ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಬ್ಬಿ ಜಲಪಾತ

ಭಾವ ವೀಣೆಯು ನುಡಿಸಿತು ಹೃದಯಸ್ಪರ್ಶಿ ನಿನಾದ
ಆಲಾಪನೆಯು ಝ್ಹೇಂಕರಿಸಿತು ನರ ನಾಡಿಗಳಾ ಉತ್ಕರ್ಷ
ತನುಮನ ಧಮನಿಗಳ ಮೃದಂಗ ತುಡಿತ ದರ್ಶನ
ಅಬ್ಬಿ ಜಲಪಾತದ ರುದ್ರ ರಮಣೀಯ ಮೇಳ ತಂಬೂರಿ

ರೋಮಾಂಚನ ಮುರಳೀ ಗಾನ ಅಂಗಾಂಗ ಕಂಪನ
ಸ್ತಬ್ಧ ಸ್ನ್ಬಿಗ್ಧ ಕಾರ್ಮೋಡ ಮೇಳ, ದಟ್ಟೈಸಿದ ನೀರ
ಅಶರೀರ ವಾಣಿಯ ಗುಡುಗು ಡಮರುಗ ಮಿಂಚು ಬೆಳಕು
ಶಿವತಾಂಡವದ ವಿಹಂಗಮ ನೋಟ ಸೃಷ್ಟಿ ಲಯ ಚಕ್ರ

ಇಂದಿನ ಮಹಾಭಾರತ :

ನಮ್ಮ ಇಂದಿನ ಆರ್ಥಿಕ / ಆಡಳಿತ ವ್ಯವಸ್ಥೆಯಲ್ಲಿ ಕೌರವರ ರಾಜ್ಯದ ಯಾವ ವ್ಯವಹಾರ ನಡೆಯುತ್ತಿಲ್ಲ ? ನಮ್ಮ ಭಂಡ ರಾಜಕಾರಣಿಗಳು, ಉದ್ಯಮಿಗಳು ಯಾವ ದುರ್ಯೋಧನನಿಗೆ ಕಮ್ಮಿ ಇದ್ದಾರೆ ? ಆರ್ಥಿಕ ಜೂಜನ್ನಾಡಿ ಅಮಾಯಕ ರೈತರನ್ನು, ಗುರು ಹಿರಿಯರನ್ನು ನಗೆಪಾಟಲಿಗೆ ಈಡು ಮಾಡುತ್ತಿರುವ ಈ ಮಾತ್ಸ್ಯ ನ್ಯಾಯದ ಆರ್ಥಿಕ / ಸಾಮಾಜಿಕ ವ್ಯವಸ್ಥೆ ಇಂತಿದೆ :

ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

೨೦೦೧ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಗೊತ್ತಿದೆಯೇ?

ಒಟ್ಟು ಜನಸಂಖ್ಯೆ ೫.೨೮ ಕೋಟಿ

ಕನ್ನಡಿಗರು ೩.೪೮ ಕೋಟಿ (೬೬%)

ಉರ್ದು ಭಾಷಿಕರು ೫೫.೩೯ ಲಕ್ಷ

ತೆಲುಗರು ೩೬.೯೮ ಲಕ್ಷ

ಮರಾಠಿಗರು ೧೮.೯೨ ಲಕ್ಷ

ತಮಿಳರು ೧೮.೭೪ ಲಕ್ಷ

ಹಿಂದಿ ಭಾಷಿಕರು ೧೩.೪೪ ಲಕ್ಷ

ಮಲಯಾಳಿಗಳು ೭.೦೧ ಲಕ್ಷ

ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ

ಕಳೆದ ಭಾನುವಾರ ರಾಮನವಮಿ ಇತ್ತು. ರಾಮ ಹುಟ್ಟಿದ ದಿನ ದಶರಥನ ಅರಮನೆಯ ಅಡುಗೆಮನೆಯಲ್ಲಿದ್ದ ದಿನಸಿ ಎಲ್ಲ ಖಾಲಿಯಾಗಿ, ಕಡೆಗೆ ಬಂದವರಿಗೆಲ್ಲ ಪಾನಕ, ನೀರುಮಜ್ಜಿಗೆ ಕೊಟ್ಟು ಕಳಿಸಿದ್ದ ಕಥೆ ಗೊತ್ತೇ ಇದೆ ಎಲ್ಲರಿಗೂ. ಅದಕ್ಕೇ ತಾನೇ, ನಾವೆಲ್ಲ ರಾಮನವಮಿಯಂದು ರಾಮನಾಮ ಸ್ಮರಣೆಯ ಜೊತೆ, ಪಾನಕ, ಮಜ್ಜಿಗೆ, ಕೋಸುಂಬರಿ ಗೊಜ್ಜವಲಕ್ಕಿ ಸೇವನೆಯ ಕಾರ್ಯಕ್ರಮವನ್ನೇ ಜೋರಾಗಿ ಇಟ್ಟುಕೊಳ್ಳುವುದು?

ರಾಮನವಮಿ ಎಂದರೆ ಅದರ ಜೊತೆಗೇ ನನಗೆ ರಾಮನವಮಿ ಸಂಗೀತೋತ್ಸವಗಳದ್ದೇ ನೆನಪು. ನನ್ನ ಶಾಲಾ-ಕಾಲೇಜು ದಿನಗಳಲ್ಲಿ ರಾಮನವಮಿ ಯಾಕಾದರೂ ಈ ಪರೀಕ್ಷೆಯ ಸಮಯದಲ್ಲಿ ಬರುತ್ತೋ ಅಂತ ಬೈದುಕೊಳ್ಳುತ್ತಿದ್ದೆ. ಯಾವಾಗಲೂ, ಒಳ್ಳೇ ಸಂಗೀತಗಾರರು ಬರುತ್ತಿದ್ದರೆ, ಅದರ ಮರುದಿನವೇ ಪರೀಕ್ಷೆ ಇದ್ದಿರಬೇಕೇ? ಹಾಗಿದ್ದರೂ, ಆದಷ್ಟೂ ತಪ್ಪಿಸದೇ ಹೋಗುತ್ತಿದ್ದವನು ನಾನು. ಅಂದಿನ ದಿನಗಳು ಚೆನ್ನಾಗಿದ್ದವು. ನಮ್ಮ ಊರಿನಲ್ಲಿ ಎಲ್ಲಿ ಸಂಗೀತ ಕಾರ್ಯಕ್ರಮ ನಡೆದರೂ, ಹತ್ತು ನಿಮಿಷಗಳೊಳಗೆ ಅಲ್ಲಿ ಹೋಗಿ ಸೇರಬಹುದಿತ್ತು. ನಾನು ಕೇಳಿದ ಹೆಚ್ಚಿನ ಕಚೇರಿಗಳು ಹೀಗೆ ರಾಮೋತ್ಸವದಲ್ಲಿ (ಅಥವಾ ಗಣೇಶೋತ್ಸವದಲ್ಲಿ) ಕೇಳಿದ್ದವೇ. ಆದರೆ, ಈಗ ಬೆಂಗಳೂರಿನಂತಹ ಊರುಗಳಲ್ಲಂತೂ ಇಂತಹದ್ದೇ ಕಡೆ ನಡೆಯುವ ಕಾರ್ಯಕ್ರಮಕ್ಕೆ ಹೋಗಬೇಕೆಂದರೆ, ಅರ್ಧ ದಿನವೆಲ್ಲ ರಸ್ತೆಯ ಮೇಲೇ ಇರಬಹುದಷ್ಟೆ. ಪುಣ್ಯಕ್ಕೆ ಎಲ್ಲಾ ಕಡೆ ಗುಡಿ ಗೋಪುರವಿದ್ದಲ್ಲೆಲ್ಲ ಒಂದಲ್ಲ ಒಂದು ಸಂಗೀತ ಕಾರ್ಯಕ್ರಮ ನಡೆಯುವುದರಿಂದ, ಆಸಕ್ತರಿಗೆ ಅಂತಹ ಖೋತಾ ಆಗಲಾರದು. ಆದರೂ, ಕೋಟೆ ಹೈಸ್ಕೂಲ್ ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾದರೆ ಆ ಸೊಗಸೇ ಬೇರೆ.

ಸೈಟಿಲ್ಲದವರಿಗೆ ಸೈಟು...ನಮಗೆ ಓಟು

೧. ಸೈಟಿಲ್ಲದವರಿಗೆ ಫ್ರೀ ಸೈಟ್, ಕಾರಿಲ್ಲದವರಿಗೆ ಫ್ರೀ ಕಾರು.*

೨. ರೂಪಾಯಿಗೆ ಒಂದು ಕೆ.ಜಿ. ಅಕ್ಕಿ.*

೩. ಸ್ಕೂಲಿಗೆ ಹೋಗಲು ಹುಡುಗರಿಗೆ ಬೈಕು, ಹುಡುಗಿಯರಿಗೆ ಸ್ಕೂಟಿ.*

೪. ವಿದ್ಯಾವಂತ ನಿರುದ್ಯೋಗಿಗಳಿಗೆ ಐ.ಟಿ.ಯಲ್ಲಿ ಕೆಲಸ! ಅವಿದ್ಯಾವಂತರಿಗೆ ವಿದಾನಸೌಧದಲ್ಲಿ!*

೫. ಸೋತ ರಾಜಕಾರಣಿಗಳೆಲ್ಲರಿಗೂ ೫ ವರ್ಷ ರೈತರ ಗದ್ದೆ ಕಾಯುವ ಕೆಲಸ.

ಈ ಬೆಂಗಳೂರು ಹೀಗಾದ್ರೆ ಹೇಗೆ..?!

(ಸೂಚನೆ: ನಿನ್ನೆ ಗೆಳೆಯನ ಹರಸಹಾಸದಿಂದಾಗಿ ಮತ್ತೆ ಸಂಪದ ಓಪನ್ ಆಗಿದೆ ಹಾಗಾಗಿ ಹಾಲಿಡೇಯನ್ನು ಕ್ಯಾನ್ಸ್‌ಲ್ ಮಾಡಿದ್ದೇನೆ. ಕ್ಷಮೆ ಇರಲಿ)

ಪತ್ರ.... ನಾಸ್ಟಾಲ್ಜಿಯಾ

ಯಾಕೋ ಈ ಮೈಲ್ ಬಿಟ್ಟು ಪತ್ರ ಬರೆಯೋಣ ಅನುಸ್ತಾಯಿದೆ....
ಇದ್ದಕಿದ್ದ ಹಾಗೆ ಈ ವಿರಕ್ತಿ ಯಾಕಪ್ಪಾ ಅಂತ ಆಶ್ಚರ್ಯ ಆಗಬಹುದು. ಸಾಕಾಗೋಗಿದೆ ರೀ ಸಾಕಾಗೋಗಿದೆ...ಎರಡು ತಿಂಗಳಿಂದ Hi.......Regards ಅಂತ ಬೆಳಗ್ಗೆ ಇಂದ ಸಾಯಂಕಾಲದವರೆಗೆ ಕುಟ್ಟೀ ಕುಟ್ಟೀ, inbox ನೋಡುದ್ರೆ ಬೇಜಾರಾಗತ್ತೆ. :-(

ಮೈಸೂರು ರಮಾನಂದರ ಹೊಸ ನಾಟಕ ಕೃತಿ - ಕಾಣೆಯಾಗಿದ್ದಾನೆ

ಮೈಸೂರು ರಮಾನಂದರು ಕಳೆದ ೨೫ ವರ್ಷಗಳಿಂದ ನಾಟಕ ರಂಗದಲ್ಲಿ ಚಟುವಟಿಕೆಯಿಂದಿದ್ದಾರೆ. ಅವರ "ಗೆಜ್ಜೆಹೆಜ್ಜೆ ರಂಗತಂಡ" ರಮಾನಂದರ ಕೃತಿಗಳು ಹಾಗು ಇನ್ನಿತರ ಲೇಖಕರ ನಾಟಕಗಳನ್ನು ರಂಗದಮೇಲೆ ತಂದು ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.