅದನ್ನು ವರದಿ ಮಾಡಿದವು. ಅಲ್ಲಿಗೆ ಮುಗಿಯಿತು! ಇನ್ನು ಮುಂದಿನ ವರ್ಷ ಪ್ರವಾಹದ ಸಮಯದಲ್ಲಿ ಮತ್ತೆ ಮಾಧ್ಯಮವೂ ಚುರುಕು, ಕೋಟಿಗಟ್ಟಲೆ ಅನುದಾನದ ಸುದ್ದಿ, ಪ್ರಾಣ ಹಾನಿಯ ಸುದ್ದಿ ಮತ್ತೆಲ್ಲ. ಪ್ರವಾಹ ಸಮಯ - ಪ್ರಾಣ ಹಾನಿಯಾದ ಸಮಯ ಮಾತ್ರ ಚುರುಕಾಗಿ ಮುಂದಿನ ವರ್ಷ ಹೀಗಾಗದಂತೆ ನೋಡಿಕೊಳ್ಳಲು ಬೇಕಾದ ಕ್ರಮಗಳ ಕುರಿತು ಆಲೋಚಿಸದೆ, ಚರ್ಚೆ ಮಾಡದೆ complacent ಆಗಿಬಿಡುತ್ತಿದ್ದೇವೆಯೆ?
ಈ ಕುರಿತು ಚಿಂತನೆಗಳನ್ನೊಳಗೊಂಡ ಹರ್ಷವರ್ಧನರ ಬರಹ ಇಗೋ ನಿಮ್ಮ ಮುಂದೆ:

Orissa floods

 

ವಾರ್ಷಿಕ ಸರಾಸರಿ ೩೦೦೦ ಮಿಲಿ ಮೀಟರ್ ಮಳೆ ಬೀಳುವ, ೪೪ ನದಿಗಳನ್ನು ಹೊಂದಿರುವ ಕೇರಳ ಇಂದು ಕುಡಿಯುವ ನೀರಿನ ಸಮಸ್ಯೆಯಿಂದ ತೀವ್ರವಾಗಿ ತಲ್ಲಣಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದೇ ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಮೊದಲ ಭರವಸೆ ಆಗಿತ್ತು. ಚುನಾವಣೆಯ ಸಂದರ್ಭದಲ್ಲಿ ೧೦,೦೦೦ ಕ್ಕೂ ಹೆಚ್ಚು ನೀರಿನ ಟ್ಯಾಂಕರ್ ಗಳನ್ನು ಕೇರಳದ ಉದ್ದಗಲಕ್ಕೆ ಹರಿದಾಡಿಸಿ ನೀರು ಹಂಚಿದ್ದರು ಮುಂಚೂಣಿ ನಾಯಕರು. ಹಾಗೆಯೇ ೨೦೦೭-೦೮ನೇ ಸಾಲಿನಲ್ಲಿ ಮಳೆಯ ಕೊರತೆಯಿಂದಾಗಿ ೨೮೪೪ ಕೋಟಿ ರೂಪಾಯಿಗಳಷ್ಟು ಕೇರಳ ರಾಜ್ಯ ನಷ್ಟ ಅನುಭವಿಸಿರುವುದಾಗಿ ಅಂದಾಜು ಮಾಡಲಾಗಿತ್ತು. ಇದು ಜಮ್ಮು ಕಾಶ್ಮೀರ ರಾಜ್ಯದ ೧ ವರ್ಷದ ಆಯವ್ಯಯ ಮೊತ್ತಕ್ಕೆ ಸಮ!

ಮುಂದೆ ಓದಿ »