ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಳಿಯದ ನೆನಪು

ಹೃದಯದಿ ಮೂಡಿದ ಭಾವನೆಗಳು

ಅವುಗಳೇ ನಿನ್ನಯ ನೆನಪುಗಳು

ನೆನಪಿನ ಪುಟಗಳ ಅಂಚಿನಲಿ

ಮೂಡಿದೆ ಸುಂದರ ಕನಸುಗಳು

 

ಸಾವಿರ ಕನಸ್ಸಿನ ಹಾಳೆಯಲಿ

ಜಾರಿ ಹೋಗದಿರಲಿ ನಿನ್ನ ಮಾತುಗಳು

ಯಾವ ಮೋಡಿಯಲಿ ನೀ ಸಿಲುಕಿರುವೆಯೋ

ಹುಬ್ಬಳ್ಳಿ ಹುಡುಗಿ

'ಹುಬ್ಬಳ್ಳಿ' ಶಹರದಲ್ಲಿ , ದುರ್ಗದ ಬಯಲಲ್ಲಿ
ಕಂಡೆ ನಾ 'ಹೂ ಬಳ್ಳಿ' ಯಂತ ಬೆಡಗಿಯ
'ಚುರುಮುರಿ' ಅವಳ ಕೈಯಲ್ಲಿ, ರೋಜಾ ಹೂ ಜಡೆಯಲ್ಲಿ

ಮಾನಸ ಗಂಗೆಯಲ್ಲಿ ಮಿಂದ ಮಹಾರಾಣಿಯಂತೆ ಇದ್ದಳವಳು
ಮನವೆಂಬ ಮಾಯಾ ಮೃಗದ ಬೆನ್ನೇರಿ ಝೇಂಕಾರ ಮಾಡಿದಳು
ಪೂರ್ಣಿಮೆಯ ಚಂದ್ರನ ಕಂಡ ಸಮುದ್ರ ರಾಜನ ಹಾಗೆ
ಮನಸ್ಸೆಂಬ ಮಹಾ ಮರ್ಕಟ ಜಿಗಿದು ನರ್ತನ ಮಾಡಿತ್ತು

ಡಾ| ಕೆ.ಎಸ್. ಆಚಾರ್ಯರ ಮಹಾಭಾರತದ ಭೀಷ್ಮ.

ಭೀಷ್ಮನ ಪಾತ್ರ ವಿಶ್ಲೇಷಣೆಯಿಂದ ಉನ್ನತಿಕೆಯನ್ನು ಹೆಚ್ಚಿಸುವ ಆತನ ತ್ಯಾಗ, ನಿಃಸ್ಪೃಹತ್ವ, ಕ್ಷತ್ರಿಯನಾಗಿಯೂ ಆಚಾರ್ಯನಾದವನ ಪದವಿಗಳನ್ನೆಲ್ಲಾ ಸುಂದರವಾಗಿ ವಿವೇಚಿಸುತ್ತ ಭೀಷ್ಮ ಎಡಹಿದ ತಾಣಗಳನ್ನು,ಎಸಗಿದ ತಪ್ಪುಗಳನ್ನು, ಅದಕ್ಕಾಗಿ ಆತ ಪರಿತಪಿಸಿ ಪಶ್ಚಾತಾಪಭಾವವನ್ನು ವ್ಯಕ್ತಪಡಿಸುವುದನ್ನು ಮನಕರಗುವಂತೆ ಆಚಾರ್ಯರು ಚಿತ್ರಿಸಿರುವರು.

ಎಣಿಕೆ ಕ್ರಮ

ಯಾರಿಗಾದರೂ ಕನ್ನಡ/ಸ೦ಸ್ಖೃತದಲ್ಲಿನ ಅ೦ಕಿ ಕ್ರಮ ಗೊತ್ತಿದ್ದರೆ ತಿಳಿಸಿ
ಉದಾ: ಬಿಡಿ, ಹತ್ತು ನೂರು ...........................

ಅಥವಾ

ಎಕ್ಕ೦, ದಶ೦, ಶತ೦, ಸಾವಿರ..................................... ಹೀಗೆ ಎಲ್ಲಿಯವರೆಗೆ ಇದೆ ಎ೦ದು ತಿಳಿಸಿ

ಹೀಗೊಂದು ಸಂಜೆ ..

ಈ ಮಳಿಯೇ ಹೀಂಗೆ.. ಕೊಡಿ ತಂದ್ ದಿನ ಮಳಿ ಬತ್ತಿಲ್ಲೆ, ತರ್ದಿದ್ ದಿನ ಜೋರ್ ನೆರಿ. ಹೀಂಗೆ ಅಯಿತ್ ನಿನ್ನೆ. ಕೆಲ್ಸ ಮುಗ್ಸಿ ಕೆಳಗೆ ಬತ್ತೆ, ಎಂಥ ಹೇಳುದು.. ಕಪ್ ಕಟ್ಟಿ ಜೋರ್ ನೆರಿ ಹೊಯಿತಾ ಇತ್. ಆರ್ ಗಂಟಿಗೆಲ್ಲಾ ಒಂಬತ್ ಗಂಟಿ ಕಣಂಗ್ ಆಯಿತ್. ಮೊದಲೆಲ್ಲ ಮಳಿ ಅಂದ್ರೆ ಜಾಸ್ತಿ ತಲಿಬಿಸಿ ಮಾಡ್ಕಂತಿರ್ಲ. ಮಳಿ ಅಂದ್ರೆ ಒಂತರ ಖುಶಿ. ಆ ಮಳಿಯಂಗೆ ಡ್ರೈವ್ ಮಾಡುಕೇನೋ ಒಂತರಾ ಗಮ್ಮತ್.

ಗೂಗಲ್ : ಅಜಾಕ್ಸ್ ತಂತ್ರದಿಂದ ಹೊಸ ಯೂನಿಕೋಡ್ ಹುಡಾಕಾಟವನ್ನು ಸಂಯೋಜಿಸಿದೆ

ಇತ್ತೀಚೆಗೆ.. ಗೂಗಲ್ ನ ಕನ್ನಡ ಆವೃತ್ತಿಯಲ್ಲಿ ಹುಡುಕಾಟ ಮಾಡುವಾಗ, ಒಂದು ವಿಶೇಷವನ್ನು ಗಮನಿಸಿದೆ,

ರಾತ್ರಿರಾಣಿ ಹೂವು

ಕೆಲವು ತಿಂಗಳ ಹಿಂದೆ ಬ್ರಹ್ಮಕಮಲ ಹೂವಿನ ಚಿತ್ರವನ್ನು ಪ್ರಕಟಿಸಿದಾಗ, ಆ ಹೂವನ್ನು ರಾತ್ರಿರಾಣಿ ಎಂದೂ ಕರೆಯುವರು ಎಂಬ ಅಭಿಪ್ರಾಯ ಸಂಪದೋದುಗರಲ್ಲಿ ಮೂಡಿ ಬಂತು. ನಾನು ಅಂತರ್ಜಾಲವನ್ನು ಜಾಲಾಡಿದಾಗ ಅಲ್ಲಿಯೂ ಅದೇ ವಿಷಯ ತಿಳಿಯಿತು. ಆದರೆ, ನನ್ನ ಮನಸ್ಸಿನಲ್ಲಿ ನಾನು ಚಿಕ್ಕಂದಿನಿಂದ ನೋಡಿದ್ದ ರಾತ್ರಿರಾಣಿ ಹೂವು ಅಚ್ಚಳಿಯದೆ ಮೂಡಿದ್ದು, ಅದಕ್ಕೂ ಬ್ರಹ್ಮಕಮಲಕ್ಕೂ ಸಂಬಂಧವಿಲ್ಲವೆಂಬುದನ್ನು ಹೇಗೆ ವಿವರಿಸೋಣ ಎಂದು ಆಲೋಚಿಸುತ್ತಿದ್ದಾಗ, ರಾತ್ರಿರಾಣಿ ಹೂವು ಕಣ್ಣಿಗೆ ಬಿತ್ತು.
ಬ್ರಹ್ಮಕಮಲ ತಾವರೆ ಹೂವನ್ನು ಹೋಲುವುದಾದರೆ, ರಾತ್ರಿರಾಣಿ ಸುಗಂಧರಾಜ ಹೂವನ್ನು ಹೋಲುತ್ತದೆ. ರಾತ್ರಿರಾಣಿ ಪುಷ್ಪವು ಅರಳಿ, ಸಂಜೆಯಾದೊಡನೆ ತನ್ನ ಸುಗಂಧವನ್ನು ರಸ್ತೆಗೆಲ್ಲಾ ಹರಡಿರುತ್ತದೆ. ಬ್ರಹ್ಮಕಮಲ ಮಂದ ಸುಗಂಧವನ್ನು ಹೊಂದಿದ್ದರೆ, ಈ ಪುಷ್ಪ ತೀಕ್ಷ್ಣವಾದ ಸುಗಂಧವನ್ನು ಬೀರುತ್ತದೆ. ರಾತ್ರಿರಾಣಿ ಹೂವು ಎರಡು ದಿನಗಳವರೆಗೂ ಅರಳಿ ನಿಂತಿದ್ದು, ನಂತರ ಮುದುರಿ ಹೋಗುತ್ತದೆ.

ಗೆದ್ದೆತ್ತಿನ ಬಾಲ

ಗೆದ್ದೆತ್ತಿನ ಬಾಲ ಹಿಡಿಯೊದು ಅಂದ್ರೆ ಇದೇ.. ಕನ್ನಡ ಪೇಪರನವ್ರು ಕನ್ನಡಿಗ ಅಡಿಗ ಅಂದ್ರು, ಮುಂಬೈ ನವರು ಮುಂಬೈಕರ್ ಅನ್ತಾರೆ, ಚೆನೈ ನವರು ಅವನು ಹುಟ್ಟಿದು ಇಲ್ಲೇ ಅನ್ನ ಬಹುದು..:D