ಸಫಾರಿಯಲ್ಲಿ ಕನ್ನಡ
ಕೆಲವು ತಿಂಗಳ ಹಿಂದೆ ಆಪಲ್ ಕಂಪೆನಿಯ ದೊರೆ ಸ್ಟೀವ್ ಜಾಬ್ಸ್ ಮೈಕ್ರೋಸಾಫ್ಟಿನ ವಿಂಡೋಸ್ ಆಪರೇಟಿಂಗ್ ಸಿಸ್ಟಮಿಗೆ ತಮ್ಮ "ಸಫಾರಿ" ಬ್ರೌಸರಿನ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದಾಗ ಹಲವರು ಹುಬ್ಬೇರಿಸಿದ್ದರು. ಮೈಕ್ರೊಸಾಫ್ಟಿನ ವಿಂಡೋಸ್ ಬಳಸುವವರಲ್ಲೂ ಹಲವರು ಐ-ಪಾಡ್ ಮತ್ತು ಐ-ಟ್ಯೂನ್ಸ್ ಇಷ್ಟಪಡುವವರು ಇರುವುದರಿಂದ 'ಸಫಾರಿ'ಯೂ ವಿಂಡೋಸ್ ಬಳಸುವವರಲ್ಲಿ ತನ್ನ ನೆಲೆ ಕಂಡುಕೊಳ್ಳಬಹುದು ಎಂಬ ಉದ್ದೇಶದಿಂದ ಅದನ್ನು ಹೊರತಂದದ್ದಂತೆ. ಮ್ಯಾಕ್ ಬಳಸುವವರೂ ಹೆಚ್ಚಾಗಿ ಬಳಸದ ಬ್ರೌಸರ್ರು ಇದು ಎಂದು ಕೇಳಿಬರುತ್ತದಾದರೂ "ಸಫಾರಿ" ಬಹಳ ಚೆಂದವಾದ, ಹೆಚ್ಚು ತಲೆನೋವಿಲ್ಲದ ಬ್ರೌಸರ್ರು.
ಕೆಲ ತಿಂಗಳ ಹಿಂದೆ ಇದರ ಮೊದಲ ಬೀಟ ಆವೃತ್ತಿ ಹೊರಬಂದಾಗ ನನ್ನ ಲ್ಯಾಪ್ಟಾಪಿನಲ್ಲಿ ಪ್ರಯೋಗಾರ್ಥ ಹಾಕಿಕೊಂಡು ನೋಡಿದ್ದೆ. ಆಗ ಕನ್ನಡ ರೆಂಡರಿಂಗ್ ಮುರಿದು ಹೋಗಿತ್ತು. ಹೀಗಾಗಿದೆ ಎಂದು ಒಂದು 'ಬಗ್' ಫೈಲ್ ಮಾಡಿದ್ದೆ. ಈಗ ಸಫಾರಿಯ ಮೂರನೇ ಬೀಟ ಆವೃತ್ತಿ ಹೊರಬಂದಿದ್ದು ಅದರಲ್ಲಿ ಕನ್ನಡ (ಇಂಡಿಕ್) ರೆಂಡರಿಂಗ್ ಸರಿಪಡಿಸಿದ್ದಾರೆ! ಸ್ಕ್ರೀನ್ ಶಾಟ್ ಕೆಳಗಿದೆ ನೋಡಿ:
- Read more about ಸಫಾರಿಯಲ್ಲಿ ಕನ್ನಡ
- Log in or register to post comments
ಮೊಟ್ಟೆಯನ್ನು ಬೇಯಿಸುವ ಮೊಬೈಲ್!
ಮೊಬೈಲ್ ಫೋನ್ ಒಂದು ಅನಿವಾರ್ಯ ಶನಿ! (ನೆಸಸರಿ ಈವಿಲ್!). ಇವು ನಮ್ಮ ಆರೋಗ್ಯಕ್ಕೆ ಮಾರಕವೇ ಎಂಬ ಬಗ್ಗೆ ಜಾಗತಿಕ ಚರ್ಚೆ ನಡೆದಿದೆ. ಅವು ಮಾರಕ ಎಂದು ಕೆಲವು ಸಂಶೋಧನೆಗಳು ತಿಳಿಸಿದರೆ, ಉಳಿದವು ಮಾರಕವಲ್ಲ ಎನ್ನುತ್ತವೆ. ಈ ಬಗ್ಗೆ ತಿಳಿದವರಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ಈ ಬಗ್ಗೆ ನಾನು ಆಸಕ್ತ. ಇತ್ತೀಚೆಗೆ ನನ್ನ ಗಮನಕ್ಕೆ ಬಂದ ಒಂದು ಮಾಹಿತಿಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
- ಒಂದು ಕೋಳಿಮೊಟ್ಟೆಯನ್ನು ತೆಗೆದುಕೊಂಡರು.
- ಅದನ್ನು ಎರಡು ಮೊಬೈಲ್ ಫೋನ್ಗಳ ನಡುವೆ ಇಟ್ಟರು. ಆನ್ ಮಾಡಿದರು.
- ಮೊಬೈಲ್ ಫೋನ್ಗಳನ್ನು ೬೫ ನಿಮಿಷಗಳ ಕಾಲ ನಿರಂತರವಾಗಿ ಚಾಲೂವಿನಲ್ಲಿಟ್ಟರು.
* ಮೊದಲ ೧೫ ನಿಮಿಷ: ಮೊಟ್ಟೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
* ೨೫ ನಿಮಿಷ: ಮೊಟ್ಟೆ ಬೆಚ್ಚಗಾಯಿತು!
* ೪೫ ನಿಮಿಷ: ಮೊಟ್ಟೆ ಬಿಸಿಯಾಯಿತು!
* ೬೫ ನಿಮಿಷ: ಮೊಟ್ಟೆ ಪೂರ್ಣ ಬೇಯಿತು!!!
- Read more about ಮೊಟ್ಟೆಯನ್ನು ಬೇಯಿಸುವ ಮೊಬೈಲ್!
- 14 comments
- Log in or register to post comments
ನಾನೂ ಉಬುಂಟು ಹಾಕ್ಕೊಂಡೆ ( ಕನ್ನಡದಲ್ಲಿ ಕಂಪ್ಯುಟರ್ ಪಾಠ! )
ನಿನ್ನೆ ನಾನು ಹೇಳ್ದೆ , ಮೊದಲು ನಾನು ಉಬುಂಟುವಿನ ೬.೦೬ ಆವೃತ್ತಿಯನ್ನು ತರಿಸ್ಕೊಂಡಿದ್ದೆ ಅಂತ .
ಈ ನಡುವೆ ಕಚೇರಿಯಲ್ಲಿ ಖಾಲೀ ಬಿದ್ದಿದ್ದ ಒಂದು ಲ್ಯಾಪ್ ಟಾಪ್ ಅನ್ನು ಮನೆಗೆ ತಕೊಂಡು ಹೋದೆ.
ಕಂಪ್ಯೂಟರ್ ಗಳಲ್ಲಿ ಅನೇಕ ಪ್ರಕಾರಗಳು -
ದೊಡ್ಡ ದೊಡ್ಡ ಗಣಕಗಳು - ಸರ್ವರ್ ಗಳು .
- Read more about ನಾನೂ ಉಬುಂಟು ಹಾಕ್ಕೊಂಡೆ ( ಕನ್ನಡದಲ್ಲಿ ಕಂಪ್ಯುಟರ್ ಪಾಠ! )
- Log in or register to post comments
ನಾನು ನಾನಲ್ಲ
ಎಲ್ಲರಂತೆ ನಾನಲ್ಲ
ನೀವು ಅರಿತಂತೆ ನಾನಿಲ್ಲ
ನನ್ನ ನಾ ತಿಳಿದಿಲ್ಲ
ನಾನು ನಾನಲ್ಲ
ಪರರ ಪರದೆಗಳ ಪರಿವಿಲ್ಲ
ಸತತ ನಟನೆಯ ಬಲ್ಲ
ಊರ ಸುತ್ತಿಸಬಲ್ಲ
ಚತುರ ನಾನಲ್ಲ
ಯಾರಾದರೂ ಒಮ್ಮೊಮ್ಮೆ
ಜೊತೆಯಾಗಿ ನನಗೊಮ್ಮೆ
ತಿಳಿಸಿ ಹೇಳಲು ಬಯಸಿ
ಜಾರಿ ಹೋದರು ಹರಸಿ
- Read more about ನಾನು ನಾನಲ್ಲ
- 1 comment
- Log in or register to post comments
ನೆನಪು
ಬಿಚ್ಚಿಡುವೆ ಭಾವಗಳ
ಬಿಳಿಯ ಹಾಳೆಯ ಮೇಲೆ
ಮುಚ್ಚಿ ಹೋಗದಿರಲಿ
ನಾ ನಡೆದ ಹಾದಿಯಲಿ
ಒಲ್ಲದ ವಿಷಯಗಳ
ಮನದ ತಳಮಳಗಳ
ಜೊತೆ ಕಟ್ಟಿಟ್ಟು ಒಮ್ಮೆಗೆ
ಎಸೆದು ಬಿಡಲೇ ಅಲ್ಲಿಗೆ
ಸಾಗಿಹದು ಪಯಣ
ತೊರೆದು ಇರುವುದನೆಲ್ಲ
ನಿನ್ನ ನೆನಪುಗಳ ಹೊತ್ತು
ನಿಲ್ಲದೆ ಪ್ರತಿದಿನ, ಪ್ರತಿಕ್ಷಣ
- Read more about ನೆನಪು
- Log in or register to post comments
ಹತ್ತು ಹತ್ತು ಇಪ್ಪತ್ತು...
ನಾವು ಚಿಕ್ಕವರಾಗಿದ್ದಾಗ ಹೀಗೊಂದು ಹಾಡು ಕಲಿಸಿದ್ರು...
ಸರಿಯಾಗಿ ಜ್ಞಾಪಕ ಇಲ್ಲ. ತಪ್ಪಿದ್ದರೆ, ಸರಿಯಾದದ್ದನ್ನು ತಿಳಿಸಿ...
ಮಕ್ಕಳಿಗೆ ಕಲಿಸಲು ಉಪಯೋಗ ಆಗುತ್ತೆ...
--------~ *~ ---------
ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು
ತೋಟದಿ ಮಾವಿನ ಮರವಿತ್ತು
ಮೂವತ್ತು ಹತ್ತು ನಲವತ್ತು
ಮಾವಿನ ಮರದಲಿ ಕಾಯಿತ್ತು
- Read more about ಹತ್ತು ಹತ್ತು ಇಪ್ಪತ್ತು...
- 5 comments
- Log in or register to post comments
ಪುನರ್ ಸ್ಥಾಪಿಸಬೇಕಿದೆ ಮೌಲ್ಯಗಳನ್ನು...
ಇದೇ ನವೆಂಬರ್ 24-25 ರಂದು ಕರ್ನಾಟಕದ ದೂರದರ್ಶನಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಲೋಕಾಯುಕ್ತರು ಮಾಡಿದೊಂದು ದಾಳಿಯದೆ ಸುದ್ದಿ. "ಶ್ರೀನಿವಾಸ ರೆಡ್ಡಿ ಎಂಬ ಸರ್ಕಾರಿ ನೌಕರ ತನ್ನ ಆದಾಯಕ್ಕೂ ಮೀರಿದ ಆಸ್ತಿಯನ್ನು ಹೊಂದಿದ್ದಾರೆ," ಎಂದು ಲೋಕಾಯುಕ್ತರು ಬಹಿರಂಗ ಪಡಿಸಿದ ಆ ನೌಕರನ ಮತ್ತವರ ಹೆಂಡತಿಮಕ್ಕಳ ಆಸ್ತಿ ವಿವರ ಹೀಗಿದೆ:
. ಮನೆಯಲ್ಲೇ ಪತ್ತೆಯಾದ ನಗದು ಹಣ ರೂ 33.7 ಲಕ್ಷ
. ಬ್ಯಾಂಕ್ ಖಾತೆಗಳಲ್ಲಿರುವ ಹಣ 1 ಕೋಟಿ ಒಂಬತ್ತು ಲಕ್ಷ
. ಷೇರುಗಳ ಮೇಲೆ ಹೂಡಿಕೆ ರೂ 15 ಲಕ್ಷ
. ಕೊಟ್ಟಿರುವ ಮುಂಗಡ ರೂ 1.5 ಕೋಟಿ
. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಮೂರು 40x60 ನಿವೇಶನಗಳು
. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ 40x60 ಸೈಟುಗಳಲ್ಲಿರುವ 3 ಮನೆಗಳು
. ಆನೇಕಲ್ ತಾಲ್ಲೂಕಿನಲ್ಲಿ 14 ಎಕರೆ 33 ಗುಂಟೆ ಜಮೀನು
. ಹೆಗ್ಗಡದೇವನ ಕೋಟೆ ಯಲ್ಲಿ - 12 ಎಕರೆ ಕೃಷಿ ಜಮೀನು
. ಚಿನ್ನ 1.5 ಕೆ.ಜಿ.
. ಬೆಳ್ಳಿ 10 ಕೆ.ಜಿ.
. ಕಾರುಗಳು - 2
. ಇರುವ ಸಾಲ - 75 ಲಕ್ಷ
- Read more about ಪುನರ್ ಸ್ಥಾಪಿಸಬೇಕಿದೆ ಮೌಲ್ಯಗಳನ್ನು...
- 2 comments
- Log in or register to post comments
ಅನುಕಂಪದ ಅಲೆ
ಒಂದು ರಾಜ್ಯದಲ್ಲಿ ಬೋಳೇ ಜನರ ಪಕ್ಷ(ಬೋಜಪ)ವೊಂದಿದೆ.ಅದು ಪ್ರತಿ ಚುನಾವಣೆಗೆ ಒಂದಲ್ಲಾ ಒಂದು 'ಅಲೆ' ನಂಬಿ ಹೋಗುವುದು.ಈ ಸಲ ಗೆಲುವು ನಮ್ಮದೇ ಅಂದು ಬೀಗುವುದು.ಸೋತ ಮೇಲೆ ಮುಂದಿನ ಹೊಸ ಅಲೆಗಾಗಿ ಕಾಯುವುದು ಅದರ ಕೆಲಸ.ಈಸಲ 'ಅನುಕಂಪದ ಅಲೆ' ನಂಬಿ ಓಟು ಕೇಳಲು ಹೊರಟಿದೆ.ವಿರೋಧಿ ಪಕ್ಷವಾದ ಜನತಾ ದಾಳ(ಷರತ್ತು)ದ ನಾಯಕರ ಫೋಟೋ,ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುವುದ
- Read more about ಅನುಕಂಪದ ಅಲೆ
- 1 comment
- Log in or register to post comments
ಮೌನ ಅಭಿಮಾನಿ
ಸಂಪದದಲ್ಲಿ ಅನೇಕ ಉತ್ತಮ ಲೇಖನಗಳು,ಕವಿತೆ,ಬ್ಲಾಗ್... ಬರುತ್ತಿವೆ.ಆದರೆ ಹೆಚ್ಚಿನವರು(ನನ್ನನ್ನೂ ಸೇರಿಸಿ) ಅದನ್ನು ಮೆಚ್ಚಿ ಒಂದು ವಾಕ್ಯವಾದರೂ ಪ್ರತಿಕ್ರಿಯೆ ಬರೆಯುವುದಿಲ್ಲ.
'ವಕ್ರನಾದ ಶುಕ್ರ'ಹಂಸಾನಂದಿಯವರ ಲೇಖನ ಚೆನ್ನಾಗಿತ್ತು.'ಮೋಹನ ರಾಗದ ಬಗ್ಗೆಯೂ ಲೇಖನಗಳು ಮೋಹಕವಾಗಿತ್ತು.(ನನ್ನ ಮಗ ಸಂಗೀತ ಜೂನಿಯರ್ ಪರೀಕ್ಷೆಗೆ ಕಟ್ಟಿದಾಗ ಸಂಗೀತಕ್ಕೆ ಸಂಬಂಧಿಸಿದ ಕೆಲ ಪುಸ್ತಕಗಳನ್ನು ತಂದಿದ್ದೆ.ಅವುಗಳಲ್ಲಿ ಇಂಗ್ಲೀಷ್ ಗ್ರಾಮರ್ ಕಲಿಸಿದಂತೆ ಸಂಗೀತ ಪಾಠಗಳಿತ್ತು.)ಆ ದಿನದಿಂದ ಬೇರೆ ರಾಗಗಳ ಬಗ್ಗೆ ಅವರ ಲೇಖನ ಬರುವುದನ್ನು ಕಾಯುತ್ತಿದ್ದೇನೆ ಅಷ್ಟೆ. ಪ್ರತಿಕ್ರಿಯೆ ಬರೆಯುವ ಗೋಜಿಗೆ ಹೋಗಲಿಲ್ಲ.
ಪತ್ರಿಕೆ,ವಾರಪತ್ರಿಕೆ,ಟಿ.ವಿ.,ರೇಡಿಯೋ,ಸಿನೆಮಾದಲ್ಲೂ ಹಲವು ವಿಷಯಗಳು ಮೆಚ್ಚಿಗೆಯಾಗುತ್ತದೆ.ನಾವು ಒಂದು ಲೇಖನ/ಕಾರ್ಯಕ್ರಮವನ್ನು ಮೆಚ್ಚಿ ಪತ್ರ ಬರೆದಿದ್ದು ಇದೆಯೋ? ಈಗ ಪತ್ರಿಕೆ,ವಾರಪತ್ರಿಕೆಗಳಲ್ಲಿ ಕೊನೇ ಪುಟಕ್ಕೆ ಮಾತ್ರ ಸೀಮಿತವಾಗಿದ್ದ ಸಿನೆಮಾ ವಿಷಯ ಪ್ರತಿ ಪುಟಗಳನ್ನು ಕಬಳಿಸುತ್ತಾ ಮೊದಲ ಪುಟಕ್ಕೂ ಆಗಮಿಸಿದೆ.
'ಚಂದನ' ಬಿಟ್ಟು ಉಳಿದ ಟಿ.ವಿ.ಯವರಿಗಂತೂ ಸಂಗೀತ,ಸಾಹಿತ್ಯ,ಹಾಸ್ಯವೆಲ್ಲಾ ಸಿನಿಮಾಕ್ಕೆ ಸಂಬಂಧಿಸಿದ್ದು ಮಾತ್ರ. ಕ್ರಿಕೆಟ್,ಸಿನೆಮಾ,ರಾಜಕೀಯದ ಅಭಿಮಾನಿಗಳು ಮಾತ್ರ ಕಾರ್ಯತಹ ಅಭಿಮಾನ ತೋರಿಸುವರು.ನಮ್ಮದೇನಿದ್ದರೂ ಕೇವಲ ಮೌನಾಭಿಮಾನ.
ಮೆಚ್ಚುಗೆ ನುಡಿ ನಮ್ಮ ಹೃದಯದಲ್ಲಿರುತ್ತದೆ.ನಾಲಗೆಗೆ ಬರುವುದಿಲ್ಲ. ತಮ್ಮ ತಮ್ಮ ಮನೆಯಲ್ಲಿ ಇನ್ನೂ ಅಧ್ವಾನ.ಹೃದಯದಲ್ಲಿ ಮೆಚ್ಚುಗೆ,ಬಾಯಲ್ಲಿ ಕಿಡಿನುಡಿ .......
- Read more about ಮೌನ ಅಭಿಮಾನಿ
- 20 comments
- Log in or register to post comments
ಮಂಗಳೂರಿನಲ್ಲಿ ತುಳು
ಹಾಯ್,
ಕಳೆದ ಕೆಲವು ತಿಂಗಳ ಹಿಂದೆ ಹೌದು ನಮ್ದ್ ಮಂಗಳೂರು ಕನ್ನಡ ಏನ್ನೀವಗ ಎಂಬ ನನ್ನ ಬರಹಕ್ಕೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಪರಿಹಾಸ್ಯ ಮಾಡಿದ್ರೆ ಇನ್ನು ಕೆಲವರು ಸಲಹೆ ನೀಡಿದ್ರಿ. ಕೆಲವರು ಸಂತಾಪನೂ ಸೂಚಿಸಿದ್ರಿ. ಉಳಿದವರು ಓದಿ ಸುಮ್ಮಗಾದ್ರಿ. ನಿಮಗೆಲ್ಲರಿಗೂ ಅನಂತ ವಂದನೆಗಳು.
- Read more about ಮಂಗಳೂರಿನಲ್ಲಿ ತುಳು
- 5 comments
- Log in or register to post comments