ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೀನು ಹೀಗೆ ಮಾಡಬಾರದಿತ್ತು.............

ನೀನು ಹೀಗೆ ಮಾಡಬಾರದಿತ್ತು ಕಣೇ..................................,

ಹೌದು ಕಣೇ,ನೀನು ಹೀಗೆ ಮಾಡಬಾರದಿತ್ತು, ಕವನ। ’ ಕವನ ’, ನಾನೇ ಅಲ್ಲವೇ ,ನಿನಗೆ ಆ ಹೆಸರಿಟ್ಟುದು?। ಹೌದು, ನನ್ನ ಕವನವಾಗಿದ್ದೆ ನೀನು।ಎಲ್ಲೋ ಕುಳಿತ ಕವಿಯಲ್ಲಿ ಥಟ್ಟನೇ ಹುಟ್ಟುವ ಕವನದ೦ತೆ ನನ್ನಲ್ಲಿ ಸೇರಿದ್ದೇ ನೀನು।ಇಷ್ಟಕ್ಕೂ ನನಗೆ ನಿನ್ನ ನಿಜವಾದ ಹೆಸರೇ ಗೊತ್ತಿರಲಿಲ್ಲ। ಈಗಲೂ ಗೊತ್ತಿಲ್ಲ ಬಿಡು।

" ದಟ್ಸ್ ಕನ್ನಡ " ಇ-ಪತ್ರಿಕೆಯ ವ್ಯಂಗಚಿತ್ರಲೇಖಕ, ಅಮೃತ್, ಮಂಗಳೂರು, ಈಗ ಯಾಕ್ ಬರೀತಿಲ್ಲ ?

ಎಷ್ಟ್ ಸೊಗ್ಸಾದ್ ಹಾಸ್ಯಚಿತ್ರಗಳ್ನ ಕೊಡ್ತಿದ್ದ ಅಮೃತ್ ಎಲ್ಲಿ ಮಾಯಾಆಗಿದಾರೆ, ಯಾರ್ಗಾದ್ರುಗೆ ಗೊತ್ತೇನು. ಪ್ರತಿವಾರ್ದಲ್ಲಿ, ಚಲೊ ಚಿತ್ರಬರಿತಿದ್ರು. ಯಾಕ್ ಬರಿತಿಲ್ಲ. ತಿಳ್ಸಿ.

ಸ್ವಾಮಿ ಜಗದಾತ್ಮಾನಂದ, ’ ಬದುಕಲು ಕಲಿಯಿರಿ ’-ಪ್ರತಿಚಿಂತಕನನ್ನೂ ಕಾಡುವ ಗಹನವಾದ ಸಂಗತಿಗಳು !

ಸಾರಸಂಗ್ರಹ: ಡಾ| 'ಜೀವಿ' ಕುಲಕರ್ಣಿ.

ಇಂತಹ ಅತ್ಯುತ್ತಮ ಲೇಖನದ ಲಾಭವನ್ನು ಕನ್ನಡದ ಜನತೆ, ಪಡೆಯುವುದು ಅತ್ಯಾವಶ್ಯಕ. ’ಜೀವಿ’ ಯವರ ಕ್ಷಮೆಬೇಡಿ, ಅದನ್ನು ಇಲ್ಲಿ ಪುನಃ ಪ್ರಕಟಿಸಲು ಧೈರ್ಯಮಾಡಿದ್ದೇನೆ. ಇದು’ ದಟ್ಸ್ ಕನ್ನಡ ಇ-ಪತ್ರಿಕೆಯ ಕೊಡುಗೆ.

ಅಪ್ಪ/ಅಮ್ಮ/ಗಂಡನ ಗೋರಿಯಿಂದ ಗದ್ದುಗೆಯತ್ತ ಹೊರಡುವ ನಾಯಕರು, ನಾಯಕಿಯರು...

ಅಮೆರಿಕದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‍ನ ಹೆಂಡತಿಯೂ ಒಬ್ಬ ಸ್ಪರ್ಧಿ. ಈಕೆ ಒಬ್ಬ ಸ್ವಯಂಕೃಷಿ (self-made) ಹೆಣ್ಣುಮಗಳು ಎನ್ನುವುದರಲ್ಲಿ ಯಾವುದೆ ಸಂದೇಹವಿಲ್ಲ. ಈಕೆ ದೊಡ್ಡಮಟ್ಟದ ಈ ಚುನಾವಣೆಗೆ ನಿಂತಿರುವ ಸಂದರ್ಭದಲ್ಲಿ ಎದ್ದು ಕಾಣಿಸುವುದು ಬಿಲ್ ಕ್ಲಿಂಟನ್‌ನ low-profile. ಅಮೆರಿಕದ ಮಟ್ಟಿಗೆ ಹೆಂಡತಿ ಪರವಾದ ಬಿಲ್ ಕ್ಲಿಂಟನ್‌ನ ಚುನಾವಣಾ ಪ್ರಚಾರ low-profile ಅಲ್ಲದೆ ಇರಬಹುದು. ಅಮೆರಿಕನ್ನರು ಅದನ್ನು, oh, this is not low-profile, ಎನ್ನಬಹುದು. ಅದರೆ, ನಮ್ಮ ಭಾರತದ ರಾಜಕಾರಣದ ಹಿನ್ನೆಲೆಯಿಂದ ನೋಡಿದರೆ, ಇದು ಖಂಡಿತವಾಗಿಯೂ ultra low profile. ಇದೆ ಪರಿಸ್ಥಿತಿಯಲ್ಲಿ ನಮ್ಮ ರಾಜಕಾರಣಿಗಳು, "ನಮ್ಮ ವಂಶವನ್ನು ಆಶೀರ್ವದಿಸಿ," ಎಂಬ ಹೀನಾಯ ಮಾತುಗಳನ್ನು ಆಡುತ್ತ, "ನಮ್ಮ ವಂಶ ಸತ್ಯ-ನ್ಯಾಯ-ನಿಷ್ಠೆ-ಜನಸೇವೆಗೆ ಹೆಸರಾದುದು," ಎಂಬಂತಹ ಡೋಂಗಿ ಮಾತುಗಳನ್ನು ಉಸುರುತ್ತ, ತಮ್ಮ ಮಗ/ಮಗಳು/ಹೆಂಡತಿಯರನ್ನು ಗೆಲ್ಲಿಸಿಕೊಳ್ಳಲು ಕಂಡಕಂಡವರ ಕಾಲಿಗೆಲ್ಲ ಬೀಳುತ್ತಿರುತ್ತಾರೆ; ವೃದ್ಧಾಪ್ಯದಲ್ಲೂ.

ಮತ್ತೊಬ್ಬ ಸ್ಪರ್ಧಿ ಬರಾಕ್ ಒಬಾಮನ ಹೆಂಡತಿಯೂ ಚುನಾವಣಾ ಪ್ರಚಾರ ಮಾಡುತ್ತಿದ್ದಾಳೆ. ಅಂದರೆ, ಸಭೆಗಳನ್ನು ಉದ್ಧೇಶಿಸಿ ಮಾತನಾಡುತ್ತಿದ್ದಾಳೆ. ನಮ್ಮಲ್ಲಿ CM ಗಳ ಹೆಂಡತಿಯರೂ ಪ್ರಚಾರಕ್ಕೆ ಹೋಗುತ್ತಾರೆ; ಹೆಂಗಸರಿಂದ ಆರತಿ ಎತ್ತಿಸಿಕೊಳ್ಳುತ್ತಾರೆ. ತಟ್ಟೆಗೆ ಐದುನೂರರ ನೋಟು ಹಾಕುತ್ತಾರೆ. ನನ್ನ ಗಂಡ ಪ್ರತಿನಿಧಿಯಾಗಿ ಇದಿದು ಮಾಡುತ್ತಾನೆ ಎಂದು ಒಮ್ಮೆಯೂ ಮಾತನಾಡುವುದಿಲ್ಲ. ನನ್ನ ಗಂಡನ್ನು ಗೆಲ್ಲಿಸಿ ಎನ್ನುವುದಕ್ಕಿಂತ ಅವರ ಬಳಿ ಬೇರೆ ಮಾತೇ ಇರುವುದಿಲ್ಲ.

ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ನನ್ನ ಈ ವಾರದ ಅಂಕಣ ಲೇಖನ ಈ ಮೇಲಿನ ವಿಷಯಗಳ ಕುರಿತು ಮತ್ತು ಅಮೆರಿಕದ ರಿಪಬ್ಲಿಕನ್ ಪಕ್ಷದಿಂದ ಉಪ-ರಾಷ್ಟ್ರಪತಿ ಅಭ್ಯರ್ಥಿಯಾಗಿ ಕೆಲವರು ಬಾಬ್ಬಿ ಜಿಂದಾಲ್ ಹೆಸರನ್ನು ತೇಲಿಬಿಡುತ್ತಿರುವುದರ ಕುರಿತಾಗಿದೆ. ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/02/blog-post_13.html

ಅವಳ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ........

” !!!!!!!!................... "

ನಾನು ನಿಜಕ್ಕೂ ದಿಗ್ಬ್ರಾಂತನಾಗಿದ್ದೆ. ಗೆಳತಿ ನಿರ್ಮಲ ನನ್ನ ಬಳಿ ಬಂದು, "ಕಾವ್ಯ ನಿನ್ನನ್ನು ಇಷ್ಟಪಡುತ್ತಿದ್ದಾಳೆ, ಪ್ರೀತಿಸುತ್ತಿದ್ದಾಳೆ.." ಎಂದು

ಹೇಳಿದಾಗ ನನಗೆ ಮಾತೇ ಹೊರಡಲಿಲ್ಲ, ನಂಬಲೂ ಆಗಲಿಲ್ಲ, ಯಾವ ರೀತಿ ಪ್ರತಿಕ್ರಿಯಿಸ ಬೇಕೊ ಗೊತ್ತಾಗಲಿಲ್ಲ. ಎದೆ ಬಡಿತ ಹೆಚ್ಚಾಗಿತ್ತೋ

ಕಾವೇರಿ ನೀರಿಡಾರ್ ಯೋಜನೆ

ಈ ಯೋಜನೆಯ ಕರಡುಪ್ರತಿ ಸಿದ್ಧವಾಗುತ್ತಿದೆ.ಅದರ ಒಂದು ಝಲಕ್ ಇಲ್ಲಿದೆ.
ಜನಾಪ್ರಿಯ ಸರಕಾರ ಬಂದಾಗ ಈ ಯೋಜನೆ ಸುರುಮಾಡಲಾಗುವುದು.

FAQs :-

೧. ಏನಿದು ಈ ನೀರಿಡಾರ್ ಯೋಜನೆ ?
ಶ್ರೀಮಂತರ ಕಾರು, ಬೆಂಗಳೂರಿನಿಂದ ಮೈಸೂರಿಗೆ ವೇಗವಾಗಿ ಹೋಗಲು ಸುರು ಮಾಡಿದ,
‘ಕಾರಿ’ಡಾರ್‌ನಂತೆ, ಕೊಡಗಿನಿಂದ ನೀರು ಹೊಗೆನಕಲ್ ಮೂಲಕ ಚನ್ನೈಗೆ ವೇಗವಾಗಿ

ದೆವ್ವ..............ದೆವ್ವ....................!

ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ.ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ.ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ.ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ.ಸಮಯ ನೋಡಿದೆ.ಹನ್ನೆರಡುವರೆ.ನ

ಪುರಾಣಗಳು/ಉಪನಿಷತ್ ಗಳು.

ವೇದಗಳಲ್ಲಿ ನಾಲ್ಕು ವೇದಗಳು ಎಂದು ಕೇಳಿದ್ದೇನೆ.
ಮಹಾ ಪುರಾಣಗಳು ೧೮, ಉಪ ಪುರಾಣಗಳು ೧೮ ಎಂದೂ ಕೇಳಿದ್ದೇನೆ.
ರಾಮಾಯಣ, ಮಹಾಭಾರತಗಳು ಮಹಾ ಪುರಾಣಗಳೇ? ನಾ ಕೇಳಿರುವ ಕೆಲವು ಹೆಸರುಗಳೆಂದರೆ:
ವಿಷ್ಣು ಪುರಾಣ, ಗರುಡ ಪುರಾಣ, ಪದ್ಮ ಪುರಾಣ, ನರಸಿಂಹ ಪುರಾಣ ಇತ್ಯಾದಿ.
ಇವುಗಳಲ್ಲಿ ರಾಜಸ/ಸಾತ್ವಿಕ ಪುರಾಣಗಳೆಂದು ವಿಭಾಗಗಳಿವೆಯೇ?

ಯಾವುವು ೧೮ ಮಹಾ/ಉಪ ಪುರಾಣಗಳು?