ಕನ್ನಡ ರಸಪ್ರಶ್ನೆ:೯
ಕವಿ ಗೋಪಾಲಕೃಷ್ಣ ಅಡಿಗರನ್ನು ಕುರಿತು ಯು ಆರ್ ಅನಂತಮೂರ್ತಿಯವರು ಬರೆದಿರುವ ಸಾಹಿತ್ಯಕೃತಿಯ ಹೆಸರೇನು?
- Read more about ಕನ್ನಡ ರಸಪ್ರಶ್ನೆ:೯
- 2 comments
- Log in or register to post comments
ಕವಿ ಗೋಪಾಲಕೃಷ್ಣ ಅಡಿಗರನ್ನು ಕುರಿತು ಯು ಆರ್ ಅನಂತಮೂರ್ತಿಯವರು ಬರೆದಿರುವ ಸಾಹಿತ್ಯಕೃತಿಯ ಹೆಸರೇನು?
‘ಪರೀಕ್ಷೆ ಸಮಯ. ಉಳಿದೆಲ್ಲಾ ವಿಷಯ ಬಿಟ್ಟು ಓದಿನ ಕಡೆ ಗಮನವಿರಬೇಕು. ...’ ಕಳೆದ ವರ್ಷ ಇದೇ ತಿಂಗಳ ಶುರುವಿಗೆ ಮಕ್ಕಳಿಗೆ ಬುದ್ಧಿ ಹೇಳಿ ಕೆಲಸಕ್ಕೆ ಹೋದೆ. ಸಂಜೆ ಬರುವಾಗ ಮಕ್ಕಳು ಪುಸ್ತಕ ಬಿಡಿಸಿಟ್ಟು ಕೂತಿದ್ದರು. ಆದರೆ.. ನೋಟ ಮಾತ್ರ ಟಿ.ವಿ.ಯೊಳಗೆ. ಬೇರೆ ದಾರಿಯಿಲ್ಲದೇ ಮನೆಯಾಕೆಯನ್ನು ಒಪ್ಪಿಸಿ ಕೇಬಲ್ ಕನೆಕ್ಷನ್ ತೆಗೆಸಿದೆ.
ಮಾರನೇದಿನ ಸಂಜೆ ಬರುವಾಗ ಮಕ್ಕಳು ಕೋಣೆಯಲ್ಲಿ ಓದುತ್ತಾ ಇದ್ದರು.. ವೀಕ್, ಫಿಲ್ಮ್ ಫೇರ್! ನನಗೆ ಟೈಮ್ ಪಾಸ್ಗೆ ಓದಲೆಂದು ತಂದಿಟ್ಟಿದ್ದರೆ, ಅವರು ಓದಿ ಟೈಮ್ ವೇಸ್ಟ್ ಮಾಡುತ್ತಿದ್ದರು. ಅಂದಿನಿಂದ ಮ್ಯಾಗಜಿನ್ಗಳು ಬಂದ್.
ಈ ಅಜ್ಜಿ ನೋಡಿ ೧೨೫ ಏಡು ಆಗಿದ್ರೂ ಇನ್ನು ಅಕ್ಕಿಯಲ್ಲಿ ಕಲ್ಲು ಹುಡುಕ್ತಾರೆ, ಕೋಳಿಗೆ ಕಾಳು ಹಾಕ್ತಾರಂತೆ. ಹೆಂಗವ್ರೆ ನಮ್ಮ ಹಿರೀಕ್ರು ವಸಿ ನೋಡಿ, ಈಗಿನ ಹೊತ್ತಿನವ್ರಿಗೆ ಹನ್ನೆರಡು ಬೇನೆಗಳು ಇರುತ್ವೆ.:(
http://prajavani.net/Content/Mar242008/state2008032372804.asp
ರಾಗಿ ಮುದ್ದೇನ ನಾವು(ಕನ್ನಡಿಗರು) ಪೇಟೆಂಟ್ ಮಾಡ್ಕೊಬೇಕು. :)
ಡಿ.ವಿ. ಗುಂಡಪ್ಪನವರ ಮಗ ಪ್ರಸಿದ್ದ ಸಸ್ಯಶಾಸ್ತ್ರಜ್ಞ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ.
ಹಸಿರು ಹೊನ್ನು ಎಂಬ ಪ್ರಸಿದ್ಧ ಜೀವವಿಜ್ಞಾನ ಪುಸ್ತಕದ ರಚನಕಾರರಾದ ಅವರ ಹೆಸರು ಬಿ ಜಿ ಎಲ್ ಸ್ವಾಮಿ.
ಈ ಬಿ ಜಿ ಎಲ್ ಸ್ವಾಮಿಯವರ ಹೆಸರನ್ನು ವಿಸ್ತರಿಸಿರಿ.
ಪ್ರಿತಿಯ...
ಎತ್ತೆತ್ತೆಲೂ ನಸುಬೆಳಕು
ಹಿತವಾದ ಗಾಳಿ, ತಲೆದೂಗುತಿರುವಾ ಪೈರು,
ಅದುವೇ ; ನೀ ಬರುವೆ ಎಂಬ ಕಾರಣ.
ಹಬ್ಬದ ವಾತವರಣ ಮನೆಯಲಿ,
ಸುಮಧುರ ಕ್ಷಣಗಳ ನೀರಿಕ್ಷೆ ಮನದಲಿ
ಉಷೆಯು ಉದಯಿಸುವ ಮುನ್ನ
ಮೆಲ್ಲನೆ ಬಾಗಿಲ ತೆರೆದು
ತಾಸು-ತಾಸುಗಳವರೆಗೆ ತಂಗಿ ಬಿಡಿಸಿದ ರಂಗೋಲಿ,
ಅದರೊಂದಿಗೆ ತುಂಬಿದ ಬಗೆ-ಬಗೆಯ ರಂಗು
ಆಹಾ...! ಏನು ಹೇಳಲಿ ಎಂಥಾ ಬೆಡಗು..?
ನನ್ನ ಮೊದಲ ಪ್ರೇಮಿಗೆ
ಆ ಅಂಗಡಿಗೆ ನಾನು ಬರುವುದಕ್ಕೂ ನೀನು ನನ್ನ ನೋಡುವುದಕ್ಕೂ ಸರಿ ಹೋಯಿತು/
ನಾನು ನಿನ್ನನ್ನು ಗುರುತಿಸಿದೆ . ಆದರೆ ನೀನು ಇಲ್ಲ ಬಿಡು ನೀನೀಗ ನನ್ನನ್ನ ಗುರುತಿಸಲಾಗದಂತಹ ಪರಿಸ್ಥಿತಿಯಲ್ಲಿ ನಾನಿದ್ದೇನೆ .
ಯಾಕೊ ಒಮ್ಮೆ ಎಲ್ಲ ನೆನೆಪಾಗಿದೆ. ಹಾಗಾಗಿ ಈ ಪತ್ರ ಬರೆಯುತಿದ್ದೇನೆ
ನನಗೆ ಯಾರಿಲ್ಲ...!? ಯಾರಿಲ್ಲ..!?
ನನ್ನವರು ಎಂಬುವರು ಯಾರಿಲ್ಲ.
ನಾನು ನಾನೇ. ನನಗೆ ನಾನೇ...
ನನಗಾಗಿ ನಾನೇ...ನನ್ನವರು ಎಂಬುವರು ಯಾರಿಲ್ಲ!
ಹಗಲು ನಡೆದಷ್ಟು ಕಾಲ ನನ್ನೊಂದಿಗೇ
ನನ್ನ ಹಿಂದೆ, ಮುಂದೆ, ಕಾಲ ಅಡಿಗೆ ಬಿದ್ದು
ನನ್ನನ್ನೆ ಅನುಸರಿಸಿ ಕಾಲು ಕಾಲಿಗೆ ಸಿಗುತ್ತಾ
ಬರುತ್ತಿರುತ್ತದೆ ನನ್ನದೇ ನೆರಳು!
ಯಾರಿಲ್ಲವೆಂದು ಕೊರಗಬೇಡಾ ನಾನಿದ್ದೇನೆ
ಲಿನಕ್ಸ್ ಹಬ್ಬ ಬೆಂಗಳೂರಿನಲ್ಲಿ. ಆಚರಿಸೋಣವೆ?
ಹೌದು, ಎಲ್ಲರಿಗೂ ಲಿನಕ್ಸ್ ನ ಔತಣ ಬಡಿಸೋ ಆಸೆ. ಲಿನಕ್ಸ್ ಕನ್ನಡಿಗರಿಗೆ ಹತ್ತಿರ ಆಗಬೇಕು. ಅದನ್ನ ಉಪಯೋಗಿಸೋದು ಸುಲಭ ಆಗಬೇಕು, ನಮ್ಮಲ್ಲಿರೋ ಸಂದೇಹಗಳನ್ನ ನಿವಾರಿಸುವುದಾಗಬೇಕು, ಗ್ನೂ/ಲಿನಕ್ಸ್ ನ ಸ್ವಾತಂತ್ರ್ಯವನ್ನ ಎಲ್ಲರೂ ಮೆಲ್ಲಬೇಕು ಅನ್ನೋದು ನಮ್ಮ ಆಶಯ.
ಸಂಪದಿಗರಿಗೆ, ಲಿನಕ್ಸ್ ಆಸಕ್ತರಿಗೆ ಇಂತಹ ಅವಕಾಶವೊಂದನ್ನು ನೀಡುವ ಉತ್ಸಾಹ ನಮ್ಮದು. ಸಂಪದ ಫೌಂಡೇಶನ್ ವತಿಯಿಂದ ಈ ಕ್ರಾರ್ಯಕ್ರಮ - ಇಂಥದ್ದೊಂದು ಮೊದಲನೆಯದು! ನೀವೂ ಒಂದ್ ಕೈ ಸೇರಿಸ್ತೀರಲ್ಲ?
ಇದಕ್ಕಾಗಿ, ಮುಂದಿನ ತಿಂಗಳು "ಗ್ನೂ/ಲಿನಕ್ಸ್ ಇನ್ಸ್ಟಾಲ್ ಫೆಸ್ಟ್ " (Gnu/Linux Install Fest) ಮಾಡೋಣ ಅಂತ. ಈ ಆಲೋಚನೆಯ ಬಗ್ಗೆ ಚರ್ಚೆ ನಡೆಸುತ್ತ ಒಂದು ಕಾರ್ಯಕ್ರಮದ ರೂಪುರೇಷೆ ತಯಾರಿಸಿದ್ದೀವಿ. ಇನ್ಸ್ಟಾಲ್ ಫೆಸ್ಟ್ , ಲಿನಕ್ಸ್ ಇನ್ಸ್ಟಾಲ್ ಮಾಡೋದರ ಜೊತೆಗೆ , ಹೇಗೆ ಕನ್ನಡವನ್ನ ಲಿನಕ್ಸ್ ನಲ್ಲಿ ಬಳಸೋದು ಅನ್ನೋದನ್ನ ಪ್ರಮುಖವಾಗಿ ನಿಮ್ಮ ಮುಂದಿಡುವ ಪ್ರಯತ್ನ. ಈ ಕಾರ್ಯಕ್ರಮದ ರೂಪುರೇಷೆಗಳನ್ನ ಸಂಪದದ ವಿಕಿ ಪುಟದಲ್ಲಿ ಅಪ್ಡೇಟ್ ಮಾಡ್ತಾ ಇದ್ದೇವೆ. ನೀವೂ ಒಮ್ಮೆ ಕಣ್ಣು ಹಾಯಿಸಿ
ಇದನ್ನ ಕಾರ್ಯರೂಪಕ್ಕೆ ತರಲು ನಿಮ್ಮೆಲ್ಲರ (ಟೆಕಿ ಮಿತ್ರರ) ಸಹಾಯದ ಅವಶ್ಯವಿದೆ. ನೀವು ನಮ್ಮೊಂದಿಗೆ ಸ್ವಯಂಸೇವಕರಾಗಿ ಬಂದು ಲಿನಕ್ಸ್ ಬಗ್ಗೆ ಎಲ್ಲರಿಗೆ ತಿಳಿಸಿ ಕೊಡ್ತೀರಾ? ಹಾಗಿದ್ರೆ ವಿಕಿ ನಲ್ಲಿ ನಿಮ್ಮ ಹೆಸರು ನೋಂದಾಯಿಸಿ. ನಮ್ಮೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಿ. ಟೆಕ್ನಾಲಜಿಯನ್ನ ಆಫ್ ಲೈನ್ ಕೂಡ ಜನರ ಮುಂದಿಡುವ ಈ ಕೆಲಸಕ್ಕೆ ನಿಮ್ಮ ಹೆಗಲು ಸೇರಿಸಿ.
ನಿಮ್ಮ,
ಓಂ ಶಿವಪ್ರಕಾಶ್