ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓದಿದ್ದು ಕೇಳಿದ್ದು ನೋಡಿದ್ದು-18 ಇಟ್ಟಿಗೆಯಿಂದಲೇ ಬಾಂಬು ನಿಷ್ಕ್ರಿಯಗೊಳಿಸಬಹುದು!

ಇಟ್ಟಿಗೆಯಿಂದಲೇ ಬಾಂಬು ನಿಷ್ಕ್ರಿಯಗೊಳಿಸಬಹುದು!

 

ನಿನ್ನೆ ದೆಹಲಿಯಲ್ಲಿ ಕನಾಟ್ ಪ್ಲೇಸ್ ಬಳಿ ಬಾಂಬು ಕಸದ ತೊಟ್ಟಿಯಲ್ಲಿ ಸಿಕ್ಕಿತಂತೆ. ಸಮೀಪಲ್ಲಿದ್ದ ಪೋಲೀಸ್ ಕಾನ್‌ಸ್ಟೇಬಲ್ ಸುರೇಶ್ ಕುಮಾರ್ ಇಟ್ಟಿಗೆಯಿಂದ ಬಾಂಬಿನ ಗಡಿಯಾರವನ್ನು ಗುದ್ದಿ ಒಡೆದು ತನ್ಮೂಲಕ ಬಾಂಬು ನಿಷ್ಕ್ರಿಯಗೊಳಿಸಿದರಂತೆ.

’ಸೇಂಟ್ ವರ್ಜಿನ್ ಮೇರಿ ಚರ್ಚ್', ಫುಲ್ಟನ್ !

ಕ್ರಿಸ್ಟೋಫರ್ ರೆನ್ ಎಂಬುವರು, ವಿಶ್ವಯುದ್ಧದಲ್ಲಿ ವಿನಾಶದಹಂತದಲ್ಲಿದ್ದ ೧೭ನೇ ಶತಮಾನದ, ’ಸೇಂಟ್ ವರ್ಜಿನ್ ಮೇರಿ ಚರ್ಚ್ ನ್ನು’, ಲಂಡನ್ ನಲ್ಲಿ ಮರು-ಸ್ಥಾಪಿಸಿದರು. ರೆನ್ ಗ್ರೇಟ್ ಬ್ರಿಟನ್ ನಲ್ಲಿ ಸುಮಾರು ೫೩ ಚರ್ಚ್ ಗಳನ್ನು ನಿರ್ಮಿಸಿ ಎಲ್ಲರ ಪ್ರಸಂಶೆಗೆಪಾತ್ರರಾಗಿದ್ದರು.

ಗುಲಾಬಿ ಟಾಕೀಸ್!!!

ಹಲವಾರು ದಿನಗಳ ನಂತರ ಒಂದು ಉತ್ತಮ ಚಿತ್ರ ನೋಡಿದ ಖುಷಿ ಇವತ್ತು. ನಾವು ಚಿಕ್ಕಂದಿನಲ್ಲಿದ್ದಾಗ ನೋಡಿದ, ಮಾಡಿದ, ಕೇಳಿದ್ದನ್ನು ತೆರೆಯ ಮೇಲೆ ನೋಡಿ ಮನಸ್ಸು ತುಂಬಿ ಬಂತು. ನಮ್ಮ ಬಾಲ್ಯದ ನೆನಪನ್ನು ಮೆಲಕು ಹಾಕುವಂತೆ ಮಾಡಿದೆ ಗಿರೀಶ್ ಕಾಸರವಳ್ಳಿಯವರಿಗೆ ಅನಂತ ಧನ್ಯವಾದಗಳು. ಮದ್ಯಂತರದವರೆಗೂ ತಿಳಿಹಾಸ್ಯ ಬೆರೆತ ಸಂಭಾಷಣೆ ಮನಸ್ಸಿಗೆ ಮುದ ಕೊಟ್ಟಿತು.

'ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ '

ಕಡೆಯ ನಿಲ್ದಾಣಕ್ಕಿಂತ ಹಿಂದಿನ ಸ್ಟಾಪ್ನಲ್ಲಿ ಬಸ್ಸಿಗಾಗಿ ಬಹಳ ಹೊತ್ತಿನಿಂದ ನಿಂತಿದ್ದೆ. ದೂರದಲ್ಲೊಂದು ವೋಲ್ವೋ ಬಸ್ ಕಾಣಿಸಿಕೊಂಡಿತು. ತಡವಾಗುತ್ತಿರುವುದರಿಂದ ಬೇಗ ಹೋಗೇಬಿಡೋಣ ಎಂದುಕೊಳ್ಳುತ್ತಾ ಇತರ ಕೆಲವರೊಂದಿಗೆ ನಾನೂ ಕೈ ತೋರಿಸಿದೆ. ಬಸ್ಸಿನಲ್ಲಿದ್ದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಬಸ್ ರೊಂಯ್ಯನೆ ಸಾಗಿ ಹೋದದ್ದನ್ನು ನೋಡಿದ ನನ್ನ ಜೊತೆಯಲ್ಲಿದ್ದವರು "ಒಂದು ರುಪಾಯಿ ವ್ಯಾಪಾರ ಮಾಡಿ ಇವರಿಗೆ ಸಾಕಾಗಿ ಹೋಗಿದೆ ಅನ್ಸುತ್ತೆ " ಎಂದರು.
ಈ ಒಂದು ರುಪಾಯಿ ವ್ಯಾಪಾರದ ಬಗ್ಗೆ ಯೋಚಿಸುತ್ತಾ ಕೆಲವು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದವು.

ಬಾರಾ ಗೆಳೆಯಾ...

ಆ ಬಾನ ನೀಲಂಗಳದ ಕೆಳಗಾss
ಬಣ್ಣ ಬಣ್ಣದಾ ಮೋಡಗಳ ಬಳಗಾss
ಓಡುತ್ತಿವೆ ಓಡುತ್ತಿವೆ
ಒಂದೊಂದು ಒಂದೊಂದರ ಒಳಗಾss//ಪ//

ಹೇ ಮೋಡ..ಇಲ್ಲಿ ನೋಡ
ನಾವಾಗುವಾ ಬಾರ ಗೆಳೆಯಾss

ನಿನ್ನ ಕರೆತಂದು ನಮ್ಮಟ್ಟಿಗೆ
ಹಸಿರಾಗಿಸ್ಕೊಳ್ತೀನಿ ಇಳೆಯಾsss

ನಮ್ಮಪ್ಪ ಸೂರ್ಯಪ್ಪ
ನಮ್ಮವ್ವ ಭೂಮವ್ವ
ನಮ್ಮಾವ ಚಂದ್ರಪ್ಪ
ಅವನ ಮಗಳು ತಾರೆsss

ನಿನ್ನ ಕರೆತಂದು ನಮ್ಮಟ್ಟಿಗೆ

ಅಮೆರಿಕದಲ್ಲಿ ಕ್ರಿಶ್ಚಿಯನ್ ಮತೀಯ ರಾಜಕಾರಣ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 19, 2008 ರ ಸಂಚಿಕೆಯಲ್ಲಿನ ಲೇಖನ.)

ಅಮೆರಿಕ ಎಂದ ತಕ್ಷಣ ಎಷ್ಟೋ ಸಲ ಅದೊಂದು ಅಂಕೆಶಂಕೆಯಿಲ್ಲದ ಮಹಾನ್ ಲಿಬರಲ್ ದೇಶ ಎನ್ನುವ ಕಲ್ಪನೆ ತಾನೆತಾನಾಗಿ ಬಂದುಬಿಡುತ್ತದೆ. ವಿಚ್ಚೇದನಗಳು, ಮರುಮದುವೆಗಳು, half-sisterಗಳು, hlaf-brotherಗಳು, ಸಿಂಗಲ್ ಮಾಮ್‌ಗಳು, ಸಮಾನತೆಗೆ ಹೋರಾಡುವ ಜನರು, ಪ್ರಜಾಪ್ರಭುತ್ವವಾದಿಗಳು; ಇವೆಲ್ಲ ಅಮೆರಿಕದ ಸಮಾಜದ ಬಗ್ಗೆ ನಮ್ಮಂತಹ ವಿದೇಶಿಯರಲ್ಲಿ ತಕ್ಷಣ ಮೂಡುವ ಚಿತ್ರಗಳು. ಆದರೆ, ಈ ಮುಂದುವರೆದ ದೇಶದಲ್ಲಿ ಕೋಮುವಾದಂತಹ ಸಂಕುಚಿತತೆ ಯಾವ ಹಂತದಲ್ಲಿ ಜೀವಂತವಾಗಿದೆ ಎನ್ನುವುದನ್ನು ನಮ್ಮ ಓದುಗರಿಗೆ ಪರಿಚಯಿಸಲು ಈ ಲೇಖನ.

ಈ ದೇಶವನ್ನು, ವಿಶೇಷವಾಗಿ ಇಲ್ಲಿಯ ಅಧ್ಯಕ್ಷೀಯ ಚುನಾವಣೆಗಳನ್ನು ಗಮನಿಸಿದಾಗ ಈ ದೇಶದ ಕಠೋರ ಸಂಪ್ರದಾಯವಾದ ಮತ್ತು ಕ್ರಿಶ್ಚಿಯನ್ ಬಲಪಂಥೀಯತೆ ಎದ್ದು ಕಾಣಿಸುವ ಅಂಶ. ಈ ಸಲದ ಅಧ್ಯಕ್ಷೀಯ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಹಿನ್ನೆಲೆ ಮತ್ತು ಇಲ್ಲಿಯ ಜನ ಮತ್ತು ಮೀಡಿಯ ಅದಕ್ಕೆ ಸ್ಪಂದಿಸುತ್ತಿರುವ ರೀತಿಯನ್ನೆ ನೋಡಿ. ಕ್ರಿಶ್ಚಿಯನ್ supremacy ಗೆ ತೊಂದರೆಯಾಗದಂತಹ ಇಲ್ಲಿನ ಬಹುಸಂಖ್ಯಾತ ಜನತೆಯ ಬಯಕೆಯನ್ನು ಅದು ತೋರಿಸುತ್ತದೆ.

ಬರಾಕ್ ಒಬಾಮನ ತಂದೆ ಮುಸ್ಲಿಂ

ಕಲ್ಲೇಶ್ವರ ದೇವಾಲಯ - ಬಾಗಳಿ

ಬಾಗಳಿಯಲ್ಲಿರುವ ಕಲ್ಲೇಶ್ವರ ದೇವಾಲಯವನ್ನು ಕರ್ನಾಟಕದ ಖಜುರಾಹೊ ಎನ್ನುತ್ತಾರೆ. ಕೆರೆಯ ಬದಿಯಲ್ಲಿರುವ ದೇವಾಲಯವನ್ನು ನವೀಕರಿಸಿ ಪುರಾತತ್ವ ಇಲಾಖೆ ಪ್ರಶಂಸನೀಯ ಕೆಲಸ ಮಾಡಿದೆ. ದೇವಾಲಯದ ಗರ್ಭಗುಡಿ ರಾಷ್ಟ್ರಕೂಟರ ಶೈಲಿಯಲ್ಲಿದೆ. ನವರಂಗ ಚಾಳುಕ್ಯ ಶೈಲಿಯಲ್ಲಿದೆ. ಮುಖಮಂಟಪ/ಸುಖನಾಸಿ ಹೊಯ್ಸಳ ಶೈಲಿಯಲ್ಲಿದೆ. ಕಡೆಯದಾಗಿ ದೇವಾಲಯದ ಗೋಪುರ ವಿಜಯನಗರ ಶೈಲಿಯಲ್ಲಿದೆ. ನಾಲ್ಕು ಶೈಲಿಗಳ ಮಿಲನ ಬೇರೆಲ್ಲಾದರೂ ಕಾಣಸಿಕ್ಕೀತೆ?

ಪೂರ್ವಾಭಿಮುಖವಾಗಿರುವ ಈ ಏಕಕೂಟ ದೇವಾಲಯವನ್ನು ಇಸವಿ ೧೧೧೮ರಲ್ಲಿ ಚಾಲುಕ್ಯ ದೊರೆ ವಿಕ್ರಮಾದಿತ್ಯನು ನಿರ್ಮಿಸಿದನೆಂದು ಶಾಸನಗಳಲ್ಲಿ ತಿಳಿಸಲಾಗಿದೆ. ಇಲ್ಲಿ ಸಿಕ್ಕಿರುವ ೧೬ ಶಾಸನಗಳಲ್ಲಿ ೧೨ ಚಾಲುಕ್ಯ ದೊರೆ ೬ನೇ ವಿಕ್ರಮಾದಿತ್ಯನ ಕಾಲದ್ದಾಗಿವೆ. ಬಾಗಳಿ ಊರಿನಲ್ಲಿ ಸುಂದರ ವೀರಗಲ್ಲುಗಳೂ ದೊರೆತಿವೆ. ಗರ್ಭಗುಡಿಯಲ್ಲಿರುವ ಕಲ್ಲೇಶ್ವರನ ಮೇಲೆ ಯುಗಾದಿಯ ಶುಭ ದಿನದಂದು ಸೂರ್ಯನ ಕಿರಣಗಳು ಬೀಳುತ್ತವಂತೆ. ಗರ್ಭಗುಡಿಯ ಮೇಲೆ ಗೋಪುರವಿದ್ದರೂ ಯುಗಾದಿಯ ದಿನದಂದು ಮಾತ್ರ ಸೂರ್ಯನ ಕಿರಣಗಳು ಹೇಗೆ ಒಳಗೆ ತೂರಿ ಬರುತ್ತವೆಂದು ಕಾರಣವನ್ನು ಕಂಡು ಹಿಡಿಯಲು ಇದುವರೆಗೆ ಆಗಿಲ್ಲವಂತೆ. ಆದರೆ ಇದನ್ನು ವೀಕ್ಷಿಸಲು ಯುಗಾದಿಯಂದು ಬಹಳಷ್ತು ಜನರು ಇಲ್ಲಿ ಸೇರುತ್ತಾರೆ.

ಮಿಸ್ಸೂರಿರಾಜ್ಯದ, ವೆಸ್ಟ್ ಮಿನ್ಸ್ಟರ್ ಕಾಲೇಜ್, ಫುಲ್ಟನ್ !

೧೮೫೧ ರಲ್ಲಿ ಮಿಸ್ಸೂರಿರಾಜ್ಯದ ವಿಶ್ವವಿದ್ಯಾಲಯ "ಫುಲ್ಟನ್ ವಿಶ್ವವಿದ್ಯಾಲಯದ ಹೆಸರನ್ನು ಪಡೆಯಿತು. ನಂತರ ಕಾಲಕ್ರಮೇಣ ಇದರ ಹೆಸರನ್ನು, ’ದ ವೆಸ್ಟ್ ಮಿನ್ಸ್ಟರ್ ಕಾಲೇಜ್,’ ಯೆಂದು ಬದಲಾಯಿಸಲಾಯಿತು. ಈ ಖಾಸಗೀ ವಿಶ್ವ ವಿದ್ಯಾಲಯದಲ್ಲಿ ಹುಡುಗ-ಹುಡುಗಿಯರಿಗೆ, ಸಹವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಸಕ್ಕೆವ್ಯವಸ್ಥೆಕಲ್ಪಿಸಿದ್ದಾರೆ.

ಮರಳ (ಲಾರದ) ಶಿಲ್ಪ!

ಪುಟ್ಟ ಗೆಳತಿಗೊಂದು ನುಡಿನಮನ

ಅವಳು ನನಗೇ ಅಂತ ತೆಗೆದುಕೊಟ್ಟ ಮೆಹಂದಿ ಇನ್ನೂ ಪ್ಯಾಕೆಟ್‌ನಲ್ಲಿ ಹಾಗೇ ಇದೆ. ಅವಳ ಕೆಂಚು ಕೂದಲ ನೋಡಿ ಅವತ್ತು ಕೇಳಿದ್ದೆ. ಕಲರ್‍ ಹಾಕಿಸ್ಕೊಂಡಿದ್ದೀಯೇನೇ ಅಂತ. ಇಲ್ಲಪ್ಪ. ನಮ್ಮ ಕಾಲೇಜ್ ಕ್ಯಾಂಪಸ್‌ಲ್ಲಿ ಮೆಹಂದಿ ಗಿಡಗಳಿವೆ. ಅದನ್ನ ಅರೆದು ಹಚ್ಚಿಕೊಂಡಿದ್ದೀನಷ್ಟೇ. ನಿಮಗೂ ಬೇಕಾ? ನೆಕ್ಸ್ಟ್ ಟೈಂ ತಂದ್ಕೊಡ್ತೀನಿ. ಅಂದ್ಲು. ಕೆಲವು ತಿಂಗಳು ಬಿಟ್ಟು ಮತ್ತೆ ಬೆಂಗಳೂರಿಗೆ ಬಂದ್ಲು. ಆಗ ಮರೆಯದೇ ಮೆಹಂದಿ ತಂದಿದ್ದಳು. ಆದರೆ ಎಲೆಯಲ್ಲ ಪ್ಯಾಕೆಟ್‌. ಮೆಹಂದಿ ಗಿಡದ ಎಲೆ ತರಕ್ ಆಗ್ಲಿಲ್ಲ. ಆದ್ರೆ ಈ ಪ್ಯಾಕೆಟ್‌ನಲ್ಲಿರೋ ಮೆಹಂದಿ ಚೆನ್ನಾಗಿರತ್ತೆ. ಹಚ್ಕೊಳ್ಳಿ ಅಂದ್ಲು. ಆದ್ರೆ ಆ ಪ್ಯಾಕೆಟ್ ಓಪನ್ ಮಾಡೋದಕ್ಯಾಕೋ ಮನಸ್ಸಾಗ್ತಿಲ್ಲ. ಪ್ಯಾಕೆಟ್ ಓಪನ್ ಮಾಡಿಬಿಟ್ಟರೆ ಅವಳಂತೆ ಆ ಮೆಹಂದಿಯ ಘಮವೂ ಹೊರಟುಹೋಗುತ್ತದೆಯೇನೋ ಎಂಬ ಅಳುಕಿನಿಂದಲೇ ಅದನ್ನ ಹಾಗೇ ಇಟ್ಟಿದ್ದೇನೆ. ಅದು ಇನ್ಮುಂದೇನೂ ಹಾಗೇ ಇರಲೇನೋ.

ನನ್ನ ಅಕ್ಕನ ಮಗಳು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾಸ್ಕಾಮ್ ಓದ್ತಿದಾಳೆ. ನಿಮ್ಮಲ್ಲಿ ಇಂಟರ್ನ್‌‌ಶಿಪ್ ಮಾಡ್ಬೇಕು ಅಂತಿದಾಳೆ. ಅವಳಿಗೆ ಒಂಚೂರು ಗೈಡ್ ಮಾಡಿ ಅಂದ್ರು. ನಾನು ಸರಿ ಚಿಂತೆಬಿಡಿ. ನಾನ್ ಕೇರ್‍ ತಗೊಳ್ತೀನಿ ಅಂತ ಅವಳ ಮಾವನಿಗೆ ಹೇಳಿ ಫೋನ್ ಇಟ್ಟೆ.

ಒಳ್ಳೆಯ ಹುಡುಗಿ ಶಿಲ್ಪಶ್ರೀ ಇನ್ನಿಲ್ಲದೆ ಹೋದಳು

ಆ ಹೆಣ್ಣುಮಗುವಿನ ಹೆಸರು ಶಿಲ್ಪಶ್ರೀ. ಮಗುವೇ ಆಕೆ. ಇನ್ನು ಹೆಸರಿಗೆ ಅನ್ವರ್ಥ ಅವಳು. ಆಕೆಯ ಗುಣ, ನಡೆ ನುಡಿ, ಸಂಸ್ಕಾರ...ಎಲ್ಲದರಲ್ಲು ಶಿಲ್ಪದಂತ ಸುಂದರ ಕೆತ್ತನೆಯಿತ್ತು.