ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡೆಕ್ಕನ್ ಕ್ರೋನಿಕಲ್

ಇತ್ತೀಚೆಗೆ ಡೆಕ್ಕನ್ ಕ್ರೋನಿಕಲ್ ಎಂಬ ಆಂಗ್ಲ ಪತ್ರಿಕೆ ಬೆಂಗಳೂರಿಗೆ ದೊಡ್ಡಪ್ರಮಾಣದಲ್ಲಿ (?) ಕಾಲಿಟ್ಟಿದೆ. ಚೆನ್ನೈನಲ್ಲಿ ’ದಿ ಹಿಂದು’ ವನ್ನು ಹಿಂದಿಕ್ಕಿದ್ದೇವೆ ಎಂದು ಬೀಗುತ್ತಿರುವ ಇವರು ಇಲ್ಲಿ ಸಧ್ಯಕ್ಕೆ ’ಟೈಂಸ್ ಆಫ್ ಇಂಡಿಯಾ’ ಮತ್ತು ’ಡೆಕ್ಕನ್ ಹೆರಾಲ್ಡ್’ ಗಳ ಜೊತೆ ಸೆಣೆಸಬೇಕಿದೆ.

ನನ್ನಿಷ್ಟದ ಭಾವಗೀತೆಗಳು!

ನನಗೆ ಇದುವರಗೆ ತುಂಬ ಇಷ್ಟವಾದ ಸಾಹಿತ್ಯದಲ್ಲಿ ಭಾವಗೀತೆಗಳಿಗೆ ಬಹು ಮುಖ್ಯ ಜಾಗವಿದೆ.

ತುಂಬ ದಿನಗಳಿಂದ ನನ್ನ ಮೆಚ್ಚಿನ ಕೆಲವು ಭಾವ ಗೀತೆಗಳ ಬಗ್ಗೆ ನನ್ನ ಒಳನೋಟವನ್ನು ಬರೀಬೇಕು ಅನ್ಕೊಂತ ಇದ್ದೆ. ಆದ್ರೆ ಮನೇಲಿ ನೆಟ್ ಇಲ್ಲ. ಆಫೀಸ್ನಲ್ಲಿ ಅಷ್ಟೆಲ್ಲ ಯೋಚನೆ ಮಾಡಿ ಬರಿಯೋ ಅಷ್ಟು ತಾಳ್ಮೆ ಇಲ್ಲ.

ಬೆಂ.ಅಂ.ವಿ.ನಿ

ಏಕೋ ವಿಮಾನ ನಿಲ್ದಾಣ ಹೆಸರಿನ ವಿವಾದ ಅಸಹ್ಯ ಹುಟ್ಟಿಸುವಷ್ಟು ವಾದ ವಿವಾದ ಗಳನ್ನು ಸೃಷ್ಟಿಸಿ
’ಜಾತಿ-War’ ಉ ವಾದವಿವಾದಗಳನ್ನು ಹುಟ್ಟಿ ಹಾಕುತ್ತಲಿದೆ. ಹೋರಾಟ ಮಾಡುವವರಿಗಾಗಲೀ ಸರ್ಕಾರಕ್ಕಾಗಲೀ ಕನ್ನಡದ ಹಿರಿಯ ಪಂಡಿತರ, ಮುತ್ಸದ್ದಿಗಳ ಜೊತೆ ಒಂದು ಸುತ್ತು ಮಾತುಕತೆ ನಡೆಸಿ ನಿರ್ಧಾರ ಮಾಡುವ ತಾಳ್ಮೆ - ವಿವೇಕ ಇಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ.

ಕಪ್ಪೆ ಕಪ್ಪೆ ನೀರು ಕೊಡು...

ಶಾಲೆಯ ಆರಂಭದ ದಿನ. ಒಂದನೇ ತರಗತಿಗೆ ಕಾಲಿಡುವ ಸಂತಸ. ನನ್ನ ಮನೆಯ ಹತ್ತಿರವೇ ಇರುವ ಶಾಲೆ. ಶಾಲೆಯ ಗಂಟೆಯ ಸದ್ದು ಯಾವಾಗಲೂ ನಮ್ಮ ಮನೆಗೆ ಕೇಳುತ್ತಿತ್ತು. ನನ್ನ ಅಣ್ಣ ಅಕ್ಕ ಎಲ್ಲರೂ ಅಲ್ಲಿ ಓದಿದವರೇ. ನಮ್ಮ ಹಳ್ಳಿಯಲ್ಲಿರುವ ಏಕೈಕ ಕನ್ನಡ ಶಾಲೆ ಅದು. ಕೇರಳವಾಗಿದ್ದರಿಂದ ಮಲಯಾಳ ಕಲಿಯಬೇಕೆಂದಿದ್ದವರಿಗೆ ಬಸ್‌ನಲ್ಲಿಯೇ ಶಾಲೆಗೆ ಹೋಗಬೇಕು. ಅಂತೂ ಬಸ್‌ನಲ್ಲಿ ಮಕ್ಕಳನ್ನು ಕಳುಹಿಸಲು ಇಷ್ಟವಿಲ್ಲದ ಮಲಯಾಳಿಗರಿಗೆ ಕನ್ನಡ ಶಾಲೆಯೇ ಆಶ್ರಯ. ಒಂದರಿಂದ ಏಳನೇ ತರಗತಿಯವರೆಗಿರುವ "ಮಜದೂರರ" ಶಾಲೆ. ಅಲ್ಲಿ ಕಲಿಯುವಂತಹ ಮಕ್ಕಳೆಲ್ಲರಿಗೂ ಬಡತನದ ಕಹಿ ಗೊತ್ತು. ಬೆರಳೆಣಿಕೆಯಷ್ಟೇ ಮಂದಿ ಸ್ವಲ್ಪ ಅನುಕೂಲ ಕುಟುಂಬದಿಂದ ಬಂದವರಾಗಿದ್ದರು. ಆದರೂ ಬಡತನದ ಬೇನೆಯಲ್ಲಿಯೂ ಉತ್ತಮವಾಗಿ ಕಲಿತು ಏಳನೇ ತರಗತಿಯವರೆಗೇರಿದರೂ ನಂತರ ಹೈಸ್ಕೂಲ್ ಮೆಟ್ಟಿಲು ಹತ್ತಲು ತಾಪತ್ರಯಗಳು ಅವರ ಬೆನ್ನು ಬಿಡುತ್ತಿರಲಿಲ್ಲ.

ಜೂನ್ ಒಂದನೇ ತಾರೀಕಿಗೆ ಹೊಸ ಅಧ್ಯಯನ ವರ್ಷ ಪ್ರಾರಂಭ. ಅಂದು ಒಂದನೇ ಕ್ಲಾಸಿಗೆ ಕಾಲಿಟ್ಟಾಗ ಅತೀವ ಸಂತಸವಾಗಿತ್ತು. ಪ್ರಾರಂಭ ದಿನದಂದು ಒಂದನೇ ಕ್ಲಾಸಿನ ಮಕ್ಕಳನ್ನು ಸ್ವಾಗತಿಸಲು ಶಾಲೆ ಸಜ್ಜಾಗಿತ್ತು. ಹೊಚ್ಚ ಹೊಸತಾದ ನೀಲಿ ಬಣ್ಣದ ತುಂಡು ಲಂಗ, ಬಿಳಿ ರವಿಕೆ ಧರಿಸಿ, ಮೋಟುದ್ದದ ಜಡೆಗೆ ಚೆಂಡು ಹೂವನ್ನು ಮುಡಿದು ಶಾಲೆಗೆ ಹೋದ ಬಾಲ್ಯದ ನೆನಪು. ಹೊಸ ತರಗತಿ, ಅಪ್ಪ ತಂದು ಕೊಟ್ಟಂತಹ ಹೊಸ ಬ್ಯಾಗು, ಮರದ ಸ್ಲೇಟು, ಪೆನ್ಸಿಲು ಇರಿಸುವ ಪ್ಲಾಸ್ಟಿಕ್ ಪೆಟ್ಟಿಗೆ (ನಮ್ಮಲ್ಲಿ ಹೆಚ್ಚಾಗಿ ಇದನ್ನು ಕಂಪಾಸು ಪೆಟ್ಟಿಗೆ ಅಂತನೇ ಹೇಳ್ತಾರೆ ) ಅದೂ ಅಲ್ಲದೆ ರೈನ್‌ಕೋಟ್, ಚಪ್ಪಲಿ, ಕೈತುಂಬಾ ಬಳೆ, ಅದಾಗಲೇ ಅಣ್ಣ ಖರೀದಿಸಿ ಕೊಟ್ಟ ಉದ್ದದ ಬಳಪ ಎಲ್ಲವೂ ಹೊಸತು ಹೊಸತು. ಮೊದಲ ದಿನ ಗುರುಗಳು ತರಗತಿಗೆ ಬಂದು ಆರೆಂಜ್ ಮಿಠಾಯಿ ಕೈಗೆ ಕೊಟ್ಟಿದ್ದರು. ಇನ್ನು ಕೆಲವು ಮಕ್ಕಳಂತೂ ರಂಪಾಟ ಮಾಡಿ "ಅಮ್ಮಾ" ಎಂದು ಅಳುವಾಗ, ಅವರನ್ನು ನೋಡಿ ನಾನು ಅತ್ತಿದ್ದೆ. ಆ ಶಾಲೆಯಲ್ಲಿರುವ ಎಲ್ಲಾ ಟೀಚರ್‌ಗಳಿಗೂ ನಾನು ಮೊದಲೇ ಪರಿಚಿತಳಾಗಿದ್ದ ಕಾರಣ ಹೆಚ್ಚಿನ ಭಯವೇನು ಇಲ್ಲವಾಗಿತ್ತು. ಅದೂ ಅಲ್ಲದೆ ತರಗತಿಯ ಹೊರಗೆ ಬಂದರೆ ನಮ್ಮ ಮನೆಯ ಗೇಟು, ಮಾವಿನ ಮರ ಎಲ್ಲವೂ ಕಾಣಿಸುತ್ತಿತ್ತು. ಅದನ್ನು ಕಂಡಾಗ ಅದೇನೋ ಒಂಥರಾ ತೃಪ್ತಿ.

ಹಿಮಾ-ಲಯ

ಈ ವರ್ಷದ ನೊಬೆಲ್ ಪುರಸ್ಕಾರವನ್ನು ಶ್ರೀಮಾನ್ ಲ.ನಾ.ಭಟ್ ರವರಿಗೆ ನೀಡಲಾಗಿದೆ. ತೀರ ಪ್ರದೇಶದ ಜೀವಿಗಳು ಸಮುದ್ರ ಮಟ್ಟದ ಏರಿಕೆಯಿಂದಾಗಿ ಮೃತಪಟ್ಟಿದ್ದು ಅದು ಇನ್ನು 1000 ವರ್ಷಗಳ ನಂತರ ನಮಗೆ ಇಂಧನವಾಗಿ ದೊರಕಲಿದ್ದಾರೆ ಎನ್ನುವ ಮಹತ್ತರವಾದ ಸಂಶೋಧನೆಗೆ ಅವರಿಗೆ ಪುರಸ್ಕಾರ ದೊರಕಿದೆ.

'ನಲ್ಲೀ ತಾವ್ ನಂ ಮಲ್ಲೀ'- ಜಿ. ಪಿ.ರಾಜರತ್ನಂ ರವರ ಕವನ, ಮತ್ತೊಮ್ಮೆ ಮೆಲುಕುಹಾಕಲು ಮುದಕೊಡುತ್ತದೆ !

'ಶತಮಾನದ ಕಾವ್ಯ' ದಿಂದ, ಶ್ರೀ. ಜೀ.ಪಿ.ರಾಜರತ್ನಂ, ಅವರ ಕವಿತೆಗಳಲ್ಲಿ ನನಗೆ 'ಪ್ರಿಯವೆನಿಸಿದ' ಕೆಲವು ಪದ್ಯಗಳನ್ನು ಕೆಳಗೆ ಕೊಟ್ಟಿದ್ದೇನೆ.

ಸಂಪಾದಕರು: ಶ್ರೀ. ಎಚ್. ಎಸ್. ವೆಂಕಟೇಶಮೂರ್ತಿಗಳು.

ಹೆಸರಾಂತ ಕವಿ, ರಾಜರತ್ನಂ ಕವಿತೆಗಳಲ್ಲಿ ರಸಿಕತೆಗೇನೂ ಕಡಿಮೆ ಇಲ್ಲ ! ಮಲ್ಲಿಯ ಮೇಲಿನ ಪ್ರೀತಿ, ಗೌರವ, ಹಾಗೂ ಮೆಚ್ಚುಗೆಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು !

ಕಿವಿಯ ಕಿತ್ತರಡಗಿತು ಹಾವಿನ ವಿಷ?

ಮನೆಯ ಸುತ್ತ ಹಾವು ಚೇಳುಗಳ ಭರಾಟೆ ಹಾಗೂ ಭೇಟಿ ಹೆಚ್ಚಾಗುತ್ತಿರುವಂತೆ ಎಲ್ಲೆಡೆ ಲೈಟು ಹಾಕಿಕೊಂಡು ಓಡಾಡುವುದಷ್ಟೇ ಅಲ್ಲದೆ ಮನೆಯೆದುರಿಗಿರುವ ಪಾರ್ಕಿನ ಮೇಲೂ ಒಂದು ನಿಗಾ ಇಡೋದು ಮನೆಯಲ್ಲಿ ಎಲ್ಲರಿಗೂ ಯಾರೂ ಹೇಳದೆಯೇ ರೂಢಿಯಾದಂತಾಗಿಬಿಟ್ಟಿದೆ.

ಮೇಲು ಕೀಳು(ಪ್ರೇರಕ ಪ್ರಸಂಗಗಳು)

ರೋಮ ಸಾಮ್ರಾಜ್ಯದ ಸಾಮ್ರಾಟ ಅಲೆಗ್ಸಾಂಡರರು ದೇಶದ ಆಂತರಿಕ ಆಡಳಿತವನ್ನು ಅರಿಯಲು ಆಗಾಗ್ಗೆ
ವೇಷ ಬದಲಿಸಿ ಒಬ್ಬರೇ ನಡೆಯುತ್ತಲೇ ತಿರುಗುತ್ತಿದ್ದರು.ಒಮ್ಮೆ ತಿರುಗುತ್ತ ತಿರುಗುತ್ತ ದಾರಿ ತಿಳಿಯದ ಒಂದು
ಗಲ್ಲಿಗೆ ಬಂದರು.ಮುಂದಿನ ದಾರಿ ತಿಳಿಯಲು ಯಾರಾದರೂ ಕಂಡಾರೆಂದು ನೋಡುತ್ತ ನಿಂತಿದ್ದರು.ಆಗ
ಕೆಲಸದ ಮೇಲಿದ್ದ ಸಿಪಾಯಿ ಎದುರಾದನು.