ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಧ್ಯಂತರ ಚುನಾವಣೆ ಬೇಕೆ?????????

ರಾಜ್ಯ ರಾಜಕೀಯ ಹಳಸುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಪಕ್ಷಕರು ಮರು ಚುನಾವಣೆಯ ತಯಾರಿಯಾಗಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಿಜೆಪಿ ಅನುಕಂಪ ನೆಪ ಹೂಡಿದ್ರೆ, ಜೆಡಿಎಸ್ ತಾವು ಮಾಡಿದ್ದೇ ಸರಿ ಎಂದು ಸಾಬೀತು ಪಡಿಸಲು ಹೊರಟಿದೆ. ಈ ಮಧ್ಯೆ ಕಾಂಗ್ರೆಸ್ ಏನೂ ಸಾಚಾವಲ್ಲ...

ಕೃಷ್ಣನ ಕೊಳಲಿನಾ ಕರೆ

ಭಾರತೀಯ ಸಂಗೀತ ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವುದು ತಿಳಿದ ವಿಷಯವೇ. ರಾಮಾಯಣದ ರಾವಣ ವೀಣೆ ನುಡಿಸುತ್ತಿದ್ದನೆಂದೂ, ಹನುಮಂತ ಗುಂಡಕ್ರಿಯ ರಾಗವನ್ನು ಹಾಡಿ ಕಲ್ಲು ಬಂಡೆಯನ್ನೇ ಕರಗಿಸಿದನೆಂಬುದು ಪ್ರತೀತಿ. ಅಲ್ಲದೇ, ಕುಶಲವರು ವೀಣೆಯನ್ನು ನುಡಿಸುತ್ತ, ರಾಮನ ಮುಂದೆ ರಾಮಾಯಣವನ್ನು ಹಾಡಿದರೆಂಬ ಸಂಗತಿ ರಾಮಾಯಣದ ಉತ್ತರಕಾಂಡದಲ್ಲಿದೆ. ಹಾಗಾಗಿ, ನಮ್ಮ ಸಂಗೀತದ ಆದಿಯನ್ನು ಕಡಿಮೆಯೆಂದರೆ ಎರಡುಸಾವಿರ ವರ್ಷಗಳ ಹಿಂದೆ ಎಂದಾದರೂ ಊಹಿಸಬೇಕಾಗುತ್ತೆ. ಏಕೆಂದರೆ, ವಾಲ್ಮೀಕಿರಾಮಾಯಣದ ಪ್ರಕ್ಷಿಪ್ತಭಾಗಗಳೂ (ಬಾಲಕಾಂಡ, ಉತ್ತರಕಾಂಡ) ಸುಮಾರು ಕ್ರಿಸ್ತನ ಕಾಲದ ಆಸುಪಾಸಿನವು ಎಂಬುದು ಗೊತ್ತಿರುವ ವಿಚಾರವೇ.

ಆದರೆ ಪುರಾಣ-ಪ್ರಸಿದ್ಧರಲ್ಲಿ ಸಂಗೀತಗಾರನೆಂದು ಜನಜನಿತವಾಗಿರುವುದು ಕೃಷ್ಣ. ಕೃಷ್ಣನ ಕೊಳಲು ವಾದನದ ಕೌಶಲ ಮಹಾಭಾರತದಲ್ಲಿ (ನನಗೆ ತಿಳಿದ ಮಟ್ಟ್ಟಿಗೆ) ಹೆಚ್ಚಾಗಿಲ್ಲವಾದರೂ, ನಂತರ ಬಂದ ಭಾಗವತ - ಗೀತಗೋವಿಂದದಿಂದ ಹಿಡಿದು ಕಳೆದ ಶತಮಾನದ ಗೋಕುಲನಿರ್ಗಮನ (ಪುತಿನ) ದ ವರೆಗೂ ಹಲವಾರು ಕವಿಗಳು ಕೃಷ್ಣನ ಕೊಳಲಿನ ಕರೆಯನ್ನು ಬಣ್ಣಿಸಿದ್ದಾರೆ.

ರಿಮೋಟ್ ಅರಣ್ಯೀಕರಣ

ನನಗೊಬ್ಬರು ಸ್ನೇಹಿತೆಯಿದ್ದಾಳೆ. ಅವಳ ಹೆಸರು ಶ್ರೀಮತಿ ರಶ್ಮಿ ರಾಜೇಶ್. ವಾಸ್ತವ್ಯ ಅಮೆರಿಕ. ನಾನು ನೋಡಿದ್ದು ಒಮ್ಮೆ ಮಾತ್ರ ಅವರ ಮದುವೆಯಲ್ಲಿ. ಅಂತರ್ಜಾಲದಲ್ಲಿ ನನಗೆ ಪರಿಚಯವಾಗಿ, ಅವರ ಮದುವೆಗೆ ನಾನು Photographer ಆಗಿ ಬರಬೇಕೆಂದು ಕೇಳಿಕೊಂಡಳು. ಹಾಗೆ ಅವರ ಮದುವೆಯ ಚಿತ್ರಗಳನ್ನು ತೆಗೆಯುವ ಭಾಗ್ಯ ನನ್ನದಾಯಿತು. ಇದಾಗಿ ಬಹುಶ: ೨ ವರ್ಷವಾಯಿತು.

ಜಗದಗಲ

 

ಸಿಡ್ನಿಯಲ್ಲಿ ಹುಲ್ಲು
ತರಿದು ಹಾಸಿದ ಕಾಂಕ್ರೀಟ್ ಅಂಗಳವನ್ನು
ಮುಚ್ಚಿಕೊಳ್ಳುವ ದರಲೆ ಗುಡಿಸುವಾಗ
ಮೂಲೆಯಲ್ಲಿ
ಕೊತ್ತಂಬರಿ ಸೊಪ್ಪಿನ ಕಂತೆ ಹಿಡಿದು
ಶಿಕಾಗೋದ ಏ.ಕೆ.ರಾಮಾನುಜಂ
"ಹಚ್ಚಗೆ" ನಗುತ್ತಾರಲ್ಲ!