ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇವನ ಕವನ

ಬರಿಬೇಕಂತ
ಹನಿಗವನ
ಬಾರಲಿ ಕುಂತ
ವನಾ

ಮಧಿರೆಯ ಪಾನ
ಕೊಳಲಿನ ಗಾನ
ಮತ್ತಿನ ಗಮ್ಮತ್ತು
ಮನ ಬಿಸಿಯಾಗಿತ್ತು

ಜೋಬಿಗೆ ಕತ್ತರಿ
ಮನೆಯಲಿ ಕಿರಿಕಿರಿ
ಮರೆಯಲಿ ಹ್ಯಾಂಗ ಇವನ
ಬರೆಯಲಿ ಹ್ಯಾಂಗ ಕವನ

ಫಾದರ್ ಸೆರ್ಗಿಯಸ್ ಅಧ್ಯಾಯ ಮೂರು

ಮೂರು


ಇತರರ ಪರವಾಗಿ ಮಾತೆ ಮೇರಿಯನ್ನು ಪ್ರಾರ್ಥಿಸುವ ಹಬ್ಬದ ದಿನ ಸ್ಟೆಪಾನ್ ಮಠಕ್ಕೆ ಸೇರಿಕೊಂಡ. ಆ ಮಠದ ಹಿರಿಯ ಸನ್ಯಾಸಿ ಹುಟ್ಟಿನಿಂದ ಉನ್ನತ ವರ್ಗಕ್ಕೆ ಸೇರಿದವನು, ವಿದ್ವಾಂಸ, ಲೇಖಕ ಮತ್ತು ಗುರುಸ್ಥಾನ*ದಲ್ಲಿದ್ದವನು. ವಲಾಛಿಯಾ* ದಿಂದ ಬಂದ ಸನ್ಯಾಸಿಗಳ ಪರಂಪರೆಗೆ ಸೇರಿದವನು. ಈ ಸನ್ಯಾಸಿಗಳು ಗುರುಗಳಿಗೆ ಅತೀವ ನಿಷ್ಠೆಯಿಂದ ಇದ್ದು ತಮ್ಮ ಗುರುಪರಂಪರೆಯನ್ನು ಸತತವಾಗಿ ಮುಂದುವರೆಸಿಕೊಂಡು ಬಂದವರಾಗಿದ್ದರು. ಈ ಮಠದ ಗುರುವು ಪಾಸ್ಸಿ ವೆಲಿಚ್ಕೊವ್ಸ್‌ಕಿಯ ಶಿಷ್ಯನಾದ ಲಿಯೊನಿಡ್‌ನ ಶಿಷ್ಯನಾದ ಮಾಕಾರಿಯಸ್‌ನ ಶಿಷ್ಯನಾದ, ಪ್ರಸಿದ್ಧ ಗುರು ಆಂಬ್ರೋಸನ ಶಿಷ್ಯನಾಗಿದ್ದ. ಈ ಅಬಾಟನಿಗೆ ಶರಣಾಗಿ ಸ್ಟೆಪಾನ್ ಅವನನ್ನು ತನ್ನ ಮಾರ್ಗದರ್ಶಕ ಗುರು ಎಂದು ಒಪ್ಪಿಕೊಂಡ.

ಮಠಕ್ಕೆ ಸೇರಿದ್ದರಿಂದ ತನ್ನ ಬದುಕು ಮಿಕ್ಕ ಲೌಕಿಕರಿಗಿಂತ ಮಿಗಿಲು ಎಂಬ ಭಾವ ಸ್ಟೆಪಾನ್ಸ್‌ಕಿಯಲ್ಲಿ ಮೂಡಿತ್ತು. ಕೈಗೆತ್ತಿಕೊಂಡ ಎಲ್ಲ ಕಾರ್ಯಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸಬೇಕೆಂಬ ಹಂಬಲ ಈಗ ಅಂತರಂಗದ ಮತ್ತು ಬಹಿರಂಗದ ಪರಿಪೂರ್ಣತೆಯನ್ನು ಸಾಧಿಸುವ ಛಲದ ರೂಪತಳೆದಿತ್ತು. ಅವನು ಸೈನಿಕನಾಗಿದ್ದಾಗ ಯಾರೂ ನನ್ನತ್ತ ಬೆಟ್ಟು ತೋರಿಸದಿದ್ದರೆ ಸಾಕು ಅಂದುಕೊಳ್ಳುವ ಅಧಿಕಾರಿಯಷ್ಟೇ ಆಗಿರಲಿಲ್ಲ. ಕರ್ತವ್ಯದ ಪರಿಧಿಯನ್ನು ವಿಸ್ತರಿಸಿಕೊಂಡು ಬೇರೆಯ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಾ ಇತರರಿಗೆ ಮಾದರಿಯಾಗಿದ್ದ ಹಾಗೆಯೇ ಈಗ ಪರಿಪೂರ್ಣ ಸನ್ಯಾಸಿಯಾಗಲು ಬಯಸಿದ. ಕಠಿಣ ದುಡಿಮೆ, ಚಾಪಲ್ಯಗಳ ನಿಯಂತ್ರಣ, ವಿಧೇಯತೆ, ವಿನಯಶೀಲತೆ ಮತ್ತು ಕಾರ್ಯಗಳಲ್ಲೂ ಆಲೋಚನೆಗಳಲ್ಲೂ ಪರಿಶುದ್ಧತೆಗಳನ್ನು ಸಾಧಿಸುವುದಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದ. ಅದರಲ್ಲೂ ವಿಧೇಯತೆ ಎಂಬ ಗುಣ, ಅಥವ ಸದ್ಗುಣ ಅವನಲ್ಲಿರದಿದ್ದರೆ ಮಠದ ಬದುಕು ಸಹ್ಯವೂ ಸುಲಭವೂ ಆಗುತ್ತಲೇ ಇರಲಿಲ್ಲ.

ನಿನ್ನ ಜೊತೆಗೆ

ಒಪ್ಪಿಸಿಕೋ ಎನ್ನ
ಹಳೆಯ ನೆನಪುಗಳ ದೂಡಿ
ಒಲವಿನಾಸರೆ ನೀಡಿ
ಬೆಳಕು ಕರಗುವ ಮುನ್ನ

ನೊಂದ ಮನವನು ತೊರೆದು
ಭಿನ್ನ, ಬಿಂಕಗಳ ತೊಳೆದು
ಚಂದ ಚಿತ್ತದಿ ಚೆಲುವೆ
ಮೊಗ ತೋರೆ ನನ್ನೊಲವೇ

ಜೊತೆ ಜೊತೆಗೆ ನಾ ನಡೆವೆ
ಭಾವ ಬೆಸುಗೆಯ ಬೀಸಿ
ಕಲ್ಲು ಮಣ್ಣುಗಳ ನಡುವೆ
ಕೈಯಿಡಿದು ಮುನ್ನೆಡಿಸಿ

ಇವತ್ತು ಏಡ್ಸ್ ದಿನ -( ಹೊಸ ಸುಧಾ ಮಯೂರ ಮತ್ತು ಕರ್ಮವೀರ ದೀಪಾವಳಿ ವಿಶೇಷಾಂಕ)

ಈ ವಾರದ ಸುಧಾದಲ್ಲಿ ಏಡ್ಸ್ ವಿರುದ್ಧ ಕಾಂಡಂ ಬಳಕೆಯ ಪ್ರಚಾರದ ದುಷ್ಪರಿಣಾಮ ಮತ್ತು "ಇನ್ನೂ ಕೆಲವು ಹೊಸ ವಿಚಾರ"ಗಳನ್ನು ಡಾ.ಛೆಬ್ಬಿ ತಿಳಿಸಿದ್ದಾರೆ .
ಎಲ್ಲರೂ ಓದಲೇಬೇಕು .

ಈ ತಿಂಗಳ ( ಡಿಸೆಂಬರ್ ೨೦೦೭) ಮಯೂರವು ಅನಂತಮೂರ್ತಿ ವಿಶೇಷಾಂಕ ವಾಗಿ ಬಂದಿದೆ . ಅನೇಕ ಲೇಖನಗಳಿವೆ.

ಫಾದರ್ ಸೆರ್ಗಿಯಸ್ ಅಧ್ಯಾಯ ಎರಡು

ಎರಡು
ಮದುವೆಗೆ ಹದಿನೈದು ದಿನ ಮುಂಚೆ ಸ್ಟೆಪಾನ್, ತ್ಸಾರ್ಸಕೊ ಸೆಲೊ ಎಂಬ ಊರಲ್ಲಿದ್ದ, ಹೆಣ್ಣಿನ ಮನೆಗೆ ಹೋಗಿದ್ದ. ಮೇ ತಿಂಗಳು. ಬಿಸಿಲು, ಶಖೆ. ಇಬ್ಬರೂ ತೋಟದಲ್ಲೆಲ್ಲಾ ಅಡ್ಡಾಡಿಕೊಂಡು ಬಂದು ದಟ್ಟ ಮರಗಳ ನೆರಳಿನಲ್ಲಿದ್ದ ಬೆಂಚಿನ ಮೇಲೆ ಕೂತಿದ್ದರು. ಕೌಂಟೆಸ್ ಮೇರಿ ಅವತ್ತು ಅಚ್ಚ ಬಿಳಿಯ ಇಂಡಿಯಾ ಮಸ್ಲಿನ್ ಬಟ್ಟೆ ತೊಟ್ಟಿದ್ದಳು. ಈಗ ತಲೆ ಬಗ್ಗಿಸಿಕೊಂಡು, ಆಗ ಒಂದಿಷ್ಟೇ ತಲೆ ಎತ್ತಿ, ಎಲ್ಲಿ ಯಾವ ಮಾತಿನಿಂದ ತನ್ನ ಯಾವ ಭಂಗಿಯಿಂದ ಅವಳ ಮೃದುಮನಸ್ಸಿಗೆ ನೋವಾಗುವುದೋ ದೇವತೆಯಂಥ ಅವಳ ಪರಿಶುದ್ಧತೆ ಮುಕ್ಕಾಗುವುದೋ ಎಂದು ತೀರ ಮೃದುವಾಗಿ, ತೀರ ಪ್ರೀತಿಯಿಂದ ಮಾತಾಡುತ್ತಿದ್ದ ಆಳೆತ್ತರದ ಸುಂದರ ಯುವಕನತ್ತ ಕುಡಿನೋಟ ಬೀರುತ್ತಾ ಮುಗ್ಧತೆ, ಪ್ರೀತಿಗಳ ಪ್ರತಿ ರೂಪದಂತೆ ಕಾಣುತ್ತಿದ್ದಳು.
ಸ್ಟೆಪಾನ್ ಸಾವಿರದ ಎಂಟುನೂರ ನಲವತ್ತರ ದಶಕದ ಯುವಕ. ಈಗ ಅಂಥವರು ಕಾಣುವುದೇ ಇಲ್ಲ. ಆ ಕಾಲದ ಯುವಕರು ಕಾಮದ ವಿಷಯದಲ್ಲಿ ತಮ್ಮ ಅಶುದ್ಧತೆಯನ್ನು ಒಪ್ಪಿಕೊಂಡರೂ ಅದರಲ್ಲೇನೂ ತಪ್ಪಿಲ್ಲವೆಂದೂ ಆದರೆ ತಾವು ಮದುವೆಯಾಗುವ ಹುಡುಗಿ ಮಾತ್ರ ದೈವಿಕವೆಂಬಷ್ಟು ಶುದ್ಧವಾಗಿ, ಆದರ್ಶ ಕನ್ಯೆಯಾಗಿ ಇರಬೇಕೆಂದೂ ಬಯಸುತ್ತಿದ್ದರು. ತಮ್ಮ ಸಾಮಾಜಿಕ ವರ್ಗಕ್ಕೆ ಸೇರಿದ ಅವಿವಾಹಿತ ಹುಡುಗಿಯರನ್ನು ಅಚ್ಚಕನ್ನೆಯರೆಂದೇ ಭಾವಿಸುತ್ತಿದ್ದರು. ಅದು ಸುಳ್ಳು ದೃಷ್ಟಿಕೋನವಾಗಿದ್ದರೂ, ಗಂಡಸರ ಸ್ವಚ್ಛಂದತೆ ಹಾನಿಕರವಾಗಿದ್ದರೂ ಹೆಂಗಸರ ಬಗ್ಗೆ ಇದ್ದ ಆ ಹಳೆಯ ದೃಷ್ಟಿ ಈಗಿನ ಯುವಕರು ಪ್ರತಿ ಹೆಣ್ಣೂ ಸಂಭೋಗವನ್ನು ಬಯಸುವ ಪ್ರಾಣಿ ಎಂದು ತಿಳಿದಿರುವುದಕ್ಕಿಂತ ಮೌಲಿಕವಾದದ್ದು ಎಂದೇ ತೋರುತ್ತದೆ. ಗಂಡಸರು ತಮ್ಮನ್ನು ಅರಾಧಿಸುತ್ತಾರೆಂದು ಗೊತ್ತಿದ್ದ ಹೆಂಗಸರು ಬಲುಮಟ್ಟಿಗೆ ದೇವತೆಯರಂತೆಯೇ ಇರುವುದಕ್ಕೆ ಪ್ರಯತ್ನಿಸುತ್ತಿದ್ದರು.

ಫಾದರ್ ಸೆರ್ಗಿಯಸ್ ಅಧ್ಯಾಯ ಒಂದು

[ಕಳೆದ ಮೂರು ದಶಕಗಳಲ್ಲಿ ನನ್ನನ್ನು ಆವರಿಸಿಕೊಂಡು ಬಹುವಾಗಿ ಕಾಡಿದ ಮೂರು ಕಥೆಗಳಲ್ಲಿ ಇದೂ ಒಂದು. ಇದರಲ್ಲಿ ಎಂಟು ಅಧ್ಯಾಯಗಳಿವೆ. ಸಾವಧಾನವಾಗಿ ಓದಿ. ಅಲ್ಲಲ್ಲಿ ಕೆಲವು ಬೆರಳಚ್ಚಿನ ತಪ್ಪುಗಳಿರಬಹುದು, ದಯವಿಟ್ಟು ತಿದ್ದಿಕೊಳ್ಳಿ. ಅಲ್ಲಲ್ಲಿ ಎದುರಾಗುವ ವಿಶೇಷ ಪದಗಳಿಗೆ ವಿವರಣೆಯನ್ನು * ಗುರುತಿನೊಂದಿಗೆ ಅಧ್ಯಾಯದ ಕೊನೆಯಲ್ಲಿ ಕೊಟ್ಟಿದ್ದೇನೆ.]
ಫಾದರ್ ಸೆರ್ಗಿಯಸ್
ಒಂದು
ಪ್ರಿನ್ಸ್ ಸ್ಟೆಪಾನ್ ಕಸಾಟ್ಸ್‌ಕಿ ಮಾಡಿದ್ದನ್ನು ಕಂಡು ಪೀಟರ್ಸ್‌ಬರ್ಗಿನ ಜನಕ್ಕೆಲ್ಲ ಆಶ್ಚರ್ಯವಾಗಿತ್ತು. ಅವನು ಸಾವಿರದ ಎಂಟುನೂರ ನಲವತ್ತರ ಸುಮಾರಿನಲ್ಲಿ ಕ್ಯುರಾಸ್ಸಿಯರ್ ಲೈಫ್‌ಗಾರ್ಡ್ಸ್‌ನಲ್ಲಿ ಅಫೀಸರನಾಗಿದ್ದ, ಸದ್ಯದಲ್ಲಿಯೇ ಚಕ್ರವರ್ತಿ ಮೊದಲನೆಯ ನಿಕೊಲಸ್‌ನ ಏಡ್‌ ಡಿ ಕ್ಯಾಂಪ್ ಆಗಿ ಭವ್ಯವಾದ ಭವಿಷ್ಯರೂಪಿಸಿಕೊಳ್ಳುತ್ತಾನೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಸ್ಟೆಪಾನ್ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟ; ಮಹಾರಾಣಿಯ ಆಪ್ತಸಖಿಯಾಗಿದ್ದ ಸುಂದರ ಯುವತಿಯೊಡನೆ ಇನ್ನೊಂದು ತಿಂಗಳಲ್ಲಿ ನಡೆಯಬೇಕೆಂದು ನಿಶ್ಚಯವಾಗಿದ್ದ ಮದುವೆಯನ್ನು ಮುರಿದುಕೊಂಡ; ತನಗಿದ್ದ ಚಿಕ್ಕ ಎಸ್ಟೇಟನ್ನು ಅಕ್ಕನಿಗೆ ಬರೆದುಕೊಟ್ಟು, ಮಠಕ್ಕೆ ಸೇರಿ ಸನ್ಯಾಸಿಯಾಗಿಬಿಟ್ಟಿದ್ದ. ಅವನ ವರ್ತನೆಗೆ ಇದ್ದ ಅಂತರಂಗದ ಕಾರಣಗಳು ಗೊತ್ತಿಲ್ಲದಿದ್ದವರಿಗೆ ಇದೆಲ್ಲ ಅಸಾಮಾನ್ಯ, ಅವ್ಯಾವಹಾರಿಕ ವರ್ತನೆಯಂತೆ ಕಂಡಿತ್ತು. ನಡೆದದ್ದೆಲ್ಲ ಅತ್ಯಂತ ಸಹಜವಾಗಿ ನಡೆಯಿತೆಂದೂ, ಹಾಗಲ್ಲದೆ ಬೇರೆ ರೀತಿಯಲ್ಲಿ ತಾನು ನಡೆದುಕೊಳ್ಳುವುದು ಸಾಧ್ಯವೇ ಇರಲಿಲ್ಲವೆಂದೂ ಸ್ಟೆಪಾನ್ ಕಸಾಟ್ಸ್‌ಕಿಗೆ ಅನಿಸಿತ್ತು.

ಟಿವಿ ಕಾರ್ಯಕ್ರಮಗಳು, ಜಗ್ಗೇಶ್ ಇತ್ಯಾದಿ....

ಚಂದನ ವಾಹಿನಿಯಲ್ಲಿ ಸುಮಾರು ೩ ವರ್ಷಗಳಿಂದ ಪ್ರತಿ ಭಾನುವಾರ ರಾತ್ರಿ ೧೦ ಘಂಟೆಗೆ ಪ್ರಸಾರವಾಗುತ್ತಿರುವ ’ಸತ್ಯ ದರ್ಶನ’ ಕಾರ್ಯಕ್ರಮವನ್ನು ವೀಕ್ಷಿಸಿದ್ದೀರಾ? ನಾನು ಈ ಕಾರ್ಯಕ್ರಮವನ್ನು