ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಿಕ್ಷಣಸ್ಥ ದಲಿತರ ಹಾಡಿ ಕಳಸನಕೊಪ್ಪಕ್ಕೆ ಬೇಕಿದೆ ಜಲಸಾಕ್ಷರತೆಯ ಪೂರ್ಣಪಾಠ

ಒಂದು ಮಾತು. ಕಳಸನಕೊಪ್ಪದ ಜನರ ಈ ಸೋಲಿನ ಕಥೆ ಇತರರಿಗೆ ಪಾಠವಾಗಲಿ. ಸುಧಾರಣೆಗೆ ನಾಂದಿ ಹಾಡಲಿ. ಇಂತಹ ಪರಿಸರ ಅಸ್ನೇಹಿ ಪ್ರಯೋಗಗಳು ನಿಲ್ಲಲಿ. ಪರ್ಯಾಯ ಪ್ರಯೋಗಗಳ ಚಿಂತನ-ಮಂಥನ ನಡೆಯಲಿ ಎಂಬ ಉದ್ದೇಶದಿಂದ ಈ ಲೇಖನ.
~.~.~.~.~.~

ಗಾಂಧೀಜಿಯ ಗ್ರಾಮ ಸ್ವರಾಜ್ಯ ನನಸಾಗಿ ಮತ್ತೆ ಕನಸಾಗುವತ್ತ ಸಾಗಿದ ಅಪರೂಪದ ಅಧೋಮುಖ ಬೆಳವಣಿಗೆ ನಿಮ್ಮ ಗಮನಕ್ಕೆ ಬಂದಿದೆಯೇ? ಕಳಸನಕೊಪ್ಪದ ಜನ ಸಕಾಲದಲ್ಲಿ ಜಲಸಾಕ್ಷರರು ಆಗದ್ದರಿಂದ ಈ ಅಧೋಮುಖ ಪ್ರಗತಿ ಕಾಣಿಸಿದೆ. ಇನ್ನಾದರೂ ಅವರು ‘ಜಲಯೋಧ’ ರು ಆಗಬೇಕಿದೆ.

‘ಕಳಸನಕೊಪ್ಪ’ ಗಾಂಧೀಜಿ ಕಂಡ ವಿಧಾಯಕ ಕಾರ್ಯಗಳ ಮಾದರಿ ಕ್ಷೇತ್ರ. ಗ್ರಾಮ ಸ್ವರಾಜ್ಯದ ಕಲ್ಪನೆ ಸಾಕಾರಗೊಳಿಸಿ ಉತ್ತರ ಕರ್ನಾಟಕ ಭಾಗದಲ್ಲೇ ‘ಕಲಶ’ಪ್ರಾಯ ಗ್ರಾಮ ಎನಿಸಿತ್ತು. ಗ್ರಾಮ ಭಾರತದಲ್ಲಿರುವ ಜನ ಆರ್ಥಿಕವಾಗಿ ಸ್ವಾವಲಂಬಿಗಳಾದರೆ ದೇಶದ ಅಭಿವೃದ್ಧಿ ಕಟ್ಟಿಟ್ಟದ್ದು ಎಂಬುದಕ್ಕೆ ತಾಜಾ ನಿದರ್ಶನವಾಗಿತ್ತು. ಇದು ೨೦೦೪-೦೫ನೇ ಸಾಲಿನ ಕಥೆ.

ರೇಷ್ಮೆ ಇಲಾಖೆಯ ತಾಂತ್ರಿಕ ಸಹಾಯ, ಕೃಷಿ ವಿಶ್ವವಿದ್ಯಾಲಯದ ವಿಜ್ನಾನಿಗಳ ಸಲಹೆ, ಸೂಚನೆಗಳು ಹಾಗು ಸ್ವಂತದ್ದೇ ಸಹಕಾರ ಸಂಘದಿಂದ ಲಭ್ಯವಿರುವ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಕ್ರೋಢೀಕರಿಸಿಕೊಂಡು ಇವರು ಸ್ವಾವಲಂಬಿ ಜೀವನ ನಡೆಸಿದಂಥವರು. ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿ ಡಿ.ಎಚ್.ಅಳಗುಂಡಗಿ ಅವರ ಮಾರ್ಗದರ್ಶನದಲ್ಲಿ ೩೫ ಕೊಳವೆ ಬಾವಿಗಳನ್ನು ಕೊರೆಯಿಸಿಕೊಂಡು ೬೦೦ ಎಕರೆ ನೀರಾವರಿ ಮಾಡಿಕೊಂಡವರು. ಅಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ರೇಷ್ಮೆ ಬೆಳೆದವರು. ಇವರಿಗೆ ದಶಕಗಳ ಕಾಲ ಇದೊಂದೇ ಉದ್ಯೋಗವಾಗಿತ್ತು. ಮಕ್ಕಳು ಮಹಿಳೆಯರು ಎಲ್ಲರೂ ಇದರಲ್ಲಿ ತೊಡಗಿಸಿಕೊಂಡಿದ್ದರು.

ನವ್ಯ, ನವೋದಯ, ಬಂಡಾಯ.....

ನವ್ಯ, ನವೋದಯ, ಬಂಡಾಯ ಇತ್ಯಾದಿ ಪದಗಳನ್ನು ಕೆಲವು ಲೇಖನಗಳಲ್ಲಿ ಬಳಸುತ್ತಿರುತ್ತಾರೆ. ಇವು ಸಾಹಿತ್ಯಗಳನ್ನು ವರ್ಗೀಕರಣಗೊಳಿಸುವ ವಿಧಗಳಿರಬಹುದು. ನವ್ಯ, ನವೋದಯ, ಬಂಡಾಯ ಸಾಹಿತ್ಯಗಳೆಂದರೇನು? ಈಗಿರುವ ಸಾಹಿತಿಗಳು ಯಾವ ವರ್ಗಕ್ಕೆ ಸೇರುತ್ತಾರೆ? ಗೊತ್ತಿದ್ದವರು ತಿಳಿಸಿ..

ಮರನ್, ನೆಲನ್, ಪೊಲನ್, ಕಡನ್, ಕೊಳನ್

ನಿಜವಾಗಿ ಮರ, ಹೊಲ (ಪೊಲ), ನೆಲ, ಕಡ ನಕಾರಾಂತಗಳು. ಹೞಗನ್ನಡದಲ್ಲಿ ಪದಾಂತವಾದ ನ್‍ ಮತ್ತು ಮ್‍ ಗಳಿಗೆ ಅನುಸ್ವಾರವನ್ನೆ ಬೞಸುತ್ತಿದ್ದಱಿಂದ ಈ ಪದಗಳೆಲ್ಲ ಮಕಾರಾಂತವಾಗಿ ಕೊನೆಗೆ ಮಕಾರ ಲೋಪವಾದುವು. ಮರನೇಱಿದಂ. ಪಾೞ್ನೆಲನೆನಗೆ. ಪೊಲನಂ, ಕೊಳನಂ, ನೋಡಿ: ಖಂಡುಗ ಉಣ್ಣೋರ ಮನೆಗೆ ಕಡನ(೦) ಯಾರು ಕೊಟ್ಟಾರು?

"ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."

"ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
"ನಾನು ಮೈಸೂರಿನಲ್ಲಿ ಓಡಾಡಿದ್ದೇನೆ..."

ಯಾವ ಬಳಕೆ ಸರಿ ತಪ್ಪು?

--ಶ್ರೀ

ಲೇಖನಗಳಿಗೆ ಆಹ್ವಾನ!

ಡಾ.ಸಿ.ಆರ್.ಚಂದ್ರಶೇಖರ್ ಅವರು ಪ್ರಮುಖ ವೈದ್ಯಕೀಯ ಲೇಖಕರು. ಮನೋಶಾಸ್ತ್ರಜ್ಞರು. ಕನ್ನಡದಲ್ಲಿ ೧೫೦ ವೈದ್ಯಕೀಯ ಪುಸ್ತಕಗಳನ್ನು ಬರೆದವರು. ಇದು ಭಾರತೀಯ ಭಾಷೆಗಳ ಮಟ್ಟಿಗೆ ಒಂದು ದಾಖಲೆಯೇ ಸರಿ.

ಮನಗೆಲ್ಲುವ , ಮನ ಮುಟ್ಟುವ " ಮೊಗ್ಗಿನ ಮನಸ್ಸು " ..!!!

ಮನಗೆಲ್ಲುವ , ಮನ ಮುಟ್ಟುವ  " ಮೊಗ್ಗಿನ ಮನಸ್ಸು "

ಮು೦ಗಾರು ಮಳೆ ಚಿತ್ರದ ನಿರ್ಮಾಪಕ " ಇ. ಕ್ರಿಷ್ಣಪ್ಪ "  ನಿರ್ಮಿಸಿದ ಎರಡನೇ ಚಿತ್ರ ಎ೦ಬ ಕಾರಣಕ್ಕೆ ಅಪಾರ ಕುತೂಹಲ ಮೂಡಿಸಿದ್ದು ಈ " ಮೊಗ್ಗಿನ ಮನಸ್ಸು ".

ನನ್ನಿ

ನನ್ನಿ (ನಾಮಪದ) [ತಮಿಳು: ನನ್ಱಿ, ನನ್ಱು ಮಲಯಾಳ, ತೆಲುಗು: ನನ್ನಿ]

೧. ಸಹಜವಾದುದು; ವಾಸ್ತವವಾದುದು; ಸತ್ಯ; ದಿಟ; ನಿಜ; ನಿಶ್ಚಯ.

ಕಳ್ಳಭಟ್ಟಿ

ಕುಡಿತದ ಬಗ್ಗೆ ತಿಳಿಯುವ (ಕುಡಿಯುವ ಅಲ್ಲ) ಕುತೂಹಲ ಇರುವವರಿಗೆ ನನಗೆ ತಿಳಿದಷ್ಟು ಮಟ್ಟಿಗೆ ಹೇಳುವ ಪ್ರಯತ್ನ ಇಲ್ಲಿ ಮಾಡುವೆ. ತಮಾಷೆಗೆ/ಫ್ರೆಂಡ್ಲೀ/ಸೋಷಿಯಲ್/ಫ್ರೀ/ಬೆಟ್/ಕಂಪನಿ/ಬಾಸ್‌ಗಾಗಿ..ಯಾವ ಕಾರಣಕ್ಕೂ ಕುಡಿಯಲು ಸುರುಮಾಡಬೇಡಿ. ಸುಳಿಯಂತೆ ಅದು ನಿಮ್ಮನ್ನು ಒಳ ಸೆಳೆದುಕೊಳ್ಳುವುದು.

ಆಟೋದ ಆಟೋಪ

ಇಂದು ಆಟೋಗಳು ಹಿಂಗೆಯಾಕ್ಮಾಡಾಕತ್ತಾವ? ಎಲ್ಲಾ ಆಟೋಗಳೂ ಬರೀ ಸುಮ್ಕಾ ಸುಮ್ಕಾ ಖಾಲಿ ಖಾಲಿನೇ ಓಡಾಕ ಹತ್ತಾವ. ಎಷ್ಟು ಕೈಮಾಡಿದರೂ ಕೇರ್ ಮಾಡದೇ ಹೋಗಾಗ ಹತ್ತವಂದ್ರೆ ಏನೋ ಮಜಕೂರು ಇರಬೇಕು.- ನಾನು ತಲೆ ಕೆರೆದುಕೊಂಡೆ. ತಲೆ ಕೆರದಕ್ಕೆ  ತಲ್ಯಾಗಿನ ಹೊಟ್ಟು ಕಿತ್ಗೋ ಬಂತು. ಥೂ ಇದರ!  ಅನ್ಕೋತ್ತ ಕೈ ಝಾಢಿಸಿದೆ.

ಮೂರನೇ ಕಣ್ಣು

ನಾವು ಸ್ನೇಹಿತರು ಹೇಗೆ ಮಾತನಾಡುತ್ತಿರುವಾಗ ಒಂದು ವಿಚಾರ ಬಂತು .. ಒಂದು ಹುಚ್ಚು ಪ್ರಶ್ನೆ...
"ದೇವರು ನಮಗೆ ಮತ್ತೊಂದು ಕಣ್ಣನ್ನು ವರವಾಗಿ ಕೊಟ್ಟರೆ ಅದು ಎಲ್ಲಿರಬೇಕು ಎಂದು ಕೇಳಿಕೊಳ್ಳುತ್ತೀರ?"

ನಾವೆಲ್ಲ ತೋರು ಬೆರಳು ಅಂತ ತೀರ್ಮಾನಕ್ಕೆ ಬಂದ್ವಿ..... ಯಾಕೇಂತ ಕೇಳಿದ್ರ?... ತೋರುಬೆರಳಲ್ಲಾದರೆ ಎಲ್ಲೇಲ್ಲ ನೋಡಬಹುದು!!!!!!!!!!!!!