ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

~ಶುಭಾಶಯಗಳು~

~ಶುಭಾಶಯಗಳು~

ಹೊಸ ವರುಷ...
ಹೊಸ ದಿನ...
ಹೊಸ ಚಿಗುರು...
ಹೊಸ ಕನಸು...
ಹೊಸ ಜೀವನ...
ಎಲ್ಲ ಹೊಸತನವನ್ನು ಮತ್ತೆ
ತರಲಿ ಈ ವರುಷ 2008...

----------------------------------------------------------"ನಿಮ್ಮ ಮನೆ ಮನ ಬೆಳಗಲಿ
ಬದುಕು ಹಸನಾಗಲಿ
ಹೊಸ ವರುಷದ ಹೊಸ
ಹರುಷದ ಹೊನಲು
ಅನುಗಾಲ ಉಕ್ಕಿ ಹರಿಯಲಿ"

(ವರ್ಷದ) ಕೊನೆಯ ಕೊಸರು

ಮೊಸರು ಕೊಂಡಾಗ ಕೊನೆಯಲ್ಲಿ ಕೊಸರು ಕೊಡೋ ರೂಢಿ ಇತ್ತು. ನಂದಿನಿ - ಆವಿನ್-ನೀಲ್ಗಿರೀಸ್ ಮೊದಲಾದ ಪ್ಯಾಕೆಟ್ ಹಾಲು ಮೊಸರುಗಳು ಬಂದು, ಕೊಸರು ಅನ್ನೋದು ಏನು ಅನ್ನೊದನ್ನೇ ಮರೆಯೋ ಹಾಗೆ ಮಾಡ್ಬಿಟ್ಟಿವೆ. ಈಚೀಚೆಗೆ, ಈ ಕೊಸರಿಗೆ ಅಡಿಟಿಪ್ಪಣಿ, ಅನ್ನೋ ಹೊಸ ಅರ್ಥ ಬಂದು ಸ್ವಲ್ಪ ಅದು ಕೆಲವೆಡೆಲ ನಲಿದಾಡ್ತಿದೆ ಅನ್ನಿ. ವರ್ಷದ ಕೊನೆಯ ಈ ದಿವಸ ಏನಾದ್ರೂ ಬರೀಬೇಕು ಅಂದ್ರೆ, ಸರಕು-ಸಮಯು ಎರಡೂ ಇರ್ಬೇಕಲ್ವ? ಇಲ್ದೇ ಇದ್ರೆ? ತೊಂದ್ರೆ ಏನಿಲ್ಲ. ಮಿಕ್ಕಿದ್-ಹಕ್ಕಿದ್ದೆಲ್ಲ ಅಕ್ಕಮ್ಮನ ಪಾಲು ಅನ್ನೋ ಗಾದೆ ಹಾಗೆ, ಏನಾದ್ರೂ ಉಳ್ದಿದೆಯಾ ನೋಡ್ಬೇಕು. ಅಷ್ಟೆ.

ಅಕ್ಕಮ್ಮ ಹಾಗಿರ್ಲಿ. ಈ ೨೦೦೭ ನೇ ವರ್ಷ ಮುಗಿಯೋ ಈ ದಿವಸ ಒಂದು ವಿಷಯ ಹೇಳ್ಬಿಡ್ತೀನಿ. ನಮ್ಮಲ್ಲಿ ಹಲವಾರು ಪಂಚಾಂಗಗಳಿವೆ (calendar). ಸೌರಮಾನ -ಚಾಂದ್ರಮಾನ-ಮುಸ್ಲಿಮ್ - ಚೈನೀಸ್ ಅಂತ. ಎಲ್ಲಾ ಪಂಚಾಂಗಗಳೂ ಆಕಾಶದ್ ಜೊತೆ ಒಂದಲ್ಲ ಒಂದ್ರೀತಿ ತಾಳೆ ಹಾಕ್ಬಿಟ್ಟೇ ಹೊಸ ವರ್ಷ ಶುರು ಮಾಡತ್ತ್ವೆ. ಆದ್ರೆ, ಈ ಜನವರಿ ಒಂದಕ್ಕೆ ಶುರುವಾಗೋ ಈ ಗ್ರಿಗೋರಿಯನ್ ಪಂಚಾಂಗ ಮಾತ್ರ, ಆ ತರಹ ಯಾವ ಕಟ್ಟೂ ಇಲ್ದೆ, ಸುಮ್ಮನೆ ಯಾವ್ದೋ ಒಂದು ದಿನದಿಂದ ಶುರುವಾಗಿಬಿಡತ್ತೆ ಹಾಳಾದ್ದು! ಇಲ್ದೇ ಇದ್ರೆ, ಹತ್ತನೆ ತಿಂಗ್ಳು ಅನ್ನೋ ಅರ್ಥ ಡಿಸೆಂಬರ್ ಅನ್ನೋ ಹೆಸರಲ್ಲೇ ಬರೋವಾಗ, ಅದು ಮುಗಿದ್ಮೇಲೆ ಬರೋ ಜನವರಿ ಮೊದಲ್ ತಿಂಗ್ಳಾಗಕ್ಕೆ ಹೇಗಾಗ್ತಿತ್ತು ಹೇಳಿ?

ಥಟ್ ಅಂತ ಹೇಳಿಯಲ್ಲಿ ‘ಆ ದಿನಗಳು ತಂಡ‘

ಹೊಸ ವರ್ಷದ ವಿಶೇಷ ಕಾರ್ಯಕ್ರಮವಾಗಿ ‘ಥಟ್ ಅಂತ ಹೇಳಿ‘ಯಲ್ಲಿ ‘ಆ ದಿನಗಳು‘ ಚಿತ್ರ ತಂಡದ ಸದಸ್ಯರು ಭಾಗವಹಿಸುತ್ತಿದ್ದಾರೆ.

ತಂಡಗಳು:

ಶರತ್ ಲೋಹಿತಾಶ್ವ ಮತ್ತು ಚೈತನ್ಯ

ಚೇತನ್ ಹಾಗೂ ಸುಮನಾ ಕಿತ್ಥೂರು

ಅಗ್ನಿ ಶ್ರೀಧರ್ ಹಾಗೂ ಸತ್ಯಾ

ಪ್ರಸಾರ: ೩೧.೧೨.೦೯ ; ರಾತ್ರಿ ೧೦.೦೦-೧೧.೦೦ ಗಂಟೆ

          ೦೧.೦೧.೦೮; ಬೆಳಿಗ್ಗೆ ೧೧.೦೦-೧೨.೦೦ ಗಂಟೆ

ನೀನು ಹೋದ ದೂರ ಅದೆಷ್ಠೊe...........

ನೆನಪಿದೆಯಾ..?? ನಮ್ಮ ಮನೇ ಮುಂದೇನೇ ನಿನ್ಮನೆ ಇತ್ತು. ಬೆಳಗಿನ ಕಿರಣ ನೊಡೊ ಮೊದ್ಲು
ನಿನ್ನ ನೊಡೊ ನನ್ನಾಸೆ ನನ್ಗಷ್ಠೆ ಅಲ್ದೇ ನಿನ್ಗೂ ಇತ್ತು. ಹೂವು ಹರಿಯೋ ಸೋಗುಹಾಕಿ, ಕೈಲಿ
ಹೊಪಾತ್ರೆ ಹಿಡ್ದು ಈ (ಸೋ)ಮಾರಿ ದರ್ಶನಕ್ಕೆ ಕಾದ ದಿನಗಳ್ನೆಲ್ಲಾ ಮರ್ತ್ಬಿಟ್ಯಾ. ನಾನೊ ಫುಲ್ ಡೀಸೆಂಟ್

ನನ್ನ ದೇಶ

ಇದು ಜಡ ಆಡಳಿತದ ಕ್ರೌರ್ಯ
ನಡೆಸಿ ಭ್ರಷ್ಟಾಚಾರದ ರಾಜಕೀಯ
ಹಚ್ಚಿ ಕೋಮು ಗಲಭೆಗಳ ಬತ್ತಿ
ಎಲ್ಲೆಡೆ ಜಾತಿ ಮತಭೇದಗಳ ಭಿತ್ತಿ

ರಾರಾಜಿಸುತಿಹ ಅಧಿಕಾರಶಾಹಿ
ವಿಜೃಂಭಿಸುತಿಹ ಬಂಡವಾಳಶಾಹಿ
ಹಗಲು ಧರೋಡೆ ಮಾಡುತಿಹರು
ಜನರು ಮೊಖ ಪ್ರೇಕ್ಷಕರಾಗಿಹರು

ಮೇಲಿರುವವರು ಮೇಲೇರುತಿಹರು
ಕೆಳಗಿರುವವರು ಕೆಲಜಾರುತಿಹರು
ಅಸಮತೋಲನ, ಅಸಮಾಧಾನ

ನಮ್ಮೂರ ಅಸಾಮಾನ್ಯ ಸಾಮಾನ್ಯರು

ನಮ್ಮೂರು ಅಂತ ಸುಮ್ಮನೆ ಹೆಸರು ಹೇಳದೆ ಬರೆದರೆ ನಿಮಗೆ ತಿಳಿಯದು. ನಮ್ಮೂರು ಪ್ರಕೃತಿಸೌಂದರ್ಯದ ತವರೂರು, ಮಲೆನಾಡಿನ ಹೃದಯ ಕವಿಪುಂಗವರು, ಕಲಾವಿದರು, ವಿಮರ್ಶಕರು ಹುಟ್ಟಿ ಪ್ರಸಿದ್ಧಗೊಳಿಸಿದ ತೀರ್ಥಹಳ್ಳಿ. ಇತ್ತ ಮಲೆನಾಡಿನ ಭೌಗೋಳಿಕತೆ, ಅತ್ತ ಹಳೆಮೈಸೂರು, ದಕ್ಷಿಣಕನ್ನಡಗಳ ಸಮ್ಮಿಶ್ರಣ ಭಾಷೆ, ಸಂಸ್ಕೃತಿ, ಊಟ ಉಡುಗೆ ಇರಸರಿಕೆ. ಮುಸಲ್ಮಾನರು, ಕ್ರೈಸ್ತರು, ಬಂಟರು, ಬ್ರಾಹ್ಮಣರು, ಸಾರಸ್ವತರು, ಒಕ್ಕಲಿಗರು, ಜೈನರು ಎಲ್ಲ ಸೇರಿ ನಿರ್ಮಿಸಿದ ಬಣ್ಣ ಬಣ್ಣದ ಊರು. ಮಳೆಗಾಲದಲ್ಲಿ ನೆನೆಯುತ್ತಾ, ಬೇಸಿಗೆಯಲ್ಲಿ ಒಣಗುತ್ತ ಅದು ಹೇಗೆ ಹತ್ತಿರ ಹತ್ತಿರ ಮೂವತ್ತು ವರ್ಷ ಕಳೆಯಿತು ಈ ಊರಲ್ಲಿ ಅಂತ ಬೆರಗಾಗುತ್ತದೆ ನಂಗೆ. ಸುತ್ತ ಇರುವ ಬೆಟ್ಟಗುಡ್ಡಗಳು ಹಾಸಿ ಹೊದ್ದ ಸೋಮಾರಿಗಳಂತಿವೆ. ಬೆಂಗಳೂರು ಮೈಸೂರಿನಿಂದ ಬರುವ ನಮ್ಮ ನೆಂಟರು, ಈ ಊರು ದಣಿದ ಮೈಮನಗಳಿಗೆ ವಿಶ್ರಾಂತಿ ಕೊಡೋಕ್ಕೆ ಬಹಳ ಚೆನ್ನಾಗಿದೆ ಅಂತಾರೆ. ಬಂದವರು ಕಾಫಿ ಕುಡಿದು ಹಾಸಿ ಮಲಗಿದರೆ ಮತ್ತೆ ಮೇಲೇಳುವುದು ಸೆಕೆಂಡ್ ಡೋಸ್ ಗೆ ಮಾತ್ರ. ಕಾಲ ನಿಂತ ಭಾಸ ನಿಮಗಾಗಬೇಕಾದರೆ ನಮ್ಮೂರಿಗೆ ಬನ್ನಿ.

ಮುಗಿದರೂ ಮುಗಿಯದ್ದು

ಈ ವರ್ಷ ಏನೆಲ್ಲಾ ಬರೆಯಬೇಕೆಂದುಕೊಂಡಿದ್ದೆ...
ಸ್ವಾರ್ಥದ ಒಳ್ಳೆತನ ಮತ್ತು ಅಗತ್ಯ. ಕನ್ನಡದ ಉಳಿವು ಬೇರೆಲ್ಲಾ ಸಂಗತಿಗಳ ಜತೆ ಬೆಸೆದುಕೊಂಡಿರುವುದು. ಕಳೆದ ದಶಮಾನದಲ್ಲಿ ಹಿಂದೂ ಮೂಲಭೂತವಾದಿತ್ವ ಎಷ್ಟೋ ಜನರಿಗೆ ತಮ್ಮ ನಿಲುವನ್ನು ಪರಿಶೀಲಿಸಿಕೊಳ್ಳಲು ಸಹಾಯ ಮಾಡಿದ್ದು. ಲೈಂಗಿಕತೆ ಮತ್ತು ಸಮಾನತೆಯ ನಡುವಿನ ಕೊಂಡಿ. ಹೀಗೆ ಪಟ್ಟಿ ತುಂಬಾ ಉದ್ದವಿದೆ. ಅವುಗಳಲ್ಲಿ ಕೆಲವನ್ನು ಬರೆದಿಟ್ಟು ತಿದ್ದಲು ಹೊತ್ತಾಗದೆ ಹಾಗೇ ಬಿಟ್ಟಿದ್ದೇನೆ.
ಇನ್ನು ನಾನು ಓದಿದ ಪುಸ್ತಕಗಳ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ, ನೋಡಿದ ಚಿತ್ರಗಳ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ, ಕಲಕಿದ ಘಟನೆಗಳ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ, ಇನ್ನೂ ಏನೇನೋ ಬರೆಯಬೇಕೆಂದುಕೊಂಡಿದ್ದೆ.
ಹಾಗೇ ನಾಕಾರು ಕತೆಗಳು, ಕಾದಂಬರಿ, ಚಿತ್ರಕತೆ ಎಲ್ಲ ನನ್ನ ಜತೆ ಇಡೀ ವರ್ಷ ಜಗಳ ಆಡಿವೆ. ಅವುಗಳಿಗೊಂದು ಇತ್ಯರ್ಥ ಕಾಣಿಸಬೇಕು ಅಂದುಕೊಂಡಿದ್ದೆ. ಆದರೆ ಅವುಗಳ ಜತೆ ಜಗಳ ಇನ್ನೂ ಮುಗಿದಿಲ್ಲ.
ಅಂದು ಕೊಂಡದ್ದು ನೂರಾದರೆ ಆಗಿದ್ದು ಒಂದಕ್ಕಿಂತ ಕಡಿಮೆ ಎಂದು ಮರುಗಿದರೆ ಏನು ಬಂತು? ನೂರಕ್ಕೆ ನೂರು ಆಗ ಮಾಡುವುದು ಹೇಗೆ ಎಂದು ಯೋಚಿಸುತ್ತಾ ಕುಳಿತಿದ್ದೇನೆ. ಹೊಸ ವರ್ಷ ಬರುತ್ತದೆ. ಮರೆತಿದ್ದ ಸಾಧ್ಯತೆಗಳನ್ನು ಮತ್ತೆ ನೆನಪಿಸುತ್ತದೆ,
ಶುಭದ ಆಶಯಕ್ಕಿಂತ ಆಶಯಗಳ ಸಫಲತೆ ಮೇಲು ಎಂದು ಕೂಡ...

ಪ್ರಗತಿಯ ರಥ

ವಿಶೇಷ ಆರ್ಥಿಕ ವಲಯ
ದೇಶದ ಪ್ರಗತಿಗೆ ಆಲಯ
ಈ ಅಸ್ತ್ರವ ಬಳಸಿ ರೈತರನು
ಸಜೀವ ದಹನ ಮಾಡುವರು

ಹಸಿರನು ಹಳಿಸಿ ರಕ್ತವ ಹರಿಸಿ
ಕಟ್ಟಡಗಳ ಕಾಡನು ಕಟ್ಟುವರು
ಬಡವರ ಬಾಳಗೆ ಕೊಲ್ಲಿಯನಿಟ್ಟು
ಹಲವರು ಸಿರಿಯಲಿ ಮೆರೆಯುವರು

ದೇಶಕೆ ಬೆನ್ನೆಲುಬು ಈತನು
ಕಾಲದಿ ಭೂಮಿಯ ಒಡೆಯನು
ಹಸಿರನು ಬೆಳೆಸಿ ಬದುಕುವನು
ಭೂಮಿಗೆ ಜೀವ ಬಿಡುವವನು

ಕತ್ತಲ ಕೂಪಕೆ ಬೀಳುವ ಮುನ್ನ