ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟಾನ್‍ಫರ್ಡ್‍ನಲ್ಲಿ ಕೇಳಿ ಬಂದ ಕುಮಾರವ್ಯಾಸನ ಕಹಳೆ!

ನನಗೆ ತಿಳಿದ ಮಟ್ಟಿಗೆ ಕಾವ್ಯವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ. ಇದಕ್ಕೆ ಗಮಕ ವಾಚನ, ಭಾರತ ವಾಚನ ಎಂದೂ ಕರೆಯುವ ರೂಢಿ ಇದೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲೇ,ಲವಕುಶರು ರಾಮಾಯಣವನ್ನು ವೀಣೆ ನುಡಿಸುತ್ತಾ ಅದರೊಂದಿಗೆ ಹಾಡಿದರು ಎಂಬ ಉಲ್ಲೇಖವಿದೆ.

ಕಾಲಿಲ್ಲದೇ ಊರಿಗೆ ಕಾಲಾಗಿರುವ ಕಾಲೇಜು - ಬೇರ್ ಫುಟ್ ಕಾಲೇಜ್

ಸುಮಾರು ದಿನಗಳಿ೦ದಾ ಬರೆಯಬೇಕಿದ್ದಾ ಈ ಕತೆ ಬರೆಯದೆ ಮರೆತಿದ್ದೆ. ನಾನು ರಾಜಸ್ಥಾನಕ್ಕೆ ಭೇಟಿ ನೀಡಿದ್ದು , ಮರು ಭೂಮಿಯನ್ನು ನೋಡುವ ಆಸೆಯಿ೦ದ. ಮುತ್ತಿನ ಹಾರ ಚಿತ್ರದಲ್ಲಿ ನಾನು ಮೊದಲು ಮರು ಭೂಮಿಯನ್ನು ಕ೦ಡಿದ್ದೆ. ಒ೦ದು ರಾತ್ರಿ ಪೂರ್ತಿ ಮರು ಭೂಮಿಯಲ್ಲಿ ಏಕಾ೦ಗಿ ನಡೆದ ಕನಸ್ಸು ಕೂಡಾ ಕ೦ಡಿದ್ದೆ. ಆದರೆ ರಾಜಸ್ಥಾನಕ್ಕೆ ಹೋಗಿ ಬಸ್ಸ್ ನಲ್ಲಿ ಇಳಿದಾಗ ಅಲ್ಲಿಯ ತಾಪಕ್ಕೆ ಕ೦ಗಾಲಾದೆ. ಜಯ್ ಪುರ್ ನಿ೦ದಾ ಸುಮಾರು 200 km.. ಇರುವ ಅಜ್ಮೀರ್ಗೆ ಬಸ್ಸನಲ್ಲಿ ಹೊರಟೆ, ಶೆಖೆಯಿ೦ದಾ ಮೈಯೆಲ್ಲಾ ವಾಸನೆ ಹೊಡೆಯುತ್ತಿತ್ತು. ಅಲ್ಲಿ ಇದ್ದವ್ರ ಮುಖದ ಮೇಲೆ
ಕೂಡಾ ಬೆವರು... ಮಧ್ಯೆ ರಸ್ತೆಯಲ್ಲಿ ಸಿಕ್ಕಿದ ಲಸ್ಸಿ ಎಷ್ಟು ಕುಡಿದರೂ ತ೦ಪು ಬಾರಲಿಲ್ಲಾ. ನಾನು ಹೋಗಬೇಕಿದ್ದಾ ಸ್ಥಳ ಟಿಲೋನಿಯಾ. ಅಲ್ಲಿ ಬೇರ್ ಫುಟ್ ಕಾಲೇಜ್ ನ ನೋಡ ಬೇಕೆ೦ದು ಅಲ್ಲಿಗೆ ಹೊರಟಿದ್ದೆ.

ಈ ಕಾಲೇಜ್ ಸ್ಥಾಪನೆ ಮಾಡಿದ್ದು ಬ೦ಕರ್ ರಾಯ್ . ಬ೦ಕರ್ ರಾಯ್ ಪೂರ್ವ ಜೀವನದಲ್ಲಿ ಗ್ರಿ೦ಡ್ಸ ಲೇ ಬ್ಯಾ೦ಕಿನಲ್ಲಿ ದೊಡ್ಡ ಪದವಿಯನ್ನು ತ್ಯಾಗ ಮಾಡಿ, ಒ೦ದು ಸಣ್ಣ ಹಳ್ಳಿಯಲ್ಲಿ ವಾಸ ಮಾಡ ತೊಡಗಿದ.ಅಲ್ಲಿಯ ಜೀವನ ಬರಗಾಲದಿ೦ದಾ ತೀರಾ ಹದಗೆಟ್ಟಿತ್ತು.ಅರವತ್ತರ ದಶಕದಲ್ಲಿ ಮಳೆಯಿಲ್ಲದೇ ದೇಶಕ್ಕೆ ದೇಶವೇ ಬರದಿ೦ದ ಪೀಡಿತವಾಗಿತ್ತು.ಅಲ್ಲಿಯ ಜೀವನದೊ೦ದಿಗೆ ಬೆರೆತು ಅಲ್ಲಿಯ ಜೀವನ ಸುಧಾರಣೆಗಾಗಿ ಒ೦ದು ಸಣ್ಣ ಮಕ್ಕಳ ಶಾಲೆಯನ್ನು ತೆರೆದಾ.
ಆ ಶಾಲೆಯನ್ನು "ಬೇರ್ ಪುಟ್ ಕಾಲೇಜ್ " ಎ೦ದು ಕರೆದು ತನ್ನ ದರ್ಶನವನ್ನು ಹಳ್ಳಿಯ ಜನರ ಮು೦ದಿಟ್ಟಾ.
ಹಳ್ಳಿಯ ಜನರಿಗೆ ಬೇಕಿರುವ ಜ್ಞಾನ ಮತ್ತು ವಿದ್ಯೆಯ ಅಭಾವ ಆಧುನಿಕ ಶಿಕ್ಷಣದಿ೦ದಾ ಪೂರ್ಣವಾಗುವ೦ತದಲ್ಲಾ.
ಆ ಜನರಿಗೆ ತಮ್ಮ ಸಮಸ್ಯೆಗೆ ತಮ್ಮೆಲ್ಲಿಯೇ ಉತ್ತರವನ್ನು ಕ೦ಡು ಕೊಳ್ಳುವ ಜವಾಬ್ದಾರಿಯುತ ಶಿಕ್ಷಣ ನೀಡಬೇಕೆ೦ದು
ನಿರ್ಧರಿಸಿದ.Bunker Roy

ಸೋಡಾಗೋಲಿ

ಈ ತೆಲುಗು ಕಥೆಯನ್ನು ಶ್ರೀರಮಣ ಅವರ 'ಮಿಥುನ' ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ. ೧೯೫೨ರಲ್ಲಿ ಆಂಧ್ರದ ತೆನಾಲಿಯಲ್ಲಿ ಜನಿಸಿದ ಶ್ರೀರಮಣ ಅವರು ಆಂಧ್ರಜ್ಯೋತಿ ತೆಲುಗು ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಅಂಕಣಕಾರರಾಗಿ ಜನಪ್ರಿಯರಾಗಿದ್ದಾರೆ. ಅವರ ಹತ್ತಕ್ಕೂ ಹೆಚ್ಚು ಅಂಕಣ ಸಂಗ್ರಹಗಳು ಪುಸ್ತಕರೂಪ ತಳೆದಿವೆ. ತೆಲುಗು ಸಿನಿಮಾ ಸಾಹಿತ್ಯದಲ್ಲೂ ಅರು ಹೆಸರು ಮಾಡಿದ್ದಾರೆ. 'ಮಿಥುನ' ಅವರ ಏಕೈಕ ಕಥಾಸಂಕಲನ.

 ಮಿಥುನ ಕಥಾಸಂಕಲನವನ್ನು ವಸುಧೇಂದ್ರ ಅವರು ಬಹುಸಮರ್ಥವಾಗಿ ಕನ್ನಡಕ್ಕೆ ಭಾಷಾಂತರಿಸಿ ತಮ್ಮದೇ ಆದ 'ಛಂದ ಪುಸ್ತಕ' ಮೂಲಕ ಹೊರತಂದಿದ್ದಾರೆ. 'ಮನೀಷೆ' ಅವರ ಅತ್ಯುತ್ತಮ ಸೃಜನಶೀಲ ಕಥಾಸಂಕಲನ. ಇದಲ್ಲದೆ 'ಯುಗಾದಿ' ಎಂಬ ಮತ್ತೊಂದು ಕಥಾಸಂಕಲನ, ಕೋತಿಗಳು ಸಾರ್ ಕೋತಿಗಳು (ಪ್ರಬಂಧ) ಮತ್ತು ಇ-ಕಾಮರ್ಸ್ (ವೈಜ್ಞಾನಿಕ) ಎಂಬ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ೧೯೬೯ರಲ್ಲಿ ಬಳ್ಳಾರಿಯ ಸಂಡೂರಿನಲ್ಲಿ ಜನಿಸಿದ ವಸುಧೇಂದ್ರ ಸುರತ್ಕಲ್ಲಿನಲ್ಲಿ ಇಂಜಿನಿಯರಿಂಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಎಂ.ಇ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಜೆನಿಸಿಸ್ ಸಾಫ್ಟ್ ವೇರ್ ನಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಸೋಡಾಗೋಲಿ

ಮಟಮಟ ಮಧ್ಯಾಹ್ನದ ಬೆಂಕಿ ಬಿಸಿಲು ಅವನ ಪಾಲಿಗೆ ಒಳ್ಳೆ ಬೆಳದಿಂಗಳಿದ್ದಂತೆ! ಲೊಳಗಾಬಳಗಾ ಖಾಕಿ ನಿಕ್ಕರು, ತೋಳಿಲ್ಲದ ಬನಿಯನ್ನು, ಗುಂಗುರು ಕೂದಲು, ವಿಶಾಲವಾದ ನಗುಮುಖದಿಂದ ತಗ್ಗುದಿನ್ನೆಯ ರಸ್ತೆಯಲ್ಲಿ ಅತಿ ಜಾಗ್ರತೆಯಿಂದ ಸೋಡಾ ಬಂಡಿಯನ್ನು ತಳ್ಳುತ್ತಾ ಬರುತ್ತಿದ್ದ. ಬಂಡಿಯ ಒಂದು ಗೂಟಕ್ಕೆ ಅಕ್ಕಿಚೀಲ, ಮತ್ತೊಂದು ಗೂಟಕ್ಕೆ ನೀರಿನ ಬಕೇಟು ಸಿಕ್ಕಿಸಿಕೊಂಡು, ಅಡ್ಡಪಟ್ಟಿಯ ಮಧ್ಯದಲ್ಲಿ ಒಂದು ಡಜನು ಸೋಡಾ ಬಾಟಲಿಗಳನ್ನಿಟ್ಟುಕೊಂಡು ನಾಜೂಕಿನಿಂದ ಬಂಡಿ ನಡೆಸುತ್ತಿದ್ದ. ಓಣಿಯ ಮೊದಲ ಗಿರಾಕಿ ಸಿಗುತ್ತಲೇ ಸೈಕಲ್ ಟ್ಯೂಬಿನಿಂದ ಮಾಡಿದ ಓಪನರ್ ನಿಂದ ಕೀಕ್..ಕೀ..ಕೀಕ್.. ಎಂದು ಐದಾರು ಪಕ್ಷಿಕೂಗಿನೊಂದಿಗೆ ಸೋಡಾ ಬಾಟಲಿ ಓಪನ್ ಮಾಡುತ್ತಿದ್ದ. ಆ ಸದ್ದಿಗೇ ಓಣಿಯ ಎಲ್ಲರಿಗೂ ದಾಹವಾಗೋದು. ಅನಾವಶ್ಯಕವಾಗಿ ಕಿರುಚಿ ಬಾಯಿ ಒಣಗಿಸಿಕೊಳ್ಳುವ ಗೋಜಿಲ್ಲದೆ ಒಂದು ಡಜನು ಸೋಡಾ ಖಾಲಿ ಮಾಡಿಕೊಂಡು ಮುಂದಿನ ಓಣಿಗೆ ಹೋಗುತ್ತಿದ್ದ. ಆತನ ನಿಜವಾದ ಹೆಸರೇನೋ ಗೊತ್ತಿಲ್ಲವಾದರೂ ಎಲ್ಲರೂ ಅವನನ್ನು 'ಸೋಡಾನಾಯ್ಡು' ಎಂದೇ ಕರೆಯುತ್ತಿದ್ದರು.

’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)

ನಿನ್ನೆ ಶಾಲೆ - ಸಾಲಿ, ಮನೆ - ಮನಿ, ಆನೆ - ಆನಿ , ರಾಟೆ - ರಾಟಿ ಇತ್ಯಾದಿ ಆಗುವ ಬಗ್ಗೆ ಹೇಳಿದೆ . ನಾಮಪದ(ಹೆಸರುಪದ)ಗಳ ವಿಷಯದಲ್ಲಿ ಹೀಗೆ ಆಗುವದೇನೋ ?

ನೀಲು

ದಿನ ಪೂರ್ತಿ ಕೂತು ಬರೆದ ಕವನ

ಓದೇ ಅಂದರೆ

ಗಟ್ಟಿಯಾಗಿ ತುಟಿಗೊಂದು ಮುತ್ತನಿತ್ತು

ಈ ಮುತ್ತಿಗಿಂತ ನಿನ್ನ ಕವನ ಚೆನ್ನ

ಎಂದರೆ ಮಾತ್ರ ಓದುತ್ತೇನೆ

ಎಂದು ಮಾಯವಾದಳು

ಜೀವನದಲ್ಲಿ ನೀವು ಏನೂ ಸಾಧಿಸ್ಲಿ(ಸ್ತಿ)ಲ್ವೆ ?

ಜೀವನದಲ್ಲಿ ಏನೂ ಸಾಧಿಸ್ಲಿಲ್ಲ / ಸಾಧಿಸ್ತಿಲ್ಲ ಅಂತ ನಿಮಗೆ ಬೇಜಾರಾ ?
ಹಾಗಿದ್ದರೆ
ಚಿಂತಿಸಬೇಡಿ !
ನೀವು ಆತ್ಮಕಥೆ ಬರೀಬಹುದು !
’ಅಲ್ಪ ಸಾಧಕನ ಆತ್ಮವೃತ್ತಾಂತ’ ಹೆಸರಿನಲ್ಲಿ .
ಹೆಸರು ಭರ್ಜರಿ ಆಗಿದೆ ಅಲ್ವೇ ?
ಎಲ್ಲಾದ್ರೂ ಬರ್ದಿಟ್ಟುಕೊಳ್ಳಿ - ಮರೆತು ಹೋದೀತು !
ಜಾಗತಿಕ ಸಾಹಿತ್ಯದ ಬಗ್ಗೆ ಒಂದು ಪುಸ್ತಕ ನೋಡಿದಾಗ ಸಿಕ್ಕದ್ದು ಈ ಹೆಸರು .

ಜೋಳದ ಹಿಟ್ಟು ಇದೆಯಾ...?

ಊರಿಂದ ಅಪ್ಪ-ಅಮ್ಮ ತಂದಿದ್ದ ಜೋಳದ ಹಿಟ್ಟು ಖಾಲಿಯಾಗಿದ್ದರಿಂದ, ಜೋಳ ತಗೊಂಡು ಗಿರಣಿ ಹಾಕಿಸೋಣ ಅನ್ಕೊಂಡಿದ್ದೆ, ಆದರೆ ರಾಗಿಮೇಲೆ ಹಾಕೋದ್ರಿಂದ ರೊಟ್ಟಿ ಸರಿಯಾಗಿ ಬರೋದಿಲ್ಲ ಅಂತ ಕೇಳ್ಪಟ್ಟೆ....ಸರಿಹಾಗಾದ್ರೆ ಎಲ್ಲಾ ಸಿಗುತ್ತೆ ಅಂತ ದೊಡ್ಡ-ದೊಡ್ಡ ಅಂಗಡಿಯವರು ಸಾಕಷ್ಟು ಜಾಹೀರಾತು ಹಾಕ್ತಾ ಇರ್ತಾರೆ...ಅಲ್ಲಿ ಸಿಗುತ್ತೆ...ಎಲ್ಲಾ ಈಗ "ಪಾಕೆಟ್"ನಲ್ಲಿ ಇಲ್ಲಿ ಸಿಗ

ಟೀಕೆ

 

ದಟ್ಟತೆ ತೆಳುವಾಗೋದನ್ನು ಸಹಿಸಲಾಗದೆ
ಹರೆಯದಲ್ಲೇ ನೇಣು ಹಾಕ್ಕೊಂಡು ಜೀವ ಬಿಟ್ಟ
ಗೆಳತಿ
ಮೊನ್ನೆ ನಲ್ಲನ ಮಾತಿಗೆ ನಾನು ಕುಲುಕುಲಿಸುವಾಗ
ನೋಡುತ್ತಾ ನಿಂತಿದ್ದಳು ಮರೆತುಬಿಟ್ಟೆಯ ಅನ್ನುವಂತೆ.

 

ಆಶಯನುಡಿ

ಇಲ್ಲಿ ಅ೦ದರೆ ಮೊವಾ೦ಜ(ತಾ೦ಜಾನಿಯಾ)ದಲ್ಲಿ ನೆನ್ನೆ ನೆಡೆದ ಕನ್ನಡ ರಾಜ್ಯೋತ್ಸವ ಸಮಾರ೦ಭದಲ್ಲಿ ನನ್ನ ಬ್ಲಾಗ್ ಬರಹಗಳ ಸ೦ಕಲನ ಶ್ರೀ ....ಮನೆ ಯನ್ನ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದೆ.ನನ್ನ ಆತ್ಮೀಯ ಗೆಳೆಯ ಮೋಹನ ಬರೆದ ಮುನ್ನುಡಿ ಈ ಆಶಯ ನುಡಿ ಆಶಾ ನುಡಿ
ಆಶಯ ನುಡಿ.......

ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !

ಹೊಸ ಶಬ್ದಗಳನ್ನು ರೂಪಿಸುವಾಗ ಸಂಸ್ಕೃತದ ಕಡೆಗೆ ನೋಡಬಾರದು ... ಎಂದೆಲ್ಲ ನಮ್ಮಲ್ಲಿ ಅನೇಕರು ಹೇಳುತ್ತಾರೆ .
ಇತ್ತೀಚೆಗೆ ಕನ್ನಡದಲ್ಲಿ ಎರಡು ಹೊಸ ಸಂಸ್ಕೃತ ಶಬ್ದಗಳು ಚಾಲ್ತಿಗೆ ಬಂದಿವೆ ..
ನಿಮ್ಮ ಗಮನಕ್ಕೆ ಬಂದಿಲ್ಲವೇ ?

ಸಂಚಲನ ( ತಳಮಳ ? , ಚಟುವಟಿಕೆ?)
ಮತ್ತು
ಲೋಕಾರ್ಪಣೆ ( ಹಿಂದೆಲ್ಲ ಪುಸ್ತಕನ ಬಿಡುಗಡೆ ಮಾಡ್ತಿದ್ರಪ ! )